AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Diabetes: ಪುರುಷರ ಕಾಲು, ಪಾದಗಳಲ್ಲಿ ಕಾಣಿಸಿಕೊಳ್ಳುವ ಡಯಾಬಿಟಿಸ್​ನ ಲಕ್ಷಣಗಳಿವು

ಮಧುಮೇಹವು ಎಲ್ಲಾ ವಯಸ್ಸಿನ ಜನರ ಮೇಲೆ ಪರಿಣಾಮ ಬೀರುವ ಸಾಮಾನ್ಯ ಸಮಸ್ಯೆಯಾಗಿದೆ. ಮಧುಮೇಹದಲ್ಲಿ ಹಲವಾರು ರೂಪಗಳಿವೆ. ಟೈಪ್ 2 ಮಧುಮೇಹ ಅತ್ಯಂತ ಸಾಮಾನ್ಯವಾಗಿದೆ. ಮಧುಮೇಹವು ನಿಮ್ಮ ರಕ್ತದಲ್ಲಿನ ಸಕ್ಕರೆ (ಗ್ಲೂಕೋಸ್) ಮಟ್ಟ ತುಂಬಾ ಹೆಚ್ಚಾದಾಗ ಸಂಭವಿಸುವ ಸಮಸ್ಯೆಯಾಗಿದೆ. ನಿಮ್ಮ ಮೇದೋಜ್ಜೀರಕ ಗ್ರಂಥಿಯು ಸಾಕಷ್ಟು ಇನ್ಸುಲಿನ್ ಅನ್ನು ಉತ್ಪಾದಿಸದಿದ್ದಾಗ ಅಥವಾ ಇನ್ಸುಲಿನ್‌ನ ಪರಿಣಾಮಗಳಿಗೆ ನಿಮ್ಮ ದೇಹವು ಸರಿಯಾಗಿ ಪ್ರತಿಕ್ರಿಯಿಸದಿದ್ದಾಗ ಮಧುಮೇಹ ಉಂಟಾಗುತ್ತದೆ.

Diabetes: ಪುರುಷರ ಕಾಲು, ಪಾದಗಳಲ್ಲಿ ಕಾಣಿಸಿಕೊಳ್ಳುವ ಡಯಾಬಿಟಿಸ್​ನ ಲಕ್ಷಣಗಳಿವು
ಮಧುಮೇಹ
ಸುಷ್ಮಾ ಚಕ್ರೆ
|

Updated on: Mar 28, 2024 | 1:26 PM

Share

ಮಧುಮೇಹವು (Diabetes) ಎಲ್ಲಾ ವಯಸ್ಸಿನ ಜನರ ಮೇಲೆ ಪರಿಣಾಮ ಬೀರುತ್ತದೆ. ಗ್ಲೂಕೋಸ್ (ಸಕ್ಕರೆ) ಅಂಶ ಮುಖ್ಯವಾಗಿ ನಿಮ್ಮ ಆಹಾರ ಮತ್ತು ಪಾನೀಯಗಳಲ್ಲಿನ ಕಾರ್ಬೋಹೈಡ್ರೇಟ್‌ಗಳಿಂದ ಬರುತ್ತದೆ. ಇದು ನಿಮ್ಮ ದೇಹದ ಶಕ್ತಿಯ ಮೂಲವಾಗಿದೆ. ಮಧುಮೇಹವು ದೀರ್ಘಕಾಲದ ಸ್ಥಿತಿಯಾಗಿದ್ದು, ಅದು ರಕ್ತದಲ್ಲಿನ ಗ್ಲೂಕೋಸ್ ಅಥವಾ ರಕ್ತದಲ್ಲಿನ ಸಕ್ಕರೆಯನ್ನು ಸಂಸ್ಕರಿಸುವ ದೇಹದ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ.

ಮಧುಮೇಹವು ರಕ್ತದಲ್ಲಿ ಗ್ಲೂಕೋಸ್ ಸಂಗ್ರಹಕ್ಕೆ ಕಾರಣವಾಗಬಹುದು. ಇದು ಪಾರ್ಶ್ವವಾಯು ಮತ್ತು ಹೃದ್ರೋಗ ಸೇರಿದಂತೆ ಅಪಾಯಕಾರಿ ತೊಡಕುಗಳ ಅಪಾಯವನ್ನು ಹೆಚ್ಚಿಸುತ್ತದೆ. ಮಧುಮೇಹವು ಪ್ರಚಲಿತದಲ್ಲಿರುವ ಚಯಾಪಚಯ ಸಮಸ್ಯೆಯಾಗಿದ್ದು, ಇದು ಅಧಿಕ ರಕ್ತದ ಸಕ್ಕರೆಯ ಮಟ್ಟಗಳಿಂದ ಉಂಟಾಗುತ್ತದೆ. ಆಗಾಗ ಹೆಚ್ಚಿದ ಬಾಯಾರಿಕೆ, ಆಗಾಗ ಮೂತ್ರ ವಿಸರ್ಜನೆ ಮತ್ತು ಹಠಾತ್ ತೂಕ ಇಳಿಕೆಯಂತಹ ರೋಗಲಕ್ಷಣಗಳು ಉಂಟಾಗುತ್ತದೆ.

ಇದನ್ನೂ ಓದಿ: ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹ; ಈ ಲಕ್ಷಣಗಳನ್ನೆಂದೂ ನಿರ್ಲಕ್ಷ್ಯಿಸಬೇಡಿ

ಮಧುಮೇಹದ ಪರಿಣಾಮಗಳು ವಿಶೇಷವಾಗಿ ಪುರುಷರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಅಧಿಕ ರಕ್ತದ ಸಕ್ಕರೆಯ ಮಟ್ಟವು ವಿಶಿಷ್ಟವಾಗಿ ಪ್ರಕಟಗೊಳ್ಳುವ ಒಂದು ಪ್ರದೇಶವೆಂದರೆ ಕಾಲುಗಳು ಮತ್ತು ಪಾದಗಳು. ಪುರುಷರಲ್ಲಿ ಮಧುಮೇಹದ ಆರಂಭಿಕ ಪತ್ತೆ ಮತ್ತು ನಿರ್ವಹಣೆಗೆ ರೋಗಲಕ್ಷಣಗಳನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ. ಪುರುಷರ ಕಾಲುಗಳು ಮತ್ತು ಪಾದಗಳನ್ನು ಬಾಧಿಸುವ ಮಧುಮೇಹದ 5 ಲಕ್ಷಣಗಳು ಇಲ್ಲಿವೆ…

ನಿರಂತರ ಜುಮ್ಮೆನಿಸುವಿಕೆ ಅಥವಾ ಮರಗಟ್ಟುವಿಕೆ:

ಮಧುಮೇಹದಿಂದ ನರಗಳ ಹಾನಿಯ ಆರಂಭಿಕ ಸೂಚಕಗಳಲ್ಲಿ ಒಂದು ನಿರಂತರವಾದ ಜುಮ್ಮೆನಿಸುವಿಕೆ ಸಂವೇದನೆ ಅಥವಾ ಕಾಲುಗಳು ಮತ್ತು ಪಾದಗಳಲ್ಲಿ ಮರಗಟ್ಟುವಿಕೆ. ಪಿನ್‌ಗಳು ಮತ್ತು ಸೂಜಿಗಳಿಂದ ಚುಚ್ಚಿದ ಅನುಭವವಾಗುತ್ತದೆ. ಇದು ದೀರ್ಘಕಾಲದ ಅಧಿಕ ರಕ್ತದ ಸಕ್ಕರೆಯಿಂದ ಉಂಟಾಗುವ ಸಂಭಾವ್ಯ ನರ ಹಾನಿಯನ್ನು ಸಂಕೇತಿಸುತ್ತದೆ.

ಸುಡುವ ಸಂವೇದನೆ:

ಪುರುಷರಲ್ಲಿ ಸುಡುವ ಸಂವೇದನೆ ಅದರಲ್ಲೂ ವಿಶೇಷವಾಗಿ ತಮ್ಮ ಪಾದಗಳ ಅಡಿಭಾಗದಲ್ಲಿ ಉಂಟಾದರೆ ಮಧುಮೇಹದ ಲಕ್ಷಣವಿರಬಹುದು. ಈ ಸಮಸ್ಯೆ ರಾತ್ರಿಯಲ್ಲಿ ಹೆಚ್ಚಾಗಬಹುದು ಮತ್ತು ನಿದ್ರೆಗೆ ಅಡ್ಡಿಯಾಗಬಹುದು. ಅದಕ್ಕೆ ಗಮನಹರಿಸದೆ ಬಿಟ್ಟರೆ ಒಟ್ಟಾರೆ ಜೀವನದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ.

ಗಾಯಗಳು ಗುಣವಾಗುವುದು ನಿಧಾನವಾಗುವುದು:

ಅಧಿಕ ರಕ್ತದ ಸಕ್ಕರೆಯು ರಕ್ತ ಪರಿಚಲನೆಯನ್ನು ದುರ್ಬಲಗೊಳಿಸುತ್ತದೆ ಮತ್ತು ಗಾಯಗಳನ್ನು ಪರಿಣಾಮಕಾರಿಯಾಗಿ ಗುಣಪಡಿಸುವ ದೇಹದ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಮಧುಮೇಹವನ್ನು ಹೊಂದಿರುವ ಪುರುಷರು ತಮ್ಮ ಕಾಲುಗಳು ಅಥವಾ ಪಾದಗಳ ಮೇಲೆ ಕಡಿತ, ಹುಣ್ಣುಗಳು ಅಥವಾ ಗುಳ್ಳೆಗಳು ಸಾಮಾನ್ಯಕ್ಕಿಂತ ಹೆಚ್ಚು ಸಮಯ ವಾಸಿಯಾಗಬಹುದು. ಈ ನಿಧಾನವಾಗಿ ವಾಸಿಯಾಗುವ ಗಾಯಗಳನ್ನು ನಿರ್ಲಕ್ಷಿಸುವುದರಿಂದ ಸೋಂಕುಗಳು ಮತ್ತು ತೊಡಕುಗಳ ಅಪಾಯವನ್ನು ಹೆಚ್ಚಿಸಬಹುದು.

ಇದನ್ನೂ ಓದಿ: ನಿಮ್ಮ ಕಾಲಿನಲ್ಲಿ ಕಂಡುಬರುವ ಅಧಿಕ ಕೊಲೆಸ್ಟ್ರಾಲ್​ನ ಲಕ್ಷಣಗಳಿವು

ಚರ್ಮದ ರಚನೆಯಲ್ಲಿ ಬದಲಾವಣೆಗಳು:

ಮಧುಮೇಹವು ಚರ್ಮದ ರಚನೆಯಲ್ಲಿ ಬದಲಾವಣೆಗಳಿಗೆ ಕಾರಣವಾಗಬಹುದು. ಇದು ಶುಷ್ಕವಾಗಿ, ಬಿರುಕು ಬಿಟ್ಟಂತೆ ಕಾಣಿಸಿಕೊಳ್ಳುತ್ತದೆ. ಹುಣ್ಣುಗಳು ಮತ್ತು ಸೋಂಕುಗಳಂತಹ ತೊಡಕುಗಳನ್ನು ತಡೆಗಟ್ಟಲು ಸರಿಯಾದ ಆರ್ಧ್ರಕ ಮತ್ತು ಆಹಾರದ ಆರೈಕೆ ಅತ್ಯಗತ್ಯ.

ಕಾಲಿನ ಸೆಳೆತ:

ಕಾಲಿನ ಸೆಳೆತವು ವಿವಿಧ ಕಾರಣಗಳನ್ನು ಹೊಂದಿರಬಹುದು, ಅವುಗಳು ಮಧುಮೇಹಕ್ಕೆ ಸಂಬಂಧಿಸಿವೆ. ಅಧಿಕ ರಕ್ತದ ಸಕ್ಕರೆಯ ಮಟ್ಟವನ್ನು ಹೊಂದಿರುವ ಪುರುಷರು ಆಗಾಗ ಮತ್ತು ತೀವ್ರವಾದ ಕಾಲಿನ ಸೆಳೆತವನ್ನು ಅನುಭವಿಸಬಹುದು. ವಿಶೇಷವಾಗಿ ರಾತ್ರಿಯಲ್ಲಿ ಈ ನೋವು ಹೆಚ್ಚಾಗುತ್ತದೆ. ಇದನ್ನು ಪರಿಣಾಮಕಾರಿಯಾಗಿ ನಿರ್ವಹಿಸದಿದ್ದಲ್ಲಿ ಈ ಸೆಳೆತಗಳು ನಿದ್ರೆಗೆ ಭಂಗ ತರಬಹುದು ಮತ್ತು ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮ ಬೀರಬಹುದು.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ