AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಈ ಪ್ರಕ್ರಿಯೆ ಬುಲ್​ಶಿಟ್​’; ವೋಟಿಂಗ್ ಬಗ್ಗೆ ನಮ್ರತಾ ಅಸಮಾಧಾನ

ಮನೆಯಲ್ಲಿ ದಿನಸಿ ಪಡೆಯಲು ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದರು. 25 ಸಾವಿರ ಪಾಯಿಂಟ್ಸ್​ನಿಂದ 20 ಲಕ್ಷ ಪಾಯಿಂಟ್ಸ್​ ಮಧ್ಯೆ ಹಲವು ಬೋರ್ಡ್​ಗಳಿದ್ದವು. ಈ ಬೋರ್ಡ್​ಗಳನ್ನು ಒಬ್ಬೊಬ್ಬರು ಪಡೆದುಕೊಳ್ಳಬೇಕು. ಇದಕ್ಕೆ ನಡೆದ ವೋಟಿಂಗ್ ಬಗ್ಗೆ ನಮ್ರತಾ ಅಸಮಾಧಾನ ಹೊರಹಾಕಿದರು.

‘ಈ ಪ್ರಕ್ರಿಯೆ ಬುಲ್​ಶಿಟ್​’; ವೋಟಿಂಗ್ ಬಗ್ಗೆ ನಮ್ರತಾ ಅಸಮಾಧಾನ
ನಮ್ರತಾ ಗೌಡ
ರಾಜೇಶ್ ದುಗ್ಗುಮನೆ
|

Updated on: Jan 02, 2024 | 8:00 AM

Share

ಬಿಗ್ ಬಾಸ್ ಮನೆಯಲ್ಲಿ ನಮ್ರತಾ ಗೌಡ (Namratha Gowda) ಅವರು ಇತ್ತೀಚೆಗೆ ಹೆಚ್ಚು ಎಫರ್ಟ್ ಹಾಕಲು ಪ್ರಯತ್ನಿಸುತ್ತಿದ್ದಾರೆ. ಅವರು ಒಂದು ವಾರ ಕ್ಯಾಪ್ಟನ್ ಕೂಡ ಆದರು. ಈಗಾಗಲೇ ಉತ್ತಮ ಹಾಗೂ ಕಿಚ್ಚನ ಚಪ್ಪಾಳೆ ಅವರಿಗೆ ಸಿಕ್ಕಿದೆ. ಈಗ ಅವರು ಮನೆಯಲ್ಲಿ ನಡೆದ ವೋಟಿಂಗ್ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಅದನ್ನು ಬುಲ್​ಶಿಟ್ ಎಂದು ಕರೆದಿದ್ದಾರೆ. ಇದನ್ನು ಕೇಳಿ ತುಕಾಲಿ ಸಂತೋಷ್ ಅವರು ಸಿಟ್ಟಾಗಿದ್ದಾರೆ. ಇಬ್ಬರ ಮಧ್ಯೆ ಕಿತ್ತಾಟ ನಡೆದಿದೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಜನವರಿ 1ರಂದು ಈ ಎಪಿಸೋಡ್ ಪ್ರಸಾರ ಕಂಡಿದೆ.

ಮನೆಯಲ್ಲಿ ದಿನಸಿ ಪಡೆಯಲು ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದರು. 25 ಸಾವಿರ ಪಾಯಿಂಟ್ಸ್​ನಿಂದ 20 ಲಕ್ಷ ಪಾಯಿಂಟ್ಸ್​ ಮಧ್ಯೆ ಹಲವು ಬೋರ್ಡ್​ಗಳಿದ್ದವು. ಈ ಬೋರ್ಡ್​ಗಳನ್ನು ಒಬ್ಬೊಬ್ಬರು ಪಡೆದುಕೊಳ್ಳಬೇಕು. ಇದಕ್ಕಾಗಿ ವೋಟಿಂಗ್ ನಡೆಸಲಾಯಿತು. ವರ್ತೂರು ಸಂತೋಷ್ ಅವರು ವೋಟಿಂಗ್ ಆಧಾರದಲ್ಲಿ ಕನಿಷ್ಠ ಸಂಖ್ಯೆ ಅಂದರೆ 25 ಸಾವಿರ ಪಾಯಿಂಟ್ಸ್​ನ ಬೋರ್ಡ್ ಪಡೆದರು. ಅತಿ ಹೆಚ್ಚು ಪಾಯಿಂಟ್ಸ್ ಬೋರ್ಡ್ ಅಂದರೆ 20 ಲಕ್ಷ ಪಾಯಿಂಟ್ಸ್​ನ ಬೋರ್ಡ್ ಸಿಕ್ಕಿದ್ದು ತುಕಾಲಿ ಸಂತೋಷ್​ಗೆ.

ಈ ವೋಟಿಂಗ್ ಪ್ರಕ್ರಿಯೆಯನ್ನು ನಮ್ರತಾ ಖಂಡಿಸಿದ್ದಾರೆ. ‘ನಾನು ತುಕಾಲಿ ಸಂತೋಷ್​ಗಿಂತ ಉತ್ತಮವಾಗಿದ್ದೇನೆ. ಅವರಿಗಿಂತ ಒಳ್ಳೆಯ ಪರ್ಫಾರ್ಮೆನ್ಸ್ ನೀಡಿದ್ದೇನೆ. ಅವರಿಗೆ 20 ಲಕ್ಷ ಪಾಯಿಂಟ್ಸ್​​ನ ಬೋರ್ಡ್​ ಸಿಕ್ಕಿದ್ದನ್ನು ನಾನು ಒಪ್ಪುವುದಿಲ್ಲ. ಇದನ್ನು ಖಂಡಿಸುತ್ತೇನೆ. ಈ ವೋಟಿಂಗ್ ಬುಲ್​ಶಿಟ್’ ಎಂದರು ನಮ್ರತಾ.

ಇದನ್ನೂ ಓದಿ: ಕಾರ್ತಿಕ್​-ತುಕಾಲಿ ಸಂತೋಷ್​ ಕಿಸ್​; ಕೂದಲು ಕಿತ್ತ ನಮ್ರತಾ, ಸಿರಿ: ವಿಡಿಯೋ ನೋಡಿ..

ಇದಕ್ಕೆ ತುಕಾಲಿ ಸಂತೋಷ್ ಅವರು ಸಿಟ್ಟಾದರು. ‘ಈ ವೋಟಿಂಗ್​ನ ಬುಲ್​ಶಿಟ್ ಎಂದು ಕರೆಯಬೇಡ. ಎಲ್ಲರೂ ವೋಟ್ ಮಾಡಿದ್ದಾರೆ. ಎಲ್ಲರನ್ನೂ ಗೌರವಿಸಿ’ ಎಂದರು ಸಂತೋಷ್. ಆ ಬಳಿಕ ಎಲ್ಲರೂ ವೋಟಿಂಗ್ ಪ್ರಕ್ರಿಯೆಯನ್ನು ಒಪ್ಪಿದರು. ಈ ರೀತಿ ವೋಟಿಂಗ್ ಮಾಡಿದ್ದಕ್ಕೆ ಬಿಗ್ ಬಾಸ್ ಅಸಮಾಧಾನ ಹೊರಹಾಕಿದರು. ‘ನಿಮ್ಮ ಸ್ಥಾನವನ್ನು ನೀವೇ ನಿರ್ಧಾರ ಮಾಡಬೇಕಿತ್ತು’ ಎಂದು ಬಿಗ್ ಬಾಸ್ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ