AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನರಗಳ ಸಮಸ್ಯೆಯನ್ನು ಪ್ರಾರಂಭದಲ್ಲೇ ಗುರುತಿಸಲು ಶೇ.60ರಷ್ಟು ಜನರು ವಿಫಲರಾಗುತ್ತಾರೆ; ಸಮೀಕ್ಷೆ

ದೇಹಕ್ಕೆ ಬೇಕಾದ ಜೀವಸತ್ವಗಳು ಮತ್ತು ವಿಟಮಿನ್​ಗಳನ್ನು ಆಹಾರದಿಂದ ಪಡೆಯಬೇಕು. ಇದರಲ್ಲಿ ಸಮಸ್ಯೆ ಏನೆಂದರೆ ಅಗತ್ಯವಾದ ವಿಟಮಿನ್ ಬಿ12 ಅಂಶವನ್ನು ಜನರು ಕಡೆಗಣಿಸುತ್ತಾರೆ.

ನರಗಳ ಸಮಸ್ಯೆಯನ್ನು ಪ್ರಾರಂಭದಲ್ಲೇ ಗುರುತಿಸಲು ಶೇ.60ರಷ್ಟು ಜನರು ವಿಫಲರಾಗುತ್ತಾರೆ; ಸಮೀಕ್ಷೆ
ಸಾಂದರ್ಭಿಕ ಚಿತ್ರ
TV9 Web
| Updated By: shruti hegde|

Updated on: Sep 05, 2021 | 11:07 AM

Share

ಭಾರತದಲ್ಲಿ ಶೇ. 60ರಷ್ಟು ಜನರು ನರಗಳ ಸಮಸ್ಯೆಯನ್ನು ಪ್ರಾರಂಭದಲ್ಲೇ ಗುರುತಿಸಲು ವಿಫಲರಾಗುತ್ತಿದ್ದಾರೆ ಎಂಬುದು ಗುರುವಾರ ಬಿಡುಗಡೆಗೊಂಡ ಆರೋಗ್ಯ ಸಮೀಕ್ಷೆಯಿಂದ ತಿಳಿದು ಬಂದಿದೆ. ಹೀಲ್ ಹೆಲ್ತ್ ಸಂಶೋಧನೆಯಿಂದ ತಿಳಿದು ಬಂದಂತೆ ಭಾರತದಲ್ಲಿ 12 ನಗರಗಳನ್ನು ಆಯ್ದು 1,800 ಸ್ಪಂದಕರೊಂದಿಗೆ ಸಮೀಕ್ಷೆ ನಡೆಸಲಾಯಿತು. ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ ಶೇ. 90ರಷ್ಟು ಆರೋಗ್ಯಕರ ನರಗಳು ಮುಖ್ಯವೆಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಆದರೆ ಕೇವಲ ಶೇ. 38ರಷ್ಟು ಜನರು ನರಗಳು ರಕ್ತನಾಳಗಳಿಗಿಂತ ಭಿನ್ನ ಎಂದು ತಿಳಿದಿದ್ದಾರೆ. ಜನರಿಗೆ ಸೀಮಿತವಾದ ಜ್ಞಾನವಿದೆ ಎಂಬುದು ಸಂಶೋಧನೆಯಿಂದ ತಿಳಿದು ಬಂದಿದೆ. ಬಿ ಜೀವಸತ್ವಗಳ ಕೊರತೆಯು ನರಗಳ ಹಾನಿಗೆ ಕಾರಣವಾಗುತ್ತದೆ ಎಂದು ತಜ್ಞರು ಮಾಹಿತಿ ಹಂಚಿಕೊಂಡಿದ್ದಾರೆ. ಈ ಕುರಿತಂತೆ ಟೈಮ್ಸ್ ನೌ ನ್ಯೂಸ್ ವರದಿ ಮಾಡಿದೆ.

ಇದರ ಜತೆಗೆ ವಿಟಮಿನ್ ಬಿ ಕೊರತೆಯಿಂದ ಜನರು ದುರ್ಬಲ ನರಗಳನ್ನು ಹೊಂದುತ್ತಿದ್ದಾರೆ. ಅಪೌಷ್ಟಿಕತೆಯಿಂದಾಗಿ ನಿಮ್ಮ ನರಗಳು ಶಕ್ತಿಯನ್ನು ಪಡೆಯುತ್ತಿಲ್ಲ. ವಿಟಮಿನ್ ಬಿ12 ಕೊರತೆಯು ಭಾರತದಲ್ಲಿ ಅತ್ಯಂತ ಸಾಮಾನ್ಯವಾಗಿದೆ. ಇತರ ಆರೋಗ್ಯ ಕೊರತೆಗಳ ಜತೆಗೆ ಅನುಚಿತ ಆಹಾರ ಮತ್ತು ಜೀವನ ಶೈಲಿಯ ಬದಲಾವಣೆಗಳಿಂದಾಗಿ ಅಪೌಷ್ಟಿಕತೆಯು ಕಾಡುತ್ತಿದೆ.

ದೇಹಕ್ಕೆ ಬೇಕಾದ ಜೀವಸತ್ವಗಳು ಮತ್ತು ವಿಟಮಿನ್​ಗಳನ್ನು ಆಹಾರದಿಂದ ಪಡೆಯಬೇಕು. ಇದರಲ್ಲಿ ಸಮಸ್ಯೆ ಏನೆಂದರೆ ಅಗತ್ಯವಾದ ವಿಟಮಿನ್ ಬಿ12 ಅಂಶವನ್ನು ಜನರು ಕಡೆಗಣಿಸುತ್ತಾರೆ. ಹಾಗಾಗಿಯೇ ಜನರಲ್ಲಿ ಈ ಅಂಶ ಕಡಿಮೆಯಾಗುತ್ತಿದೆ, ವಿಶೇಷವಾಗಿ ವಯಸ್ಸಾದವರಲ್ಲಿ ಎಂದು ಬಾಂಬೆ ಹಾಸ್ಪಿಟಲ್ ಇನ್​ಸ್ಟಿಟ್ಯೂಟ್​ ಆಫ್ ಮೆಡಿಕಲ್ ಸೈನ್ಸ್​ನ ಹೆಚ್ಒಡಿ ಡಾ. ಸತೀಶ್ ಖಾದಿಲ್ಕರ್ ಹೇಳಿದ್ದಾರೆ.

ಶೇ. 73ರಷ್ಟು ಜನರು ತರಕಾರಿಗಳನ್ನು ಅವಲಂಬಿಸಿದ್ದಾರೆ. ಶೇ. 69ರಷ್ಟು ಜನರು ವಿಟಮಿನ್ ಬಿ12ಗಾಗಿ ಹಣ್ಣುಗಳನ್ನು ಅವಲಂಬಿಸಿದ್ದಾರೆ ಎಂಬುದು ರಾಷ್ಟ್ರೀಯ ಸಮೀಕ್ಷೆಯ ಫಲಿತಾಂಶದಿಂದ ತಿಳಿದು ಬಂದಿದೆ. ಉತ್ತಮ ಪೌಷ್ಟಿಕಾಂಶವು ಸಾಮಾನ್ಯವಾಗಿ ನರಗಳ ಆರೋಗ್ಯ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ನೀವು ಸೇವಿಸುವ ಆಹಾರವು ನಿಮ್ಮ ನರಮಂಡಲದ ಕಾರ್ಯ ಚಟುವಟಿಕೆಯನ್ನು ಸುಧಾರಿಸತ್ತದೆ ಎಂದು ಭಾರತೀಯ ವೈದ್ಯ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಡಾ. ತಿವಾಸ್ಕರ್ ಹೇಳಿದ್ದಾರೆ.

ಇದನ್ನೂ ಓದಿ:

Health Tips: ಯಕೃತ್ತು ಆರೋಗ್ಯ ಸುಧಾರಿಸಲು ಸೇವಿಸಬೇಕಾದ ಆಹಾರ ಪದಾರ್ಥಗಳು

Health Tips: ಉತ್ತಮ ಆರೋಗ್ಯಕ್ಕಾಗಿ ಈ ಸಲಹೆಗಳು; ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಸುಲಭ ಮಾರ್ಗಗಳು

(Mote Then 60 percent Indian people have poor nerve health Ignored survey)

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ