AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಒಳ ಉಡುಪಿನ ಆಯ್ಕೆ ಹೇಗಿರಬೇಕು? ಯಾವುದು ಉತ್ತಮ

ತುಂಬಾ ಬಿಗಿಯಾಗಿರುವಂತಹ ಬಟ್ಟೆಗಳನ್ನು ದೀರ್ಘ ಸಮಯದ ತನಕ ಧರಿಸಿದರೆ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಬರಬಹುದು. ಹೀಗಾಗಿ ಯಾವಾಗಲೂ ಸ್ವಲ್ಪ ಸಡಿಲ ವಾಗಿರುವ ಬಟ್ಟೆ ಧರಿಸಿದರೆ ತುಂಬಾ ಒಳ್ಳೆಯದು. ಇಲ್ಲಿ ಮುಖ್ಯವಾಗಿ ಬಿಗಿ ಒಳ ಉಡುಪು ಧರಿಸಿದರೆ ಅದರಿಂದ ಕೂಡ ಸಮಸ್ಯೆಯಾಗುವುದು ಎಂದು ಸಂಶೋಧನೆಗಳು ಹೇಳಿವೆ. ಹಾಗಾದರೆ ಇದರಿಂದ ಆಗುವ ಸಮಸ್ಯೆಗಳೇನು? ಯಾವ ರೀತಿಯ ಒಳ ಉಡುಪುಗಳನ್ನು ಆಯ್ಕೆ ಮಾಡಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ.

Health Tips: ಒಳ ಉಡುಪಿನ ಆಯ್ಕೆ ಹೇಗಿರಬೇಕು? ಯಾವುದು ಉತ್ತಮ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Jul 17, 2024 | 1:56 PM

Share

ನಾವು ಪ್ರತಿನಿತ್ಯ ಧರಿಸುವಂತಹ ಬಟ್ಟೆಯೂ ಕೂಡ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದರೆ ನೀವು ನಂಬುತ್ತೀರಾ? ಹೌದು ಇದು ನಿಜ. ತುಂಬಾ ಬಿಗಿಯಾಗಿರುವಂತಹ ಬಟ್ಟೆಗಳನ್ನು ದೀರ್ಘ ಸಮಯದ ತನಕ ಧರಿಸಿದರೆ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಬರಬಹುದು. ಹೀಗಾಗಿ ಯಾವಾಗಲೂ ಸ್ವಲ್ಪ ಸಡಿಲ ವಾಗಿರುವ ಬಟ್ಟೆ ಧರಿಸಿದರೆ ತುಂಬಾ ಒಳ್ಳೆಯದು. ಇಲ್ಲಿ ಮುಖ್ಯವಾಗಿ ಬಿಗಿ ಒಳ ಉಡುಪು ಧರಿಸಿದರೆ ಅದರಿಂದ ಕೂಡ ಸಮಸ್ಯೆಯಾಗುವುದು ಎಂದು ಸಂಶೋಧನೆಗಳು ಹೇಳಿವೆ. ಹಾಗಾದರೆ ಇದರಿಂದ ಆಗುವ ಸಮಸ್ಯೆಗಳೇನು? ಯಾವ ರೀತಿಯ ಒಳ ಉಡುಪುಗಳನ್ನು ಆಯ್ಕೆ ಮಾಡಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ.

ವೀರ್ಯದ ಉತ್ಪತ್ತಿ ಮೇಲೆ ಪರಿಣಾಮ

ಮುಖ್ಯವಾಗಿ ಬಿಗಿ ಬಟ್ಟೆಯಿಂದಾಗಿ ರಕ್ತ ಸಂಚಾರದ ಮೇಲೆ ಪರಿಣಾಮ ಉಂಟಾಗಬಹುದು. ಜೊತೆಗೆ ಪುರುಷರಲ್ಲಿ ವೀರ್ಯದ ಚಲನೆ ಮೇಲೆ ತುಂಬಾ ಪರಿಣಾಮ ಬೀರಬಹುದು ಎಂದು ಸಂಶೋಧನೆಗಳಿಂದ ಬಹಿರಂಗಗೊಂಡಿದೆ. ಬಿಗಿಯಾದ ಒಳ ಉಡುಪಿನಿಂದಾಗಿ ವೃಷಣದ ಸುತ್ತಲು ಉಷ್ಣತೆಯು ಹೆಚ್ಚಾಗುವುದು ಮತ್ತು ಇದರಿಂದಾಗಿ ವೀರ್ಯದ ಉತ್ಪತ್ತಿ ಮೇಲೆ ಪರಿಣಾಮವಾಗುವುದು.

ಯೋನಿಯ ಸೋಂಕು

ಮಹಿಳೆಯರಲ್ಲಿ ಬಿಗಿಯಾದ ಒಳ ಉಡುಪಿನಿಂದಾಗಿ ತೊಡೆಯ ಮೇಲಿನ ಭಾಗದಲ್ಲಿ ರಕ್ತ ಸಂಚಾರ ಮೇಲೆ ಪರಿಣಾಮ ಬೀರುವುದು. ಇದರಿಂದಾಗಿ ಕಿರಿಕಿರಿ, ಸ್ಪರ್ಶವಿಲ್ಲದೆ ಇರುವುದು, ಮೈ ಜುಮ್ಮೆನಿಸುವ ಅನುಭವ ಆಗಬಹುದು. ತುಂಬಾ ಬಿಗಿಯಾದ ಬಟ್ಟೆಗಳನ್ನು ತೊಡುವುದರಿಂದ ಇದು ಹೊಟ್ಟೆಯ ಮೇಲೆ ಒತ್ತಡ ಹಾಕಬಹುದು ಮತ್ತು ಇದರಿಂದಾಗಿ ಆಮ್ಲೀಯ ಪ್ರತಿರೋಧವು ಕಾಣಿಸಿಕೊಂಡು ಎದೆಯುರಿ ಬರಬಹುದು. ಇದಕ್ಕಿಂತ ಮಿಗಿಲಾಗಿ ಯೋನಿಯ ಸೋಂಕು, ಚರ್ಮದಲ್ಲಿ ಕಿರಿಕಿರಿ, ದದ್ದು, ತುರಿಕೆ ಉಂಟಾಗಬಹುದು.

ಬಿಗಿ ಒಳ ಉಡುಪು ಧರಿಸುವುದು ಆಲ್ಕೋಹಾಲ್ ಮತ್ತು ಧೂಮಪಾನದಷ್ಟೇ ಅಪಾಯಕಾರಿ ಎಂದು ತಜ್ಞರು ಹೇಳುತ್ತಾರೆ. ಆದರೆ ಅತಿಯಾಗಿ ಸಡಿಲ ವಾಗಿರುವ ಬಟ್ಟೆಗಳನ್ನು ಧರಿಸುವುದು ಕೂಡ ಒಳ್ಳೆಯದಲ್ಲ. ಆರೋಗ್ಯವಾಗಿರಲು ನೀವು ಹೆಚ್ಚು ಬಿಗಿಯಿಲ್ಲದೆ ಇರುವಂತಹ ಒಳ ಉಡುಪು ಧರಿಸಬೇಕು. ಸರಿಯಾಗಿ ಸ್ವಚ್ಛತೆ ಮತ್ತು ಸೋಂಕಿನ ವಿರುದ್ಧ ಹೋರಾಡಲು ದೇಹಕ್ಕೆ ಸರಿಯಾಗಿ ಗಾಳಿಯು ಬೇಕಾಗಿರುತ್ತದೆ. ಹಾಗಾಗಿ ದಿನನಿತ್ಯ ಮತ್ತು ವ್ಯಾಯಾಮದ ವೇಳೆ ಬಿಗಿಯಾದ ಒಳ ಉಡುಪು ಧರಿಸುವುದನ್ನು ತಪ್ಪಿಸಿ.

ಇದನ್ನೂ ಓದಿ: ಮುಟ್ಟಿನ ಕಪ್ ಮಹಿಳೆಯರಿಗೆ ಎಷ್ಟು ಸೇಫ್!

ಒಳ ಉಡುಪಿನ ಆಯ್ಕೆ ಹೇಗಿರಬೇಕು?

ಪುರುಷರು ವಿ- ಆಕಾರದ ಒಳಉಡುಪುಗಳನ್ನು ಬಳಸುವುದು ಉತ್ತಮ. ಇದು ಸಾಂಪ್ರದಾಯಿಕ ಲಂಗೋಟಿಗೆ ಹತ್ತಿರವಾಗಿದ್ದು ದೇಹಕ್ಕೆ ಉತ್ತಮ ಎಂದು ತಜ್ಞರು ಹೇಳುತ್ತಾರೆ. ಇನ್ನು ಮಹಿಳೆಯರು ಹತ್ತಿ ಮತ್ತು ಹೈಪೋಲಾರ್ಜನಿಕ್ ಬಟ್ಟೆಗಳನ್ನು ಆಯ್ಕೆ ಮಾಡುವುದು ಉತ್ತಮ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Preethi Bhat Gunavante
Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
‘ಕಂಟ್ರಿ ಮೇಡ್’ ಸಿನಿಮಾನಲ್ಲಿ ಕತೆಯೇ ನಾಯಕ: ವಿಡಿಯೋ
‘ಕಂಟ್ರಿ ಮೇಡ್’ ಸಿನಿಮಾನಲ್ಲಿ ಕತೆಯೇ ನಾಯಕ: ವಿಡಿಯೋ
ನಾಯಕತ್ವ ಬದಲಾವಣೆ ಗುದ್ದಾಟಕ್ಕೆ ಸ್ಫೋಟಕ ತಿರುವು ನೀಡಿದ ಸಭೆ
ನಾಯಕತ್ವ ಬದಲಾವಣೆ ಗುದ್ದಾಟಕ್ಕೆ ಸ್ಫೋಟಕ ತಿರುವು ನೀಡಿದ ಸಭೆ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ
ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!
ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ