‘ರಾಮಾಯಣ’ ಟ್ರೈಲರ್ ಬೆಳಿಗ್ಗೆ 4:15ಕ್ಕೆ ಬಿಡುಗಡೆ ಮಾಡಿದ್ದೇಕೆ? ಆ ಸಮಯದ ವಿಶೇಷತೆ ಏನು?

Ramayana movie: ಪ್ರೈಮ್‌ಟೈಮ್‌ನಲ್ಲಿ ಸಿನಿಮಾ ಟ್ರೈಲರ್ ಅನ್ನು ಬಿಡುಗಡೆ ಮಾಡುವುದು ಸಾಮಾನ್ಯ. ಆದರೆ ರಣಬೀರ್ ಕಪೂರ್ ಮತ್ತು ಯಶ್ ಅವರ ‘ರಾಮಾಯಣ’ ಚಿತ್ರದ ಟ್ರೈಲರ್ ಅನ್ನು ಬೆಳಿಗಿನ ಜಾವ 4:15 ಕ್ಕೆ ಬಿಡುಗಡೆ ಮಾಡಲಾಗಿದೆ. ಚಿತ್ರತಂಡವು ಈ ಸಮಯವನ್ನೇ ಟ್ರೈಲರ್ ಬಿಡುಗಡೆಗೆ ನಿಗದಿ ಮಾಡಿದ್ದು ಏಕೆ? ಆ ಸಮಯದಲ್ಲಿ ಏನಾದರೂ ವಿಶೇಷತೆ ಇದೆಯೇ?

‘ರಾಮಾಯಣ’ ಟ್ರೈಲರ್ ಬೆಳಿಗ್ಗೆ 4:15ಕ್ಕೆ ಬಿಡುಗಡೆ ಮಾಡಿದ್ದೇಕೆ? ಆ ಸಮಯದ ವಿಶೇಷತೆ ಏನು?
Ramayana

Updated on: Jul 30, 2026 | 11:10 AM

ಸಿನಿಮಾ (Cinema) ಟ್ರೈಲರ್​​ ಗಳನ್ನು ಬಿಡುಗಡೆ ಮಾಡುವಾಗ ಹೆಚ್ಚು ಎಂಗೇಜಿಂಗ್ ಸಮಯವನ್ನು ಆಯ್ಕೆ ಮಾಡಲಾಗುತ್ತದೆ. ಬೆಳಿಗ್ಗೆ ಅಥವಾ ಸಂಜೆ ಹೀಗೆ ಜನ ತುಸು ಫ್ರೀ ಆಗಿ ಇರುವ ಸಮಯ ನೋಡಿ ಟ್ರೈಲರ್ ಅಥವಾ ಹಾಡುಗಳನ್ನು ಬಿಡುಗಡೆ ಮಾಡಲಾಗುತ್ತದೆ. ಆದರೆ ರಣಬೀರ್ ಕಪೂರ್ ಮತ್ತು ಯಶ್ ಅವರ ‘ರಾಮಾಯಣ’ ಚಿತ್ರದ ಟ್ರೈಲರ್ ಅನ್ನು ಬೆಳಿಗಿನ ಜಾವ 4:15 ಕ್ಕೆ ಬಿಡುಗಡೆ ಮಾಡಲಾಗಿದೆ. ಚಿತ್ರತಂಡವು ಈ ಸಮಯವನ್ನೇ ಟ್ರೈಲರ್ ಬಿಡುಗಡೆಗೆ ನಿಗದಿ ಮಾಡಿದ್ದು ಏಕೆ? ಆ ಸಮಯದಲ್ಲಿ ಏನಾದರೂ ವಿಶೇಷತೆ ಇದೆಯೇ?

ಪ್ರೈಮ್‌ಟೈಮ್‌ನಲ್ಲಿ ಟ್ರೈಲರ್ ಅನ್ನು ಬಿಡುಗಡೆ ಮಾಡುವ ಬದಲು, ಭಾರತದಲ್ಲಿ ಬಹುತೇಕರು ಸಿಹಿ ನಿದ್ದೆಯಲ್ಲಿರುವ ಸಮಯದಲ್ಲಿ ಟ್ರೈಲರ್ ಬಿಡುಗಡೆ ಮಾಡಲಾಯ್ತು. ಆದರೆ ಚಿತ್ರತಂಡ ಆ ಸಮಯದಲ್ಲಿಯೇ ಟ್ರೈಲರ್ ರಿಲೀಸ್ ಮಾಡಲು ಪ್ರಮುಖವಾದ ಕಾರಣ ಇದೆ. ‘ರಾಮಾಯಣ’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು ಬ್ರಾಹ್ಮಿ ಮುಹೂರ್ತದಲ್ಲಿ. ಹಿಂದೂ ಸಂಪ್ರದಾಯದಲ್ಲಿ ದಿನದ ಅತ್ಯಂತ ಮಂಗಳಕರ ಸಮಯಗಳಲ್ಲಿ ಒಂದೆಂದು ಬ್ರಹ್ಮ ಮುಹೂರ್ತನ್ನು ಪರಿಗಣಿಸಲಾಗುತ್ತದೆ. ಹಾಗಾಗಿ ಅದೇ ಸಮಯದಲ್ಲಿ ಟ್ರೈಲರ್ ಬಿಡುಗಡೆ ಮಾಡಲಾಗಿದೆ.

ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ಬ್ರಹ್ಮ ಮುಹೂರ್ತದಲ್ಲಿ ವಿಶ್ವಾದ್ಯಂತ ಟ್ರೈಲರ್ ಬಿಡುಗಡೆಯಾಗಲಿದೆ ಎಂದು ಘೋಷಿಸಿದರು. ಇದು ಅಸಾಂಪ್ರದಾಯಿಕ ಮಾರ್ಕೆಟಿಂಗ್ ತಂತ್ರದಂತೆ ತೋರಬಹುದಾದರೂ, ಈ ಸಮಯವು ಆಳವಾದ ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ರಾಮಾಯಣವು ಹಿಂದೂ ಧರ್ಮದ ಅತ್ಯಂತ ಪವಿತ್ರ ಮಹಾಕಾವ್ಯ ಆಗಿದ್ದು, ಅಂಥಹಾ ಮಾಹಾ ಕಾವ್ಯ ಆಧಿರಿಸಿದ ಸಿನಿಮಾದ ಟ್ರೈಲರ್ ಅನ್ನು ಹಿಂದೂ ಧರ್ಮದ ಪ್ರಕಾರ ಒಳ್ಳೆಯ ಸಮಯದಲ್ಲಿಯೇ ಬಿಡುಗಡೆ ಮಾಡಬೇಕು ಎಂಬುದು ನಿರ್ಮಾಪಕರ ಆಸೆ ಆಗಿತ್ತು.

ಇದನ್ನೂ ಓದಿ:‘ಬುಲ್ಲಿ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪುನೀತ್ ನೆನಪು ಮಾಡಿಕೊಂಡ ಊರ್ವಶಿ

ಬ್ರಹ್ಮ ಮುಹೂರ್ತವು ಹಿಂದೂ ತತ್ವಶಾಸ್ತ್ರದಲ್ಲಿ ಒಂದು ಪ್ರಮುಖ ಪರಿಕಲ್ಪನೆಯಾಗಿದೆ, ಇದು ಸೂರ್ಯೋದಯಕ್ಕೆ ಸುಮಾರು ಒಂದು ಗಂಟೆ 36 ನಿಮಿಷಗಳ ಮೊದಲು ಸಂಭವಿಸುತ್ತದೆ. ನಿರ್ದಿಷ್ಟ ಸ್ಥಳದಲ್ಲಿ ಸೂರ್ಯೋದಯವನ್ನು ಅವಲಂಬಿಸಿ ನಿಖರವಾದ ಸಮಯವು ಬದಲಾಗುತ್ತದೆಯಾದರೂ, ಬ್ರಹ್ಮ ಮುಹೂರ್ತದ ಅವಧಿಯು ಸರಿಸುಮಾರು 48 ನಿಮಿಷಗಳಾಗಿರುತ್ತದೆ. ‘ಬ್ರಹ್ಮ’ ಎಂಬುದು ಪರಮ ಚೈತನ್ಯ ಅಥವಾ ಸೃಷ್ಟಿಕರ್ತನನ್ನು ಸೂಚಿಸಲು ಬಳಸುವ ಪದವಾಗಿದೆ, ಆದರೆ “ಮುಹೂರ್ತ” ಎಂದರೆ ಸಮಯದ ಒಂದು ಘಟಕ. ಆದ್ದರಿಂದ, ಬ್ರಹ್ಮ ಮುಹೂರ್ತವನ್ನು ಆಧ್ಯಾತ್ಮಿಕ ಸಾಧನೆಗಳಿಗೆ ಅತ್ಯಂತ ಸೂಕ್ತವಾದ ಸಮಯವೆಂದು ಪರಿಗಣಿಸಲಾಗುತ್ತದೆ. ಹಿಂದೂ ಧಾರ್ಮದಲ್ಲಿ ಈ ಸಮಯದಲ್ಲಿ ಬಹಳ ಉನ್ನತವಾದ ಸ್ಥಾನ ಮತ್ತು ಮಹತ್ವವಿದೆ.

ಹಿಂದೂ ಧರ್ಮದ ಬೋಧನೆಗಳ ಪ್ರಕಾರ, ಬ್ರಹ್ಮ ಮುಹೂರ್ತವು ಸಾತ್ವಿಕ ಗುಣದಿಂದ, ಅಂದರೆ ಶುದ್ಧತೆ ಮತ್ತು ಮಾನಸಿಕ ಸಮತೋಲನದ ಸ್ಥಿತಿಯಿಂದ ಕೂಡಿದೆ ಎಂದು ನಂಬಲಾಗಿದೆ. ಈ ಸಮಯದಲ್ಲಿ ವಾತಾವರಣವು ತುಸು ಶಾಂತವಾಗಿರುತ್ತದೆ ಮತ್ತು ಗಮನವನ್ನು ಬೇರೆಡೆ ಸೆಳೆಯುವ ಅಡಚಣೆಗಳು ಕಡಿಮೆ ಇರುತ್ತವೆ. ಇದು ಮನಸ್ಸು ಮತ್ತು ಆತ್ಮ ಎರಡಕ್ಕೂ ಪ್ರಯೋಜನಕಾರಿಯಾದ ಚಟುವಟಿಕೆಗಳಿಗೆ ಅತ್ಯುತ್ತಮ ಸಮಯವೆಂದು ನಂಬಲಾಗಿದೆ. ಹಾಗಾಗಿ ಈ ಸಮಯದಲ್ಲಿಯೇ ಸಿನಿಮಾದ ಟ್ರೈಲರ್ ರಿಲೀಸ್ ಮಾಡಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us