AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಸಡುಗಳಲ್ಲಿ ರಕ್ತಸ್ರಾವ ಆಗುತ್ತಿದೆಯೇ? ಈ ಮನೆಮದ್ದು ಉಪಯೋಗಿಸಿ ನೋಡಿ!

ಒಂದು ಚಮಚ ಎಣ್ಣೆಯನ್ನು (ತೆಂಗಿನಕಾಯಿ ಅಥವಾ ಎಳ್ಳಿನ ಎಣ್ಣೆಯಂತಹವು) ನಿಮ್ಮ ಬಾಯಿಯಲ್ಲಿ ಹಾಕಿ ಮತ್ತು ಹಲ್ಲುಗಳ ಸುತ್ತ ಚೆನ್ನಾಗಿ ಮುಕ್ಕಳಿಸಿಕೊಳ್ಳಿ. ಆಯಿಲ್ ಪುಲ್ಲಿಂಗ್ ನಿಮ್ಮ ಬಾಯಿಯಿಂದ ಹಾನಿಕಾರಕ ಬ್ಯಾಕ್ಟೀರಿಯಾವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ಒಸಡುಗಳಲ್ಲಿ ರಕ್ತಸ್ರಾವ ಆಗುತ್ತಿದೆಯೇ? ಈ ಮನೆಮದ್ದು ಉಪಯೋಗಿಸಿ ನೋಡಿ!
ಒಸಡುಗಳಲ್ಲಿ ರಕ್ತಸ್ರಾವ ಆಗುತ್ತಿದೆಯೇ?
TV9 Web
| Updated By: ಸಾಧು ಶ್ರೀನಾಥ್​|

Updated on: Mar 21, 2023 | 6:06 AM

Share

ಒಸಡುಗಳಲ್ಲಿ ರಕ್ತಸ್ರಾವವಾಗುವುದೇ? ಈ ಮನೆಮದ್ದು ಉಪಯೋಗಿಸಿ ನೋಡಿ! ಒಸಡುಗಳಲ್ಲಿ ರಕ್ತಸ್ರಾವವಾಗುವುದು ಅನೇಕ ಜನರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಯಾಗಿದೆ. ಇಲ್ಲಿ ನಿಮ್ಮ ಒಸಡುಗಳನ್ನು ಆರೋಗ್ಯಕರವಾಗಿಡಲು ಮತ್ತು ರಕ್ತಸ್ರಾವವನ್ನು ತಡೆಯಲು ಸಹಾಯ ಮಾಡುವ ನೈಸರ್ಗಿಕ ಪರಿಹಾರಗಳ ಬಗ್ಗೆ ತಿಳಿದುಕೊಳ್ಳೋಣ.. ಒಸಡುಗಳ ರಕ್ತಸ್ರಾವವು ಅನೇಕ ಜನರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಯಾಗಿದೆ. ಕಳಪೆ ಮೌಖಿಕ ನೈರ್ಮಲ್ಯ (Dental Care), ವಸಡು ಕಾಯಿಲೆ, ಹಾರ್ಮೋನುಗಳ ಬದಲಾವಣೆಗಳು ಅಥವಾ ಕೆಲವು ಔಷಧಿಗಳ ಅಡ್ಡ ಪರಿಣಾಮದಂತಹ ಅನೇಕ ಕಾರಣಗಳಿಂದ ಇದು ಉಂಟಾಗಬಹುದು. ಇದಕ್ಕೆ ಸೂಕ್ತ ಚಿಕಿತ್ಸೆ ನೀಡದೆ ಬಿಟ್ಟರೆ, ಇದು ಹಲ್ಲುಗಳು ಕೊಳೆಯುವುದು, ಒಸಡಿನಲ್ಲಿ ಊತ (Swollen Gums) ಮತ್ತು ಕೆಂಪು, ಉರಿಯೂತದ ಒಸಡು, ಒಸಡುಗಳ ಸೋಂಕು (ಜಿಂಗೈವಿಟಿಸ್‌) ಅಂತಹ ಹೆಚ್ಚು ಗಂಭೀರವಾದ ಮೌಖಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಈಗ ನಿಮ್ಮ ಒಸಡುಗಳನ್ನು ಆರೋಗ್ಯಕರವಾಗಿಡಲು ಮತ್ತು ರಕ್ತಸ್ರಾವವನ್ನು (Bleeding Gums) ತಡೆಯಲು ಸಹಾಯ ಮಾಡುವ ನೈಸರ್ಗಿಕ ಪರಿಹಾರಗಳ ಬಗ್ಗೆ ತಿಳಿಯೋಣ (Dental Health Tips).

ಬಾಯಿಯ ನೈರ್ಮಲ್ಯವು ಮುಖ್ಯವಾಗಿದೆ. ಉತ್ತಮ ಟೂತ್‌ಪೇಸ್ಟ್‌ನಿಂದ ದಿನಕ್ಕೆ ಎರಡು ಬಾರಿ ನಿಮ್ಮ ಹಲ್ಲುಗಳನ್ನು ಉಜ್ಜುವುದು, ಪ್ರತಿದಿನ ಫ್ಲೋಸ್ ಮಾಡುವುದು ಮತ್ತು ಆಂಟಿಬ್ಯಾಕ್ಟೀರಿಯಲ್ ಮೌತ್‌ವಾಶ್ ಅನ್ನು ಬಳಸುವುದರಿಂದ ನಿಮ್ಮ ಬಾಯಿ ಆರೋಗ್ಯಕರವಾಗಿರುತ್ತದೆ. ಹಲ್ಲು ಸದಾ ಶುದ್ಧವಾಗಿರಬೆಕು. ಇದರಿಂದ ನಿಮ್ಮ ಹಲ್ಲುಗಳು ಮತ್ತು ಒಸಡುಗಳನ್ನು ಸಹ ಆರೋಗ್ಯಕರವಾಗಿರುತ್ತದೆ. ಇದು ನಿಮ್ಮ ಹಲ್ಲುಗಳ ನಡುವಿನ ಬ್ಯಾಕ್ಟೀರಿಯಾವನ್ನು ತೆಗೆದುಹಾಕುತ್ತದೆ. ಆ ರೀತಿಯಲ್ಲಿ ನಿಮ್ಮ ಒಸಡುಗಳನ್ನು ಕೆರಳಿಸುವ ಮತ್ತು ರಕ್ತಸ್ರಾವಕ್ಕೆ ಕಾರಣವಾಗುವ ಹಾನಿಕಾರಕ ಪದಾರ್ಥಗಳ ಸಂಗ್ರಹವನ್ನು ನೀವು ತಡೆಯಬಹುದು.

ಉಪ್ಪು ನೀರಿನಿಂದ ತೊಳೆಯಿರಿ.. ಉಪ್ಪು ನೈಸರ್ಗಿಕ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇವು ಬ್ಯಾಕ್ಟೀರಿಯಾವನ್ನು ಕೊಲ್ಲುವುದು. ನಿಮ್ಮ ಒಸಡುಗಳಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಒಂದು ಕಪ್ ಬೆಚ್ಚಗಿನ ನೀರಿನಲ್ಲಿ ಅರ್ಧ ಟೀ ಚಮಚ ಉಪ್ಪನ್ನು ಕರಗಿಸಿ ಮತ್ತು 30 ಸೆಕೆಂಡುಗಳ ಕಾಲ ಚೆನ್ನಾಗಿ ಗಾರ್ಗಲ್ (Gargle) ಮಾಡಿ.

ಆಯಿಲ್ ಪುಲ್ಲಿಂಗ್: ಒಂದು ಚಮಚ ಎಣ್ಣೆಯನ್ನು (ತೆಂಗಿನಕಾಯಿ ಅಥವಾ ಎಳ್ಳಿನ ಎಣ್ಣೆಯಂತಹವು) ನಿಮ್ಮ ಬಾಯಿಯಲ್ಲಿ ಹಾಕಿ ಮತ್ತು ಹಲ್ಲುಗಳ ಸುತ್ತ ಚೆನ್ನಾಗಿ ಮುಕ್ಕಳಿಸಿಕೊಳ್ಳಿ. ಆಯಿಲ್ ಪುಲ್ಲಿಂಗ್ ನಿಮ್ಮ ಬಾಯಿಯಿಂದ ಹಾನಿಕಾರಕ ಬ್ಯಾಕ್ಟೀರಿಯಾವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದು ನಿಮ್ಮ ಒಸಡುಗಳಲ್ಲಿನ ಉರಿಯೂತವನ್ನು ಸಹ ಕಡಿಮೆ ಮಾಡುತ್ತದೆ.

ವಿಟಮಿನ್ ಸಿ: ವಿಟಮಿನ್ ಸಿ ಸಮೃದ್ಧವಾಗಿರುವ ಆಹಾರವನ್ನು ಹೆಚ್ಚು ಸೇವಿಸುವುದರಿಂದ ನಿಮ್ಮ ವಸಡುಗಳನ್ನು ಆರೋಗ್ಯವಾಗಿಡಬಹುದು. ವಿಟಮಿನ್ ಸಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬೆಂಬಲಿಸುವ ಉತ್ಕರ್ಷಣ ನಿರೋಧಕವಾಗಿದೆ. ಆರೋಗ್ಯಕರ ಗಮ್ ಅಂಗಾಂಶವನ್ನು ಉತ್ತೇಜಿಸುತ್ತದೆ. ನಿಂಬೆ, ಕಿತ್ತಳೆ, ಕಿವಿ, ಸ್ಟ್ರಾಬೆರಿ ಮತ್ತು ಬೆಲ್ ಪೆಪರ್ ನಂತಹ ಆಹಾರಗಳಲ್ಲಿ ವಿಟಮಿನ್ ಸಿ ಅಧಿಕವಾಗಿರುತ್ತದೆ.

Alo Read:

ಅನಾರೋಗ್ಯಕರ ಒಸಡು ರಕ್ತಸ್ರಾವಕ್ಕೆ ಕಾರಣವಾಗಿರಬಹುದು; ಇಲ್ಲಿವೆ ನೀವು ಗಮನಿಸಬೇಕಾದ ಅಂಶಗಳು

ಹಸಿರು ಚಹಾ: ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ನಿಮ್ಮ ಒಸಡುಗಳಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ಬಾಯಿಯಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯುತ್ತದೆ. ದಿನಕ್ಕೆ ಒಂದರಿಂದ ಎರಡು ಕಪ್ ಗ್ರೀನ್ ಟೀ ಕುಡಿಯುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು.

ತಂಬಾಕು ಸೇವನೆಯಿಂದ ದೂರವಿರಿ: ತಂಬಾಕು ಉತ್ಪನ್ನಗಳ ಸೇವನೆಯಿಂದ ಒಸಡಿನ ರಕ್ತಸ್ರಾವ ಮತ್ತು ಇತರ ಬಾಯಿಯ ಆರೋಗ್ಯ ಸಮಸ್ಯೆಗಳನ್ನು ತಡೆಯಬಹುದು. ತಂಬಾಕು ಸೇವನೆಯು ನಿಮ್ಮ ಒಸಡುಗಳನ್ನು ಕೆರಳಿಸಬಹುದು. ಒಸಡು ಕಾಯಿಲೆಯು ಅಪಾಯವನ್ನು ಹೆಚ್ಚಿಸುತ್ತದೆ, ಇದು ರಕ್ತಸ್ರಾವ ಮತ್ತು ಇತರ ತೊಡಕುಗಳಿಗೆ ಕಾರಣವಾಗಬಹುದು.

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ