AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kissing Benefits: ಮುತ್ತು ಕೊಡಲು ಹಿಂಜರಿಯಬೇಡಿ; ಸೋಂಕಿನ ವಿರುದ್ಧವೂ ಹೋರಾಡುತ್ತೆ ಚುಂಬನ!

ವ್ಯಕ್ತಿಗಳಿಗೆ ತುಟಿ ಅಥವಾ ಬಾಯಿಯಲ್ಲಿ ಹುಣ್ಣು ಇದ್ದಾಗ, ಶೀತ ಅಥವಾ ಕೆಮ್ಮು ಇದ್ದಾಗ ಚುಂಬನ ಮಾಡದಿರುವುದು ಉತ್ತಮ. ಇದರಿಂದ ಬೇರೆಯವರಿಗೂ ನಿಮ್ಮ ಸೋಂಕು ಹರಡುತ್ತದೆ.

Kissing Benefits: ಮುತ್ತು ಕೊಡಲು ಹಿಂಜರಿಯಬೇಡಿ; ಸೋಂಕಿನ ವಿರುದ್ಧವೂ ಹೋರಾಡುತ್ತೆ ಚುಂಬನ!
ಸಾಂದರ್ಭಿಕ ಚಿತ್ರ
ಸುಷ್ಮಾ ಚಕ್ರೆ
|

Updated on: Feb 10, 2023 | 12:07 PM

Share

ನವದೆಹಲಿ: ಪ್ರೇಮಿಗಳ ದಿನಾಚರಣೆ (Valentine’s Day) ಹತ್ತಿರ ಬಂದಿದೆ. ತಜ್ಞರು ಹೇಳುವಂತೆ ನಿಯಮಿತವಾಗಿ ಚುಂಬನ ಮಾಡುವುದು ಅತ್ಯಗತ್ಯ. ದಂತವೈದ್ಯರ ಪ್ರಕಾರ, ಭಾವೋದ್ರಿಕ್ತವಾಗಿ ನೀಡುವ ಮುತ್ತು ಸಂತೋಷದ ಹಾರ್ಮೋನ್ (happy hormones) ಅನ್ನು ಬಿಡುಗಡೆ ಮಾಡುವುದು ಮಾತ್ರವಲ್ಲದೆ, ಹಲವಾರು ಸೋಂಕುಗಳ ವಿರುದ್ಧವೂ ಹೋರಾಡುತ್ತದೆ. ವಿಶೇಷವಾಗಿ ಭಾವೋದ್ರಿಕ್ತ ಚುಂಬನವು ಲಾಲಾರಸದ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಇದು ಹಲ್ಲುಗಳು, ಬಾಯಿ ಮತ್ತು ಒಸಡುಗಳನ್ನು ಆರೋಗ್ಯಕರವಾಗಿರಿಸುತ್ತದೆ.

ಚುಂಬನವು ಲಾಲಾರಸದ ವಿನಿಮಯವನ್ನು ಒಳಗೊಂಡಿರುತ್ತದೆ. ಏಕೆಂದರೆ ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳು ಯಾವಾಗಲೂ ಕೆಟ್ಟದ್ದೇ ಎಂದು ಹೇಳಲು ಸಾಧ್ಯವಿಲ್ಲ. ಲಾಲಾರಸದಲ್ಲಿರುವ ಕೆಲವು ಜೀವಿಗಳು ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಬಹುದು. ಇದು ಹಲ್ಲಿನ ಕೊಳೆತ, ಬಾಯಿಯ ಥ್ರಷ್ ಅಥವಾ ಸ್ಟ್ರೆಪ್ಟೋಕೊಕಸ್ ಅಪಾಯವನ್ನು ತಗ್ಗಿಸುತ್ತದೆ.

ಇದನ್ನೂ ಓದಿ: Shocking Video: ನದಿಯಲ್ಲಿ ಸ್ನಾನ ಮಾಡುವಾಗ ಹೆಂಡತಿಗೆ ಮುತ್ತು ಕೊಟ್ಟ ಗಂಡನಿಗೆ ಹಿಗ್ಗಾಮುಗ್ಗ ಥಳಿಸಿದ ಜನ!

ಆರೋಗ್ಯಕರ ಬ್ಯಾಕ್ಟೀರಿಯಾಕ್ಕೆ ಒಡ್ಡಿಕೊಳ್ಳುವುದರಿಂದ ದೇಹದ ಪ್ರತಿರೋಧವನ್ನು ಸುಧಾರಿಸುವುದರಿಂದ ಚುಂಬನವು ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ. ಶೇ. 80ರಷ್ಟು ಲಾಲಾರಸದ ಬ್ಯಾಕ್ಟೀರಿಯಾಗಳು ಎಲ್ಲರಿಗೂ ಸಾಮಾನ್ಯವಾಗಿದ್ದರೆ, ಕೇವಲ ಶೇ. 20ರಷ್ಟು ವ್ಯಕ್ತಿಗಳಿಗೆ ಮಾತ್ರ ವಿಶಿಷ್ಟವಾಗಿದೆ. ಚುಂಬನವು ಪ್ರತಿಕಾಯಗಳನ್ನು ರಚಿಸಲು ದೇಹವನ್ನು ಉತ್ತೇಜಿಸುತ್ತದೆ. ಅದು ಹಾನಿಕಾರಕ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಮೌಖಿಕ ಆರೋಗ್ಯಕ್ಕಾಗಿ ಹಲ್ಲುಜ್ಜುವುದು ಮತ್ತು ಫ್ಲೋಸ್ ಮಾಡುವುದರ ಜೊತೆಗೆ ದಿನಕ್ಕೆ 4 ನಿಮಿಷಗಳ ಕಾಲ ಚುಂಬಿಸುವುದನ್ನು ದಂತವೈದ್ಯರು ಈ ಹಿಂದೆ ಶಿಫಾರಸು ಮಾಡಿದ್ದರು. ಲಾಲಾರಸವು ಹಲ್ಲುಗಳ ಮೇಲೆ ಕುಳಿತುಕೊಳ್ಳುವ ಆಮ್ಲಗಳನ್ನು ತಟಸ್ಥಗೊಳಿಸಲು ಸಹಾಯ ಮಾಡುತ್ತದೆ. ಇದು ಹಲ್ಲಿನ ಕೊಳೆಯುವಿಕೆಯ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಗಂಡ-ಹೆಂಡತಿ ಒಟ್ಟಿಗೆ ಮಲಗುವಂತಿಲ್ಲ, ಚುಂಬನ-ಅಪ್ಪುಗೆಯೂ ನಿಷೇಧ; ಶಾಂಘೈನಲ್ಲಿ ಕಠಿಣ ನಿರ್ಬಂಧಕ್ಕೆ ಸೋತ ಜನರು

ಯಾವಾಗ ಚುಂಬಿಸಬಾರದು?: ವ್ಯಕ್ತಿಗಳಿಗೆ ತುಟಿಗಳು ಅಥವಾ ಬಾಯಿಯಲ್ಲಿ ಹುಣ್ಣು ಇದ್ದಾಗ, ಶೀತ ಅಥವಾ ಕೆಮ್ಮು ಇದ್ದಾಗ ಚುಂಬನ ಮಾಡದಿರುವುದು ಉತ್ತಮ. ಇದರಿಂದ ಬೇರೆಯವರಿಗೂ ನಿಮ್ಮ ಸೋಂಕು ಹರಡುತ್ತದೆ. ಇವುಗಳು ಸಾಂಕ್ರಾಮಿಕ ರೋಗಗಳಾಗಿರುವುದರಿಂದ ಸೋಂಕು ತಗಲುವ ಅಪಾಯ ಹೆಚ್ಚಾಗಿರುತ್ತದೆ. ಹಾಗೇ, ಬಾಯಿಯ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ತೀರಾ ಅತ್ಯಗತ್ಯ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ