AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮ್ ಚರಣ್ ಹಣಕ್ಕಾಗಿ ಮದುವೆಯಾಗಿದ್ದಾರೆ ಎಂದಿದ್ದರು, ನನ್ನನ್ನೂ ನಿಂದಿಸಿದ್ದರು: ಉಪಾಸನಾ

ರಾಮ್ ಚರಣ್ ಜೊತೆ ಮದುವೆಯಾದಾಗ ಅನುಭವಿಸಿದ್ದ ನಿಂದನೆ, ಮೂದಲಿಕೆಗಳನ್ನು ಉಪಾಸನಾ ಕಮ್ಮಿನೇನಿ ನೆನಪಿಸಿಕೊಂಡಿದ್ದಾರೆ.

ರಾಮ್ ಚರಣ್ ಹಣಕ್ಕಾಗಿ ಮದುವೆಯಾಗಿದ್ದಾರೆ ಎಂದಿದ್ದರು, ನನ್ನನ್ನೂ ನಿಂದಿಸಿದ್ದರು: ಉಪಾಸನಾ
ರಾಮ್ ಚರಣ್-ಉಪಾಸನಾ
Follow us
ಮಂಜುನಾಥ ಸಿ.
|

Updated on:Apr 02, 2023 | 8:24 PM

ಉಪಾಸನಾ (Upasana Kammineni) ಹಾಗೂ ರಾಮ್ ಚರಣ್ (Ram Charan) ಮದುವೆಯಾಗಿ ಹತ್ತು ವರ್ಷಗಳಾಗಿವೆ. ಈ ಜೂನ್ ತಿಂಗಳಲ್ಲಿ ಹನ್ನೊಂದನೇ ವರ್ಷದ ವಾರ್ಷಿಕೋತ್ಸವ ಆಚರಿಸಿಕೊಳ್ಳಲಿದ್ದಾರೆ. ಇದೀಗ ಇಬ್ಬರೂ ಪೋಷಕರಾಗಲಿದ್ದು, ಉಪಾಸನಾ ಹಾಗೂ ರಾಮ್ ಚರಣ್ ಮಗುವಿನ ನಿರೀಕ್ಷೆಯಲ್ಲಿದ್ದಾರೆ. 2012 ರಲ್ಲಿ ರಾಮ್ ಚರಣ್ ಹಾಗೂ ಉಪಾಸನಾ ಕಮ್ಮಿನೇನಿ ವಿವಾಹವಾದಾಗ ಹಲವರು ಆಶ್ಚರ್ಯ ವ್ಯಕ್ತಪಡಿಸಿದ್ದರು. ತಮ್ಮ ಮದುವೆ ಸಂದರ್ಭದಲ್ಲಿ ತಾವು ಎದುರಿಸಿದ ಟೀಕೆಗಳ ಬಗ್ಗೆ ಉಪಾಸನಾ ಕಮ್ಮಿನೇನಿ ಇದೀಗ ಮಾತನಾಡಿದ್ದಾರೆ.

ನಾನು ಹಾಗೂ ರಾಮ್ ಚರಣ್ ಕಾಮನ್ ಫ್ರೆಂಡ್ ಒಬ್ಬರಿಂದಾಗಿ ಮೊದಲ ಭಾರಿ ಭೇಟಿ ಆದೆವು, ಪರಿಚಯ ಪ್ರೇಮಕ್ಕೆ ತಿರುಗಿ ಇಬ್ಬರೂ ವಿವಾಹವಾದೆವು. ನಮ್ಮಿಬ್ಬರ ಹಿನ್ನೆಲೆ ಬೇರೆ-ಬೇರೆ ಆಗಿದ್ದರೂ ಸಹ ಪರಸ್ಪರರ ಮೇಲಿರುವ ಪ್ರೀತಿ, ಗೌರವ ಹಾಗೂ ನಂಬಿಕೆಗಳಿಂದಾಗಿ ನಾವು ಮದುವೆಯಾಗಲು ನಿಶ್ಚಯಿಸಿದೆವು. ನಮ್ಮ ಮದುವೆಯಲ್ಲಿ ನಮ್ಮ ಆಂಟಿ ಹಾಗೂ ಸಹೋದರಿ ಬಹಳ ಪ್ರಮುಖ ಪಾತ್ರವಹಿಸಿದರು ಎಂದು ನೆನಪು ಮಾಡಿಕೊಂಡಿದ್ದಾರೆ ಉಪಾಸನಾ.

ಮದುವೆಯಾದ ಹೊಸತರಲ್ಲಿ ನಾನು ಬಹಳಷ್ಟು ಅಪಮಾನಗಳನ್ನು ಎದುರಿಸಬೇಕಾಯಿತು. ಹಲವರು ನನ್ನ ಬಾಡಿಶೇಮಿಂಗ್ ಮಾಡಿದರು. ದಪ್ಪಗಿದ್ದಾಳೆ, ಸುಂದರವಾಗಿಲ್ಲ ಎಂದು ಹೇಳಿದರು. ಮಾತ್ರವಲ್ಲ, ರಾಮ್ ಚರಣ್, ಹಣಕ್ಕಾಗಿ ನನ್ನನ್ನು ವಿವಾಹವಾಗಿದ್ದಾರೆ ಎಂದರು. ಆದರೆ ಅದನ್ನೆಲ್ಲ ನಾವು ಸಹಿಸಿಕೊಂಡೆವು. ಆಗ ನಮ್ಮನ್ನು ಟೀಕಿಸಿದವರ ಅಭಿಪ್ರಾಯ ಈಗ ಬದಲಾಗಿದೆ. ಆದರೆ ಆಗ ಎಲ್ಲವನ್ನೂ ಸಹಿಸಿಕೊಂಡು ಮುಂದೆ ನಡೆದಿದ್ದಕ್ಕೆ ನನ್ನ ಬಗ್ಗೆ ನನಗೆ ಹೆಮ್ಮೆ ಇದೆ. ಚಾಂಪಿಯನ್ ಎನಿಸುತ್ತಿದೆ ಎಂದಿದ್ದಾರೆ ಉಪಾಸನಾ.

ನಾವಿಬ್ಬರೂ ಬಹಳ ಪ್ರಾಕ್ಟಿಕಲ್ ವ್ಯಕ್ತಿಗಳು, ಪ್ರಾಕ್ಟಿಕಲ್ ಆಗಿ ಆಲೋಚಿಸುತ್ತೇವೆ. ಪರಸ್ಪರರ ಬಗ್ಗೆ ಗೌರವ, ಪ್ರೀತಿ ಹೊಂದಿದ್ದೇವೆ. ಒಬ್ಬರಿಗೊಬ್ಬರು ಚಾಲೆಂಜ್​ಗಳನ್ನು ಹಾಕಿಕೊಳ್ಳುತ್ತಾ ಬೆಳೆಯಲು ಯತ್ನಿಸುತ್ತೇವೆ” ಎಂದಿರುವ ಉಪಾಸನಾ, ಆಸ್ಕರ್ ಸಮಾರಂಭದ ಬಗ್ಗೆ ಮಾತನಾಡುತ್ತಾ, ಆಸ್ಕರ್ ಸಮಾರಂಭದ ದಿನ ರಾಮ್ ಚರಣ್ ಬಹಳ ಒತ್ತಡದಲ್ಲಿದ್ದರು, ನಿಜಕ್ಕೂ ಅವರ ಕೈ ನಡುಗುತ್ತಿತ್ತು, ಅವರಿಗೆ ಬೆಂಬಲದ ಅವಶ್ಯಕತೆ ಬಹಳ ಇತ್ತು, ನಾನು ಅವರಿಗೆ ಅಂದು ಬೆಂಬಲವಾಗಿದ್ದೆ. ನನಗೂ ಸಹ ಅದು ಬಹಳ ಎಮೋಷನಲ್ ಆದ ಸಮಯವಾಗಿತ್ತು ಎಂದಿದ್ದಾರೆ ಉಪಾಸನಾ.

ಉಪಾಸನಾ ಆಂಧ್ರದ ಶ್ರೀಮಂತ ಕುಟುಂಬದ ಮಗಳು. ರಾಷ್ಟ್ರದ ಹಲವು ನಗರಗಳಲ್ಲಿರುವ ಅಪೋಲೊ ಆಸ್ಪತ್ರೆ ಅವರ ಕುಟುಂಬದ ಒಡೆತನದಲ್ಲಿದೆ. ಸ್ವತಃ ಉದ್ಯಮಿ ಆಗಿರುವ ಉಪಾಸನಾ ಅಪೋಲೊ ಆಸ್ಪತ್ರೆ ಚೇನ್​ನ ವೈಸ್ ಚೇರ್​ಮೆನ್ ಆಗಿದ್ದಾರೆ. ಜೊತೆಗೆ ಯುಆರ್ ಲೈಫ್ ಹೆಸರಿನ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಎಚ್​ಎಫ್​ಪಿಎಲ್ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಸಹ ಆಗಿದ್ದಾರೆ. ಇನ್ನು ರಾಮ್ ಚರಣ್ ಭಾರತದ ಟಾಪ್ ನಟರಲ್ಲಿ ಒಬ್ಬರಾಗಿದ್ದು, ಇದೀಗ ತಮಿಳಿನ ಜನಪ್ರಿಯ ನಿರ್ದೇಶಕ ಶಂಕರ್ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದಾದ ಬಳಿಕ ಹಾಲಿವುಡ್ ಸಿನಿಮಾ ಒಂದರಲ್ಲಿಯೂ ನಟಿಸಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:23 pm, Sun, 2 April 23

‘ಎಸ್​ಪಿಬಿ ರೀತಿಯೇ ಮತ್ತೋರ್ವ ಗಾಯಕನಿದ್ದಾನೆ ಎಂದರು..’; ಜಗ್ಗೇಶ್
‘ಎಸ್​ಪಿಬಿ ರೀತಿಯೇ ಮತ್ತೋರ್ವ ಗಾಯಕನಿದ್ದಾನೆ ಎಂದರು..’; ಜಗ್ಗೇಶ್
ಅಕ್ರಮ ಕಟ್ಟಡಗಳ ವಿರುದ್ಧ ಬಿಬಿಎಂಪಿ ಸಮರ: ಹಲವೆಡೆ ಕಟ್ಟಡಗಳ ತೆರವು
ಅಕ್ರಮ ಕಟ್ಟಡಗಳ ವಿರುದ್ಧ ಬಿಬಿಎಂಪಿ ಸಮರ: ಹಲವೆಡೆ ಕಟ್ಟಡಗಳ ತೆರವು
ವೆಸ್ಟ್​ ವ್ಯಾಲಿ ಸಿಟಿಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ
ವೆಸ್ಟ್​ ವ್ಯಾಲಿ ಸಿಟಿಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ
ಈ ಸಲ ಮೊದಲ ಬಾರಿಗೆ ಜನಗಣತಿಯ ಜಾತಿಗಣತಿ: ಗೃಹ ಸಚಿವಾಲಯ
ಈ ಸಲ ಮೊದಲ ಬಾರಿಗೆ ಜನಗಣತಿಯ ಜಾತಿಗಣತಿ: ಗೃಹ ಸಚಿವಾಲಯ
ಮೈಸೂರಿಗೆ 5 ರೂ. ಕೆಲಸ ಮಾಡಿಲ್ಲ ಸಿದ್ದರಾಮಯ್ಯ: ಪ್ರತಾಪ್ ಸಿಂಹ ವಾಗ್ದಾಳಿ
ಮೈಸೂರಿಗೆ 5 ರೂ. ಕೆಲಸ ಮಾಡಿಲ್ಲ ಸಿದ್ದರಾಮಯ್ಯ: ಪ್ರತಾಪ್ ಸಿಂಹ ವಾಗ್ದಾಳಿ
ಎಂಭತ್ತು ಶವಗಳ ಗುರುತು ಪತ್ತೆ, 4-ದಿನದಿಂದ ಕಾಯುತ್ತಿರುವ ಸಂಬಂಧಿಕರು
ಎಂಭತ್ತು ಶವಗಳ ಗುರುತು ಪತ್ತೆ, 4-ದಿನದಿಂದ ಕಾಯುತ್ತಿರುವ ಸಂಬಂಧಿಕರು
ಲಕ್ನೋ: ಸೌದಿ ಏರ್​ಲೈನ್ಸ್​ ವಿಮಾನದ ಚಕ್ರದಲ್ಲಿ ಕಾಣಿಸಿಕೊಂಡ ಬೆಂಕಿ
ಲಕ್ನೋ: ಸೌದಿ ಏರ್​ಲೈನ್ಸ್​ ವಿಮಾನದ ಚಕ್ರದಲ್ಲಿ ಕಾಣಿಸಿಕೊಂಡ ಬೆಂಕಿ
ಸ್ಫೋಟಕ ಬ್ಯಾಟಿಂಗ್​... ಮತ್ತೊಂದು ಟಿ20 ಟ್ರೋಫಿ ಗೆದ್ದ ಜಿತೇಶ್ ಶರ್ಮಾ
ಸ್ಫೋಟಕ ಬ್ಯಾಟಿಂಗ್​... ಮತ್ತೊಂದು ಟಿ20 ಟ್ರೋಫಿ ಗೆದ್ದ ಜಿತೇಶ್ ಶರ್ಮಾ
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಭಾರೀ ಮಳೆ, ಭೋರ್ಗರೆಯುತ್ತಿರುವ ಭದ್ರೆ
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಭಾರೀ ಮಳೆ, ಭೋರ್ಗರೆಯುತ್ತಿರುವ ಭದ್ರೆ
ಮಳೆ ಅಬ್ಬರ, ಈ ನಾಲ್ಕು ಜಿಲ್ಲೆಗಳಲ್ಲಿಂದು ಶಾಲೆ-ಕಾಲೇಜುಗಳಿಗೆ ರಜೆ
ಮಳೆ ಅಬ್ಬರ, ಈ ನಾಲ್ಕು ಜಿಲ್ಲೆಗಳಲ್ಲಿಂದು ಶಾಲೆ-ಕಾಲೇಜುಗಳಿಗೆ ರಜೆ