AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Seetha Raama Serial: ಸೀತಾ, ರಾಮರ ಗೆಳತನಕ್ಕೆ ಭಾರ್ಗವಿಯೇ ಅಡ್ಡಗೋಡೆಯಾಗುತ್ತಾಳಾ?

Seetha Raama Serial: ರಾಮನ ಬದುಕಿನಲ್ಲಿ ಯಾರೋ ಹುಡುಗಿ ಬಂದಿದ್ದಾಳೆ ಎಂಬುದು ಭಾರ್ಗವಿಗೆ ಅನುಮಾನವಿದ್ದರೂ ಯಾರು? ಏನು? ಎಂಬುದು ತಿಳಿದಿಲ್ಲದ ಕಾರಣ ಅವಳ ಕುತುಹೂಲ ದಿನೇ ದಿನೇ ಹೆಚ್ಚುತ್ತದೆ. ಸೀತಾ, ರಾಮರ ಗೆಳತನಕ್ಕೆ ಭಾರ್ಗವಿಯೇ ಅಡ್ಡಗೋಡೆಯಾಗುತ್ತಾಳಾ? ಮನೆ ಬಿಡಿಸಿಕೊಳ್ಳುವಲ್ಲಿ ರಾಮ್, ಸೀತಾಗೆ ಹೇಗೆ ಸಹಾಯ ಮಾಡಬಹುದು? ಕಾದು ನೋಡೋಣ.

Seetha Raama Serial: ಸೀತಾ, ರಾಮರ ಗೆಳತನಕ್ಕೆ ಭಾರ್ಗವಿಯೇ ಅಡ್ಡಗೋಡೆಯಾಗುತ್ತಾಳಾ?
ಸೀತಾ ರಾಮ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Sep 02, 2023 | 7:59 AM

Share

ಸೀತಾ ರಾಮ’ (Seetha Raama Serial) ಧಾರಾವಾಹಿ ಸಂಚಿಕೆ 35: ಸೀತಾಳ ಗಂಡನ ಬಗ್ಗೆ ಕೇಳಿದ್ದ ರಾಮನಿಗೆ ಅದಕ್ಕೆ ಸರಿಯಾದ ಉತ್ತರ ಸಿಗದಿದ್ದರೂ ಸೀತಾಳ ಜೊತೆಗಿನ ಗೆಳೆತನ ಮಾತ್ರ ಗಟ್ಟಿಯಾಗುತ್ತದೆ. ಇದಕ್ಕೆಲ್ಲಾ ಸಿಹಿಯೇ ಕೊಂಡಿಯಾದರೂ ಸೀತಾ, ರಾಮರ ಬಂಧ ಅನುಬಂಧವಾಗುವ ಸಮಯ ಹತ್ತಿರವಾಗುತ್ತಿರುವುದರಲ್ಲಿ ಸಂಶಯವೇ ಇಲ್ಲ. ಇನ್ನು ಸೀತಾ ಮನೆ ಮಾರುವ ವಿಷಯ ರಾಮನನ್ನು ಕೊರಗುವಂತೆ ಮಾಡಿರುತ್ತದೆ ಹಾಗಾಗಿ ಆ ಬಗ್ಗೆ ಸೀತಾ ಬಳಿ ಮಾತನಾಡುತ್ತಾನೆ. ಆದರೆ ಅವಳು ಮಾತ್ರ ಆ ವಿಷಯ ಬಿಟ್ಟು ಬೇರೆ ಯಾವ ದಾರಿಯನ್ನೂ ಒಪ್ಪುವುದಿಲ್ಲ. ಈ ಸಮಸ್ಯೆ ಬಗೆಹರಿಸಲು ಹೇಗಾದರೂ ಅವಳಿಗೆ ಸಹಾಯ ಮಾಡಬೇಕು ಎಂದು ಅಂದುಕೊಳ್ಳುತ್ತಾನೆ. ಇನ್ನು ಈ ವಿಷಯವನ್ನು ಅಶೋಕನಿಗೂ ತಿಳಿಸುತ್ತಾನೆ. ಸೀತಾ, ಸಿಹಿಯೊಂದಿಗೆ ಕಳೆದ ಸಂತೋಷದ ಘಳಿಗೆಯನ್ನೂ ಹಂಚಿಕೊಳ್ಳುತ್ತಾನೆ.

ಭಾರ್ಗವಿ ಮತ್ತೆ ರಾಮನ ಚಿಕ್ಕಪ್ಪ ಸತ್ಯನ ಜೊತೆ ನಡೆದ ಜಗಳ ಮನೆಯವರ ಮನೆ ಮುಂದೆ ಬಯಲಾಗುತ್ತದೆ. ಆದರೆ ತನ್ನದೇನೂ ತಪ್ಪೇ ಇಲ್ಲ ಎಂಬಂತೆ ಭಾರ್ಗವಿ ಅದನ್ನೆಲ್ಲಾ ಸಲಿಸಾಗಿ ಮುಚ್ಚಿ ಹಾಕುತ್ತಾಳೆ. ಅದನ್ನು ನೋಡಿದ ದೇಸಾಯಿ ಮನೆಯವರೂ ಕೂಡ ಸತ್ಯ ಗೊತ್ತಿಲ್ಲದೇ ಸತ್ಯನನ್ನೇ ಸುಳ್ಳುಗಾರನನ್ನಾಗಿ ನೋಡುತ್ತಾರೆ. ಆದರೆ ರಾಮ ಮಾತ್ರ ಚಿಕ್ಕಪ್ಪನನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ. ಅವನು ಸಮಾಧಾನದಿಂದಲೇ ಅವರನ್ನು ಮಾತನಾಡಿಸಿ ಕಾಳಜಿ ತೋರಿಸುತ್ತಾನೆ.

ಎಲ್ಲವೂ ಇದ್ದು ಏನು ಇಲ್ಲದ ಪರಿಸ್ಥಿತಿ ರಾಮನದ್ದು. ಅದೇ ಸಮಯಕ್ಕೆ ಬಂದ ಭಾರ್ಗವಿಯೂ ರಾಮನನ್ನು ಸಮಾಧಾನ ಪಡಿಸಲು ನೋಡುತ್ತಾಳೆ. ಅವನ ಮದುವೆ ವಿಚಾರವನ್ನೂ ಪ್ರಸ್ತಾಪ ಮಾಡುತ್ತಾಳೆ. ಆದರೆ ರಾಮನ ಬಳಿ ಅದಾವುದಕ್ಕೂ ಉತ್ತರವಿರುವುದಿಲ್ಲ. ಭಾರ್ಗವಿ ಅಂದುಕೊಂಡ ಹಾಗೇ ರಾಮ್ ನಡೆದುಕೊಳ್ಳುವುದಿಲ್ಲ. ಅವನ ಬದುಕಿನಲ್ಲಿ ಯಾರೋ ಹುಡುಗಿ ಬಂದಿದ್ದಾಳೆ ಎಂಬುದು ಭಾರ್ಗವಿಗೆ ಅನುಮಾನವಿದ್ದರೂ ಯಾರು? ಏನು? ಎಂಬುದು ತಿಳಿದಿಲ್ಲದ ಕಾರಣ ಅವಳ ಕುತುಹೂಲ ಇನ್ನು ಹೆಚ್ಚುತ್ತದೆ. ಸೀತಾ, ರಾಮರ ಗೆಳತನಕ್ಕೆ ಭಾರ್ಗವಿಯೇ ಅಡ್ಡಗೋಡೆಯಾಗುತ್ತಾಳಾ? ಮನೆ ಬಿಡಿಸಿಕೊಳ್ಳುವಲ್ಲಿ ರಾಮ್, ಸೀತಾಗೆ ಹೇಗೆ ಸಹಾಯ ಮಾಡಬಹುದು? ಕಾದು ನೋಡೋಣ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Preethi Bhat Gunavante
Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ