AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೈಟ್ ಆನ್​ ಮಾಡ್ಕೊಂಡು ಮಲಗ್ತೀರಾ? ಈ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು

ಕತ್ತಲಲ್ಲಿ ಮಲಗುವುದೆಂದರೆ ಕೆಲವರಿಗೆ ಭಯ, ಇನ್ನೂ ಕೆಲವರಿಗೆ ನಿದ್ರೆ ಬರುವುದಿಲ್ಲ ಹಾಗಾಗಿ ರಾತ್ರಿಯೆಲ್ಲಾ ರೂಮಿನ್ ಲೈಟ್ ಆನ್ ಮಾಡಿಯೇ ಮಲಗುತ್ತಾರೆ. ನಾರ್ಥ್​ವೆಸ್ಟರ್ನ್​ ಮೆಡಿಸಿನ್ ನಡೆಸಿರುವ ಅಧ್ಯನವೊಂದರಲ್ಲಿ ರಾತ್ರಿ ಲೈಟ್ ಹಾಕಿಕೊಂಡು ಮಲಗುವ 63-84 ವರ್ಷದವರಲ್ಲಿ ಒಬೆಸಿಟಿ, ರಕ್ತದೊತ್ತಡ, ಹಾಗೂ ಮಧುಮೇಹ ಹೆಚ್ಚು ಕಂಡುಬಂದಿದೆ.

ಲೈಟ್ ಆನ್​ ಮಾಡ್ಕೊಂಡು ಮಲಗ್ತೀರಾ? ಈ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು
LightImage Credit source: Timesnow
TV9 Web
| Edited By: |

Updated on:Jun 25, 2022 | 2:37 PM

Share

ಕತ್ತಲಲ್ಲಿ ಮಲಗುವುದೆಂದರೆ ಕೆಲವರಿಗೆ ಭಯ, ಇನ್ನೂ ಕೆಲವರಿಗೆ ನಿದ್ರೆ ಬರುವುದಿಲ್ಲ ಹಾಗಾಗಿ ರಾತ್ರಿಯೆಲ್ಲಾ ರೂಮಿನ್ ಲೈಟ್ ಆನ್ ಮಾಡಿಯೇ ಮಲಗುತ್ತಾರೆ. ನಾರ್ಥ್​ವೆಸ್ಟರ್ನ್​ ಮೆಡಿಸಿನ್ ನಡೆಸಿರುವ ಅಧ್ಯನವೊಂದರಲ್ಲಿ ರಾತ್ರಿ ಲೈಟ್ ಹಾಕಿಕೊಂಡು ಮಲಗುವ 63-84 ವರ್ಷದವರಲ್ಲಿ ಒಬೆಸಿಟಿ, ರಕ್ತದೊತ್ತಡ, ಹಾಗೂ ಮಧುಮೇಹ ಹೆಚ್ಚು ಕಂಡುಬಂದಿದೆ.

ಕೈಯಲ್ಲಿ ಕಟ್ಟಿಕೊಳ್ಳುವಂತಹ ಡಿವೈಸ್ ಮೂಲಕ 7 ದಿನಗಳ ಕಾಲ ಟ್ರ್ಯಾಕ್ ಮಾಡಲಾಗಿದೆ. ಇದು ನೈಜ ಅಧ್ಯಯನವಾಗಿದ್ದು ರಾತ್ರಿಯಲ್ಲಿ ಯಾವುದೇ ಬೆಳಕಿಗೆ ದೇಹವೊಡ್ಡುವುದು ಸ್ಥೂಲಕಾಯತೆ, ಅಧಿಕ ರಕ್ತದೊತ್ತಡ ಮತ್ತು ವಯಸ್ಸಾದವರಲ್ಲಿ ಮಧುಮೇಹವನ್ನುಂಟುಮಾಡುತ್ತದೆ ಎಂಬುದು ಜೂನ್ 22 ರಂದು SLEEP ಜರ್ನಲ್​ನಲ್ಲಿ ಪ್ರಕಟವಾಗಿದೆ.

ಅತಿಯಾದ ಸ್ಮಾರ್ಟ್​ಫೋನ್ ಬಳಕೆ, ಇಡೀ ರಾತ್ರಿ ಟಿವಿ ನೋಡುವುದು, ಮಾಲಿನ್ಯವೂ ಕೆಲವು ಕಾಯಿಲೆಗಳಿಗೆ ಕಾರಣವಾಗುತ್ತದೆ. ವೃದ್ಧರು ಈಗಾಗಲೇ ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ. 552 ಮಂದಿಯನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಅವರನ್ನು ದಿನದಲ್ಲಿ 5 ಗಂಟೆಗಳ ಕಾಲ ಕತ್ತಲೆಯಲ್ಲಿ ಇರಿಸಲಾಗಿತ್ತು. ಇನ್ನೂ ಕೆಲವು ಮಂದಿಯನ್ನು ದಿನದ ಐದು ಗಂಟೆ ಬೆಳಕಿನಲ್ಲಿರಿಸಲಾಗಿತ್ತು.

ಲೈಟ್ ಹಾಕಿಕೊಂಡು ಮಲಗುವವರು ಮಧುಮೇಹ, ರಕ್ತದೊತ್ತಡ, ಹೈಪರ್​ಟೆನ್ಷನ್, ನಿದ್ರಾಹೀನತೆ ಸಮಸ್ಯೆ ಎದುರಿಸುತ್ತಿರುವುದು ಕಂಡುಬಂದಿದೆ. ಸಾಮಾನ್ಯವಾಗಿ ರಾತ್ರಿ ಪದೇ ಪದೇ ಬಾತ್​ರೂಂಗೆ ತೆರಳಬೇಕಾಗಿರುವವರು ಲೈಟ್ ಅನ್ನು ಆನ್​ ಮಾಡಿಟ್ಟಿರುತ್ತಾರೆ. ನಿದ್ರೆ ಮಾಡುವ ಸಮಯದಲ್ಲಿ ಆದಷ್ಟು ಬೆಳಕನ್ನು ಅವಾಯ್ಡ್​ ಮಾಡಿ.

ಒಂದೊಮ್ಮೆ ನಿಮಗೆ ಲೈಟ್ ಹಾಕಿ ಮಲಗದಿದ್ದರೆ ನಿದ್ರೆ ಬರುವುದಿಲ್ಲ ಅಂದಾದರೆ ಡಿಮ್ ಲೈಟ್ ಬಳಕೆ ಮಾಡಿ. ಬಿಳಿ ಅಥವಾ ನೀಲಿ ಲೈಟ್ ಬಳಕೆ ಮಾಡುವ ಬದಲು ಆರೆಂಜ್, ಕೆಂಪು ಲೈಟ್ ಬಳಸಿ.

ಈ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಆಧರಿಸಿರುತ್ತದೆ.

Published On - 2:37 pm, Sat, 25 June 22

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ