AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Brain Tumor: ಬ್ರೈನ್ ಟ್ಯೂಮರ್ ಕಾಯಿಲೆಯ ಬಗ್ಗೆ ಸುಳ್ಳು ವರದಿಗಳನ್ನು ನಂಬುವ ಮುನ್ನ ಸತ್ಯಾಸತ್ಯತೆ ಬಗ್ಗೆ ಅರಿಯುವುದು ಸೂಕ್ತ

Health Tips: ಬ್ರೈನ್ ಟ್ಯೂಮರ್​ನ ರೋಗಲಕ್ಷಣಗಳನ್ನು ಮೊದಲೇ ತಿಳಿಯುವುದರಿಂದ ಅಪಾಯವನ್ನು ಬಹಳ ಬೇಗ ಕಡಿಮೆ ಮಾಡಬಹುದು. ಅದರಲ್ಲೂ ಮುಖ್ಯವಾಗಿ ಈ ಕಾಯಿಲೆಯ ಬಗ್ಗೆ ಜನರ ಕಲ್ಪನೆ ಮತ್ತು ತಜ್ಞರು ಏನು ಹೇಳುತ್ತಾರೆಂದು ತಿಳಿದುಕೊಳ್ಳುವುದು ಸೂಕ್ತ.

Brain Tumor: ಬ್ರೈನ್ ಟ್ಯೂಮರ್ ಕಾಯಿಲೆಯ ಬಗ್ಗೆ ಸುಳ್ಳು ವರದಿಗಳನ್ನು ನಂಬುವ ಮುನ್ನ ಸತ್ಯಾಸತ್ಯತೆ ಬಗ್ಗೆ ಅರಿಯುವುದು ಸೂಕ್ತ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Aug 24, 2021 | 8:24 AM

Share

ಬ್ರೈನ್ ಟ್ಯೂಮರ್ ಮನುಷ್ಯನನ್ನು ತುಂಬಾ ಬಾಧಿಸುವ ಆರೋಗ್ಯ ಸಮಸ್ಯೆ. ಅದಾಗಿಯೂ ಕೆಲವರು ಮೆದುಳಿನ ಗಡ್ಡೆಗಳು ಮೆದುಳಿಗೆ ಮಾತ್ರ ಸೀಮಿತವಾಗಿವೆ ಎಂದು ನಂಬುತ್ತಾರೆ. ಆದರೆ ಇದು ಸಂಪೂರ್ಣವಾಗಿ ಸತ್ಯವಲ್ಲ. ಈ ಗೆಡ್ಡೆ ಕ್ಯಾನ್ಸರ್ ಆಗಿದ್ದರೆ, ಅದು ಮೂತ್ರಪಿಂಡ, ಕರುಳು ಮತ್ತು ಶ್ವಾಸಕೋಶಗಳನ್ನು ಕೂಡ ತಲುಪಬಹುದು. ಹಾಗಾಗಿ ಜಾಗರೂಕರಾಗಿರುವುದು ಅಗತ್ಯವಾಗಿದೆ. ಒಂದೊಂದು ರೋಗಿಯ ರೋಗಲಕ್ಷಣಗಳು ವಿಭಿನ್ನವಾಗಿ ಕಾಣುತ್ತವೆ. ಇವುಗಳನ್ನು ತಡೆಗಟ್ಟಲು ಅತ್ಯಂತ ಮುಖ್ಯವಾದ ವಿಷಯವೆಂದರೆ ಅದರ ಆರಂಭಿಕ ರೋಗಲಕ್ಷಣಗಳನ್ನು ಸಕಾಲಿಕವಾಗಿ ಗುರುತಿಸುವುದು. ಬ್ರೈನ್ ಟ್ಯೂಮರ್​ನ ರೋಗಲಕ್ಷಣಗಳನ್ನು ಮೊದಲೇ ತಿಳಿಯುವುದರಿಂದ ಅಪಾಯವನ್ನು ಬಹಳ ಬೇಗ ಕಡಿಮೆ ಮಾಡಬಹುದು. ಅದರಲ್ಲೂ ಮುಖ್ಯವಾಗಿ ಈ ಕಾಯಿಲೆಯ ಬಗ್ಗೆ ಜನರ ಕಲ್ಪನೆ ಮತ್ತು ತಜ್ಞರು ಏನು ಹೇಳುತ್ತಾರೆಂದು ತಿಳಿದುಕೊಳ್ಳುವುದು ಸೂಕ್ತ.

ಜನರ ಕಲ್ಪನೆ: ಎಲ್ಲಾ ರೀತಿಯ ಮೆದುಳಿನ ಗಡ್ಡೆಗಳು ಕ್ಯಾನ್ಸರ್​ಗೆ ಕಾರಣವಾಗಬಹುದು.

ತಜ್ಞರ ಸಲಹೆ: ಮೆದುಳಿನ ಗಡ್ಡೆಗಳಲ್ಲಿ ಕೇವಲ ಮೂರನೇ ಒಂದು ಭಾಗ ಮಾತ್ರ ಕ್ಯಾನ್ಸರ್ ಆಗಿ ಬದಲಾಗುತ್ತದೆ ಎಂದು ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯ ಮುಖ್ಯ ನರ ಶಸ್ತ್ರಚಿಕಿತ್ಸಕ ಡಾ.ಅಭಯ್ ಕುಮಾರ್ ಹೇಳಿದ್ದಾರೆ. ಹೆಚ್ಚಿನ ಮೆದುಳಿನ ಗಡ್ಡೆಗಳು ಕ್ಯಾನ್ಸರ್ ಆಗಿ ಬದಲಾಗುವುದಿಲ್ಲ. ಅಂದರೆ ಅವು ಕ್ಯಾನ್ಸರ್​ಗೆ ಕಾರಣವಾಗುವುದಿಲ್ಲ. ಅವುಗಳನ್ನು ಚಿಕಿತ್ಸೆಯಿಂದ ಸಂಪೂರ್ಣವಾಗಿ ನಿರ್ಮೂಲನೆ ಮಾಡಬಹುದು.

ಜನರ ಕಲ್ಪನೆ: ಮೆದುಳಿನ ಗಡ್ಡೆಗಳು ಮೆದುಳಿಗೆ ಸೀಮಿತವಾಗಿವೆ.

ತಜ್ಞರ ಸಲಹೆ: ಇದು ಮೆದುಳಿನಲ್ಲಿ ಆರಂಭವಾಗುತ್ತದೆ ಆದರೆ ಅದು ಕ್ಯಾನ್ಸರ್ ಆಗಿ ಬದಲಾದಾಗ, ದೇಹದ ಹಲವು ಭಾಗಗಳನ್ನು ತಲುಪುತ್ತದೆ. ಉದಾಹರಣೆಗೆ: ಮೂತ್ರಪಿಂಡಗಳು, ಸ್ತನ, ಶ್ವಾಸಕೋಶ ಮತ್ತು ಕರುಳನ್ನು ತಲುಪಬಹುದು. ಆದ್ದರಿಂದ ಮೆದುಳಿನ ಗಡ್ಡೆ ಬಗ್ಗೆ ತಿಳಿದ ತಕ್ಷಣ ಚಿಕಿತ್ಸೆಯನ್ನು ಪ್ರಾರಂಭಿಸಬೇಕು.

ಜನರ ಕಲ್ಪನೆ: ಮೆದುಳಿನ ಗಡ್ಡೆಗಳು ಕುಟುಂಬದ ಸದಸ್ಯರಲ್ಲಿ ಅನುವಂಶಿಕವಾಗಿರುತ್ತವೆ.

ತಜ್ಞರ ಸಲಹೆ: ಡಾ. ಅಭಯ್ ಅವರ ಪ್ರಕಾರ, ಇದು ಕುಟುಂಬದ ಸದಸ್ಯರಲ್ಲಿ ಅನುವಂಶಿಕವಾಗಿದೆ ಎಂಬುವುದಕ್ಕೆ ಇದುವರೆಗೆ ಯಾವುದೇ ಪುರಾವೆಗಳಿಲ್ಲ. ಇದು ಯಾವುದೇ ವಯಸ್ಸಿನಲ್ಲಿ ಯಾರಿಗಾದರೂ ಬರಬಹುದು. ನವಜಾತ ಶಿಶುಗಳಲ್ಲಿ ಮೆದುಳಿನ ಗಡ್ಡೆಗಳ ಪ್ರಕರಣಗಳು ಕೂಡ ಕಂಡುಬಂದಿವೆ.

ಜನರ ಕಲ್ಪನೆ: ಮೊಬೈಲ್ ಫೋನ್​ಗಳು ಮೆದುಳಿನ ಗಡ್ಡೆಗಳನ್ನು ಉಂಟುಮಾಡಬಹುದು.

ತಜ್ಞರ ಸಲಹೆ: ಮೊಬೈಲ್ ಫೋನ್ ಅಥವಾ ವಿಕಿರಣವು ಮೆದುಳಿನ ಗಡ್ಡೆಗಳನ್ನು ಉಂಟುಮಾಡಬಹುದು ಎಂದು ಸಾಬೀತುಪಡಿಸುವ ಯಾವುದೇ ಸಂಶೋಧನೆ ಇದುವರೆಗೆ ಹೊರಬಂದಿಲ್ಲ. ಇಲ್ಲದಿದ್ದರೆ, ವಿಕಿರಣಕ್ಕೆ ದೀರ್ಘಕಾಲ ಒಡ್ಡಿಕೊಳ್ಳುವುದು ಆರೋಗ್ಯಕ್ಕೆ ಹಾನಿಕಾರಕ. ಹಾಗಾಗಿ ಜಾಗರೂಕರಾಗಿರುವುದು ಅಗತ್ಯವಾಗಿದೆ.

ಜನರ ಕಲ್ಪನೆ: ಬ್ರೈನ್ ಟ್ಯೂಮರ್ ಹೊಂದಿರುವ ಪ್ರತಿಯೊಬ್ಬ ರೋಗಿಯೂ ಒಂದೇ ರೀತಿಯ ಲಕ್ಷಣಗಳನ್ನು ಹೊಂದಿರುತ್ತಾನೆ.

ತಜ್ಞರ ಸಲಹೆ: ಇದು ಸಂಪೂರ್ಣವಾಗಿ ಸತ್ಯವಲ್ಲ. ಮೆದುಳಿನ ಗಡ್ಡೆಯ ಗಾತ್ರ, ಸ್ಥಳವನ್ನು ಅವಲಂಬಿಸಿ, ವಿವಿಧ ರೋಗಿಗಳಲ್ಲಿ ರೋಗಲಕ್ಷಣಗಳು ಸಹ ವಿಭಿನ್ನವಾಗಿ ಕಾಣಿಸಬಹುದು. ಕೆಲವು ರೋಗಿಗಳಿಗೆ ಕಾಯಿಲೆಯ ಗುಣಲಕ್ಷಣಗಳು ಕೂಡ ತಿಳಿಯುವುದಿಲ್ಲ. ಹೀಗಾಗಿ ಹೆಚ್ಚು ಜಾಗರುಕರಾಗಿರುವುದು ಸೂಕ್ತ.

ಜನರ ಕಲ್ಪನೆ: ಬ್ರೈನ್ ಟ್ಯೂಮರ್ ನಿರಂತರ ತಲೆನೋವಿಗೆ ಕಾರಣವಾಗಬಹುದು

ತಜ್ಞರ ಸಲಹೆ: ಇದು ಪ್ರತಿ ರೋಗಿಯಲ್ಲಿನ ಮೆದುಳಿನ ಗಡ್ಡೆಯ ಲಕ್ಷಣವಲ್ಲ. ತಲೆನೋವಿಗೆ ಹಲವು ಕಾರಣಗಳಿರಬಹುದು. ಇದನ್ನು ಕೇವಲ ಮೆದುಳಿನ ಗಡ್ಡೆಯ ಲಕ್ಷಣವೆಂದು ಪರಿಗಣಿಸುವುದು ಸರಿಯಲ್ಲ. ಪರೀಕ್ಷೆ ನಡೆಸಿದ ಬಳಿಕವೇ ನಿರ್ಧಾರಕ್ಕೆ ಬರುವುದು ಸೂಕ್ತ.

ಇದನ್ನೂ ಓದಿ: Health Tips: ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ವಿಧಾನಗಳನ್ನು ಅನುಸರಿಸಿ

Custard Apple: ಸೀತಾಫಲ ಹಣ್ಣು ಸೇವಿಸುದರಿಂದ ಅನೇಕ ಆರೋಗ್ಯಕರ ಪ್ರಯೋಜನಗಳಿವೆ

Follow Us
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ