AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಿಲ್ಲಿ ಮೇಲೆ ರಕ್ಷಿತಾಗೆ ನಿಜಕ್ಕೂ ಆಗಿದೆ ಪ್ರೀತಿ? ಈ ಘಟನೆಗಳೇ ಸಾಕ್ಷಿ

ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ ಮತ್ತು ಗಿಲ್ಲಿ ನಡುವಿನ ಬಾಂಧವ್ಯ ಎಲ್ಲರ ಗಮನ ಸೆಳೆದಿದೆ. 'ಗಿಲ್ಲಿ ರೀತಿಯ ಹುಡುಗ ಬೇಕು' ಎಂದು ರಕ್ಷಿತಾ ಆಗಾಗ ಹೇಳುತ್ತಿದ್ದಾರೆ. ಗಿಲ್ಲಿಗೆ ಪ್ರೀತಿ ವಿಷಯದಲ್ಲಿ ಸಲಹೆ ನೀಡುವುದು, ಅವರ ಜೊತೆ ಏಕಾಂತವಾಗಿ ಸಮಯ ಕಳೆಯಲು ಪ್ರಯತ್ನಿಸುವುದನ್ನು ನೋಡಿದರೆ, ಗಿಲ್ಲಿ ಮೇಲೆ ರಕ್ಷಿತಾಗೆ ನಿಜಕ್ಕೂ ಪ್ರೀತಿ ಮೂಡಿದೆಯೇ ಎಂಬ ಪ್ರಶ್ನೆ ಮೂಡಿದೆ.

ಗಿಲ್ಲಿ ಮೇಲೆ ರಕ್ಷಿತಾಗೆ ನಿಜಕ್ಕೂ ಆಗಿದೆ ಪ್ರೀತಿ? ಈ ಘಟನೆಗಳೇ ಸಾಕ್ಷಿ
ರಕ್ಷಿತಾ-ಗಿಲ್ಲಿ
ರಾಜೇಶ್ ದುಗ್ಗುಮನೆ
|

Updated on:Jan 09, 2026 | 3:06 PM

Share

ಗಿಲ್ಲಿ ರೀತಿಯ ಹುಡುಗ ಬೇಕು ಎಂದು ರಕ್ಷಿತಾ ಶೆಟ್ಟಿ ಆಗಾಗ ಹೇಳುತ್ತಾ ಇರುತ್ತಾರೆ. ಬಿಗ್ ಬಾಸ್ ಪೂರ್ಣಗೊಳ್ಳುತ್ತಿರುವ ಸಂದರ್ಭದಲ್ಲಿ ಅವರಿಗೆ ಗಿಲ್ಲಿ ಮೇಲಿನ ಒಲವು ಹೆಚ್ಚಿದಂತೆ ಕಾಣಿಸುತ್ತಿದೆ. ಅವರು ಸದಾ ಗಿಲ್ಲಿ ಜೊತೆ ಇರುತ್ತಾರೆ. ಗಿಲ್ಲಿಗೆ ಪ್ರೀತಿ ವಿಷಯದಲ್ಲಿ ಕೆಲವು ಸಲಹೆಗಳನ್ನು ಕೂಡ ನೀಡಿದ್ದಾರೆ. ಇವುಗಳನ್ನು ನೋಡಿದರೆ ಗಿಲ್ಲಿ ಮೇಲೆ ರಕ್ಷಿತಾಗೆ ನಿಜಕ್ಕೂ ಲವ್ ಆಗಿದೆಯೇ ಎಂಬ ಪ್ರಶ್ನೆ ಮೂಡುವಂತೆ ಆಗಿದೆ. ಆ ಬಗ್ಗೆ ಇಲ್ಲಿದೆ ವಿವರ.

ಗಿಲ್ಲಿ ನಟ ಹಾಗೂ ಕಾವ್ಯಾ ಮಧ್ಯೆ ಒಳ್ಳೆಯ ಬಾಂಡಿಂಗ್ ಇದೆ. ಈ ಕಾರಣದಿಂದಲೇ ಕಾವ್ಯಾ ಮೇಲೆ ರಕ್ಷಿತಾ ಕೋಪ ಹೊರಹಾಕುತ್ತಾರೆ ಎಂಬ ವಾದ ಇದೆ. ಇದನ್ನು ರಕ್ಷಿತಾ ಶೆಟ್ಟಿ ಒಪ್ಪಿಕೊಳ್ಳೋದಿಲ್ಲ. ಜನವರಿ 8ರ ಎಪಿಸೋಡ್​​ನಲ್ಲಿ ಕಾವ್ಯಾ ಹಾಗೂ ಗಿಲ್ಲಿ ಮಧ್ಯೆ ಜಗಳ ಆಗಿದೆ. ಈ ವೇಳೆ ಕೆಲವು ಸಲಹೆಗಳನ್ನು ರಕ್ಷಿತಾ ಅವರು ನೀಡಿದ್ದಾರೆ.

‘ನೀವು ಯಾರ ಬಳಿಯೂ ಪ್ರೀತಿಸುವಂತೆ ಒತ್ತಾಯಿಸಬಾರದು. ಯಾರು ನಿಮ್ಮನ್ನು ಪ್ರೀತಿಸುತ್ತಾರೋ ಅವರಿಗೆ ಸಮಯ ಹಾಗೂ ಪ್ರೀತಿ ಕೊಡಬೇಕು’ ಎಂದು ಮಾತನಾಡಿದರು. ಅಲ್ಲಿಯೇ ಇದ್ದ ರಘು ಅವರಿಗೆ ಈ ಮಾತು ಅರ್ಥವಾಗಿ ಹೋಯಿತು. ಕಾವ್ಯಾ ಬಳಿ ಮಾತನಾಡುವಂತೆ, ಗಮನ ಕೊಡುವಂತೆ ಒತ್ತಾಯಿಸುವ ಬದಲು ಪ್ರೀತಿ ತೋರಿಸುವ ತಮ್ಮ ಬಗ್ಗೆ ಗಮನ ಹರಿಸು ಎಂಬುದು ರಕ್ಷಿತಾ ಮಾತಿನ ಅರ್ಥವಾಗಿತ್ತು.

ಇದನ್ನೂ ಓದಿ: ಗಿಲ್ಲಿ ಕಂಡ್ರೆ ರಕ್ಷಿತಾಗೆ ಅದೆಷ್ಟು ಪ್ರೀತಿ ನೋಡಿ; ಈ ವಿಡಿಯೋನೆ ಸಾಕ್ಷಿ

ಇನ್ನು, ಗಿಲ್ಲಿ ಹಾಗೂ ರಕ್ಷಿತಾ ಗಾರ್ಡನ್ ಏರಿಯಾದಲ್ಲಿ ಮಾತನಾಡುತ್ತಿದ್ದರು. ಅಲ್ಲಿಯೇ ಬೀನ್ ಬ್ಯಾಗ್ ಇತ್ತು. ಈ ಬ್ಯಾಗ್​​ನ ಅವಳು ತೆಗೆದುಕೊಂಡು ಹೋಗಿ ದೂರದಲ್ಲಿ ಇಟ್ಟಿದ್ದಾರೆ. ಇಬ್ಬರೇ ಮಾತನಾಡಬೇಕು ಎಂಬುದು ರಕ್ಷಿತಾ ಉದ್ದೇಶ. ಸದಾ ಗಿಲ್ಲಿ ಜೊತೆಯೇ ಇರೋ ಅವರು ಆಗಾಗ ಗಿಲ್ಲಿಯ ಕೆನ್ನೆ ಹಿಂಡುವ ಕೆಲಸ ಮಾಡುತ್ತಾರೆ. ‘ಗಿಲ್ಲಿ ರೀತಿಯ ಹುಡುಗ ಬೇಕು’ ಎಂದು ಹಲವು ಬಾರಿ ಹೇಳುತ್ತಾರೆ. ಕಳೆದ ವೀಕೆಂಡ್​​ನಲ್ಲೂ ಇದೇ ವಿಷಯ ಚರ್ಚೆ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:06 pm, Fri, 9 January 26

ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ಭುಗಿಲೆದ್ದ ಆಕ್ರೋಶ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ಭುಗಿಲೆದ್ದ ಆಕ್ರೋಶ
ಆರ್​ಸಿಬಿ ಪರ ಚೊಚ್ಚಲ ವಿಕೆಟ್ ಉರುಳಿಸಿದ ಲಾರೆನ್ ಬೆಲ್
ಆರ್​ಸಿಬಿ ಪರ ಚೊಚ್ಚಲ ವಿಕೆಟ್ ಉರುಳಿಸಿದ ಲಾರೆನ್ ಬೆಲ್
ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್