AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

G20 ಶೃಂಗಸಭೆಯಲ್ಲಿ ಭಾಗವಹಿಸುವ ಪ್ರತಿನಿಧಿಗಳಿಗೆ ಸಸ್ಯಾಹಾರಿ ಭೋಜನ; ಸಿರಿಧಾನ್ಯವೇ ಪ್ರಧಾನ

ಭಾರತವು 2023 ಅನ್ನು 'ಸಿರಿಧಾನ್ಯದ ವರ್ಷ' ಎಂದು ಆಚರಿಸುತ್ತಿರುವುದರಿಂದ, ವಿಶೇಷ ಸಿರಿಧಾನ್ಯ ಥಾಲಿ, ಸಿರಿಧಾನ್ಯ ಪುಲಾವ್ ಮತ್ತು ಸಿರಿಧಾನ್ಯ ಇಡ್ಲಿಯಂತಹ ಭಕ್ಷ್ಯಗಳನ್ನು ನೀಡಲಾಗುವುದು ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಸ್ಟಾರ್ಟರ್ ನಿಂದ ಪ್ರಮುಖ ಭಕ್ಷ್ಯವರೆಗೆ ಪ್ರತಿನಿಧಿಗಳಿಗೆ ಸಿರಿಧಾನ್ಯ ಭಕ್ಷ್ಯವನ್ನೇ ನೀಡಲಾಗುತ್ತದೆ

G20 ಶೃಂಗಸಭೆಯಲ್ಲಿ ಭಾಗವಹಿಸುವ ಪ್ರತಿನಿಧಿಗಳಿಗೆ ಸಸ್ಯಾಹಾರಿ ಭೋಜನ; ಸಿರಿಧಾನ್ಯವೇ ಪ್ರಧಾನ
ಊಟದ ತಟ್ಟೆ
ರಶ್ಮಿ ಕಲ್ಲಕಟ್ಟ
|

Updated on: Sep 08, 2023 | 9:01 PM

Share

ದೆಹಲಿ ಸೆಪ್ಟೆಂಬರ್ 08: ದೆಹಲಿಯಲ್ಲಿ ಜಿ20 ಶೃಂಗಸಭೆ (G20 Summit) ಅಂತಿಮ ಕ್ಷಣಗಣನೆ ಆರಂಭವಾಗಿದ್ದು ಇದರಲ್ಲಿ ಪಾಲ್ಗೊಳ್ಳುವ ದೇಶದ ನಾಯಕರು ಮತ್ತು ಪ್ರತಿನಿಧಿಗಳಿಗೆ ಸಾಂಪ್ರದಾಯಿಕ ಸಸ್ಯಾಹಾರಿ ಭಕ್ಷ್ಯಗಳನ್ನು (Vegetarian Food)ನೀಡಲಾಗುತ್ತದೆ. ಸಿರಿಧಾನ್ಯದಿಂದ  ತಯಾರಿಸಿದ ಭಕ್ಷ್ಯಗಳಾಗಿರಲಿವೆ ಇವು. ಪ್ರತಿನಿಧಿಗಳ ಅಧಿಕೃತ ಭೋಜನವು ಮೊಟ್ಟೆ ಅಥವಾ ಮಾಂಸವಿಲ್ಲದೆ ಬರೀ ಸಸ್ಯಾಹಾರ ಊಟವನ್ನು ಒಳಗೊಂಡಿರುತ್ತದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಶೃಂಗಸಭೆಯಲ್ಲಿ ಪ್ರತಿನಿಧಿಗಳಿಗೆ ಸ್ಥಳೀಯ ಆಹಾರ ಮತ್ತು ಸಾಂಪ್ರದಾಯಿಕ ಭಕ್ಷ್ಯಗಳನ್ನು ಬಡಿಸಲಾಗುತ್ತದೆ.

ಜೈಪುರ ಹೌಸ್​​ನಲ್ಲಿ ಭೋಜನ

ಅಧಿಕೃತ ಭೋಜನವನ್ನು ಹೊರತುಪಡಿಸಿ, ಜೈಪುರ ಹೌಸ್‌ನಲ್ಲಿ ಆಯೋಜಿಸಲಾದ ಭೋಜನಕೂಟದಲ್ಲಿ ರಾಜ್ಯದ ಅಧಿಕಾರಿಗಳ ಮುಖ್ಯಸ್ಥರ ಸಂಗಾತಿಗಳಿಗೆ ಭಾರತದ ಪ್ರಾಚೀನ ಸಸ್ಯಾಹಾರಿ ಭಕ್ಷ್ಯಗಳನ್ನು ನೀಡಲಾಗುತ್ತದೆ. ಇಲ್ಲಿಯೂ ಸಿರಿಧಾನ್ಯದಿಂದ ಮಾಡಿದ ಭಕ್ಷ್ಯಗಳನ್ನು ಬಡಿಸಲಾಗುತ್ತದೆ. ವಿಶೇಷ ಕಾರ್ಯಕ್ರಮವು ಮುಖ್ಯ ಶೃಂಗಸಭೆಯ ಜತೆಗೇ ನಡೆಯಲಿದ್ದು, ಭಾರತದ ವಿಶಿಷ್ಟ ಸಾಂಸ್ಕೃತಿಕ ಮತ್ತು ಪಾಕಶಾಲೆಯ ಅನುಭವವನ್ನು ಮಹಿಳೆಯರಿಗೆ ಪರಿಚಯಿಸುತ್ತದೆ.

18ನೇ ವಾರ್ಷಿಕ ಜಿ20 ನಾಯಕರ ಶೃಂಗಸಭೆ ದೆಹಲಿಯ ಭಾರತ ಮಂಟಪದಲ್ಲಿ ನಡೆಯಲಿದೆ. ಇದು ಭಾರತ ಆಯೋಜಿಸಿದ ಅತ್ಯಂತ ಉನ್ನತ ಮಟ್ಟದ ಅಂತಾರಾಷ್ಟ್ರೀಯ ಶೃಂಗಸಭೆಗಳಲ್ಲಿ ಒಂದಾಗಿದೆ. ಭೇಟಿ ನೀಡುವ ನಾಯಕರು ಮತ್ತು ಪ್ರತಿನಿಧಿಗಳ ಭದ್ರತೆಯ ಹೊರತಾಗಿ, ಭಾರತೀಯ ಪಾಕಪದ್ಧತಿಯೊಂದಿಗೆ ಪ್ರತಿನಿಧಿಗಳಿಗೆ ಪರಿಚಯಿಸಲು ವಿಶೇಷ ಗಮನ ನೀಡಲಾಗುತ್ತದೆ.

ಥಾಲಿಯಲ್ಲಿ ಏನಿದೆ?

ಸಿರಿಧಾನ್ಯ ವಿಶೇಷ ಥಾಲಿ: ಭಾರತವು 2023 ಅನ್ನು ‘ಸಿರಿಧಾನ್ಯದ ವರ್ಷ’ ಎಂದು ಆಚರಿಸುತ್ತಿರುವುದರಿಂದ, ವಿಶೇಷ ಸಿರಿಧಾನ್ಯ ಥಾಲಿ, ಸಿರಿಧಾನ್ಯ ಪುಲಾವ್ ಮತ್ತು ಸಿರಿಧಾನ್ಯ ಇಡ್ಲಿಯಂತಹ ಭಕ್ಷ್ಯಗಳನ್ನು ನೀಡಲಾಗುವುದು ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಸ್ಟಾರ್ಟರ್ ನಿಂದ ಪ್ರಮುಖ ಭಕ್ಷ್ಯವರೆಗೆ ಪ್ರತಿನಿಧಿಗಳಿಗೆ ಸಿರಿಧಾನ್ಯ ಭಕ್ಷ್ಯವನ್ನೇ ನೀಡಲಾಗುತ್ತದೆ.

ವಿವಿಧ ರಾಜ್ಯಗಳ ವಿಶೇಷ ತಿನಿಸುಗಳು: ರಾಜಸ್ಥಾನದ ದಾಲ್ ಬಾಟಿ ಚುರ್ಮಾ, ಬೆಂಗಾಲಿ ರಸಗುಲ್ಲಾ, ದಕ್ಷಿಣ ಭಾರತದ ವಿಶೇಷ ಮಸಾಲಾ ದೋಸಾ ಮತ್ತು ಬಿಹಾರದ ಲಿಟ್ಟಿ ಚೋಖಾ ಮುಂತಾದ ವಿಶೇಷ ಭಕ್ಷ್ಯಗಳನ್ನು ಸಹ ಶೃಂಗಸಭೆಯ ವಿವಿಧ ಕಾರ್ಯಕ್ರಮಗಳಲ್ಲಿ ಬಡಿಸಲಾಗುತ್ತದೆ ಎಂದು ವರದಿಯಾಗಿದೆ.

ವಿಶೇಷ ಸ್ಟ್ರೀಟ್ ಫುಡ್: ಬೀದಿ ಆಹಾರಗಳಿಲ್ಲದೆ ಭಾರತಕ್ಕೆ ಭೇಟಿಯು ಅಪೂರ್ಣವಾಗಿದೆ. ಅದಕ್ಕಾಗಿಯೇ, ಪಾನಿ ಪುರಿ, ಚಟ್ಪಟಿ ಚಾಟ್, ದಹಿ ಭಲ್ಲಾ, ಸಮೋಸಾ ಮುಂತಾದ ಭಾರತೀಯ ಬೀದಿ ಆಹಾರಗಳು ಕೂಡಾ ಮೆನುವಿನಲ್ಲಿ ಸ್ಥಾನ ಪಡೆದಿದೆ.

ಇದನ್ನೂ ಓದಿ: G-20 Summit: ಅಡುಗೆಯಿಂದ ತೊಡಗಿ ಸಿರಿಧಾನ್ಯ ಕೃಷಿ ವರೆಗೆ ಹಲವು ಮಾಹಿತಿ ಪಡೆಯಲಿರುವ ಜಿ20 ದೇಶಗಳ ಮುಖ್ಯಸ್ಥರ ಪತ್ನಿಯರು

ಸುಮಾರು 200 ಕುಶಲಕರ್ಮಿಗಳು ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಹೂವಿನ ಮತ್ತು ಪ್ರಾಣಿಗಳ ಮಾದರಿಗಳೊಂದಿಗೆ 15,000 ಕ್ಕೂ ಹೆಚ್ಚು ಟೇಬಲ್ ವೇರ್ (ತಟ್ಟೆ, ಪಾತ್ರೆಗಳು) ಮಾಡಿದ್ದಾರೆ. ಈ ಪಾತ್ರೆಗಳನ್ನು ಸ್ಟೀಲ್ ಅಥವಾ ಹಿತ್ತಾಳೆಯಿಂದ ಮಾಡಲಾಗಿದ್ದು, ಬೆಳ್ಳಿಯಿಂದ ಲೇಪಿತವಾಗಿವೆ. ಟೇಬಲ್‌ವೇರ್ ತಯಾರಿಸಿದ ಕಂಪನಿಯಾದ ಐರಿಸ್ ಮೆಟಲ್‌ವೇರ್ ಪ್ರಕಾರ, ವೆಲ್ಕಂ ಡ್ರಿಂಕ್​​ನ್ನು ಚಿನ್ನ ಲೇಪಿತ ಪಾತ್ರೆಗಳಲ್ಲಿ ನೀಡಲಾಗುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?