
ತಮಿಳು ಸಿನಿಮಾ ನಿರ್ದೇಶಕ ವೆಟ್ರಿಮಾರನ್ ಹೆಸರನ್ನು ಅನೇಕರು ಕೇಳಿರುತ್ತೀರಿ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಅವರ ಆ್ಯಕ್ಷನ್ ವೈರಲ್ ಆಗಿತ್ತು. ಯಾವುದೋ ಸಿನಿಮಾ ಈವೆಂಟ್ನಲ್ಲಿ ಅವರು ಭಾಗಿ ಆಗಿದ್ದರು. ಆರಂಭದಲ್ಲಿ ಸಿಟ್ಟಾಗೋ ಅವರು ನಂತರ ಏಕಾಕಿ ಮುಖಭಾವ ಬದಲಿಸಿಕೊಂಡು ನಗುವಿನಿಂದ ಮಾತನಾಡುವುದನ್ನು ಕಾಣಬಹುದು. ಈ ವಿಡಿಯೋನ ಮೀಮ್ಗಳಿಗೆ ಬಳಕೆ ಮಾಡಲಾಗಿತ್ತು. ಈಗ ಅವರ ಸಿನಿಮಾಗಳಿಗೆ ತೊಂದರೆ ಉಂಟಾಗಿದೆ. ಹಾಗಂತ ಅವರ ಆ್ಯಕ್ಷನ್ಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ.
ವೆಟ್ರಿಮಾರನ್ ಅವರು 2007ರಲ್ಲಿ ನಿರ್ದೇಶನಕ್ಕೆ ಬಂದರು. ಆ ಬಳಿಕ ಸಾಲು ಸಾಲು ಹಿಟ್ ಸಿನಿಮಾ ನೀಡಿದರು. ‘ವಿಡುದಲೈ ಪಾರ್ಟ್ 1’ ಹಾಗೂ ‘ವಿಡುದಲೈ ಪಾರ್ಟ್ 2’ ಅವರ ನಿರ್ದೇಶನದ ಕೊನೆಯ ಸಿನಿಮಾಗಳು. ಅವರ ಬಳಿ ಇರೋ ಸಿನಿಮಾಗಳೆಲ್ಲ ನಿಂತು ಹೋಗುತ್ತಿವೆ ಎಂದು ಹೇಳಲಾಗುತ್ತಿದೆ.
ಈ ಮೊದಲು ಅವರು ಸೂರ್ಯ ಜೊತೆ ಸಿನಿಮಾ ಮಾಡಬೇಕಿತ್ತು. ಇದಕ್ಕೆ ‘ವಡಿವಾಸಲ್’ ಎಂದು ಟೈಟಲ್ ಇಡಲಾಗಿತ್ತು. ಆದರೆ ಸಿನಿಮಾ ನಿಂತು ಹೋಯಿತು. ಆ ಬಳಿಕ ಅವರು ಧನುಷ್ ಜೊತೆ ‘ವಾಡಾ ಚೆನ್ನೈ 2’ ಮಾಡಬೇಕಿತ್ತು. ಆದರೆ, ಇದು ವಿಳಂಬ ಆಗಿದೆ. ಹೀಗಾಗಿ, ಸಿಂಬು ಜೊತೆ ಸಿನಿಮಾ ಮಾಡಲು ಅವರು ಮುಂದಾದರು.
‘ಅರಸನ್’ ಎಂಬುದು ಈ ಚಿತ್ರದ ಟೈಟಲ್. ಈ ಸಿನಿಮಾ ಇನ್ನೂ ಸೆಟ್ಟೇರಿಲ್ಲ. ಆಗಲೇ ಚಿತ್ರಕ್ಕೆ ಸಾಕಷ್ಟು ತೊಂದರೆ ಎದುರಾಗಿದೆ ಎನ್ನಲಾಗಿದೆ. ಸಿಂಬು ಹಾಗೂ ನಿರ್ಮಾಣ ಸಂಸ್ಥೆ ಮಧ್ಯೆ ಕಿರಿಕ್ ಆಗಿದೆಯಂತೆ. ಹೀಗಾಗಿ ಅಂದುಕೊಂಡಂತೆ ಸಿನಿಮಾ ಸೆಟ್ಟೇರುತ್ತಿಲ್ಲ. ಸದ್ಯಕ್ಕೆ ಈ ಸಿನಿಮಾ ನಿಲ್ಲಿಸಲಾಗಿದೆಯಂತೆ. ಈ ಚಿತ್ರದ ಕೆಲಸ ಆರಂಭ ಆಗಲು ನಿರ್ಮಾಪಕರೇ ಮನಸ್ಸು ಮಾಡಬೇಕಿದೆ.
ಇದನ್ನೂ ಓದಿ: ಉತ್ತರ ಚೆನ್ನೈನಿಂದ ಮತ್ತೊಂದು ರಕ್ತ ಸಿಕ್ತ ಕತೆ ಹೊತ್ತು ತಂದ ವೆಟ್ರಿಮಾರನ್
ವೆಟ್ರಿಮಾರನ್ ಅವರು ಪ್ರತಿಭಾನ್ವಿತ ನಿರ್ದೇಶಕ. ಅವರ ಬಳಿ ಸಾಕಷ್ಟು ಟ್ಯಾಲೆಂಟ್ ಇದೆ. ಆದರೆ, ಈ ರೀತಿ ಸಿನಿಮಾ ಅರ್ಧಕ್ಕೆ ನಿಲ್ಲುವುದರಿಂದ ಅವರ ವೃತ್ತಿ ಜೀವನಕ್ಕೆ ಸಾಕಷ್ಟು ಹಿನ್ನಡೆ ಉಂಟಾಗುತ್ತಿದೆ ಎಂದೇ ಹೇಳಬಹುದು. ಅಲ್ಲದೆ, ಸ್ಕ್ರಿಪ್ಟ್ಗಳಿಗೆ ಅವರು ಹಾಕಿದ ಶ್ರಮ ಕೂಡ ಸಾಕಷ್ಟು ವ್ಯರ್ಥವಾಗುತ್ತಿದೆ. ಈ ಬಗ್ಗೆ ಅವರು ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:08 am, Tue, 25 November 25