AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Women’s Health: ಮಹಿಳೆಯರಲ್ಲಿ ಈ ಲಕ್ಷಣಗಳು ಕ್ಯಾನ್ಸರ್​​​ನ ಆರಂಭಿಕ ಚಿಹ್ನೆಗಳಾಗಿರಬಹುದು

ಅಂಡಾಶಯದ ಕ್ಯಾನ್ಸರ್​​ನ ಆರಂಭದ ಹಂತದಲ್ಲಿ ಹಸಿವು ಕಡಿಮೆಯಾಗುವುದು, ಬೇಗನೆ ಹೊಟ್ಟೆ ತುಂಬಿದ ಅನುಭವ. ಆದ್ದರಿಂದ ಯಾವುದೇ ಚಿಕ್ಕ ಚಿಕ್ಕ ಸಮಸ್ಯೆಗಳು ಬಂದರೂ ಕೂಡ ನಿರ್ಲಕ್ಷ್ಯ ಬೇಡ.

Women's Health: ಮಹಿಳೆಯರಲ್ಲಿ ಈ ಲಕ್ಷಣಗಳು ಕ್ಯಾನ್ಸರ್​​​ನ ಆರಂಭಿಕ ಚಿಹ್ನೆಗಳಾಗಿರಬಹುದು
ಅಂಡಾಶಯದ ಕ್ಯಾನ್ಸರ್ Image Credit source: Mayo Clinic
Follow us
ಅಕ್ಷತಾ ವರ್ಕಾಡಿ
|

Updated on: Mar 12, 2023 | 4:07 PM

ಸಂತಾನೋತ್ಪತ್ತಿ ವ್ಯವಸ್ಥೆಯಲ್ಲಿ ಎರಡು ಅಂಡಾಶಯಗಳಿವೆ. ಈ ಅಂಡಾಶಯದಲ್ಲಿ ಪ್ರೊಜೆಸ್ಟರಾನ್ ಮತ್ತು ಈಸ್ಟ್ರೊಜೆನ್ ಹಾರ್ಮೋನುಗಳು ಉತ್ಪತ್ತಿಯಾಗುತ್ತವೆ, ಪ್ರತಿಯೊಂದೂ ಸರಿಸುಮಾರು ಬಾದಾಮಿ ಗಾತ್ರವನ್ನು ಹೊಂದಿರುತ್ತದೆ. ನಿಮ್ಮ ಅಂಡಾಶಯದಲ್ಲಿ ಕೆಲವೊಂದು ಲಕ್ಷಣಗಳು ಕಂಡುಬಂದರೆ ಎಂದಿಗೂ ನಿರ್ಲಕ್ಷ್ಯಿಸದಿರಿ. ನೀವು ನಿರ್ಲಕ್ಷ್ಯಿಸುತ್ತಾ ಹೋದ ಹಾಗೆ ಕಾಲಕ್ರಮೇಣ ಇದು ಕ್ಯಾನ್ಸರ್​​ಗೆ ಕಾರಣವಾಗಬಹುದು.

ನೀವು ಗಮನಿಸಬೇಕಾದ ಅಂಡಾಶಯದ ಕ್ಯಾನ್ಸರ್ ಎಚ್ಚರಿಕೆ ಚಿಹ್ನೆಗಳು:

ಮಲಬದ್ಧತೆ:

ಕರುಳಿನ ಆರೋಗ್ಯಕ್ಕೆ ಸಂಬಂಧಿಸಿದಂತೆ ಅಂಡಾಶಯದ ಕ್ಯಾನ್ಸರ್​​​ನ ಒಂದು ಸಾಮಾನ್ಯ ಲಕ್ಷಣವೆಂದರೆ ಮಲಬದ್ಧತೆ. ಜೀವನಶೈಲಿಯ ಬದಲಾವಣೆ ಮತ್ತು ಔಷಧಿಯ ನಂತರವೂ ಮಲಬದ್ಧತೆ ನಿರಂತರವಾಗಿದ್ದರೆ, ವೈದ್ಯರನ್ನು ಭೇಟಿಯಾವುದು ಅಗತ್ಯವಾಗಿದೆ.

ನಿರಂತರ ನೋವು:

ಒಂದರಿಂದ ಮೂರು ವಾರಗಳವರೆಗೆ ಅಥವಾ ಹೊಟ್ಟೆ ಮತ್ತು ಸೊಂಟದಲ್ಲಿನ ನಿರಂತರ ಒತ್ತಡದಿಂದ ಬೆನ್ನುನೋವಿನ ಲಕ್ಷಣಗಳು ಕಂಡುಬರಬಹುದು. ಇಂತಹ ಸಮಸ್ಯೆಗಳು ಬಿಟ್ಟು ಬಿಟ್ಟು ಕಾಡುತ್ತಿದ್ದರೆ ಇದು ಅಂಡಾಶಯದ ಕ್ಯಾನ್ಸರ್ ಎಚ್ಚರಿಕೆ ಚಿಹ್ನೆಗಳಾಗಿರಬಹುದು. ಆದ್ದರಿಂದ ಬೆನ್ನು ನೋವಿನಂತಹ ಲಕ್ಷಣ ಕಂಡುಬಂದರೆ ನಿರ್ಲಕ್ಷ್ಯಿಸದಿರಿ.

ಇದನ್ನೂ ಓದಿ: ನಿದ್ದೆ ಹೃದಯದ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ತಿಳಿದಿದೆಯೇ?

ಕಳಪೆ ಹಸಿವು:

ಅಂಡಾಶಯದ ಕ್ಯಾನ್ಸರ್​​​ನ ಒಂದು ಸಾಮಾನ್ಯ ಲಕ್ಷಣವೆಂದರೆ ಹಸಿವಾಗದೇ ಇರುವುದು . ಅಂಡಾಶಯದ ಕ್ಯಾನ್ಸರ್​​ನ ಆರಂಭದ ಹಂತದಲ್ಲಿ ಹಸಿವು ಕಡಿಮೆಯಾಗುವುದು, ಬೇಗನೆ ಹೊಟ್ಟೆ ತುಂಬಿದ ಅನುಭವ. ಆದ್ದರಿಂದ ಯಾವುದೇ ಚಿಕ್ಕ ಚಿಕ್ಕ ಸಮಸ್ಯೆಗಳು ಬಂದರೂ ಕೂಡ ನಿರ್ಲಕ್ಷ್ಯ ಬೇಡ.

ಗಾಳಿಗುಳ್ಳೆಯ ಸಮಸ್ಯೆಗಳು:

ಮೂತ್ರ ವಿಸರ್ಜಿಸುವಾಗ ಅಸ್ವಸ್ಥತೆ ಅಥವಾ ತುರ್ತು ಮೂತ್ರ ವಿಸರ್ಜನೆಯಂತಹ ತೊಂದರೆಗಳನ್ನು ಹೊಂದಿರುವಾಗ ಮೂತ್ರನಾಳದ ಸೋಂಕು ಮಹಿಳೆಯರಲ್ಲಿ ಆಗಾಗ ಕಂಡುಬರುತ್ತದೆ. ಆದರೆ, ಗಾಳಿಗುಳ್ಳೆಯೊಂದಿಗಿನ ಸಮಸ್ಯೆಗಳು ಅಂಡಾಶಯದ ಕ್ಯಾನ್ಸರ್​​​ನಂತಹ ಸ್ತ್ರೀರೋಗ ಅಥವಾ ಸಂತಾನೋತ್ಪತ್ತಿ ಸ್ಥಿತಿಯ ಸೂಚನೆಯಾಗಿರಬಹುದು. ಮೂತ್ರಕೋಶದಲ್ಲಿ ನೋವು ಅಥವಾ ಒತ್ತಡವನ್ನು ಅನುಭವಿಸುವುದು, ಆಗಾಗ್ಗೆ ಮೂತ್ರ ವಿಸರ್ಜನೆ ಮಾಡುವುದು ಇತ್ಯಾದಿಗಳು ಅಂಡಾಶಯದ ಕ್ಯಾನ್ಸರ್​​ನ ಚಿಹ್ನೆಗಳಾಗಿರಬಹುದು.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ
ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ
ಸೊಸೆ ರಾಧಿಕಾ ನನಗೆ ಗುಡ್ ಎನ್ನಬೇಕು: ಸಿನಿಮಾ ಕನಸು ಹೇಳಿಕೊಂಡ ಯಶ್ ತಾಯಿ
ಸೊಸೆ ರಾಧಿಕಾ ನನಗೆ ಗುಡ್ ಎನ್ನಬೇಕು: ಸಿನಿಮಾ ಕನಸು ಹೇಳಿಕೊಂಡ ಯಶ್ ತಾಯಿ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ನಮ್ಮ ಬ್ಯಾನರ್ 2ನೇ ಸಿನಿಮಾ ಶರಣ್ ಜತೆ: ಸಿಹಿ ಸುದ್ದಿ ನೀಡಿದ ಯಶ್ ತಾಯಿ
ನಮ್ಮ ಬ್ಯಾನರ್ 2ನೇ ಸಿನಿಮಾ ಶರಣ್ ಜತೆ: ಸಿಹಿ ಸುದ್ದಿ ನೀಡಿದ ಯಶ್ ತಾಯಿ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಶಿವರಾಜ್ ಕುಮಾರ್​ಗಾಗಿ ಸಿನಿಮಾ ನಿರ್ಮಿಸುವಾಸೆ ವ್ಯಕ್ತಪಡಿಸಿದ ಯಶ್ ತಾಯಿ
ಶಿವರಾಜ್ ಕುಮಾರ್​ಗಾಗಿ ಸಿನಿಮಾ ನಿರ್ಮಿಸುವಾಸೆ ವ್ಯಕ್ತಪಡಿಸಿದ ಯಶ್ ತಾಯಿ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ