AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿನ್ನ ಅಡವಿಟ್ಟು ಚುನಾವಣೆ ಸ್ಪರ್ಧಿಸಿ ಸೋತಿದ್ದ ಡಿ.ಕೆ.ಶಿವಕುಮಾರ್: ಎದುರಾಳಿ ಯಾರು? ಬೆಂಬಲಿಸಿದವರು ಯಾರು?

Weekend With Ramesh: ವಿಧಾನಸಭೆ ಪ್ರವೇಶಿಸಿದ ಅತ್ಯಂತ ಕಿರಿಯ ವಯಸ್ಸಿನ ಶಾಸಕ ಡಿಕೆ ಶಿವಕುಮಾರ್. ವೀಕೆಂಡ್ ವಿತ್ ರಮೇಶ್​ಗೆ ಆಗಮಿಸಿದ್ದಾಗ ತಮ್ಮ ಮೊದಲ ಚುನಾವಣೆ ಬಗ್ಗೆ ಡಿಕೆಶಿ ಮಾತನಾಡಿದ್ದಾರೆ.

ಚಿನ್ನ ಅಡವಿಟ್ಟು ಚುನಾವಣೆ ಸ್ಪರ್ಧಿಸಿ ಸೋತಿದ್ದ ಡಿ.ಕೆ.ಶಿವಕುಮಾರ್: ಎದುರಾಳಿ ಯಾರು? ಬೆಂಬಲಿಸಿದವರು ಯಾರು?
ಡಿಕೆ ಶಿವಕುಮಾರ್
ಮಂಜುನಾಥ ಸಿ.
|

Updated on: Jun 12, 2023 | 9:30 AM

Share

ಸತತ ಎಂಟು ಬಾರಿ ಶಾಸಕರಾಗಿ ಐದು ಬಾರಿ ಸಚಿವರಾಗಿ ಆಯ್ಕೆ ಆಗಿರುವ ಡಿ.ಕೆ.ಶಿವಕುಮಾರ್ (DK Shivakumar) ಅವರದ್ದು ಯಶಸ್ವಿ ರಾಜಕೀಯ ಜೀವನ. ಆದರೆ ಈ ಯಶಸ್ವಿ ರಾಜಕೀಯ ಜೀವನ ಶುರುವಾಗಿದ್ದು ಮಾತ್ರ ಸೋಲಿನಿಂದ. ಪದವಿ ಪರೀಕ್ಷೆಯ ಅಂತಿಮ ವರ್ಷದಲ್ಲಿರುವಾಗಲೇ ಡಿ.ಕೆ.ಶಿವಕುಮಾರ್​ಗೆ ವಿಧಾನಸಭೆ ಚುನಾವಣೆ (Assembly election) ಟಿಕೆಟ್ ದೊರಕಿತ್ತು ಕಾಂಗ್ರೆಸ್ ಪಕ್ಷದಿಂದ. ಅದೂ ಬಹುದೊಡ್ಡ ಎದುರಾಳಿ ವಿರುದ್ಧ. ಆ ಚುನಾವಣೆಯಲ್ಲಿ ಡಿಕೆಶಿ ಸೋತರಾದರೂ ಆ ಚುನಾವಣೆ ಕಲಿಸಿದ ಪಾಠ ಮಹತ್ವದ್ದು. ಈ ಬಗ್ಗೆ ವೀಕೆಂಡ್ ವಿತ್ ರಮೇಶ್​ನಲ್ಲಿ ಡಿ.ಕೆ.ಶಿವಕುಮಾರ್ ಮಾತನಾಡಿದ್ದಾರೆ.

1985ರಲ್ಲಿ ಡಿ.ಕೆ.ಶಿವಕುಮಾರ್​ಗೆ ವಯಸ್ಸಿನ್ನೂ 23 ವರ್ಷ. ಆದರೆ ಆಗಲೇ ಅವರಿಗೆ ಕಾಂಗ್ರೆಸ್ ಪಕ್ಷದ ವಿಧಾನಸಭೆ ಟಿಕೆಟ್ ದೊರಕಿತ್ತು. ಅವರ ಎದುರಾಳಿ ಈ ದೇಶ ಕಂಡ ಧುರಿಣ ರಾಜಕಾರಣಿ ಎಚ್​ಡಿಕೆ ದೇವೇಗೌಡ. ಅನುಭವವಿಲ್ಲದೆ ಮೊದಲ ಚುನಾವಣೆ ಎದುರಿಸಿದ ಡಿ.ಕೆ.ಶಿವಕುಮಾರ್​ ಬಳಿ ಆಗ ಚುನಾವಣೆ ಎದುರಿಸಲು ಬೇಕಾಗುವಷ್ಟು ಹಣವಿರಲಿಲ್ಲ. ಅಮ್ಮನ, ಸಹೋದರಿಯ ಚಿನ್ನವನ್ನೆಲ್ಲ ಅಡವಿಟ್ಟು ಚುನಾವಣೆ ಎದುರಿಸಿದರಂತೆ. ಆಗ ಹರಿ ಕೋಡೆ ಅವರು ಸಹ ಡಿ.ಕೆ.ಶಿವಕುಮಾರ್ ಅವರಿಗೆ ಸಹಾಯ ಮಾಡಿದ್ದರಂತೆ.

ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಶ್ರೀನಿವಾಸ ಪ್ರಸಾದ್, ವೀರಪ್ಪ ಮೊಯ್ಲಿ ಅವರುಗಳಿಗೆ ಡಿ.ಕೆ.ಶಿವಕುಮಾರ್ ಮೇಲೆ ನಂಬಿಕೆ ಮತ್ತು ಸಾಫ್ಟ್ ಕಾರ್ನರ್ ಇದ್ದ ಕಾರಣ ಅವರಿಗೆ ಮೊದಲ ಬಾರಿಗೆ ಟಿಕೆಟ್ ನೀಡಿದ್ದರು. ಆದರೆ ಮೊದಲ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್ ಸೋತರು. ಆದರೆ ಅದಾದ ಎರಡನೇ ವರ್ಷಕ್ಕೆ ಸಾತನೂರು ಕ್ಷೇತ್ರದಿಂದಲೇ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆ ಆದರು. ಅದಾದ ಬಳಿಕ 1989ರಲ್ಲಿ ಮತ್ತೆ ಕಾಂಗ್ರೆಸ್ ಟಿಕೆಟ್​ನಿಂದ ಸ್ಪರ್ಧಿಸಿ ಗೆದ್ದು ಅತ್ಯಂತ ಕಿರಿಯ ವಯಸ್ಸಿನ ಶಾಸಕ ಎನಿಸಿಕೊಂಡರು ಡಿ.ಕೆ.ಶಿವಕುಮಾರ್.

ಮೊದಲ ಬಾರಿ ಶಾಸಕರಾಗಿ ಆಯ್ಕೆ ಆದಾಗಲೇ ಮೊದಲ ಬಾರಿ ಸಚಿವರೂ ಆದರು ಡಿ.ಕೆ.ಶಿವಕುಮಾರ್. ಆದರೆ ಅದಾದ ಬಳಿಕ 1994 ರ ಚುನವಾಣೆಯಲ್ಲಿ ಕಾಂಗ್ರೆಸ್​ನಿಂದ ಟಿಕೆಟ್ ಸಹ ಸಿಗದೆ ಸ್ವತಂತ್ರ್ಯವಾಗಿ ಸ್ಪರ್ಧಿಸಿ ಗೆದ್ದು ಬಂದರು. ಅದಾದ ಬಳಿಕ 1999 ರಲ್ಲಿ ಎಚ್​ಡಿ ಕುಮಾರಸ್ವಾಮಿ ವಿರುದ್ಧ ಗೆದ್ದು, ತಂದೆಯ ಮೇಲೆ ಸೋತಿದ್ದ ಸೋಲಿನ ಸೇಡು ತೀರಿಸಿಕೊಂಡರು. ತಮ್ಮ ಚುನಾವಣಾ ರಾಜಕೀಯದಲ್ಲ ಪಿಜಿಆರ್ ಸಿಂಧ್ಯ ಅಂಥಹವರನ್ನೂ ಸೋಲಿಸಿದ್ದಾರೆ ಡಿಕೆಶಿ. ಮೊದಲ ಚುನಾವಣೆಯಲ್ಲಿ ಸೋಲಸಿದ್ದ ದೇವೇಗೌಡರಿಗೆ ತೇಜಸ್ವಿ ಅವರನ್ನು ಎದುರಿಗೆ ನಿಲ್ಲಿಸಿ ಸೋಲಿಸಿದ ಶ್ರೇಯವೂ ಡಿಕೆ ಶಿವಕುಮಾರ್ ಅವರದ್ದೇ.

ವೀಕೆಂಡ್ ವಿತ್ ರಮೇಶ್​ನಲ್ಲಿ ಅವರೇ ಹೇಳಿಕೊಂಡಂತೆ ”ನನಗೆ ಚುನಾವಣಾ ರಾಜಕೀಯ ಇಷ್ಟ. ನನಗೆ ಚುನಾವಣೆ ಗೆಲ್ಲುವ ತಂತ್ರ ಗೊತ್ತಿದೆ. ಯಾವುದೇ ವಿವಾದಿತ ಕ್ಷೇತ್ರವಾದರೂ ನಾನು ಇನ್​ಚಾರ್ಜ್ ತೆಗೆದುಕೊಂಡರೆ ಹೇಗೋ ಮಾಡಿ ಗೆಲುವು ಸಾಧಿಸುತ್ತೇನೆ. ಮೊದಲಿನಿಂದಲೂ ಅದನ್ನು ಮಾಡಿಕೊಂಡು ಬಂದಿದ್ದೇನೆ” ಎಂದಿದ್ದಾರೆ ಡಿ.ಕೆ.ಶಿವಕುಮಾರ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಅಮರನಾಥ ಯಾತ್ರೆ; ಕಾಲ್ನಡಿಗೆಯಲ್ಲೇ ಬೋಲೆನಾಥನ ದರ್ಶನ ಪಡೆದ ಶೋಭಾ ಕರಂದ್ಲಾಜೆ
ಅಮರನಾಥ ಯಾತ್ರೆ; ಕಾಲ್ನಡಿಗೆಯಲ್ಲೇ ಬೋಲೆನಾಥನ ದರ್ಶನ ಪಡೆದ ಶೋಭಾ ಕರಂದ್ಲಾಜೆ
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್