AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಈ ಪ್ರಕ್ರಿಯೆ ಬುಲ್​ಶಿಟ್​’; ವೋಟಿಂಗ್ ಬಗ್ಗೆ ನಮ್ರತಾ ಅಸಮಾಧಾನ

ಮನೆಯಲ್ಲಿ ದಿನಸಿ ಪಡೆಯಲು ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದರು. 25 ಸಾವಿರ ಪಾಯಿಂಟ್ಸ್​ನಿಂದ 20 ಲಕ್ಷ ಪಾಯಿಂಟ್ಸ್​ ಮಧ್ಯೆ ಹಲವು ಬೋರ್ಡ್​ಗಳಿದ್ದವು. ಈ ಬೋರ್ಡ್​ಗಳನ್ನು ಒಬ್ಬೊಬ್ಬರು ಪಡೆದುಕೊಳ್ಳಬೇಕು. ಇದಕ್ಕೆ ನಡೆದ ವೋಟಿಂಗ್ ಬಗ್ಗೆ ನಮ್ರತಾ ಅಸಮಾಧಾನ ಹೊರಹಾಕಿದರು.

‘ಈ ಪ್ರಕ್ರಿಯೆ ಬುಲ್​ಶಿಟ್​’; ವೋಟಿಂಗ್ ಬಗ್ಗೆ ನಮ್ರತಾ ಅಸಮಾಧಾನ
ನಮ್ರತಾ ಗೌಡ
ರಾಜೇಶ್ ದುಗ್ಗುಮನೆ
|

Updated on: Jan 02, 2024 | 8:00 AM

Share

ಬಿಗ್ ಬಾಸ್ ಮನೆಯಲ್ಲಿ ನಮ್ರತಾ ಗೌಡ (Namratha Gowda) ಅವರು ಇತ್ತೀಚೆಗೆ ಹೆಚ್ಚು ಎಫರ್ಟ್ ಹಾಕಲು ಪ್ರಯತ್ನಿಸುತ್ತಿದ್ದಾರೆ. ಅವರು ಒಂದು ವಾರ ಕ್ಯಾಪ್ಟನ್ ಕೂಡ ಆದರು. ಈಗಾಗಲೇ ಉತ್ತಮ ಹಾಗೂ ಕಿಚ್ಚನ ಚಪ್ಪಾಳೆ ಅವರಿಗೆ ಸಿಕ್ಕಿದೆ. ಈಗ ಅವರು ಮನೆಯಲ್ಲಿ ನಡೆದ ವೋಟಿಂಗ್ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಅದನ್ನು ಬುಲ್​ಶಿಟ್ ಎಂದು ಕರೆದಿದ್ದಾರೆ. ಇದನ್ನು ಕೇಳಿ ತುಕಾಲಿ ಸಂತೋಷ್ ಅವರು ಸಿಟ್ಟಾಗಿದ್ದಾರೆ. ಇಬ್ಬರ ಮಧ್ಯೆ ಕಿತ್ತಾಟ ನಡೆದಿದೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಜನವರಿ 1ರಂದು ಈ ಎಪಿಸೋಡ್ ಪ್ರಸಾರ ಕಂಡಿದೆ.

ಮನೆಯಲ್ಲಿ ದಿನಸಿ ಪಡೆಯಲು ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದರು. 25 ಸಾವಿರ ಪಾಯಿಂಟ್ಸ್​ನಿಂದ 20 ಲಕ್ಷ ಪಾಯಿಂಟ್ಸ್​ ಮಧ್ಯೆ ಹಲವು ಬೋರ್ಡ್​ಗಳಿದ್ದವು. ಈ ಬೋರ್ಡ್​ಗಳನ್ನು ಒಬ್ಬೊಬ್ಬರು ಪಡೆದುಕೊಳ್ಳಬೇಕು. ಇದಕ್ಕಾಗಿ ವೋಟಿಂಗ್ ನಡೆಸಲಾಯಿತು. ವರ್ತೂರು ಸಂತೋಷ್ ಅವರು ವೋಟಿಂಗ್ ಆಧಾರದಲ್ಲಿ ಕನಿಷ್ಠ ಸಂಖ್ಯೆ ಅಂದರೆ 25 ಸಾವಿರ ಪಾಯಿಂಟ್ಸ್​ನ ಬೋರ್ಡ್ ಪಡೆದರು. ಅತಿ ಹೆಚ್ಚು ಪಾಯಿಂಟ್ಸ್ ಬೋರ್ಡ್ ಅಂದರೆ 20 ಲಕ್ಷ ಪಾಯಿಂಟ್ಸ್​ನ ಬೋರ್ಡ್ ಸಿಕ್ಕಿದ್ದು ತುಕಾಲಿ ಸಂತೋಷ್​ಗೆ.

ಈ ವೋಟಿಂಗ್ ಪ್ರಕ್ರಿಯೆಯನ್ನು ನಮ್ರತಾ ಖಂಡಿಸಿದ್ದಾರೆ. ‘ನಾನು ತುಕಾಲಿ ಸಂತೋಷ್​ಗಿಂತ ಉತ್ತಮವಾಗಿದ್ದೇನೆ. ಅವರಿಗಿಂತ ಒಳ್ಳೆಯ ಪರ್ಫಾರ್ಮೆನ್ಸ್ ನೀಡಿದ್ದೇನೆ. ಅವರಿಗೆ 20 ಲಕ್ಷ ಪಾಯಿಂಟ್ಸ್​​ನ ಬೋರ್ಡ್​ ಸಿಕ್ಕಿದ್ದನ್ನು ನಾನು ಒಪ್ಪುವುದಿಲ್ಲ. ಇದನ್ನು ಖಂಡಿಸುತ್ತೇನೆ. ಈ ವೋಟಿಂಗ್ ಬುಲ್​ಶಿಟ್’ ಎಂದರು ನಮ್ರತಾ.

ಇದನ್ನೂ ಓದಿ: ಕಾರ್ತಿಕ್​-ತುಕಾಲಿ ಸಂತೋಷ್​ ಕಿಸ್​; ಕೂದಲು ಕಿತ್ತ ನಮ್ರತಾ, ಸಿರಿ: ವಿಡಿಯೋ ನೋಡಿ..

ಇದಕ್ಕೆ ತುಕಾಲಿ ಸಂತೋಷ್ ಅವರು ಸಿಟ್ಟಾದರು. ‘ಈ ವೋಟಿಂಗ್​ನ ಬುಲ್​ಶಿಟ್ ಎಂದು ಕರೆಯಬೇಡ. ಎಲ್ಲರೂ ವೋಟ್ ಮಾಡಿದ್ದಾರೆ. ಎಲ್ಲರನ್ನೂ ಗೌರವಿಸಿ’ ಎಂದರು ಸಂತೋಷ್. ಆ ಬಳಿಕ ಎಲ್ಲರೂ ವೋಟಿಂಗ್ ಪ್ರಕ್ರಿಯೆಯನ್ನು ಒಪ್ಪಿದರು. ಈ ರೀತಿ ವೋಟಿಂಗ್ ಮಾಡಿದ್ದಕ್ಕೆ ಬಿಗ್ ಬಾಸ್ ಅಸಮಾಧಾನ ಹೊರಹಾಕಿದರು. ‘ನಿಮ್ಮ ಸ್ಥಾನವನ್ನು ನೀವೇ ನಿರ್ಧಾರ ಮಾಡಬೇಕಿತ್ತು’ ಎಂದು ಬಿಗ್ ಬಾಸ್ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?