AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಪೌಷ್ಠಿಕಾಂಶಯುಕ್ತ ಸಾಮಗ್ರಿಗಳೇ ಅಡುಗೆ ಕೋಣೆಯಲ್ಲಿ ತುಂಬಿರಲಿ, ಪ್ರೋಟೀನ್​ಯುಕ್ತ ಆಹಾರವನ್ನೇ ಸೇವಿಸಿ

ಅತಿಯಾದರೆ ಅಮೃತವೂ ವಿಷ ಎಂಬ ಮಾತಿದೆ. ನಮ್ಮ ಆರೋಗ್ಯದ ಸುರಕ್ಷತೆ ನಮ್ಮ ಕೈಯಲ್ಲಿಯೇ ಇದೆ. ಪೌಷ್ಠಿಕಾಂಶಯುಕ್ತ ಆಹಾರ ಸೇವನೆಯಿಂದ ಆರೋಗ್ಯವಾಗಿರಿ.

Health Tips: ಪೌಷ್ಠಿಕಾಂಶಯುಕ್ತ ಸಾಮಗ್ರಿಗಳೇ ಅಡುಗೆ ಕೋಣೆಯಲ್ಲಿ ತುಂಬಿರಲಿ, ಪ್ರೋಟೀನ್​ಯುಕ್ತ ಆಹಾರವನ್ನೇ ಸೇವಿಸಿ
ಹಣ್ಣುಗಳು
Follow us
shruti hegde
|

Updated on: May 19, 2021 | 1:56 PM

ಕೊವಿಡ್​ 19 ವ್ಯಾಪಕವಾಗಿ ಹರಡುತ್ತಿರುವುದರಿಂದ ಅನೇಕ ರಾಜ್ಯಗಳು ಲಾಕ್​ಡೌನ್​ ಮೊರೆ ಹೋಗಿವೆ. ಮನೆಯಲ್ಲಿಯೇ ಇದ್ದು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಆಹಾರ ವ್ಯವಸ್ಥೆ ಬದಲಾಗಬೇಕು. ಉತ್ತಮ ಪ್ರೋಟೀನ್​ಯುಕ್ತ ಆಹಾರವೇ ನಿಮ್ಮದಾಗಿರಬೇಕು. ಹಾಗಿದ್ದಾಗ ನಿಮ್ಮ ಅಡುಗೆ ಮನೆಯಲ್ಲಿ ಹೆಚ್ಚು ಪೋಷಕಾಂಶಯುಕ್ತ ಆಹಾರ ಸಾಮಗ್ರಿಗಳೇ ತುಂಬಿರಲಿ.

ಕೊರೊನಾ ಸೋಂಕು ತಡೆಗಟ್ಟಲು ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿರಬೇಕು. ದಿನನಿತ್ಯ ಯೋಗಾಭ್ಯಾಸ ರೂಢಿಯಲ್ಲಿಟ್ಟುಕೊಳ್ಳುವುದು ಉತ್ತಮ. ಪ್ರತಿನಿತ್ಯ ಸೇವಿಸುವ ಆಹಾರ ಪದಾರ್ಥದಲ್ಲಿ ಪೌಷ್ಠಿಕಾಂಶವಿರಬೇಕು. ಆಗ ನಮ್ಮ ದೇಹವು ರೋಗದ ವಿರುದ್ಧ ಹೋರಾಡಲು ಸಾಧ್ಯ. ಹಾಗಿದ್ದರೆ, ನಾವು ನಿತ್ಯ ಯಾವ ಪದಾರ್ಥಗಳನ್ನು ಸೇವಿಸಬೇಕು? ನಮ್ಮ ದಿನನಿತ್ಯದ ಆಹಾರ ಕ್ರಮ ಹೇಗಿರಬೇಕು ಎಂಬುದರ ಕುರಿತಾಗಿ ಒಮ್ಮೆ ಯೋಚಿಸಿ.

ಆದಷ್ಟು ಬಿಸಿ ನೀರು ಕುಡಿಯಿರಿ. ಹವಾಮಾನ ಏರು-ಪೇರಿನಿಂದಾಗಿ ಆರೋಗ್ಯದ ಸ್ಥಿತಿ ಹದಗೆಟ್ಟಿರಬಹುದು. ಶೀತ-ಜ್ವರ-ಕೆಮ್ಮುಗಳಂತಹ ಸಮಸ್ಯೆ ಉಂಟಾಗುವುದು ಹೆಚ್ಚು. ಹೀಗಿದ್ದಾಗ ಬಿಸಿ ನೀರು ಕುಡಿಯುವುದು ಆರೋಗ್ಯಕ್ಕೆ ಒಳಿತು. ಸಮಯಕ್ಕೆ ಸರಿಯಾಗಿ ಊಟ-ಆಹಾರ ಸೇವನೆ ಮಾಡುವುದು ಉತ್ತಮ. ಜೊತೆಗೆ ಪೌಷ್ಠಿಕಾಂಶಯುಕ್ತ ಆಹಾರ ಕ್ರಮ ರೂಢಿಯಲ್ಲಿದ್ದರೆ ರೋಗಗಳಿಂದ ದೂರವಿರಬಹುದಲ್ಲವೇ? ಹಾಗಿದ್ದರೆ ಅಡುಗೆ ಮನೆಯಲ್ಲಿ ಯಾವ ಯಾವ ಪೌಷ್ಠಿಕಾಂಶಯುಕ್ತ ಆಹಾರ ಸಾಮಗ್ರಿಗಳಿರಬೇಕು ಎಂಬುದರ ಬಗ್ಗೆ ಗಮನಿಸೋಣ.

ಹೆಚ್ಚು ಫೈಬರ್​ಯುಕ್ತ ಆಹಾರ, ಪ್ರೋಟೀನ್​ಗಳು, ಕಾರ್ಬೋಹೈಡ್ರೇಟ್​ಗಳು, ಪೋಷಕಾಂಶಗಳು ದೇಹದ ಆರೋಗ್ಯ ಸುರಕ್ಷತೆಗೆ ಬೇಕು. ಈ ನಿಟ್ಟಿನಲ್ಲಿ ನಿಮ್ಮ ಅಡುಗೆ ಮನೆ ಯಾವ ಯಾವ ಸಾಮಗ್ರಿಗಳಿಂದ ತುಂಬಿರಬೇಕು? ಎಂಬುದನ್ನು ನೋಡೋಣ. ಪೌಷ್ಟಿಕತಜ್ಞ ಲೊವ್ನೀತ್ ಬಾತ್ರಾ ಅವರು ದೇಹಕ್ಕೆ ಪೋಷಕಾಂಶ ಒದಗಿಸುವ ಆಹಾರ ಸಾಮಗ್ರಿಗಳನ್ನು ತಿಳಿಸಿಕೊಟ್ಟಿದ್ದಾರೆ. ಜೊತೆಗೆ, ತರಕಾರಿಗಳು, ಹಣ್ಣುಗಳಿಂದ ಉತ್ತಮ ಪ್ರೋಟೀನ್​ಗಳನ್ನು ಹಾಗೂ ಫೈಟೊನ್ಯೂಟ್ರಿಯಂಟ್​ಗಳನ್ನು ಪಡೆಯಬಹುದು ಎಂದು ಅವರು ಹೇಳಿದ್ದಾರೆ.

View this post on Instagram

A post shared by Lovneet Batra (@lovneetb)

ಧಾನ್ಯಗಳು: ಬಾರ್ಲಿ, ರಾಗಿ, ಅಕ್ಕಿ, ರವೆ, ಗೋಧಿ ಹಿಟ್ಟು

ಸೊಪ್ಪು: ಕೊತ್ತಂಬರಿ ಸೊಪ್ಪು, ಪುದೀನಾ ಎಲೆಗಳು, ಕರಿಬೇವಿನ ಸೊಪ್ಪು,

ತರಕಾರಿಗಳು: ಸೋರೇಕಾಯಿ, ಬೀನ್ಸ್​, ಬದನೆಕಾಯಿ

ಹಣ್ಣುಗಳು: ಹುಣಸೆ ಹಣ್ಣು, ಜಾಕ್​ಫ್ರೂಟ್​, ಬಾಳೆಹಣ್ಣು, ಟೊಮಾಟೊ, ಪೇರಲ, ಮಾವು, ಕಲ್ಲಂಗಡಿ, ಪಪ್ಪಾಯಿ, ಕಪ್ಪುದ್ರಾಕ್ಷಿ, ಸ್ಟ್ರಾಬೆರಿ, ಅನಾನಸ್​, ಚೆರ್ರಿ

ಗಡ್ಡೆ-ಗೆಣಸು: ಆಲೂಗಡ್ಡೆ, ಬೀಟ್ರೂಟ್​, ಶುಂಠಿ

ಇವುಗಳು ನಿಮ್ಮ ಅಡುಗೆಮನೆಯಲ್ಲಿರಲಿ. ಜೊತೆಗೆ ಹಾಲು ಮತ್ತು ಮೊಸರು, ಬಾದಾಮಿ, ಗೋಡಂಬಿ, ಪಿಸ್ತಾ, ತೆಂಗಿನಕಾಯಿಯಂತಹ ಆಹಾರ ಪದಾರ್ಥಗಳನ್ನು ಸೇವಿಸಿ. ಯಾವುದೇ ಆಹಾರ ಪದಾರ್ಥವೂ ಕೂಡಾ ಅತಿಯಾಗಬಾರದು. ಅತಿಯಾದರೆ ಅಮೃತವೂ ವಿಷ ಎಂಬ ಮಾತಿದೆ. ನಮ್ಮ ಆರೋಗ್ಯದ ಸುರಕ್ಷತೆ ನಮ್ಮ ಕೈಯಲ್ಲಿಯೇ ಇದೆ. ಪೌಷ್ಠಿಕಾಂಶಯುಕ್ತ ಆಹಾರ ಸೇವನೆಯಿಂದ ಆರೋಗ್ಯವಾಗಿರಿ.

ಇದನ್ನೂ ಓದಿ: Health Tips: ಗೋಡಂಬಿ ಸೇವನೆಯಿಂದ ಉತ್ತಮ ಅರೋಗ್ಯ; ನಿಯಮಿತವಾಗಿ ಬಳಸಿ ಕಾಯಿಲೆಗಳಿಂದ ದೂರವಿರಿ

ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ
ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ವಾಯುಪಡೆಯಿಂದ ಯುದ್ಧವಿಮಾನಗಳ ತಾಲೀಮು
ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ವಾಯುಪಡೆಯಿಂದ ಯುದ್ಧವಿಮಾನಗಳ ತಾಲೀಮು
ಶಿವಾನಂದ ಪಾಟೀಲ್ ರಾಜೀನಾಮೆ ಅಂಗೀಕರಿಸಲು ಬರಲ್ಲ: ಯುಟಿ ಖಾದರ್
ಶಿವಾನಂದ ಪಾಟೀಲ್ ರಾಜೀನಾಮೆ ಅಂಗೀಕರಿಸಲು ಬರಲ್ಲ: ಯುಟಿ ಖಾದರ್
ಪತ್ರದಲ್ಲಿ ಷರತ್ತುಗಳಿರಲ್ಲ, 2 ಸಾಲಿನ ಸಾರಾಂಶ ಮಾತ್ರ ಇರುತ್ತದೆ: ಯತ್ನಾಳ್
ಪತ್ರದಲ್ಲಿ ಷರತ್ತುಗಳಿರಲ್ಲ, 2 ಸಾಲಿನ ಸಾರಾಂಶ ಮಾತ್ರ ಇರುತ್ತದೆ: ಯತ್ನಾಳ್
ತನಿಖೆಯನ್ನು ಎನ್​ಐಎಗೆ ವಹಿಸುವಂತೆ ಅಮಿತ್ ಶಾರನ್ನು ಕೋರಿದ್ದೇನೆ: ಸಚಿವೆ
ತನಿಖೆಯನ್ನು ಎನ್​ಐಎಗೆ ವಹಿಸುವಂತೆ ಅಮಿತ್ ಶಾರನ್ನು ಕೋರಿದ್ದೇನೆ: ಸಚಿವೆ
ಸುಹಾಸ್ ಕಾರಿಗೆ ಮೀನಿನ ವಾಹನ ಡಿಕ್ಕಿ ಹೊಡೆದ ಸಿಸಿಟಿವಿ ದೃಶ್ಯ ಇಲ್ಲಿದೆ
ಸುಹಾಸ್ ಕಾರಿಗೆ ಮೀನಿನ ವಾಹನ ಡಿಕ್ಕಿ ಹೊಡೆದ ಸಿಸಿಟಿವಿ ದೃಶ್ಯ ಇಲ್ಲಿದೆ
ಆಂಧ್ರ ಡಿಸಿಎಂ ಪವನ್ ಕಲ್ಯಾಣ್​​ಗೆ ಚಾಕೋಲೇಟ್ ಕೊಟ್ಟ ಪ್ರಧಾನಿ ಮೋದಿ
ಆಂಧ್ರ ಡಿಸಿಎಂ ಪವನ್ ಕಲ್ಯಾಣ್​​ಗೆ ಚಾಕೋಲೇಟ್ ಕೊಟ್ಟ ಪ್ರಧಾನಿ ಮೋದಿ
ಸುಹಾಸ್ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಲು ನಿರ್ಧರಿಸಿದ್ದೇವೆ:ವಿಜಯೇಂದ್ರ
ಸುಹಾಸ್ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಲು ನಿರ್ಧರಿಸಿದ್ದೇವೆ:ವಿಜಯೇಂದ್ರ
ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದೇನೆ, ಅಂಗೀಕರಿಸಿಲ್ಲ: ಸ್ಪೀಕರ್ ಖಾದರ್
ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದೇನೆ, ಅಂಗೀಕರಿಸಿಲ್ಲ: ಸ್ಪೀಕರ್ ಖಾದರ್