AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೇದಿಕೆ ಮೇಲೆ ವಿದೇಶಿ ಮಹಿಳೆಯ ಎತ್ತಿಕೊಂಡು ಮುತ್ತಿಟ್ಟ ನಟ ವರುಣ್ ಧವನ್, ತೀವ್ರ ಟೀಕೆ

ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ ಉದ್ಘಾಟನೆ ಕಾರ್ಯಕ್ರಮದಲ್ಲಿ ನಟ ವರುಣ್ ಧವನ್, ವಿದೇಶಿ ಸೂಪರ್ ಮಾಡೆಲ್ ಗೀಗಿ ಹದೀದ್ ಜೊತೆ ನಡೆದುಕೊಂಡ ರೀತಿಯ ಬಗ್ಗೆ ಟೀಕೆ ವ್ಯಕ್ತವಾಗಿದೆ.

ವೇದಿಕೆ ಮೇಲೆ ವಿದೇಶಿ ಮಹಿಳೆಯ ಎತ್ತಿಕೊಂಡು ಮುತ್ತಿಟ್ಟ ನಟ ವರುಣ್ ಧವನ್, ತೀವ್ರ ಟೀಕೆ
ವರುಣ್ ಧವನ್
ಮಂಜುನಾಥ ಸಿ.
|

Updated on:Apr 02, 2023 | 7:02 PM

Share

ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ (NMACC) ಉದ್ಘಾಟನೆ ಕಾರ್ಯಕ್ರಮ ಭಾರಿ ಅದ್ಧೂರಿಯಾಗಿತ್ತು. ಬಾಲಿವುಡ್​ನ (Bollywood) ಹಲವು ದಿಗ್ಗಜರ ಜೊತೆಗೆ ಹಾಲಿವುಡ್​ನ (Hollywood) ಸ್ಟಾರ್ ನಟ-ನಟಿಯರು ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಉದ್ಘಾಟನಾ ಕಾರ್ಯಕ್ರಮದ ವೇದಿಕೆ ಮೇಲೆ ಹಲವು ಬಾಲಿವುಡ್ ನಟರು ನೃತ್ಯ ಮಾಡಿ ಅತಿಥಿಗಳನ್ನು ರಂಜಿಸಿದರು. ಆದರೆ ನೃತ್ಯ ಕಾರ್ಯಕ್ರಮದ ವೇಳೆ ನಟ ವರುಣ್ ಧವನ್ (Varun Dhawan) ನಡೆದುಕೊಂಡಿರುವ ರೀತಿ ಟೀಕೆಗೆ ಗುರಿಯಾಗಿದೆ.

ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಕುಣಿದ ನಟ ವರುಣ್ ಧವನ್ ಅಮೆರಿಕದ ಸೂಪರ್ ಮಾಡೆಲ್ ಗೀಗಿ ಹದೀದ್ ಅನ್ನು ಎತ್ತಿಕೊಂಡು ವೇದಿಕೆ ಮೇಲೆಯೇ ಮುತ್ತು ಕೊಟ್ಟಿದ್ದಾರೆ. ವರುಣ್​ರ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವರುಣ್ ಧವನ್​ರ ಈ ನಡೆಗೆ ನೆಟ್ಟಿಗರಿಂದ ಟೀಕೆ ವ್ಯಕ್ತವಾಗಿದೆ. ವರುಣ್ ಧವನ್, ಗೀಗಿಯನ್ನು ಎತ್ತಿಕೊಂಡಿದ್ದು ನೃತ್ಯದ ಭಾಗವಾಗಿರಲಿಲ್ಲ, ಬದಲಿಗೆ ಗೀಗಿಯನ್ನು ವೇದಿಕೆಗೆ ಆಹ್ವಾನಿಸಿ ಆಕೆಯನ್ನು ಎತ್ತಿಕೊಂಡು ಮುತ್ತುಕೊಟ್ಟಿದ್ದಾರೆ ವರುಣ್, ಹಾಗಾಗಿ ಟೀಕೆ ವ್ಯಕ್ತವಾಗುತ್ತಿದೆ.

ಗೀಗಿ ಹದೀದಿಯ ಒಪ್ಪಿಗೆ ಇಲ್ಲದೆ ವರುಣ್ ಧವನ್ ಹೀಗೆ ಮುತ್ತುಕೊಟ್ಟಿರುವುದು ಸರಿಯಲ್ಲ ಎಂದು ಹಲವರು ಹೇಳಿದ್ದಾರೆ. ಮಹಿಳೆ ಎಲ್ಲಿಯೂ ಸುರಕ್ಷಿತಳಲ್ಲ, ವರುಣ್ ಧವನ್ ತಮ್ಮ ಹೀರೋತನ ತೋರಿಸಲು ಮಹಿಳೆಯನ್ನು ಹೀಗೆ ಕೀಳಾಗಿ ಬಳಸಿಕೊಂಡಿರುವುದು ಸರಿಯಲ್ಲವೆಂದು ಕೆಲವರು ಟೀಕಿಸಿದ್ದಾರೆ. ವರುಣ್ ಧವನ್ ತಮ್ಮನ್ನು ತಾವು ನಿಯಂತ್ರದಲ್ಲಿಟ್ಟುಕೊಳ್ಳಬೇಕು, ಆನ್​ಸ್ಕ್ರೀನ್ ಹೀಗೆ ಮಾಡಿದರೆ ಸರಿ ಎನ್ನಬಹುದು, ಆದರೆ ವೇದಿಕೆಯ ಮೇಲೆ ಹೀಗೆ ಮಾಡುವುದು ಸರಿಯಲ್ಲ ಎಂದಿರುವ ನೆಟ್ಟಿಗರೊಬ್ಬರು ಈ ಹಿಂದೆ ಇದೇ ವರುಣ್ ಧವನ್, ಪತ್ರಿಕಾಗೋಷ್ಠಿಯೊಂದರಲ್ಲಿ ಆಲಿಯಾ ಭಟ್​ರ ಅನುಮತಿ ಇಲ್ಲದೆ ಅವರ ಸೊಂಟ ಹಿಚುಕಿದ್ದ ಘಟನೆಯನ್ನು ನೆನಪಿಸಿದ್ದಾರೆ.

ತಮ್ಮ ವಿಡಿಯೋಕ್ಕೆ ವಿರೋಧ ವ್ಯಕ್ತವಾಗುತ್ತಲೆ ಘಟನೆ ಬಗ್ಗೆ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿರುವ ನಟ ವರುಣ್ ಧವನ್, ”ಬಹುಷಃ ಇಂದು ಬೆಳಿಗ್ಗೆ ನೀವು ಎದ್ದ ಕೂಡಲೇ ಜಾಗೃತಗೊಳ್ಳಲು ನಿರ್ಧರಿಸಿದಂತಿದೆ” ಎಂದು ಟ್ರೋಲರ್​ಗಳ ಕಾಲೆಳೆದಿರುವ ವರುಣ್, ”ನಿಮ್ಮ ತಪ್ಪು ಕಲ್ಪನೆಯ ನೀರಿನ ಗುಳ್ಳೆಗೆ ನಾನೀಗ ಸೂಜಿ ಚುಚ್ಚಲಿದ್ದೇನೆ, ಗೀಗಿ ಹದೀದ್ ವೇದಿಕೆ ಮೇಲೆ ಬರಬೇಕೆಂಬುದು ಮೊದಲೇ ನಿಶ್ಚಿತವಾಗಿತ್ತು, ಆ ಕಾರ್ಯ ಯೋಜನೆಯಂತೆಯೇ ನಡೆದಿದೆ. ಹಾಗಾಗಿ ನಿಮ್ಮ ಮೂಗು ತೂರಿಸಲು ಬೇರೆ ಯಾವುದಾದರೂ ವಿಷಯವನ್ನು ಹುಡುಕಿಕೊಳ್ಳಿ, ಹೊರಗೆ ಹೋಗಿ ನಿಜವಾದ ಕೆಲಸ ಮಾಡದೆ ಇಂಥಹುದರಲ್ಲೇ ಸಮಯ ವ್ಯರ್ಥ ಮಾಡಿಕೊಂಡಿರಿ” ಎಂದು ಖಾರವಾಗಿಯೇ ಪ್ರತಿಕ್ರಯಿಸಿದ್ದಾರೆ.

ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ ಉದ್ಘಾಟನೆ ಕಾರ್ಯಕ್ರಮದಲ್ಲಿ ವರುಣ್ ಧವನ್ ಮಾತ್ರವೇ ಅಲ್ಲದೆ ಹಲವರು ವೇದಿಕೆ ಮೇಲೆ ನೃತ್ಯ ಪ್ರದರ್ಶನ ನೀಡಿ ರಂಜಿಸಿದರು. ಸ್ವತಃ ನೀತಾ ಅಂಬಾನಿ ಮೊದಲಿಗೆ ನೃತ್ಯ ಪ್ರದರ್ಶನ ನೀಡಿದರು. ಅದಾದ ಬಳಿಕ ಶಾರುಖ್ ಖಾನ್, ರಣ್ವೀರ್ ಸಿಂಗ್, ವರುಣ್ ಧವನ್ ಇನ್ನೂ ಹಲವರು ತಾರೆಯರು ವೇದಿಕೆ ಏರಿದರು. ಶಾರುಖ್ ಖಾನ್ ತಮ್ಮ ಇತ್ತೀಚೆಗಿನ ಪಠಾಣ್ ಸಿನಿಮಾದ ಸ್ಟೆಪ್ ಹಾಕಿದರು ಅವರ ಜೊತೆಗೆ ವರುಣ್ ಧವನ್ ಹಾಗೂ ರಣ್ವೀರ್ ಸಿಂಗ್ ಸಹ ಸೇರಿಕೊಂಡರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:07 pm, Sun, 2 April 23

Follow Us
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ