ರಾಮ್ ಚರಣ್ ಹಣಕ್ಕಾಗಿ ಮದುವೆಯಾಗಿದ್ದಾರೆ ಎಂದಿದ್ದರು, ನನ್ನನ್ನೂ ನಿಂದಿಸಿದ್ದರು: ಉಪಾಸನಾ

ರಾಮ್ ಚರಣ್ ಜೊತೆ ಮದುವೆಯಾದಾಗ ಅನುಭವಿಸಿದ್ದ ನಿಂದನೆ, ಮೂದಲಿಕೆಗಳನ್ನು ಉಪಾಸನಾ ಕಮ್ಮಿನೇನಿ ನೆನಪಿಸಿಕೊಂಡಿದ್ದಾರೆ.

ರಾಮ್ ಚರಣ್ ಹಣಕ್ಕಾಗಿ ಮದುವೆಯಾಗಿದ್ದಾರೆ ಎಂದಿದ್ದರು, ನನ್ನನ್ನೂ ನಿಂದಿಸಿದ್ದರು: ಉಪಾಸನಾ
ರಾಮ್ ಚರಣ್-ಉಪಾಸನಾ
Follow us
|

Updated on:Apr 02, 2023 | 8:24 PM

ಉಪಾಸನಾ (Upasana Kammineni) ಹಾಗೂ ರಾಮ್ ಚರಣ್ (Ram Charan) ಮದುವೆಯಾಗಿ ಹತ್ತು ವರ್ಷಗಳಾಗಿವೆ. ಈ ಜೂನ್ ತಿಂಗಳಲ್ಲಿ ಹನ್ನೊಂದನೇ ವರ್ಷದ ವಾರ್ಷಿಕೋತ್ಸವ ಆಚರಿಸಿಕೊಳ್ಳಲಿದ್ದಾರೆ. ಇದೀಗ ಇಬ್ಬರೂ ಪೋಷಕರಾಗಲಿದ್ದು, ಉಪಾಸನಾ ಹಾಗೂ ರಾಮ್ ಚರಣ್ ಮಗುವಿನ ನಿರೀಕ್ಷೆಯಲ್ಲಿದ್ದಾರೆ. 2012 ರಲ್ಲಿ ರಾಮ್ ಚರಣ್ ಹಾಗೂ ಉಪಾಸನಾ ಕಮ್ಮಿನೇನಿ ವಿವಾಹವಾದಾಗ ಹಲವರು ಆಶ್ಚರ್ಯ ವ್ಯಕ್ತಪಡಿಸಿದ್ದರು. ತಮ್ಮ ಮದುವೆ ಸಂದರ್ಭದಲ್ಲಿ ತಾವು ಎದುರಿಸಿದ ಟೀಕೆಗಳ ಬಗ್ಗೆ ಉಪಾಸನಾ ಕಮ್ಮಿನೇನಿ ಇದೀಗ ಮಾತನಾಡಿದ್ದಾರೆ.

ನಾನು ಹಾಗೂ ರಾಮ್ ಚರಣ್ ಕಾಮನ್ ಫ್ರೆಂಡ್ ಒಬ್ಬರಿಂದಾಗಿ ಮೊದಲ ಭಾರಿ ಭೇಟಿ ಆದೆವು, ಪರಿಚಯ ಪ್ರೇಮಕ್ಕೆ ತಿರುಗಿ ಇಬ್ಬರೂ ವಿವಾಹವಾದೆವು. ನಮ್ಮಿಬ್ಬರ ಹಿನ್ನೆಲೆ ಬೇರೆ-ಬೇರೆ ಆಗಿದ್ದರೂ ಸಹ ಪರಸ್ಪರರ ಮೇಲಿರುವ ಪ್ರೀತಿ, ಗೌರವ ಹಾಗೂ ನಂಬಿಕೆಗಳಿಂದಾಗಿ ನಾವು ಮದುವೆಯಾಗಲು ನಿಶ್ಚಯಿಸಿದೆವು. ನಮ್ಮ ಮದುವೆಯಲ್ಲಿ ನಮ್ಮ ಆಂಟಿ ಹಾಗೂ ಸಹೋದರಿ ಬಹಳ ಪ್ರಮುಖ ಪಾತ್ರವಹಿಸಿದರು ಎಂದು ನೆನಪು ಮಾಡಿಕೊಂಡಿದ್ದಾರೆ ಉಪಾಸನಾ.

ಮದುವೆಯಾದ ಹೊಸತರಲ್ಲಿ ನಾನು ಬಹಳಷ್ಟು ಅಪಮಾನಗಳನ್ನು ಎದುರಿಸಬೇಕಾಯಿತು. ಹಲವರು ನನ್ನ ಬಾಡಿಶೇಮಿಂಗ್ ಮಾಡಿದರು. ದಪ್ಪಗಿದ್ದಾಳೆ, ಸುಂದರವಾಗಿಲ್ಲ ಎಂದು ಹೇಳಿದರು. ಮಾತ್ರವಲ್ಲ, ರಾಮ್ ಚರಣ್, ಹಣಕ್ಕಾಗಿ ನನ್ನನ್ನು ವಿವಾಹವಾಗಿದ್ದಾರೆ ಎಂದರು. ಆದರೆ ಅದನ್ನೆಲ್ಲ ನಾವು ಸಹಿಸಿಕೊಂಡೆವು. ಆಗ ನಮ್ಮನ್ನು ಟೀಕಿಸಿದವರ ಅಭಿಪ್ರಾಯ ಈಗ ಬದಲಾಗಿದೆ. ಆದರೆ ಆಗ ಎಲ್ಲವನ್ನೂ ಸಹಿಸಿಕೊಂಡು ಮುಂದೆ ನಡೆದಿದ್ದಕ್ಕೆ ನನ್ನ ಬಗ್ಗೆ ನನಗೆ ಹೆಮ್ಮೆ ಇದೆ. ಚಾಂಪಿಯನ್ ಎನಿಸುತ್ತಿದೆ ಎಂದಿದ್ದಾರೆ ಉಪಾಸನಾ.

ನಾವಿಬ್ಬರೂ ಬಹಳ ಪ್ರಾಕ್ಟಿಕಲ್ ವ್ಯಕ್ತಿಗಳು, ಪ್ರಾಕ್ಟಿಕಲ್ ಆಗಿ ಆಲೋಚಿಸುತ್ತೇವೆ. ಪರಸ್ಪರರ ಬಗ್ಗೆ ಗೌರವ, ಪ್ರೀತಿ ಹೊಂದಿದ್ದೇವೆ. ಒಬ್ಬರಿಗೊಬ್ಬರು ಚಾಲೆಂಜ್​ಗಳನ್ನು ಹಾಕಿಕೊಳ್ಳುತ್ತಾ ಬೆಳೆಯಲು ಯತ್ನಿಸುತ್ತೇವೆ” ಎಂದಿರುವ ಉಪಾಸನಾ, ಆಸ್ಕರ್ ಸಮಾರಂಭದ ಬಗ್ಗೆ ಮಾತನಾಡುತ್ತಾ, ಆಸ್ಕರ್ ಸಮಾರಂಭದ ದಿನ ರಾಮ್ ಚರಣ್ ಬಹಳ ಒತ್ತಡದಲ್ಲಿದ್ದರು, ನಿಜಕ್ಕೂ ಅವರ ಕೈ ನಡುಗುತ್ತಿತ್ತು, ಅವರಿಗೆ ಬೆಂಬಲದ ಅವಶ್ಯಕತೆ ಬಹಳ ಇತ್ತು, ನಾನು ಅವರಿಗೆ ಅಂದು ಬೆಂಬಲವಾಗಿದ್ದೆ. ನನಗೂ ಸಹ ಅದು ಬಹಳ ಎಮೋಷನಲ್ ಆದ ಸಮಯವಾಗಿತ್ತು ಎಂದಿದ್ದಾರೆ ಉಪಾಸನಾ.

ಉಪಾಸನಾ ಆಂಧ್ರದ ಶ್ರೀಮಂತ ಕುಟುಂಬದ ಮಗಳು. ರಾಷ್ಟ್ರದ ಹಲವು ನಗರಗಳಲ್ಲಿರುವ ಅಪೋಲೊ ಆಸ್ಪತ್ರೆ ಅವರ ಕುಟುಂಬದ ಒಡೆತನದಲ್ಲಿದೆ. ಸ್ವತಃ ಉದ್ಯಮಿ ಆಗಿರುವ ಉಪಾಸನಾ ಅಪೋಲೊ ಆಸ್ಪತ್ರೆ ಚೇನ್​ನ ವೈಸ್ ಚೇರ್​ಮೆನ್ ಆಗಿದ್ದಾರೆ. ಜೊತೆಗೆ ಯುಆರ್ ಲೈಫ್ ಹೆಸರಿನ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಎಚ್​ಎಫ್​ಪಿಎಲ್ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಸಹ ಆಗಿದ್ದಾರೆ. ಇನ್ನು ರಾಮ್ ಚರಣ್ ಭಾರತದ ಟಾಪ್ ನಟರಲ್ಲಿ ಒಬ್ಬರಾಗಿದ್ದು, ಇದೀಗ ತಮಿಳಿನ ಜನಪ್ರಿಯ ನಿರ್ದೇಶಕ ಶಂಕರ್ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದಾದ ಬಳಿಕ ಹಾಲಿವುಡ್ ಸಿನಿಮಾ ಒಂದರಲ್ಲಿಯೂ ನಟಿಸಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:23 pm, Sun, 2 April 23

20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ