ರಾಜ್ಯದಲ್ಲಿ ಹೆಚ್ಚುತ್ತಿರುವ ಮಕ್ಕಳ ಕ್ಯಾನ್ಸರ್​ ಪ್ರಕರಣ: ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ತಜ್ಞರ ಕೊರತೆ

|

Updated on: Nov 12, 2023 | 11:37 AM

ಸೆಪ್ಟೆಂಬರ್ 2023 ರಲ್ಲಿ ಬಿಡುಗಡೆಯಾದ ಕಿದ್ವಾಯಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಆಂಕೊಲಾಜಿಯ (KMIO) ಕ್ಯಾನ್ಸರ್ ಬರ್ಡನ್ ವರದಿ ಪ್ರಕಾರ, ಎಲ್ಲಾ ಕ್ಯಾನ್ಸರ್​​​ ಮಾದರಿಯಲ್ಲಿ ಮಕ್ಕಳು ಕ್ಯಾನ್ಸರ್ 7-9 ಪ್ರತಿಷತದಷ್ಟಿದೆ. ಬೆಂಗಳೂರಿನಲ್ಲಿ, ಶೇಕಡಾ 2 ರಷ್ಟಿದೆ.

ರಾಜ್ಯದಲ್ಲಿ ಹೆಚ್ಚುತ್ತಿರುವ ಮಕ್ಕಳ ಕ್ಯಾನ್ಸರ್​ ಪ್ರಕರಣ: ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ತಜ್ಞರ ಕೊರತೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು ನ.12: ಮಕ್ಕಳ ಕಾನ್ಸರ್​​ (ಪೀಡಿಯಾಟ್ರಿಕ್ ಆಂಕೊಲಾಜಿ) ಪ್ರಕರಣಗಳ ಸಂಖ್ಯೆ ಕರ್ನಾಟಕದಲ್ಲಿ ಕ್ರಮೇಣ ಹೆಚ್ಚಳವಾಗುತ್ತಿದೆ. ಆದರೆ ಆಸ್ಪತ್ರೆಗಳಲ್ಲಿ (Hospital) ಮಕ್ಕಳ ಆಂಕೊಲಾಜಿ ತಜ್ಞರ ಕೊರತೆಯಿದೆ ಎಂಬುವುದು ಖೇದರದ ಸಂಗತಿಯಾಗಿದೆ. ಕಳೆದ ಕೆಲವು ವರ್ಷಗಳಿಂದ ರಾಜ್ಯದ ಹೆಚ್ಚಿನ ಮಕ್ಕಳು ಕ್ಯಾನ್ಸರ್ (Paediatric Oncology) ರೋಗದಿಂದ ಬಳಲುತ್ತಿದ್ದಾರೆ. 2022-23ರಲ್ಲಿ 87,000 ಹೊಸ ಪ್ರಕರಣಗಳು ಪತ್ತೆಯಾಗಿವೆ. ಹೆಚ್ಚಾಗಿ 0-14 ವರ್ಷದೊಳಗಿನ ಮಕ್ಕಳಿಗೆ ಕಾನ್ಸರ್ ಭಾದಿಸುತ್ತಿದೆ.

ಸೆಪ್ಟೆಂಬರ್ 2023 ರಲ್ಲಿ ಬಿಡುಗಡೆಯಾದ ಕಿದ್ವಾಯಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಆಂಕೊಲಾಜಿಯ (KMIO) ಕ್ಯಾನ್ಸರ್ ಬರ್ಡನ್ ವರದಿ ಪ್ರಕಾರ, ಎಲ್ಲಾ ಕ್ಯಾನ್ಸರ್​​​ ಮಾದರಿಯಲ್ಲಿ ಮಕ್ಕಳು ಕ್ಯಾನ್ಸರ್ 7-9 ಪ್ರತಿಷತದಷ್ಟಿದೆ. ಬೆಂಗಳೂರಿನಲ್ಲಿ, ಶೇಕಡಾ 2 ರಷ್ಟಿದೆ.

ಮಕ್ಕಳ ಆಂಕೊಲಾಜಿಸ್ಟ್‌ಗಳ ಕೊರತೆಯಿದೆ. ಈ ಹಿಂದೆ ಮಕ್ಕಳ ಆಂಕೊಲಾಜಿ ಪ್ರಕರಣಗಳನ್ನು ವೈದ್ಯಕೀಯ ಅಥವಾ ಶಸ್ತ್ರಚಿಕಿತ್ಸಾ ಆಂಕೊಲಾಜಿಸ್ಟ್‌ಗಳು ನಿರ್ವಹಿಸುತ್ತಿದ್ದರು. ಏಕೆಂದರೆ ಈ ನಿರ್ದಿಷ್ಟ ರೋಗಕ್ಕೆ ಸೂಪರ್ ಸ್ಪೆಷಾಲಿಟಿ ಹೊಂದಿರುವ ಹೆಚ್ಚಿನ ತರಬೇತಿ ಪಡೆದ ವೈದ್ಯರು ಇರಲಿಲ್ಲ. ಈಗ, ಮಕ್ಕಳ ಆಂಕೊಲಾಜಿಸ್ಟ್‌ಗಳಿಗೆ ತರಬೇತಿ ನೀಡಲು ಕೆಎಮ್​ಐಒನಲ್ಲಿ ಪ್ರತಿ ವರ್ಷ ಮಕ್ಕಳ ಆಂಕೊಲಾಜಿ ಸೂಪರ್ ಸ್ಪೆಷಾಲಿಸ್ಟ್​ ವೈದ್ಯರನನ್ನು ತಯಾರಾಗುತ್ತಿದ್ದಾರೆ ಎಂದು ಕೆಎಂಐಒ ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಅರುಣ್ ಕುಮಾರ್ ಎ.ಆರ್ ಹೇಳಿದರು.

ಇದನ್ನೂ ಓದಿ: ಶೇ.59ರಷ್ಟು ಮಹಿಳೆಯರಿಗೆ ಸ್ತನ ಕ್ಯಾನ್ಸರ್; ಈ 5 ಲಕ್ಷಣಗಳನ್ನು ನಿರ್ಲಕ್ಷ್ಯಿಸಬೇಡಿ

ಕೆಎಮ್​ಐಒ ಪೀಡಿಯಾಟ್ರಿಕ್ ವಾರ್ಡ್​​ನಲ್ಲಿ ಪ್ರತಿದಿನ 4-5 ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಲ್ಯುಕೇಮಿಯಾ, ಲಿಂಫೋಮಾ, ಬ್ರೈನ್ ಟ್ಯೂಮರ್, ಘನ ಗೆಡ್ಡೆ ಮತ್ತು ಮೂಳೆ ಮೃದು ಅಂಗಾಂಶದ ಕ್ಯಾನ್ಸರ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗಿವೆ ಎಂದು ತಿಳಿಸಿದರು.

ಕೆಎಂಐಒ ನಿರ್ದೇಶಕ ಡಾ.ವಿ.ಲೋಕೇಶ್ ಮಾತನಾಡಿ, ಜನರು ತಡೆಗಟ್ಟುವ ಕ್ರಮಗಳನ್ನು ಕೈಗೊಂಡರೆ ಹೆಚ್ಚುತ್ತಿರುವ ಎಲ್ಲಾ ಕ್ಯಾನ್ಸರ್‌ಗಳ ಹೊರೆಯನ್ನು ಶೇ.50 ರಷ್ಟು ಕಡಿಮೆ ಮಾಡಬಹುದು. ದೈನಂದಿನ ವ್ಯಾಯಾಮ, ಆರೋಗ್ಯಕರ ಆಹಾರ ಮತ್ತು ಕಡಿಮೆ ಆಲ್ಕೋಹಾಲ್ ಮತ್ತು ತಂಬಾಕು ಸೇವನೆಯಂತಹ ಸರಳ ಅಭ್ಯಾಸಗಳು ಕ್ಯಾನ್ಸರ್ ಹೊರೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:33 am, Sun, 12 November 23