AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Seetha Raama: ಸೀತಾ ಮತ್ತು ಸಿಹಿ ನೋಡಲು ರಾಮ್ ಬರುತ್ತಾನಾ? ಭಾರ್ಗವಿಗೆ ಶ್ರೀರಾಮನ ಗೆಳೆತನದ ಬಗ್ಗೆ ತಿಳಿಯುತ್ತಾ?

ಚಿಕ್ಕಿಯ ಕಣ್ಣು ತಪ್ಪಿಸಿ, ರಾಮ್ ಮತ್ತು ಅಶೋಕ್ ಇಬ್ಬರೂ ಪೂಜೆ ಮಾಡುವ ಜಾಗದಿಂದ ಕಾಣೆಯಾಗುತ್ತಾರೆ. ಇನ್ನು ಸೀತಾ ಮತ್ತು ಸಿಹಿ ಕೃಷ್ಣ, ಯಶೋದೆಯಾಗಿ ನೃತ್ಯ ಮಾಡುತ್ತಾರೆ. ಸೀತಾ ಮತ್ತು ಸಿಹಿ ನೋಡಲು ರಾಮ ಬರುತ್ತಾನಾ? ಭಾರ್ಗವಿಗೆ ಶ್ರೀರಾಮನ ಗೆಳೆತನದ ಬಗ್ಗೆ ತಿಳಿಯುತ್ತಾ? ಕಾದು ನೋಡೋಣ.

Seetha Raama: ಸೀತಾ ಮತ್ತು ಸಿಹಿ ನೋಡಲು ರಾಮ್ ಬರುತ್ತಾನಾ? ಭಾರ್ಗವಿಗೆ ಶ್ರೀರಾಮನ ಗೆಳೆತನದ ಬಗ್ಗೆ ತಿಳಿಯುತ್ತಾ?
ಗಗನ್​ ಚಿನ್ನಪ್ಪ, ವೈಷ್ಣವಿ ಗೌಡ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Sep 09, 2023 | 9:14 AM

Share

‘ಸೀತಾ ರಾಮ’ (Seetha Raama Serial) ಧಾರಾವಾಹಿ (Serial) ಸಂಚಿಕೆ 41: ಸೀತಾ ಮತ್ತು ಸಿಹಿ ಇರುವ ವಠಾರ ನಂದ ಗೋಕುಲವಾಗಿ, ಸಿಹಿ ಬಾಲ ಕೃಷ್ಣನಾಗುತ್ತಾಳೆ. ಜೊತೆಗೆ ತನ್ನ ಮನೆಯವರೊಂದಿಗೆ ಸೇರಿ ಕೃಷ್ಣನ ಬಾಲ್ಯದ ದಿನಗಳ ಬಗ್ಗೆ ಕೇಳಿ ತಿಳಿದುಕೊಳ್ಳುತ್ತಾ, ನೂರೆಂಟು ಪ್ರಶ್ನೆಗಳನ್ನು ಕೇಳುತ್ತಾಳೆ. ಎಲ್ಲದಕ್ಕೂ ಅವಳ ಅಜ್ಜಿ ಉತ್ತರ ಕೊಡುತ್ತಾಳೆ. ಸಿಹಿ ತನ್ನ ಡಾನ್ಸ್ ನೋಡಲು ಫ್ರೆಂಡ್ ಶ್ರೀರಾಮನನ್ನು ಕೆರೆಯುತ್ತೇನೆ ಎನ್ನುತ್ತಾಳೆ. ಸೀತಾ ಏನೆ ಹೇಳಿದರೂ ಅವನನ್ನು ಕರೆಯಲೇ ಬೇಕು ಎಂದು ಹಠ ಮಾಡುತ್ತಾಳೆ.

ಇನ್ನು ಭಾರ್ಗವಿ ಮ್ಯಾನೇಜರ್ ಚರಣ್ ಗೆ ಫೋನ್ ಮಾಡಿ ಸೀತಾಗೆ ಹೋಗುವ ದುಡ್ಡನ್ನು ತಡೆಯಬೇಕು, ನಿಮ್ಮ ಬಾಸ್ ಆಫೀಸಿಗೆ ಬರುವುದಿಲ್ಲ ಎನ್ನುತ್ತಾಳೆ. ಅಷ್ಟೇ ಹೊತ್ತಿಗೆ ಅಲ್ಲಿಗೆ ಬಂದ ಅಶೋಕ್ ಅವರು ತಮ್ಮ ಮ್ಯಾನೇಜರ್ ಜೊತೆಗೆ ಮಾತನಾಡುತ್ತಿರಬಹುದು ಎಂದು ತಿಳಿದು ಅವರಿಗೂ ಕರೆ ಮಾಡಿ ನೋಡುತ್ತಾನೆ. ಅಲ್ಲಿಯೂ ಫೋನ್ ಎಂಗೇಜ್ ಬರುವುದನ್ನು ನೋಡಿ ಭಾರ್ಗವಿ ಮತ್ತು ಚರಣ್ ಮಾತನಾಡುತ್ತಿರಬಹುದು ಎಂದು ಊಹಿಸುತ್ತಾನೆ. ಸ್ಪಷ್ಟವಾಗಿ ಹೇಳುವುದಕ್ಕೆ ಅವನ ಬಳಿ ಯಾವುದೇ ಪುರಾವೆಗಳಿರುವುದುದಿಲ್ಲ. ಹಾಗಾಗಿ ಅವರೇ ಕಳ್ಳರಿರಬಹುದು ಎಂದು ಹೇಳುವುದು ಅಷ್ಟು ಸುಲಭವೂ ಅಲ್ಲ ಎಂಬುದು ಅಶೋಕ್​ಗೆ ತಿಳಿದಿರುತ್ತದೆ.

ಇದನ್ನೂ ಓದಿ: ಟಿಆರ್​ಪಿ ವಿವರ: ಎರಡನೇ ಸ್ಥಾನದಲ್ಲೇ ಮುಂದುವರಿದ ‘ಸೀತಾ ರಾಮ’; ಟಾಪ್ 5 ಧಾರಾವಾಹಿಗಳಿವು..

ಇನ್ನು ಸಿಹಿ ಬಾಲ ಕೃಷ್ಣನಾದ ಮೇಲೆ ಸೀತಾ ಯಶೋದೆ ಆಗಲೇ ಬೇಕಲ್ಲ. ಅದೇ ರೀತಿ ಇಬ್ಬರೂ ಸೇರಿ ಡಾನ್ಸ್ ಮಾಡುವುದಕ್ಕೆ ರೆಡಿ ಆಗುತ್ತಾರೆ. ಸಿಹಿ ಕೂಡ ಫೋನ್ ಮಾಡಿ ರಾಮನನ್ನು ಬರ ಹೇಳುತ್ತಾಳೆ. ರಾಮ್ ಮನೆಯಲ್ಲೂ ಹಬ್ಬದ ಕಳೆ ಕಟ್ಟಿರುತ್ತದೆ. ಆದರೆ ಸಿಹಿ ಹೇಳಿದ ಮೇಲೆ ರಾಮ್​ನಿಗೆ ಬರುವುದಿಲ್ಲ ಎನ್ನಲು ಮನಸ್ಸಾಗುವುದಿಲ್ಲ. ಚಿಕ್ಕಿಯ ಕಣ್ಣು ತಪ್ಪಿಸಿ, ರಾಮ್ ಮತ್ತು ಅಶೋಕ್ ಇಬ್ಬರೂ ಪೂಜೆ ಮಾಡುವ ಜಾಗದಿಂದ ಕಾಣೆಯಾಗುತ್ತಾರೆ. ಇನ್ನು ಸೀತಾ ಮತ್ತು ಸಿಹಿ ಕೃಷ್ಣ, ಯಶೋದೆಯಾಗಿ ನೃತ್ಯ ಮಾಡುತ್ತಾರೆ. ರಾಮ, ಸೀತಾ ಮತ್ತು ಸಿಹಿ ನೋಡಲು ಬರುತ್ತಾನಾ? ಭಾರ್ಗವಿಗೆ ಶ್ರೀರಾಮನ ಗೆಳೆತನದ ಬಗ್ಗೆ ತಿಳಿಯುತ್ತಾ? ಕಾದು ನೋಡೋಣ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್