AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೈಟ್ ಆನ್​ ಮಾಡ್ಕೊಂಡು ಮಲಗ್ತೀರಾ? ಈ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು

ಕತ್ತಲಲ್ಲಿ ಮಲಗುವುದೆಂದರೆ ಕೆಲವರಿಗೆ ಭಯ, ಇನ್ನೂ ಕೆಲವರಿಗೆ ನಿದ್ರೆ ಬರುವುದಿಲ್ಲ ಹಾಗಾಗಿ ರಾತ್ರಿಯೆಲ್ಲಾ ರೂಮಿನ್ ಲೈಟ್ ಆನ್ ಮಾಡಿಯೇ ಮಲಗುತ್ತಾರೆ. ನಾರ್ಥ್​ವೆಸ್ಟರ್ನ್​ ಮೆಡಿಸಿನ್ ನಡೆಸಿರುವ ಅಧ್ಯನವೊಂದರಲ್ಲಿ ರಾತ್ರಿ ಲೈಟ್ ಹಾಕಿಕೊಂಡು ಮಲಗುವ 63-84 ವರ್ಷದವರಲ್ಲಿ ಒಬೆಸಿಟಿ, ರಕ್ತದೊತ್ತಡ, ಹಾಗೂ ಮಧುಮೇಹ ಹೆಚ್ಚು ಕಂಡುಬಂದಿದೆ.

ಲೈಟ್ ಆನ್​ ಮಾಡ್ಕೊಂಡು ಮಲಗ್ತೀರಾ? ಈ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು
LightImage Credit source: Timesnow
TV9 Web
| Edited By: |

Updated on:Jun 25, 2022 | 2:37 PM

Share

ಕತ್ತಲಲ್ಲಿ ಮಲಗುವುದೆಂದರೆ ಕೆಲವರಿಗೆ ಭಯ, ಇನ್ನೂ ಕೆಲವರಿಗೆ ನಿದ್ರೆ ಬರುವುದಿಲ್ಲ ಹಾಗಾಗಿ ರಾತ್ರಿಯೆಲ್ಲಾ ರೂಮಿನ್ ಲೈಟ್ ಆನ್ ಮಾಡಿಯೇ ಮಲಗುತ್ತಾರೆ. ನಾರ್ಥ್​ವೆಸ್ಟರ್ನ್​ ಮೆಡಿಸಿನ್ ನಡೆಸಿರುವ ಅಧ್ಯನವೊಂದರಲ್ಲಿ ರಾತ್ರಿ ಲೈಟ್ ಹಾಕಿಕೊಂಡು ಮಲಗುವ 63-84 ವರ್ಷದವರಲ್ಲಿ ಒಬೆಸಿಟಿ, ರಕ್ತದೊತ್ತಡ, ಹಾಗೂ ಮಧುಮೇಹ ಹೆಚ್ಚು ಕಂಡುಬಂದಿದೆ.

ಕೈಯಲ್ಲಿ ಕಟ್ಟಿಕೊಳ್ಳುವಂತಹ ಡಿವೈಸ್ ಮೂಲಕ 7 ದಿನಗಳ ಕಾಲ ಟ್ರ್ಯಾಕ್ ಮಾಡಲಾಗಿದೆ. ಇದು ನೈಜ ಅಧ್ಯಯನವಾಗಿದ್ದು ರಾತ್ರಿಯಲ್ಲಿ ಯಾವುದೇ ಬೆಳಕಿಗೆ ದೇಹವೊಡ್ಡುವುದು ಸ್ಥೂಲಕಾಯತೆ, ಅಧಿಕ ರಕ್ತದೊತ್ತಡ ಮತ್ತು ವಯಸ್ಸಾದವರಲ್ಲಿ ಮಧುಮೇಹವನ್ನುಂಟುಮಾಡುತ್ತದೆ ಎಂಬುದು ಜೂನ್ 22 ರಂದು SLEEP ಜರ್ನಲ್​ನಲ್ಲಿ ಪ್ರಕಟವಾಗಿದೆ.

ಅತಿಯಾದ ಸ್ಮಾರ್ಟ್​ಫೋನ್ ಬಳಕೆ, ಇಡೀ ರಾತ್ರಿ ಟಿವಿ ನೋಡುವುದು, ಮಾಲಿನ್ಯವೂ ಕೆಲವು ಕಾಯಿಲೆಗಳಿಗೆ ಕಾರಣವಾಗುತ್ತದೆ. ವೃದ್ಧರು ಈಗಾಗಲೇ ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ. 552 ಮಂದಿಯನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಅವರನ್ನು ದಿನದಲ್ಲಿ 5 ಗಂಟೆಗಳ ಕಾಲ ಕತ್ತಲೆಯಲ್ಲಿ ಇರಿಸಲಾಗಿತ್ತು. ಇನ್ನೂ ಕೆಲವು ಮಂದಿಯನ್ನು ದಿನದ ಐದು ಗಂಟೆ ಬೆಳಕಿನಲ್ಲಿರಿಸಲಾಗಿತ್ತು.

ಲೈಟ್ ಹಾಕಿಕೊಂಡು ಮಲಗುವವರು ಮಧುಮೇಹ, ರಕ್ತದೊತ್ತಡ, ಹೈಪರ್​ಟೆನ್ಷನ್, ನಿದ್ರಾಹೀನತೆ ಸಮಸ್ಯೆ ಎದುರಿಸುತ್ತಿರುವುದು ಕಂಡುಬಂದಿದೆ. ಸಾಮಾನ್ಯವಾಗಿ ರಾತ್ರಿ ಪದೇ ಪದೇ ಬಾತ್​ರೂಂಗೆ ತೆರಳಬೇಕಾಗಿರುವವರು ಲೈಟ್ ಅನ್ನು ಆನ್​ ಮಾಡಿಟ್ಟಿರುತ್ತಾರೆ. ನಿದ್ರೆ ಮಾಡುವ ಸಮಯದಲ್ಲಿ ಆದಷ್ಟು ಬೆಳಕನ್ನು ಅವಾಯ್ಡ್​ ಮಾಡಿ.

ಒಂದೊಮ್ಮೆ ನಿಮಗೆ ಲೈಟ್ ಹಾಕಿ ಮಲಗದಿದ್ದರೆ ನಿದ್ರೆ ಬರುವುದಿಲ್ಲ ಅಂದಾದರೆ ಡಿಮ್ ಲೈಟ್ ಬಳಕೆ ಮಾಡಿ. ಬಿಳಿ ಅಥವಾ ನೀಲಿ ಲೈಟ್ ಬಳಕೆ ಮಾಡುವ ಬದಲು ಆರೆಂಜ್, ಕೆಂಪು ಲೈಟ್ ಬಳಸಿ.

ಈ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಆಧರಿಸಿರುತ್ತದೆ.

Published On - 2:37 pm, Sat, 25 June 22

ಎಕ್ಸಾಂ ಹಾಲ್ ಟಿಕೆಟ್ ತೋರಿಸಿದ್ರೆ ಬಾಲಕರಿಗೂ ಉಚಿತ ಪ್ರಯಾಣ
ಎಕ್ಸಾಂ ಹಾಲ್ ಟಿಕೆಟ್ ತೋರಿಸಿದ್ರೆ ಬಾಲಕರಿಗೂ ಉಚಿತ ಪ್ರಯಾಣ
ಮಕ್ಕಳ ಪರೀಕ್ಷಾ ಒತ್ತಡ ನಿವಾರಣೆಗೆ ಪೋಷಕರು ಮಾಡಬೇಕಾದ್ದು ಏನು?
ಮಕ್ಕಳ ಪರೀಕ್ಷಾ ಒತ್ತಡ ನಿವಾರಣೆಗೆ ಪೋಷಕರು ಮಾಡಬೇಕಾದ್ದು ಏನು?
ಸಿಸಿಟಿವಿಯಲ್ಲಿ ಸೆರೆಯಾಯಿತು ಎದೆ ಝಲ್​​ ಎನಿಸೋ ದೃಶ್ಯ
ಸಿಸಿಟಿವಿಯಲ್ಲಿ ಸೆರೆಯಾಯಿತು ಎದೆ ಝಲ್​​ ಎನಿಸೋ ದೃಶ್ಯ
ಮಧುರ ಪ್ರೇಮಕ್ಕೆ 10 ವರ್ಷ; ಮೊದಲ ಭೇಟಿಯ ಫೋಟೋ ಹಂಚಿಕೊಂಡ ಚೈತ್ರಾ ಕುಂದಾಪುರ
ಮಧುರ ಪ್ರೇಮಕ್ಕೆ 10 ವರ್ಷ; ಮೊದಲ ಭೇಟಿಯ ಫೋಟೋ ಹಂಚಿಕೊಂಡ ಚೈತ್ರಾ ಕುಂದಾಪುರ
ಬೇಸಿಗೆಗೂ ಮುನ್ನ ಮಂತ್ರಾಲಯದಲ್ಲಿ ನೀರಿಗೆ ತತ್ವಾರ: ಪುಣ್ಯಸ್ನಾನಕ್ಕೂ ಪರದಾಟ
ಬೇಸಿಗೆಗೂ ಮುನ್ನ ಮಂತ್ರಾಲಯದಲ್ಲಿ ನೀರಿಗೆ ತತ್ವಾರ: ಪುಣ್ಯಸ್ನಾನಕ್ಕೂ ಪರದಾಟ
ಪುಸ್ತಕ ಹಿಡಿದುಕೊಂಡು ಓದಲು ಕುಳಿತಾಗಲೇ ನಿದ್ದೆ ಬರುತ್ತಾ?
ಪುಸ್ತಕ ಹಿಡಿದುಕೊಂಡು ಓದಲು ಕುಳಿತಾಗಲೇ ನಿದ್ದೆ ಬರುತ್ತಾ?
ರಾಜ್ಯ ಸರ್ಕಾರದ ಹಿರಿಯ ಸಚಿವರಲ್ಲೇ ಅಸಮಾಧಾನ: ಬೇಸರಕ್ಕೆ ಕಾರಣ ಇಲ್ಲಿದೆ
ರಾಜ್ಯ ಸರ್ಕಾರದ ಹಿರಿಯ ಸಚಿವರಲ್ಲೇ ಅಸಮಾಧಾನ: ಬೇಸರಕ್ಕೆ ಕಾರಣ ಇಲ್ಲಿದೆ
ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​