ಕಿಡ್ನಿಗೆ ಸಂಬಂಧಪಟ್ಟ ಸಮಸ್ಯೆ ಇರುವವರು ಎಳನೀರು ಕುಡಿಯುವುದು ಸುರಕ್ಷಿತವೇ?

ಎಳನೀರು ಸಾಮಾನ್ಯವಾಗಿ ಆರೋಗ್ಯಕರವಾಗಿದ್ದು ದೇಹಕ್ಕೆ ಹೈಡ್ರೇಷನ್ ನೀಡುತ್ತದೆ. ಆದರೆ ಕಿಡ್ನಿ ರೋಗಿಗಳಲ್ಲಿ ಅದರ ಸೇವನೆ ರೋಗದ ಹಂತ, ಪೊಟ್ಯಾಸಿಯಂ ಮಟ್ಟದ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗಿ ಕಿಡ್ನಿಗೆ ಸಂಬಂಧ ಪಟ್ಟ ಸಮಸ್ಯೆ ಇರುವವರು ಸೇವನೆ ಮಾಡುವುದು ಸುರಕ್ಷಿತವೇ ಅಥವಾ ಅಲ್ಲವೇ ಎಂಬ ಅನುಮಾನವಿರುತ್ತದೆ. ಅಂತಹ ಗೊಂದಲಗಳಿಗೆ ಆರೋಗ್ಯ ತಜ್ಞರು ನೀಡಿರುವ ಸ್ಪಷ್ಟ ಮಾಹಿತಿ ಇಲ್ಲಿದೆ.

ಕಿಡ್ನಿಗೆ ಸಂಬಂಧಪಟ್ಟ ಸಮಸ್ಯೆ ಇರುವವರು ಎಳನೀರು ಕುಡಿಯುವುದು ಸುರಕ್ಷಿತವೇ?
Coconut Water And Kidney Disease
Image Credit source: Getty Images

Updated on: Apr 28, 2026 | 10:16 PM

ಎಳನೀರು (Coconut Water) ಆರೋಗ್ಯಕ್ಕೆ ಅಮೃತವಿದ್ದಂತೆ. ಇದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದ ವಿಚಾರ. ಅದರಲ್ಲಿಯೂ ಬೇಸಿಗೆಯಲ್ಲಿ ಇದಕ್ಕಿರುವ ಬೇಡಿಕೆ ಬೇರೆಯಾವುದಕ್ಕೂ ಇರುವುದಿಲ್ಲ. ಇದು ದೇಹದ ನೀರಿನ ಕೊರತೆಯನ್ನು ನೀಗಿಸುವುದಲ್ಲದೆ, ಸೋಡಿಯಂ ಮತ್ತು ಪೊಟ್ಯಾಸಿಯಂ ಸೇರಿದಂತೆ ಪ್ರಮುಖ ಖನಿಜಗಳನ್ನು ಒದಗಿಸುತ್ತದೆ. ಆದರೆ ಕೆಲವರಿಗೆ ಕಿಡ್ನಿಗೆ ಸಂಬಂಧ ಪಟ್ಟ ಸಮಸ್ಯೆ ಇರುವವರು ಸೇವನೆ ಮಾಡುವುದು ಸುರಕ್ಷಿತವೇ ಅಥವಾ ಅಲ್ಲವೇ ಎಂಬ ಅನುಮಾನವಿರುತ್ತದೆ. ಅಂತಹ ಗೊಂದಲಗಳಿಗೆ ಆರೋಗ್ಯ ತಜ್ಞರು ನೀಡಿರುವ ಸ್ಪಷ್ಟನೆ ಇಲ್ಲಿದೆ.

ತಜ್ಞರ ಪ್ರಕಾರ, ಎಳನೀರು ಸಾಮಾನ್ಯವಾಗಿ ಆರೋಗ್ಯಕರವಾಗಿದ್ದರೂ, ಕಿಡ್ನಿಗೆ ಸಂಬಂಧ ಪಟ್ಟ ಸಮಸ್ಯೆ ಇರುವ ಎಲ್ಲರಿಗೂ ಇದು ಸೂಕ್ತವಲ್ಲ. ರೋಗಿಯ ಕಿಡ್ನಿ ಸಮಸ್ಯೆಯ ಹಂತ, ಕ್ರಿಯಾಟಿನಿನ್ ಮತ್ತು ಪೊಟ್ಯಾಸಿಯಂ ಮಟ್ಟದ ಮೇಲೆ ಇದರ ಬಳಕೆ ನಿರ್ಧರಿಸಬೇಕು. ರಕ್ತದಲ್ಲಿ ಪೊಟ್ಯಾಸಿಯಂ ಪ್ರಮಾಣ ಹೆಚ್ಚಿರುವ ಕಿಡ್ನಿ ರೋಗಿಗಳು ಎಳನೀರು ಕುಡಿಯುವುದನ್ನು ತಪ್ಪಿಸಬೇಕು. ಇದರಿಂದ ಪೊಟ್ಯಾಸಿಯಂ ಇನ್ನಷ್ಟು ಹೆಚ್ಚಾಗಿ, ದೇಹದಲ್ಲಿ ಅಪಾಯಕಾರಿ ಸ್ಥಿತಿ ಉಂಟಾಗಬಹುದು. ಡಯಾಲಿಸಿಸ್‌ ಮಾಡಿಸಿಕೊಳ್ಳುತ್ತಿರುವವರು ಕೂಡ ಇದನ್ನು ಸೇವಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಅಗತ್ಯ.

ಯಾವಾಗ ಸುರಕ್ಷಿತ?

ಕಿಡ್ನಿ ಸಮಸ್ಯೆ ಗಂಭೀರವಾಗಿರದವರು ಮತ್ತು ಅವರ ಪೊಟ್ಯಾಸಿಯಂ ಹಾಗೂ ಕ್ರಿಯಾಟಿನಿನ್ ಮಟ್ಟಗಳು ಸಾಮಾನ್ಯವಾಗಿದ್ದರೆ, ಎಳನೀರು ಕುಡಿಯುವುದು ಪ್ರಯೋಜನಕಾರಿ. ಇದು ದೇಹವನ್ನು ಹೈಡ್ರೇಟ್ ಮಾಡುತ್ತದೆ ಮತ್ತು ಅಗತ್ಯ ಖನಿಜಗಳನ್ನು ಪೂರೈಸುತ್ತದೆ.

ಇದನ್ನೂ ಓದಿ: ಯಾವ ಕಾರಣಕ್ಕೂ ಈ ಆರೋಗ್ಯ ಸಮಸ್ಯೆ ಇರುವವರು ಎಳನೀರು ಕುಡಿಯಬಾರದು, ಅಧ್ಯಯನದಿಂದ ಆಘಾತಕಾರಿ ವರದಿ

ಕಿಡ್ನಿ ಆರೋಗ್ಯಕ್ಕೆ ಸಲಹೆಗಳು:

  • ದಿನಕ್ಕೆ 7– 8 ಗ್ಲಾಸ್ ನೀರು ಕುಡಿಯಿರಿ
  • ಉಪ್ಪಿನ ಸೇವನೆಯನ್ನು ನಿಯಂತ್ರಿಸಿ
  • ಫಾಸ್ಟ್ ಫುಡ್ ಸೇವನೆ ಮಾಡುವುದನ್ನು ತಪ್ಪಿಸಿ
  • ನಿಯಮಿತವಾಗಿ ವ್ಯಾಯಾಮ ಮಾಡಿ

ಒಟ್ಟಿನಲ್ಲಿ, ಕಿಡ್ನಿ ರೋಗಿಗಳು ತಮ್ಮ ಸ್ಥಿತಿಗೆ ಅನುಗುಣವಾಗಿ ವೈದ್ಯರ ಸಲಹೆಯೊಂದಿಗೆ ಮಾತ್ರ ಎಳನೀರನ್ನು ಕುಡಿಯುವುದು ಸುರಕ್ಷಿತ.

Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
Follow Us