AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Beauty Tips: ಮೊಡವೆಯಿಂದ ಮುಜುಗರ ಅನುಭವಿಸುತ್ತಿದ್ದೀರಾ? ಪುದೀನದಲ್ಲಿದೆ ಪರಿಹಾರ..

ಮೊಡವೆಗಳೆಂದರೆ ಮೈ ಕೊಡಕುವವರೆ ಹೆಚ್ಚು. ಯಾಕೆಂದರೆ ಮೊಡವೆ ವ್ಯಕ್ತಿಯನ್ನು ಮಾನಸಿಕವಾಗಿ ಕುಂಠಿತಗೊಳಿಸುತ್ತದೆ. ಕೇವಲ ಮೊಡವೆಗಳು ಎದ್ದು ಹೋದರೆ ಪರವಾಗಿಲ್ಲ. ಬಿಟ್ಟು ಹೋಗುವ ಗುರುತುಗಳು ಸೌಂದರ್ಯವನ್ನೆ ಹಾಳು ಮಾಡುತ್ತದೆ. ಕೆಲವರಿಗೆ ಮೊಡವೆ ಕಲೆಗಳು ಬೇಗ ಹೋಗುತ್ತದೆ.

Beauty Tips: ಮೊಡವೆಯಿಂದ ಮುಜುಗರ ಅನುಭವಿಸುತ್ತಿದ್ದೀರಾ? ಪುದೀನದಲ್ಲಿದೆ ಪರಿಹಾರ..
ಪುದೀನ ಸೊಪ್ಪು
sandhya thejappa
| Updated By: Skanda|

Updated on: Apr 05, 2021 | 7:19 AM

Share

ನಾನು ನೋಡಲು ಚೆನ್ನಾಗಿ ಕಾಣಬೇಕು. ನನ್ನ ಮುಖ ಎಲ್ಲರಿಗೂ ಆಕರ್ಷಣೆಯಿಂದ ತೋರಬೇಕು ಎಂದು ಯೋಚಿಸುವುದು ಸಹಜ. ಅದೇನು ತಪ್ಪಲ್ಲ. ಎಲ್ಲರಿಗಿಂತ ವಿಭಿನ್ನವಾಗಿ ಅತ್ಯಂತ ಸುಂದರವಾಗಿ ಕಾಣಬೇಕು ಎಂದು ಯೋಚಿಸುವುದನ್ನು ತಪ್ಪೆಂದು ಭಾವಿಸುವುದೇ ತಪ್ಪಾಗಿರುತ್ತದೆ. ಹೌದು ಮಾನವ ಕುಲದಲ್ಲಿ ಹೆಚ್ಚು ಸೌಂದರ್ಯಕ್ಕೆ ಒತ್ತು ಕೊಡುವುದು ಯುವ ಜನತೆ. ಹಾಗೆಂದ ಮಾತ್ರಕ್ಕೆ ಬೇರೆಯವರಿಗೆ ಸೌಂದರ್ಯದ ಬಗ್ಗೆ ಆಸಕ್ತಿಯಿಲ್ಲ ಎಂದಲ್ಲ. ಎಲ್ಲಾ ವಯಸ್ಸಿನ ವರ್ಗಕ್ಕೂ ಆಸಕ್ತಿ ಇರುತ್ತದೆ. ಆದರೆ ಯುವಕ ಯುವತಿಯರಿಗೆ ಹೆಚ್ಚು.

ಅದೇನೆ ಇರಲಿ.. ಮುಖದಲ್ಲಿ ಒಂದು ಮೊಡವೆ ಎದ್ದಿದೆ ಎಂದರೆ ಎಲ್ಲರಿಗೂ ತಲೆ ಕೆಡುತ್ತದೆ. ಮೊಡವೆಯಿಂದ ನನ್ನ ಬ್ಯೂಟಿ ಕಡಿಮೆಯಾಯಿತು ಎಂದೆಲ್ಲಾ ಯೋಚಿಸುತ್ತಾರೆ. ಮೊಡವೆಯನ್ನು ಕಡಿಮೆ ಮಾಡಿಕೊಳ್ಳಲು ಹಲವು ಪ್ರಯೋಗಗಳನ್ನು ಮಾಡುತ್ತಾರೆ. ಮಾಡುವ ಪ್ರಯೋಗಗಳಿಂದ ಕೆಲವರಿಗೆ ಮೊಡವೆ ಕಡಿಮೆಯಾದರೆ ಕೆಲವರಿಗೆ ಇನ್ನಷ್ಟು ಹೆಚ್ಚಾಗುತ್ತದೆ. ಇದರಿಂದ ಬೇಸರವಾಗಿ ಸೌಂದರ್ಯ ಕಡಿಮೆಯಾಯಿತೆಂದು ಕೊರಗುತ್ತಾರೆ. ಆದರೆ ಈ ಕೊರಗನ್ನು ಕಡಿಮೆಗೊಳಿಸಲು ಹಲವು ಆಯುರ್ವೇದ ಮದ್ದುಗಳಿವೆ. ಈ ಸಾಲಿಗೆ ಪುದೀನ ಸೊಪ್ಪು ಕೂಡಾ ಸೇರಿದೆ.

ಮೊಡವೆಗಳೆಂದರೆ ಮೈ ಕೊಡಕುವವರೆ ಹೆಚ್ಚು. ಯಾಕೆಂದರೆ ಮೊಡವೆ ವ್ಯಕ್ತಿಯನ್ನು ಮಾನಸಿಕವಾಗಿ ಕುಂಠಿತಗೊಳಿಸುತ್ತದೆ. ಕೇವಲ ಮೊಡವೆಗಳು ಎದ್ದು ಹೋದರೆ ಪರವಾಗಿಲ್ಲ. ಬಿಟ್ಟು ಹೋಗುವ ಗುರುತುಗಳು ಸೌಂದರ್ಯವನ್ನೆ ಹಾಳು ಮಾಡುತ್ತದೆ. ಕೆಲವರಿಗೆ ಮೊಡವೆ ಕಲೆಗಳು ಬೇಗ ಹೋಗುತ್ತದೆ. ಇನ್ನು ಕೆಲವರಿಗೆ ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ. ಆದಷ್ಟು ಬೇಗ ಮೊಡವೆ ಗುರುತುಗಳನ್ನು ಕಡಿಮೆಗೊಳಿಸಬೇಕೆಂದರೆ ಪುದೀನ ಮೊರೆ ಹೋಗಬೇಕು. ಸೌಂದರ್ಯ ಮತ್ತು ಚರ್ಮದ ಆರೈಕೆಯಲ್ಲಿ ಪುದೀನ ಪ್ರಮುಖ ಸ್ಥಾನವನ್ನು ಹೊಂದಿದೆ. ಹಾಗಾದರೆ ಈ ಪುದೀನ ಸೊಪ್ಪಿನಿಂದ ಮೊಡವೆ ಗುರುತುಗಳನ್ನು ಕಡಿಮೆಗೊಳಿಸುವುದು ಹೇಗೆ ಎಂದು ನೀವು ಯೋಚಿಸುತ್ತಿದ್ದರೆ… ಇಲ್ಲಿದೆ ಪರಿಹಾರ.

ಮೊಡವೆಗಳು

ಪುದೀನ ಎಲೆಗಳನ್ನು ಚೆನ್ನಾಗಿ ತೊಳೆದು ಅದಕ್ಕೆ ಸ್ವಲ್ಪ ನೀರನ್ನು ಸೇರಿಸಿ ಪೇಸ್ಟ್ ಮಾಡಿಕೊಳ್ಳಬೇಕು. ಮೊಡವೆ ಮೇಲೆ ಸಿದ್ಧವಾಗಿರುವ ಪುದೀನ ಪೇಸ್ಟ್​​ ಹಚ್ಚಿ ಸ್ವಲ್ಪ ಸಮಯದ ಬಳಿಕ ತೊಳೆಯಬೇಕು. ಪುದೀನ ಎಲೆಗಳು ಆಂಟಿಮೈಕ್ರೋಬಿಯಲ್ ಅಂಶ, ಮೊಡವೆ ಉಂಟುಮಾಡುವ ಬ್ಯಾಕ್ಟೀರಿಯಾವನ್ನು ಕಡಿಮೆಗೊಳಿಸುವ ಸಾಮರ್ಥ್ಯ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುವ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ. ಇದು ಮೊಡವೆಗಳ ಗುರುತುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಪುದೀನ ಎಲೆಗಳು ಮತ್ತು ಜೇನುತುಪ್ಪ ಪುದೀನ ಎಲೆಗಳು ಮತ್ತು ಜೇನುತುಪ್ಪವನ್ನು ಸೇರಿಸಿ ಪೇಸ್ಟ್ ಮಾಡಿ ಮೊಡವೆಗೆ ಹಚ್ಚಬೇಕು. ಒಣ ಚರ್ಮ (ಡ್ರೈ ಸ್ಕಿನ್) ಹೊಂದಿರುವವರಿಗೆ ಇದು ಉತ್ತಮವಾಗಿದೆ. ಜೇನುತುಪ್ಪ ಮತ್ತು ಪುದಿನ ಎರಡೂ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಅದು ಮೊಡವೆಗಳ ವಿರುದ್ಧ ಹೋರಾಡುತ್ತವೆ.

ರೋಸ್ ವಾಟರ್ ಮತ್ತು ಪುದೀನ ಪುಡಿ ಮಾಡಿದ ಪುದೀನ ಎಲೆಗಳಲ್ಲಿ ರೋಸ್ ವಾಟರ್​ನ ಬೆರೆಸಿ ಮೊಡವೆಗಳಿಗೆ ಹಚ್ಚಿದರೆ ಚರ್ಮವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ಚರ್ಮವನ್ನು ಮೃದುವಾಗಿರಿಸುತ್ತದೆ.

ಪುದೀನ, ಆಲಿವ್ ಮತ್ತು ನಿಂಬೆ ರಸ ಪುಡಿಮಾಡಿದ ಪುದಿನ ಎಲೆಗಳನ್ನು ಆಲಿವ್ ಎಣ್ಣೆ ಮತ್ತು ನಿಂಬೆ ರಸದೊಂದಿಗೆ ಬೆರೆಸಿ. ಮೊಡವೆ ಮೇಲೆ ಲೇಪಿಸಿದ ನಂತರ ಅದನ್ನು ಸರಿಯಾಗಿ ಮಸಾಜ್ ಮಾಡಬೇಕು. ಸುಮಾರು 15 ನಿಮಿಷಗಳ ಕಾಲ ಮಸಾಜ್ ಮಾಡಿ ನಂತರ ಮುಖವನ್ನು ತಣ್ಣೀರಿನಿಂದ ತೊಳೆದುಕೊಳ್ಳಬೇಕು. ಈ ಮಸಾಜ್​ನಿಂದ ಬ್ಯಾಕ್ಟೀರಿಯಾವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.

(Mint leaves best solution for pimples)

ಇದನ್ನೂ ಓದಿ

Health Tips: ಈ ಔಷಧೀಯ ಸಸ್ಯಗಳು ನಿಮ್ಮ ಗಾರ್ಡನ್​​ನಲ್ಲಿ ಇರಲಿ; ಅಡುಗೆಗೂ ಆಯಿತು.. ಆರೋಗ್ಯಕ್ಕೂ ಒಳ್ಳೆಯದು

Health: ಗಂಟುಮೂಳೆ ಬದಲಾವಣೆ ಶಸ್ತ್ರಚಿಕಿತ್ಸೆ ಬಳಿಕ ಜೀವನಕ್ರಮ ಹೇಗಿರಬೇಕು? ಜನರ ಸಹಜ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!