AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Seetha Raama: ಸೀತಾ ಮತ್ತು ಸಿಹಿ ನೋಡಲು ರಾಮ್ ಬರುತ್ತಾನಾ? ಭಾರ್ಗವಿಗೆ ಶ್ರೀರಾಮನ ಗೆಳೆತನದ ಬಗ್ಗೆ ತಿಳಿಯುತ್ತಾ?

ಚಿಕ್ಕಿಯ ಕಣ್ಣು ತಪ್ಪಿಸಿ, ರಾಮ್ ಮತ್ತು ಅಶೋಕ್ ಇಬ್ಬರೂ ಪೂಜೆ ಮಾಡುವ ಜಾಗದಿಂದ ಕಾಣೆಯಾಗುತ್ತಾರೆ. ಇನ್ನು ಸೀತಾ ಮತ್ತು ಸಿಹಿ ಕೃಷ್ಣ, ಯಶೋದೆಯಾಗಿ ನೃತ್ಯ ಮಾಡುತ್ತಾರೆ. ಸೀತಾ ಮತ್ತು ಸಿಹಿ ನೋಡಲು ರಾಮ ಬರುತ್ತಾನಾ? ಭಾರ್ಗವಿಗೆ ಶ್ರೀರಾಮನ ಗೆಳೆತನದ ಬಗ್ಗೆ ತಿಳಿಯುತ್ತಾ? ಕಾದು ನೋಡೋಣ.

Seetha Raama: ಸೀತಾ ಮತ್ತು ಸಿಹಿ ನೋಡಲು ರಾಮ್ ಬರುತ್ತಾನಾ? ಭಾರ್ಗವಿಗೆ ಶ್ರೀರಾಮನ ಗೆಳೆತನದ ಬಗ್ಗೆ ತಿಳಿಯುತ್ತಾ?
ಗಗನ್​ ಚಿನ್ನಪ್ಪ, ವೈಷ್ಣವಿ ಗೌಡ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Sep 09, 2023 | 9:14 AM

Share

‘ಸೀತಾ ರಾಮ’ (Seetha Raama Serial) ಧಾರಾವಾಹಿ (Serial) ಸಂಚಿಕೆ 41: ಸೀತಾ ಮತ್ತು ಸಿಹಿ ಇರುವ ವಠಾರ ನಂದ ಗೋಕುಲವಾಗಿ, ಸಿಹಿ ಬಾಲ ಕೃಷ್ಣನಾಗುತ್ತಾಳೆ. ಜೊತೆಗೆ ತನ್ನ ಮನೆಯವರೊಂದಿಗೆ ಸೇರಿ ಕೃಷ್ಣನ ಬಾಲ್ಯದ ದಿನಗಳ ಬಗ್ಗೆ ಕೇಳಿ ತಿಳಿದುಕೊಳ್ಳುತ್ತಾ, ನೂರೆಂಟು ಪ್ರಶ್ನೆಗಳನ್ನು ಕೇಳುತ್ತಾಳೆ. ಎಲ್ಲದಕ್ಕೂ ಅವಳ ಅಜ್ಜಿ ಉತ್ತರ ಕೊಡುತ್ತಾಳೆ. ಸಿಹಿ ತನ್ನ ಡಾನ್ಸ್ ನೋಡಲು ಫ್ರೆಂಡ್ ಶ್ರೀರಾಮನನ್ನು ಕೆರೆಯುತ್ತೇನೆ ಎನ್ನುತ್ತಾಳೆ. ಸೀತಾ ಏನೆ ಹೇಳಿದರೂ ಅವನನ್ನು ಕರೆಯಲೇ ಬೇಕು ಎಂದು ಹಠ ಮಾಡುತ್ತಾಳೆ.

ಇನ್ನು ಭಾರ್ಗವಿ ಮ್ಯಾನೇಜರ್ ಚರಣ್ ಗೆ ಫೋನ್ ಮಾಡಿ ಸೀತಾಗೆ ಹೋಗುವ ದುಡ್ಡನ್ನು ತಡೆಯಬೇಕು, ನಿಮ್ಮ ಬಾಸ್ ಆಫೀಸಿಗೆ ಬರುವುದಿಲ್ಲ ಎನ್ನುತ್ತಾಳೆ. ಅಷ್ಟೇ ಹೊತ್ತಿಗೆ ಅಲ್ಲಿಗೆ ಬಂದ ಅಶೋಕ್ ಅವರು ತಮ್ಮ ಮ್ಯಾನೇಜರ್ ಜೊತೆಗೆ ಮಾತನಾಡುತ್ತಿರಬಹುದು ಎಂದು ತಿಳಿದು ಅವರಿಗೂ ಕರೆ ಮಾಡಿ ನೋಡುತ್ತಾನೆ. ಅಲ್ಲಿಯೂ ಫೋನ್ ಎಂಗೇಜ್ ಬರುವುದನ್ನು ನೋಡಿ ಭಾರ್ಗವಿ ಮತ್ತು ಚರಣ್ ಮಾತನಾಡುತ್ತಿರಬಹುದು ಎಂದು ಊಹಿಸುತ್ತಾನೆ. ಸ್ಪಷ್ಟವಾಗಿ ಹೇಳುವುದಕ್ಕೆ ಅವನ ಬಳಿ ಯಾವುದೇ ಪುರಾವೆಗಳಿರುವುದುದಿಲ್ಲ. ಹಾಗಾಗಿ ಅವರೇ ಕಳ್ಳರಿರಬಹುದು ಎಂದು ಹೇಳುವುದು ಅಷ್ಟು ಸುಲಭವೂ ಅಲ್ಲ ಎಂಬುದು ಅಶೋಕ್​ಗೆ ತಿಳಿದಿರುತ್ತದೆ.

ಇದನ್ನೂ ಓದಿ: ಟಿಆರ್​ಪಿ ವಿವರ: ಎರಡನೇ ಸ್ಥಾನದಲ್ಲೇ ಮುಂದುವರಿದ ‘ಸೀತಾ ರಾಮ’; ಟಾಪ್ 5 ಧಾರಾವಾಹಿಗಳಿವು..

ಇನ್ನು ಸಿಹಿ ಬಾಲ ಕೃಷ್ಣನಾದ ಮೇಲೆ ಸೀತಾ ಯಶೋದೆ ಆಗಲೇ ಬೇಕಲ್ಲ. ಅದೇ ರೀತಿ ಇಬ್ಬರೂ ಸೇರಿ ಡಾನ್ಸ್ ಮಾಡುವುದಕ್ಕೆ ರೆಡಿ ಆಗುತ್ತಾರೆ. ಸಿಹಿ ಕೂಡ ಫೋನ್ ಮಾಡಿ ರಾಮನನ್ನು ಬರ ಹೇಳುತ್ತಾಳೆ. ರಾಮ್ ಮನೆಯಲ್ಲೂ ಹಬ್ಬದ ಕಳೆ ಕಟ್ಟಿರುತ್ತದೆ. ಆದರೆ ಸಿಹಿ ಹೇಳಿದ ಮೇಲೆ ರಾಮ್​ನಿಗೆ ಬರುವುದಿಲ್ಲ ಎನ್ನಲು ಮನಸ್ಸಾಗುವುದಿಲ್ಲ. ಚಿಕ್ಕಿಯ ಕಣ್ಣು ತಪ್ಪಿಸಿ, ರಾಮ್ ಮತ್ತು ಅಶೋಕ್ ಇಬ್ಬರೂ ಪೂಜೆ ಮಾಡುವ ಜಾಗದಿಂದ ಕಾಣೆಯಾಗುತ್ತಾರೆ. ಇನ್ನು ಸೀತಾ ಮತ್ತು ಸಿಹಿ ಕೃಷ್ಣ, ಯಶೋದೆಯಾಗಿ ನೃತ್ಯ ಮಾಡುತ್ತಾರೆ. ರಾಮ, ಸೀತಾ ಮತ್ತು ಸಿಹಿ ನೋಡಲು ಬರುತ್ತಾನಾ? ಭಾರ್ಗವಿಗೆ ಶ್ರೀರಾಮನ ಗೆಳೆತನದ ಬಗ್ಗೆ ತಿಳಿಯುತ್ತಾ? ಕಾದು ನೋಡೋಣ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​