AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆತೊರೆದು ಹೊರಟಿದ್ದ ಪ್ರೇಮ್​ರ ಒರಟು ವ್ಯಕ್ತಿತತ್ವದಲ್ಲಿ ಬದಲಾವಣೆ ತಂದಿದ್ದು ಆ ಒಂದು ಸಿನಿಮಾ

Weekend With Ramesh: ಬಾಲ್ಯದಲ್ಲಿ ಒರಟನು, ಬಹಳ ಸಿಟ್ಟಿನ ಮನುಷ್ಯ ಆಗಿದ್ದ ಪ್ರೇಮ್​ರ ವ್ಯಕ್ತಿತ್ವ ಬದಲಾಗುವಂತೆ ಮಾಡಿದ್ದು ರಾಜ್​ಕುಮಾರ್ ನಟನೆಯ ಆ ಒಂದು ಸಿನಿಮಾ.

ಮನೆತೊರೆದು ಹೊರಟಿದ್ದ ಪ್ರೇಮ್​ರ ಒರಟು ವ್ಯಕ್ತಿತತ್ವದಲ್ಲಿ ಬದಲಾವಣೆ ತಂದಿದ್ದು ಆ ಒಂದು ಸಿನಿಮಾ
ಪ್ರೇಮ್
ಮಂಜುನಾಥ ಸಿ.
|

Updated on: May 07, 2023 | 7:36 PM

Share

ಪ್ರೇಮ್ ಈಗ ಲವ್ಲಿ ಸ್ಟಾರ್ (Lovely Star Prem) ಆಗಿ ಚಿರಪರಿಚಿತರು. ಬೆಂಗಳೂರಿನಲ್ಲಿಯೇ (Bengaluru) ಹುಟ್ಟಿ, ಇಲ್ಲಿಯೇ ಬೆಳೆದ ಪ್ರೇಮ್ ಬಾಲ್ಯದಿಂದಲೂ ಅಂದಗಾರ ಆದರೆ ಅವರ ಅಂದಕ್ಕೂ ಅವರ ವ್ಯಕ್ತಿತ್ವಕ್ಕೂ ಒಪ್ಪುತ್ತಲೇ ಇರಲಿಲ್ಲವಂತೆ ಅಷ್ಟು ಸಿಟ್ಟಿನ, ಒರಟು ವ್ಯಕ್ತಿಯಾಗಿದ್ದರು ಪ್ರೇಮ್. ಅದೇ ಒರಟು ವ್ಯಕ್ತಿತತ್ವದಿಂದಾಗಿ ಒಮ್ಮೆ ಮನೆ ಬಿಟ್ಟು ಹೊರಟು ಹೋಗುವ ಪರಿಸ್ಥಿತಿ ನಿರ್ಮಾಣ ಸಹ ಆಗಿತ್ತಂತೆ ಆದರೆ ಅಂದು ಪ್ರೇಮ್ ನೋಡಿದ ಒಂದು ಸಿನಿಮಾ ಅವರ ಜೀವನವನ್ನು ಬದಲಾಯಿಸಿಬಿಟ್ಟಿದೆ.

ಪ್ರೇಮ್ ಬಹಳ ಶಿಸ್ತಿನ, ಕೋಪದ ಪ್ರವೃತ್ತಿಯವರಾಗಿದ್ದರಂತೆ. ಮೂವರು ತಂಗಿಯರ ಮೇಲಂತೂ ವಿಪರೀತ ಶಿಸ್ತು, ಸಿಟ್ಟು ಪ್ರದರ್ಶಿಸುತ್ತಿದ್ದರಂತೆ. ತಂಗಿಯರ ಮೇಲೆ ಅತಿಯಾದ ಶಿಸ್ತು ಹೇರಿದ್ದರಂತೆ ಹಾಗೂ ಹೊಡೆಯುತ್ತಿದ್ದರಂತೆ ಸಹ. ಅವರು ಬೆಳೆದ ಏರಿಯಾ ಹಾಗಿತ್ತಂತೆ. ರೌಡಿಸಂ, ಪೋಲಿ ಹುಡುಗರ ಹಾವಳಿ ಎಲ್ಲವೂ ಇತ್ತಂತೆ ಅಲ್ಲಿ. ಆ ಕಾರಣಕ್ಕೆ ಪ್ರೇಮ್ ಸಹ ಹಾಗೆಯೇ ಆಗಿಬಿಟ್ಟಿದ್ದರಂತೆ.

ಒಮ್ಮೆ ಹುಡುಗರೊಟ್ಟಿಗೆ ಬುಗುರಿ ಆಡುವಾಗ ಹುಡುಗನೊಬ್ಬ ಏನೋ ಕೆಟ್ಟದಾಗಿ ಮಾತನಾಡಿದ ಎಂದು ಅದೇ ಬುಗುರಿಯಲ್ಲಿ ಅವನ ತಲೆ ತೂತು ಮಾಡಿದ್ದರಂತೆ ಪ್ರೇಮ್. ಆ ನಂತರ ಮನೆಗೆ ಬಂದಾಗ ಮನೆಯ ಬಳಿ ಭಾರಿ ಸಂಖ್ಯೆಯ ಜನ ಸೇರಿ ಜಗಳ ಮಾಡಿದ್ದರಂತೆ. ಪ್ರೇಮ್ ಮನೆಗೆ ಹೋದಾಗ ಅವರ ತಾಯಿ-ತಂದೆ ಬಹಳ ಬೈದಿದ್ದರಂತೆ. ಆ ಅವಮಾನಕ್ಕೆ ಮನೆಬಿಟ್ಟು ಹೋಗುವ ನಿರ್ಧಾರ ಮಾಡಿದ್ದರಂತೆ ಪ್ರೇಮ್.

ಮನೆ ಬಿಟ್ಟು ಹೋಗುವಾಗ ಅಲ್ಲಿ ಪರದೆ ಕಟ್ಟಿ ಡಾ ರಾಜ್​ಕುಮಾರ್ ನಟನೆಯ, ಬಂಗಾರದ ಮನುಷ್ಯ ಸಿನಿಮಾ ತೋರಿಸುತ್ತಿದ್ದರಂತೆ. ಸರಿ ಎಂದುಕೊಂಡು ಪ್ರೇಮ್ ಯಾವುದೋ ಮನೆ ಮೇಲೆ ಹತ್ತಿ ಟ್ಯಾಂಕರ್ ಪಕ್ಕ ಒಬ್ಬರೇ ಕೂತು ತದೇಕಚಿತ್ತದಿಂದ ಆ ಸಿನಿಮಾ ನೋಡಿದರಂತೆ. ಆ ಸಿನಿಮಾ ಅವರ ವ್ಯಕ್ತಿತ್ವದ ಮೇಲೆ ಬಹಳ ದೊಡ್ಡ ಪರಿಣಾಮ ಬೀರಿತಂತೆ. ಆ ಸಿನಿಮಾ ನೋಡಿದ ಬಳಿಕ, ನಾನು ಒಳ್ಳೆಯ ವ್ಯಕ್ತಿ ಎನಿಸಿಕೊಳ್ಳಬೇಕು, ಜೀವನದಲ್ಲಿ ಕೆಲವಾದರೂ ಆದರ್ಶಗಳನ್ನು ಇಟ್ಟುಕೊಳ್ಳಬೇಕು ಎಂದುಕೊಂಡರಂತೆ. ಅದಾದ ಮೇಲೆ ಒಳ್ಳೆಯತನದಿಂದ ಬದುಕಲು ಆರಂಭಿಸಿದರಂತೆ, ಸಿಟ್ಟು ತ್ಯಜಿಸಿದರಂತೆ, ತಂಗಿಯರ ಮೇಲೆ ಕೈಮಾಡುವುದು ಬಿಟ್ಟರಂತೆ. ಆದರ್ಶಗಳನ್ನು ಹೊಂದಿ ಅದಕ್ಕಾಗಿ ಬದುಕುವುದು ರೂಢಿ ಮಾಡಿಕೊಂಡರಂತೆ.

ಪ್ರೇಮ್ ಅವರೇ ವೀಕೆಂಡ್ ವಿತ್ ರಮೇಶ್​ನಲ್ಲಿ ಹೇಳಿಕೊಂಡಿರುವಂತೆ, ಸಿನಿಮಾಗಳು ಜೀವನವನ್ನೇ ಬದಲಾಯಿಸಿಬಿಡಬಲ್ಲವು, ನನ್ನ ಜೀವನದಲ್ಲಿ ಇದು ಸತ್ಯವಾಗಿದೆ. ಎಲ್ಲ ಸಿನಿಮಾಗಳಲ್ಲಿಯೂ ಸಂದೇಶಗಳಿರುತ್ತವೆ ಆದರೆ ಸಿನಿಮಾದಿಂದ ನಾವು ಯಾವುದನ್ನು ಅಳವಡಿಸಿಕೊಳ್ಳುತ್ತೇವೆ ಎಂಬುದಷ್ಟೆ ಮುಖ್ಯ ಎಂದಿದ್ದಾರೆ ಪ್ರೇಮ್.

ಪ್ರೇಮ್, ನಟರಾಗವ ಮುಂಚೆಯೇ ದೊಡ್ಡ ಸಿನಿಮಾ ಅಭಿಮಾನಿ ಆಗಿದ್ದವರು. ಪ್ರೇಮ್ ಅವರು ತರಗತಿಯಲ್ಲಿದ್ದಾಗಲೂ ಅವರ ತಂದೆ ಬಂದು ಮಗನನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಬೇಕು ಕಳಿಸಿ ಎಂದು ಹೇಳಿ ಪ್ರೇಮ್​ರನ್ನು ಕರೆದುಕೊಂಡು ಪಲ್ಲವಿ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ತೋರಿಸುತ್ತಿದ್ದರಂತೆ. ಯೌವ್ವನಕ್ಕೆ ಬಂದ ಬಳಿಕವಂತೂ ಯಾವುದೇ ಹೊಸ ಸಿನಿಮಾ ಬಿಡುಗಡೆ ಆದರೂ ತಪ್ಪದೆ ನೋಡುತ್ತಿದ್ದರಂತೆ ಪ್ರೇಮ್. ಕೆಲವು ಸಿನಿಮಾಗಳನ್ನಂತೂ 10-20 ಭಾರಿ ಸಹ ನೋಡಿದ್ದರಂತೆ. ಶಾರುಖ್ ಖಾನ್​ರ ಬಹುದೊಡ್ಡ ಅಭಿಮಾನಿ ಆಗಿದ್ದರಂತೆ ನಟ ಪ್ರೇಮ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್