AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿರಿಧಾನ್ಯ ಬಳಸಿದರೆ ಮೆಡಿಸಿನ್​ಗಳ ಅಗತ್ಯವೇ ಇರುವುದಿಲ್ಲ; ಮಿಲೆಟ್ ಮಹಿಮೆ ಬಿಚ್ಚಿಟ್ಟ ಖಾದರ್ ವಲಿ

ವೈದ್ಯಕೀಯ ಜಗತ್ತು ಔಷಧದ ಪೂರೈಕೆಗಾಗಿ ಹರಸಾಹಸ ಪಡುತ್ತಿರುವ ಹಿನ್ನೆಲೆಯಲ್ಲಿ ಜನರು ಸಿರಿಧಾನ್ಯಗಳನ್ನು ತಿನ್ನಲು ಆರಂಭಿಸಿದರೆ ಔಷಧದ ಅಗತ್ಯವೇ ಇರುವುದಿಲ್ಲ ಎಂದು ಭಾರತದ ಮಿಲೆಟ್ ಮ್ಯಾನ್ ಎಂದೇ ಹೆಸರಾಗಿರುವ ಖಾದರ್ ವಲಿ ಹೇಳಿದ್ದಾರೆ.

ಸಿರಿಧಾನ್ಯ ಬಳಸಿದರೆ ಮೆಡಿಸಿನ್​ಗಳ ಅಗತ್ಯವೇ ಇರುವುದಿಲ್ಲ; ಮಿಲೆಟ್ ಮಹಿಮೆ ಬಿಚ್ಚಿಟ್ಟ ಖಾದರ್ ವಲಿ
ಸಿರಿಧಾನ್ಯImage Credit source: iStock
ಸುಷ್ಮಾ ಚಕ್ರೆ
|

Updated on: Oct 05, 2023 | 1:46 PM

Share

ಮಿಲೆಟ್​ನಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಕೇಂದ್ರ ಸರ್ಕಾರ ಕೂಡ ಮಿಲೆಟ್​ಗೆ ಹೆಚ್ಚಿನ ಪ್ರಚಾರ ನೀಡುತ್ತಿದ್ದು, ಜಿ20 ಶೃಂಗಸಭೆಯಲ್ಲೂ ವಿವಿಧ ದೇಶಗಳ ನಾಯಕರಿಗೆ ಸಿರಿಧಾನ್ಯಗಳಿಂದ ತಯಾರಿಸಲಾದ ಅಡುಗೆಗಳ ರುಚ ತೋರಿಸಲಾಗಿತ್ತು. ಅಲ್ಲದೆ, ಮಿಲೆಟ್ ಉತ್ಪನ್ನಗಳ ಪ್ರದರ್ಶನ ಕೂಡ ಏರ್ಪಡಿಸಲಾಗಿತ್ತು. ಭಾರತದ ಮಿಲೆಟ್ ಮ್ಯಾನ್ ಎಂದೇ ಹೆಸರಾಗಿರುವ ಖಾದರ್ ವಲಿ ಅವರು ಮಿಲೆಟ್​ನ ಪೌಷ್ಟಿಕಾಂಶದ ಪ್ರಯೋಜನಗಳ ಬಗ್ಗೆ ಮಾತನಾಡಿದ್ದಾರೆ. ಸಿರಿಧಾನ್ಯವನ್ನು ಆಹಾರದಲ್ಲಿ ಸೇರಿಸಿಕೊಂಡರೆ ಯಾವ ವೈದ್ಯರ ಅಥವಾ ಔಷಧದ ಅವಶ್ಯಕತೆಯೂ ಇರುವುದಿಲ್ಲ ಎಂದಿದ್ದಾರೆ.

ಇಂಡಿಯಾ ಟುಡೇ ಕಾನ್​ಕ್ಲೇವ್​ನಲ್ಲಿ ಸಿರಿಧಾನ್ಯಗಳ ಪ್ರಯೋಜನಗಳ ಬಗ್ಗೆ ಖಾದರ್ ವಲಿ ಮಾಹಿತಿ ನೀಡಿದ್ದಾರೆ. ಆಹಾರ ಸರಿಯಾಗಿದ್ದರೆ ಔಷಧಿಯ ಅವಶ್ಯಕತೆ ಇರುವುದಿಲ್ಲ. ಆಹಾರವೇ ಸರಿಯಿಲ್ಲದಿದ್ದರೆ ಯಾವ ಔಷಧಿಯೂ ಕೆಲಸ ಮಾಡುವುದಿಲ್ಲ. ಆಹಾರದ ಕಾರ್ಪೊರೇಟೀಕರಣವೇ ಮಿಲೆಟ್ ಕಣ್ಮರೆಯಾಗಲು ಕಾರಣ. ಸಿರಿಧಾನ್ಯಗಳನ್ನು ಮತ್ತೆ ಜನರ ಬಳಕೆಗೆ ತರುವುದು ನನ್ನ ಉದ್ದೇಶ ಎಂದು ಖಾದರ್ ಹೇಳಿದ್ದಾರೆ.

ಇದನ್ನೂ ಓದಿ: G20 ಶೃಂಗಸಭೆಯಲ್ಲಿ ಭಾಗವಹಿಸುವ ಪ್ರತಿನಿಧಿಗಳಿಗೆ ಸಸ್ಯಾಹಾರಿ ಭೋಜನ; ಸಿರಿಧಾನ್ಯವೇ ಪ್ರಧಾನ

1997ರಲ್ಲಿ ಭಾರತಕ್ಕೆ ಮರಳಿದ ಖಾದರ್ ವಲಿ ಅವರು ಅಕ್ಕಿ ಮತ್ತು ಗೋಧಿಯ ಬದಲಿಗೆ ಮಿಲೆಟ್​ ಸೇವನೆಯನ್ನು ಪ್ರತಿಪಾದಿಸಿದ್ದಾರೆ. ವೈದ್ಯಕೀಯ ಜಗತ್ತು ಔಷಧದ ಪೂರೈಕೆಗಾಗಿ ಹರಸಾಹಸ ಪಡುತ್ತಿರುವ ಹಿನ್ನೆಲೆಯಲ್ಲಿ ಜನರು ಸಿರಿಧಾನ್ಯಗಳನ್ನು ತಿನ್ನಲು ಆರಂಭಿಸಿದರೆ ಔಷಧದ ಅಗತ್ಯವೇ ಇರುವುದಿಲ್ಲ ಎಂದು ಅವರು ಹೇಳಿದ್ದಾರೆ.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರೂ ಆಗಿರುವ ಖಾದರ್ ವಲಿ ಅವರು ಸಿರಿಧಾನ್ಯದಲ್ಲಿ ಫೈಟಿಕ್ ಆಸಿಡ್ ಅಂಶದ ಬಗ್ಗೆ ಮಾತನಾಡಿ, ಇದು ಆಂಟಿನ್ಯೂಟ್ರಿಯೆಂಟ್ ಆಗಿದೆ. ದ್ವಿದಳ ಧಾನ್ಯಗಳಿಗೆ ಹೋಲಿಸಿದರೆ ಇದರಲ್ಲಿ ಫೈಟಿಕ್ ಆಮ್ಲವು 20ಪಟ್ಟು ಕಡಿಮೆಯಿದೆ. ಸಿರಿಧಾನ್ಯವನ್ನು ನೀರಿನಲ್ಲಿ ನೆನೆಸುವುದರಿಂದ ಫೈಬರ್ ಅನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್