AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಕ್ತ ಪರೀಕ್ಷೆಯಿಂದ ಅಲ್ಝೈಮರ್ ಕಾಯಿಲೆಯನ್ನು ಪತ್ತೆ ಹಚ್ಚಬಹುದೇ? ಏನಿದು ಹೊಸ ಸಂಶೋಧನೆ?

ಅಲ್ಝೈಮರ್ ರೋಗವನ್ನು ಪತ್ತೆಹಚ್ಚಲು ಮಹತ್ವದ ಪ್ರಗತಿ ಸಾಧಿಸಿರುವುದಾಗಿ ಇತ್ತೀಚಿನ ಕ್ಲಿನಿಕಲ್ ಅಧ್ಯಯನವೊಂದು ತಿಳಿಸಿದೆ. ಹೌದು, ಸರಳ ರಕ್ತ ಪರೀಕ್ಷೆಯೊಂದನ್ನು ಬಳಸಿಕೊಂಡು, ಅಲ್ಝೈಮರ್ ರೋಗವನ್ನು ನಿರ್ಣಯಿಸುವುದು ಇದರ ವಿಶೇಷತೆಯಾಗಿದೆ. ಈ ಅಧ್ಯಯನದ ಫಲಿತಾಂಶಗಳು ಜರ್ನಲ್ ಆಫ್ ನ್ಯೂರಾಲಜಿನಲ್ಲಿ ಪ್ರಕಟಗೊಂಡಿವೆ. ಹಾಗಾದರೆ ಇದು ಭವಿಷ್ಯದಲ್ಲಿ ಅಲ್ಝೈಮರ್ ತಡೆಗಟ್ಟಲು ಸಹಾಯವಾಗಬಹುದೇ, ಹೇಗೆ ನಡೆದಿದೆ ಸಂಶೋಧನೆ ಎಂಬುದರ ಬಗೆಗಿನ ಸಂಪೂರ್ಣ ಮಾಹಿತಿ ಸ್ಟೋರಿಯಲ್ಲಿದೆ.

ರಕ್ತ ಪರೀಕ್ಷೆಯಿಂದ ಅಲ್ಝೈಮರ್ ಕಾಯಿಲೆಯನ್ನು ಪತ್ತೆ ಹಚ್ಚಬಹುದೇ? ಏನಿದು ಹೊಸ ಸಂಶೋಧನೆ?
New Blood Test Boosts Alzheimer's Diagnosis AccuracyImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Feb 27, 2026 | 6:22 PM

Share

ಅಲ್ಝೈಮರ್ (Alzheimer’s) ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ. ಇದೊಂದು ಭಯಾನಕ ಮರೆವಿನ ರೋಗವಾಗಿದ್ದು ಇದರಲ್ಲಿ ವ್ಯಕ್ತಿಯ ಸ್ಮರಣಶಕ್ತಿ ತುಂಬಾ ದುರ್ಬಲಗೊಂಡು ತಮ್ಮ ದೈನಂದಿನ ಕೆಲಸಗಳನ್ನು ನಿರ್ವಹಿಸಲು ಸಾಧ್ಯವಾಗುಡಿರುವ ಸ್ಥಿತಿಯಾಗಿದೆ. ಆದರೆ ಅಚ್ಚರಿ ವಿಷಯವೆನೆಂದರೆ ಈ ರೋಗವನ್ನು ಪತ್ತೆಹಚ್ಚುವಲ್ಲಿ ಮಹತ್ವದ ಸಾಧನೆ ನಡೆದಿದೆ. ಹೌದು, ಇತ್ತೀಚಿನ ಕ್ಲಿನಿಕಲ್ ಅಧ್ಯಯನವು, ಸರಳ ರಕ್ತ ಪರೀಕ್ಷೆಯೊಂದು ಆಲ್ಝೈಮರ್ ರೋಗದ ನಿರ್ಣಯದ ನಿಖರತೆಯನ್ನು 94.5% ರಷ್ಟು ಹೆಚ್ಚಿಸಬಹುದೆಂದು ತೋರಿಸಿದೆ. ಈ ಅಧ್ಯಯನದ ಫಲಿತಾಂಶಗಳು ಜರ್ನಲ್ ಆಫ್ ನ್ಯೂರಾಲಜಿನಲ್ಲಿ ಪ್ರಕಟಗೊಂಡಿವೆ. ಹಾಗಾದರೆ ಇದು ಭವಿಷ್ಯದಲ್ಲಿ ಅಲ್ಝೈಮರ್ ತಡೆಗಟ್ಟಲು ಸಹಾಯವಾಗಬಹುದೇ, ಹೇಗೆ ನಡೆದಿದೆ ಸಂಶೋಧನೆ ಎಂಬುದರ ಬಗೆಗಿನ ಸಂಪೂರ್ಣ ಮಾಹಿತಿ ಸ್ಟೋರಿಯಲ್ಲಿದೆ.

ಈ ಅಧ್ಯಯನದಲ್ಲಿ ಸ್ಪೇನ್‌ನ ಸಂಶೋಧಕರು ಫಾಸ್ಫೊರಿಲೇಟೆಡ್ ಟೌ (p-tau217) ಎಂಬ ಪ್ರೋಟೀನ್ ಮೇಲೆ ಗಮನಹರಿಸಿದ್ದು. ಇದು ಮೆದುಳಿನಲ್ಲಿ ಸಹಜವಾಗಿ ಇರುವ ಪ್ರೋಟೀನ್ ಆಗಿದ್ದು, ನರಕೋಶಗಳನ್ನು (ನ್ಯೂರಾನ್‌ಗಳನ್ನು) ಸ್ಥಿರವಾಗಿಡಲು ಸಹಾಯ ಮಾಡುತ್ತದೆ. ಆದರೆ ಈ ಪ್ರೋಟೀನ್ ಅಸಹಜವಾಗಿ ಬದಲಾಗಿ ಗುಡ್ಡೆಯಾಗಲು ಪ್ರಾರಂಭಿಸಿದಾಗ, ಅದು ನರಕೋಶಗಳ ನಡುವೆ ಸಂವಹನವನ್ನು ಅಡ್ಡಿಪಡಿಸುವ ಟ್ಯಾಂಗಲ್‌ಗಳನ್ನು ರೂಪಿಸುತ್ತದೆ. ಇದರ ಪರಿಣಾಮವಾಗಿ ಮೆದುಳಿನ ಕಾರ್ಯಕ್ಷಮತೆ ಕುಗ್ಗಿ, ಆಲ್ಝೈಮರ್‌ ಮುಂತಾದ ನರಕ್ಷಯ ರೋಗಗಳು ಉಂಟಾಗಬಹುದು. ಫಾಸ್ಫೊರಿಲೇಟೆಡ್ ಟೌ ಅನ್ನು ರೋಗದ ನೇರ ಕಾರಣವೆಂದು ಪರಿಗಣಿಸದಿದ್ದರೂ, ರಕ್ತದಲ್ಲಿ ಇದರ ಪ್ರಮಾಣ ಹೆಚ್ಚಿರುವುದು ಆಲ್ಝೈಮರ್‌ನ ಆರಂಭಿಕ ಎಚ್ಚರಿಕೆ ಸೂಚಕಗಳಲ್ಲಿ ಒಂದಾಗಿ ಪರಿಗಣಿಸಲಾಗಿದೆ.

ಅಧ್ಯಯನ ಹೇಗೆ ನಡೆಸಲಾಯಿತು?

ಮರೆವಿಗೆ ಸಂಬಂಧಿತ ಸಮಸ್ಯೆಗಳೊಂದಿಗೆ ಬಂದಂತಹ 50 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಿನ 200 ಹೊಸ ರೋಗಿಗಳನ್ನು ಸಂಶೋಧಕರು ಪರಿಶೀಲಿಸಿದರು. ಮೊದಲು ವೈದ್ಯರು ಸಾಮಾನ್ಯ ಕ್ಲಿನಿಕಲ್ ಮೌಲ್ಯಮಾಪನದ ಆಧಾರದ ಮೇಲೆ ನಿರ್ಣಯ ಮಾಡಿದ್ದು ಅವುಗಳನ್ನು ದಾಖಲಿಸಿಕೊಂಡಿದ್ದಾರೆ. ನಂತರ p-tau217 ರಕ್ತ ಪರೀಕ್ಷೆಯ ಫಲಿತಾಂಶಗಳನ್ನು ಪರಿಶೀಲಿಸಿ, ಅಗತ್ಯವಿದ್ದಲ್ಲಿ ನಿರ್ಣಯವನ್ನು ಪರಿಷ್ಕರಿಸಿದ್ದಾರೆ. ರಕ್ತ ಪರೀಕ್ಷೆಯಿಲ್ಲದೆ, ವೈದ್ಯರು 75.5% ಪ್ರಕರಣಗಳಲ್ಲಿ ಆಲ್ಝೈಮರ್ ಅನ್ನು ಸರಿಯಾಗಿ ಪತ್ತೆಹಚ್ಚಿದ್ದರು. ಆದರೆ p-tau217 ರಕ್ತ ಪರೀಕ್ಷೆಯ ಫಲಿತಾಂಶಗಳನ್ನು ಸೇರಿಸಿದಾಗ, ನಿರ್ಣಯದ ನಿಖರತೆ 94.5%ಕ್ಕೆ ಏರಿತು. ಅಂದರೆ 19% ರಷ್ಟು ಹೆಚ್ಚಳ ಕಂಡುಬಂದಿದೆ. ಹಾಗಾಗಿ ಸುಮಾರು ನಾಲ್ಕರಲ್ಲಿ ಒಬ್ಬ ರೋಗಿಯ ಪ್ರಾಥಮಿಕ ನಿರ್ಣಯವನ್ನು ಬದಲಿಸಬೇಕಾಗಿ ಬಂದಿದೆ. ಕೆಲವರು ಮೊದಲಿಗೆ ಆಲ್ಝೈಮರ್ ಎಂದು ಭಾವಿಸಲ್ಪಟ್ಟರೂ, ಅವರಿಗೆ ಬೇರೆ ರೋಗವಿರುವುದು ಪತ್ತೆಯಾಗಿದೆ. ಮತ್ತೊಂದೆಡೆ, ಸಾಮಾನ್ಯ ವಯೋ ಸಹಜ ಸಮಸ್ಯೆ ಎಂದು ಅಂದಾಜಿಸಲ್ಪಟ್ಟ ಕೆಲವರಲ್ಲಿ ಆಲ್ಝೈಮರ್‌ನಿಂದ ಬಳಲುತ್ತಿರುವುದು ದೃಢಪಟ್ಟಿದೆ.

ಇದನ್ನೂ ಓದಿ: ನೀವು ವಾಸಮಾಡುವ ಪ್ರದೇಶದಲ್ಲಿ ವಾಯು ಮಾಲಿನ್ಯ ಹೆಚ್ಚಾಗಿದ್ಯಾ? ಹಾಗಿದ್ರೆ ನಿಮಗೂ ಬರಬಹುದು ಮರೆವಿನ ಕಾಯಿಲೆ

ಜನಸಂಖ್ಯೆ ವೇಗವಾಗಿ ವೃದ್ಧಿಯಾಗುತ್ತಿರುವ ಇಂದಿನ ಕಾಲದಲ್ಲಿ, ಆಲ್ಝೈಮರ್ ಮತ್ತು ಡಿಮೆನ್ಷಿಯಾ ಪ್ರಕರಣಗಳ ಸಂಖ್ಯೆಯೂ ಏರುತ್ತಿರುವುದು ಸುಳ್ಳಲ್ಲ. ಪ್ರಸ್ತುತ ಆಲ್ಝೈಮರ್ ಪತ್ತೆಹಚ್ಚಲು ಬಳಸುವ ಮೆದುಳು ಸ್ಕ್ಯಾನ್‌ಗಳು ಮತ್ತು ಸ್ಪೈನಲ್ ಟ್ಯಾಪ್ ಪರೀಕ್ಷೆಗಳು ದುಬಾರಿಯಾಗಿದ್ದು ಎಲ್ಲರಿಗೂ ಸುಲಭವಾಗಿ ಲಭ್ಯವಾಗುವುದಿಲ್ಲ. ಇದರ ನಡುವೆ, ಸರಳ ರಕ್ತ ಪರೀಕ್ಷೆಯೊಂದು ಈ ರೀತಿ ಸುಲಭ ಫಲಿತಾಂಶ ನೀಡುತ್ತಿದೆ ಎಂದರೆ ಭವಿಷ್ಯದಲ್ಲಿ ಯಾರೂ ಬೇಕಾದರೂ ಮಾಡಿಸಬಹುದಾಗಿದೆ. ಇದು ಲಕ್ಷಾಂತರ ಜನರಿಗೆ ಸಮಯೋಚಿತ ಚಿಕಿತ್ಸೆ ಮತ್ತು ಉತ್ತಮ ಆರೈಕೆ ದೊರೆಯಲು ಸಹಾಯ ಮಾಡಬಹುದು. ಆದರೆ ಗಮನಿಸಬೇಕಾದ ವಿಷಯವೆಂದರೆ, ಈ ರಕ್ತ ಪರೀಕ್ಷೆ ಭಾರತದಲ್ಲಿ ಇನ್ನೂ ಪ್ರಾರಂಭವಾಗಿಲ್ಲ. ಇದು ಇನ್ನೂ ಸಂಶೋಧನಾ ಹಂತದಲ್ಲಿದ್ದು, ವ್ಯಾಪಕ ಬಳಕೆಗೆ ಲಭ್ಯವಿಲ್ಲ. ಜೊತೆಗೆ ಸಾಮಾನ್ಯ ಆಸ್ಪತ್ರೆಗಳಲ್ಲಿ ಅಥವಾ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಇದರ ಬಳಕೆ ಆರಂಭವಾಗಿಲ್ಲ. ಆದ್ದರಿಂದ, ಇದು ಭವಿಷ್ಯದಲ್ಲಿ ಭರವಸೆ ಮೂಡಿಸುವ ಸಾಧನವಾಗಿದ್ದರೂ, ಪ್ರಸ್ತುತ ಹಂತದಲ್ಲಿ ಇದು ಪ್ರಯೋಗಾತ್ಮಕ ವಿಧಾನವೆಂದು ಪರಿಗಣಿಸಬೇಕಾಗಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಚೌಟ್ರಿವರೆಗೂ ಬಂದು ಮದುವೆ ಬೇಡ ಎಂದ ವಧು!
ಚೌಟ್ರಿವರೆಗೂ ಬಂದು ಮದುವೆ ಬೇಡ ಎಂದ ವಧು!
ಪೆಟ್ರೋಲ್​​ಗೆ ಎಥನಾಲ್ ಮಿಕ್ಸ್: ಯಾರಿಗೆ ಲಾಭ? ಪೆಟ್ರೋಲ್ ಬೆಲೆ ಇಳಿಯುತ್ತಾ?
ಪೆಟ್ರೋಲ್​​ಗೆ ಎಥನಾಲ್ ಮಿಕ್ಸ್: ಯಾರಿಗೆ ಲಾಭ? ಪೆಟ್ರೋಲ್ ಬೆಲೆ ಇಳಿಯುತ್ತಾ?
ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಬಿದ್ದಿದ್ದ ಯುವಕನಿಗೆ ಕೇಂದ್ರ ಸಚಿವ ಸಹಾಯ
ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಬಿದ್ದಿದ್ದ ಯುವಕನಿಗೆ ಕೇಂದ್ರ ಸಚಿವ ಸಹಾಯ
ಬೆಂಗಳೂರಿನಲ್ಲಿ ಕುರಿ ಮಾರಾಟ ಮಾಡ್ತಿದ್ದವನ ಬಳಿ ಪಿಸ್ತೂಲ್!
ಬೆಂಗಳೂರಿನಲ್ಲಿ ಕುರಿ ಮಾರಾಟ ಮಾಡ್ತಿದ್ದವನ ಬಳಿ ಪಿಸ್ತೂಲ್!
ಮಲ್ಲಿಕಾರ್ಜುನ ಮುತ್ಯಾ ಪರ ಭಕ್ತರ ಸಭೆ, ಜಿಲ್ಲಾಡಳಿತಕ್ಕೆ 2 ದಿನ ಡೆಡ್​​ಲೈನ್
ಮಲ್ಲಿಕಾರ್ಜುನ ಮುತ್ಯಾ ಪರ ಭಕ್ತರ ಸಭೆ, ಜಿಲ್ಲಾಡಳಿತಕ್ಕೆ 2 ದಿನ ಡೆಡ್​​ಲೈನ್
ಜನಾರ್ದನ ರೆಡ್ಡಿಗೆ ಮತ್ತೆ 'ಗಣಿ' ಉರುಳು? 884 ಕೋಟಿ ನಷ್ಟ ವಸೂಲಿಗೆ ಆಗ್ರಹ
ಜನಾರ್ದನ ರೆಡ್ಡಿಗೆ ಮತ್ತೆ 'ಗಣಿ' ಉರುಳು? 884 ಕೋಟಿ ನಷ್ಟ ವಸೂಲಿಗೆ ಆಗ್ರಹ
ತಾನು ಕೆಲಸ ಮಾಡಿದ ಆಫೀಸಿಗೇ 91 ಲಕ್ಷ ರೂ. ಕನ್ನ! ಆರೋಪಿ ಕ್ಯಾಶಿಯರ್ ಅಂದರ್
ತಾನು ಕೆಲಸ ಮಾಡಿದ ಆಫೀಸಿಗೇ 91 ಲಕ್ಷ ರೂ. ಕನ್ನ! ಆರೋಪಿ ಕ್ಯಾಶಿಯರ್ ಅಂದರ್
ನಡುರಸ್ತೆಯಲ್ಲಿ ಇಬ್ಬರು ಕಾಲೇಜು ಹುಡುಗಿಯರಿಗೆ ಲಿಪ್​​​ ಕಿಸ್ ಮಾಡಿದ ಯುವಕ
ನಡುರಸ್ತೆಯಲ್ಲಿ ಇಬ್ಬರು ಕಾಲೇಜು ಹುಡುಗಿಯರಿಗೆ ಲಿಪ್​​​ ಕಿಸ್ ಮಾಡಿದ ಯುವಕ
ಸತ್ತವರ ಖಾತೆಗೆ ಪಾವತಿಯಾದ ಗೃಹಲಕ್ಷ್ಮೀ ಹಣ ವಾಪಸ್ ಪಡೆಯಲು ಸರ್ಕಾರ ನಿರ್ಧಾರ
ಸತ್ತವರ ಖಾತೆಗೆ ಪಾವತಿಯಾದ ಗೃಹಲಕ್ಷ್ಮೀ ಹಣ ವಾಪಸ್ ಪಡೆಯಲು ಸರ್ಕಾರ ನಿರ್ಧಾರ
ಕೋಲ್ಕತ್ತಾದಲ್ಲಿ 5.3 ತೀವ್ರತೆಯ ಭೂಕಂಪ
ಕೋಲ್ಕತ್ತಾದಲ್ಲಿ 5.3 ತೀವ್ರತೆಯ ಭೂಕಂಪ