AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ayuverda: ಆಯುರ್ವೇದದ ಪ್ರಕಾರ ಉತ್ತಮ ನಿದ್ರೆಗೆ ಪಿಸ್ತಾ ಸೇವಿಸಿ; ಹೆಚ್ಚಿನ ಮಾಹಿತಿ ಇಲ್ಲಿದೆ

ನಿದ್ರೆಯ ಸಮಸ್ಯೆ ಕಾಡುತ್ತಿದೆಯೇ? ಮಲಗುವ ಒಂದು ಗಂಟೆಯ ಮೊದಲು ಒಂದಿಷ್ಟು ಪಿಸ್ತಾಗಳು ನಿಮಗೆ ಒಳ್ಳೆಯ ನಿದ್ರೆಗೆ ಸಹಾಯ ಮಾಡುತ್ತದೆ.

Ayuverda: ಆಯುರ್ವೇದದ ಪ್ರಕಾರ ಉತ್ತಮ ನಿದ್ರೆಗೆ ಪಿಸ್ತಾ ಸೇವಿಸಿ; ಹೆಚ್ಚಿನ ಮಾಹಿತಿ ಇಲ್ಲಿದೆ
Pistachio health benefitsImage Credit source: PharmEasy
Follow us
ನಯನಾ ಎಸ್​ಪಿ
|

Updated on:Mar 23, 2023 | 3:45 PM

ಆಧುನಿಕ ಕಾಲದಲ್ಲಿ ಅನಾರೋಗ್ಯಕರ ಜೀವನಶೈಲಿ (Unhealthy Lifestyle) ಆಯ್ಕೆಗಳು ಮತ್ತು ತಡವಾಗಿ ನಿದ್ದೆ (Late Sleep Cycle) ಮಾಡುವ ಅಭ್ಯಾಸ ನಿದ್ರೆಯ ಸಮಸ್ಯೆಗೆ ಕಾರಣವಾಗಿದೆ. ಗ್ಯಾಜೆಟ್‌ಗಳನ್ನು (Gadgets) ಮಲಗುವ ಕೋಣೆಗೆ ತೆಗೆದುಕೊಂಡು ಹೋಗುವುದು ಮತ್ತು ಭಾರೀ ರಾತ್ರಿಯ ಊಟವನ್ನು ತಿನ್ನುವುದು ನಿದ್ರೆಯ ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು. ಆದಾಗ್ಯೂ, ಕೆಲವು ಪೋಷಕಾಂಶಗಳ ಕೊರತೆಯು ನಿದ್ರೆಯ ಸಮಸ್ಯೆಗಳಿಗೆ ಕಾರಣವಾಗಬಹುದು. ವಿಟಮಿನ್ ಎ, ಸಿ, ಡಿ, ಇ, ಮತ್ತು ಕೆ, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ನಂತಹ ಪೋಷಕಾಂಶಗಳ ಅಸಮರ್ಪಕ ಸೇವನೆಯು ನಿದ್ರೆಯ ತೊಂದರೆಗೆ ಸಂಬಂಧಿಸಿದೆ ಎಂದು ಕೆಲವು ಅಧ್ಯಯನ ಸೂಚಿಸುತ್ತವೆ.

ಕೆಲವು ಸಂದರ್ಭಗಳಲ್ಲಿ, ವಿಟಮಿನ್ಗಳ ಮಿತಿಮೀರಿದ ಸೇವನೆಯು ನಿದ್ರಾಹೀನತೆಗೆ ಕಾರಣವಾಗಬಹುದು. ಬೀಜಗಳು, ಹಣ್ಣುಗಳು ಮತ್ತು ತರಕಾರಿಗಳಂತಹ ಆಹಾರಗಳು ವಿಟಮಿನ್‌ಗಳ ಮೂಲವಾಗಿದೆ ಮತ್ತು ಅವುಗಳಲ್ಲಿ ಕೆಲವು ನಿದ್ರೆಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಹಾಯ ಮಾಡುತ್ತದೆ. ಉದಾಹರಣೆಗೆ, ಪಿಸ್ತಾವು ಆಯುರ್ವೇದದ ಪ್ರಕಾರ ನಿದ್ರೆಯ ಸಮಸ್ಯೆಗಳಿಗೆ ಅತ್ಯುತ್ತಮವಾದ ಬೀಜ ಎಂದು ಕರೆಯಲ್ಪಡುತ್ತದೆ ಏಕೆಂದರೆ ಇದು ಅತ್ಯಧಿಕ ಪ್ರಮಾಣದ ಮೆಲಟೋನಿನ್ ಅನ್ನು ಹೊಂದಿದ್ದು, ಇದು ಉತ್ತಮ ಮತ್ತು ದೀರ್ಘ ನಿದ್ರೆಗೆ ಸಹಾಯ ಮಾಡುತ್ತದೆ. ಇದು ಮೆಗ್ನೀಸಿಯಮ್ ಮತ್ತು ವಿಟಮಿನ್ ಬಿ 6 ಅನ್ನು ದೇಹಕ್ಕೆ ಪೂರೈಸಲು ಸಹಾಯ ಮಾಡುತ್ತದೆ, ಇದು ಶಾಂತ ನಿದ್ರೆಗೆ ಸಹಾಯ ಮಾಡುತ್ತದೆ.

“ಪಿಸ್ತಾಗಳು ಅತ್ಯಧಿಕ ಪ್ರಮಾಣದ ಮೆಲಟೋನಿನ್ ಅನ್ನು ಹೊಂದಿರುತ್ತವೆ ಅದಕ್ಕಾಗಿಯೇ ಅವು ಉತ್ತಮ ನಿದ್ರೆಗೆ ಸೂಕ್ತ ಆಹಾರವಾಗಿದೆ. ಮೆಲಟೋನಿನ್ ನಮಗೆ ಹೆಚ್ಚು ಸಮಯ ನಿದ್ರಿಸಲು ಮತ್ತು ತ್ವರಿತವಾಗಿ ನಿದ್ರಿಸಲು ಸಹಾಯ ಮಾಡುತ್ತದೆ. ಇದು ನಮ್ಮ ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ, ಇದು ಎಲ್ಲಾ ದೈಹಿಕ, ಮಾನಸಿಕ ಚಿಕಿತ್ಸೆಗಾಗಿ ಕಡ್ಡಾಯವಾಗಿದೆ. – ಆರೋಗ್ಯ ಮತ್ತು ಸ್ವಯಂ ನಿರೋಧಕ ಅಸ್ವಸ್ಥತೆಗಳು, ಪಿಸ್ತಾ ತಿನ್ನುವುದು ನಮ್ಮ ದೇಹಕ್ಕೆ ಮೆಗ್ನೀಸಿಯಮ್ ಮತ್ತು ವಿಟಮಿನ್ ಬಿ 6 ಅನ್ನು ಒದಗಿಸುತ್ತದೆ.

ಮೆಗ್ನೀಸಿಯಮ್ ನಿಮಗೆ ಆಳವಾದ ಮತ್ತು ಶಾಂತ ನಿದ್ರೆಯನ್ನು ಸಾಧಿಸಲು ಸಹಾಯ ಮಾಡುತ್ತದೆ. ವಿಟಮಿನ್ ಬಿ 6 ಕೂಡ ಈ ಪಟ್ಟಿಗೆ ಸೇರಿದೆ. GABA, ಟ್ರಿಪ್ಟೊಫಾನ್ ಮತ್ತು ಸಿರೊಟೋನಿನ್ ಸಂಶ್ಲೇಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇವೆಲ್ಲವೂ ನಿದ್ರೆಯ ಮೇಲೆ ಪರಿಣಾಮ ಬೀರುತ್ತವೆ.ಟ್ರಿಪ್ಟೊಫಾನ್ ಒಂದು ಅಮೈನೋ ಆಮ್ಲವಾಗಿದ್ದು, ಸಿರೊಟೋನಿನ್ ಉತ್ಪಾದನೆಯಲ್ಲಿ ಪಾತ್ರವಹಿಸುತ್ತದೆ, ಇದು ನಮ್ಮ ಮನಸ್ಥಿತಿಯನ್ನು ಸ್ಥಿರಗೊಳಿಸಲು ಸಹಾಯ ಮಾಡುವ ‘ಸಂತೋಷದ ಹಾರ್ಮೋನ್’, “ಎಂದು ಆಯುರ್ವೇದ ತಜ್ಞ ಡಾ. ದಿಕ್ಸಾ ಭಾವಸರ್ ತಮ್ಮ ಇತ್ತೀಚಿನ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಬರೆದಿದ್ದರೆ

ಇದನ್ನೂ ಓದಿ: ಮಗುವಿನಂತ ಮೃದುವಾದ ಕೈಗಳನ್ನು ಪಡೆಯಲು 5 ಮನೆಮದ್ದು

ಪಿಸ್ತಾದ ಹಲವು ಪ್ರಯೋಜನಗಳು:

ಪಿಸ್ತಾವನ್ನು ನಿಯಮಿತವಾಗಿ ಸೇವಿಸುವುದರಿಂದ ಆಗುವ ಅನೇಕ ಪ್ರಯೋಜನಗಳನ್ನು ವಿವರಿಸುತ್ತಾ, ಆಯುರ್ವೇದ ತಜ್ಞರು ದೈಹಿಕ ಮತ್ತು ಮಾನಸಿಕ ಆರೋಗ್ಯದ ಹಲವಾರು ಅಂಶಗಳನ್ನು ಹೆಚ್ಚಿಸಲು ಅದ್ಭುತವಾದ ಬೀಜಗಳು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ವಿವರಿಸುತ್ತಾರೆ.

“ಆಯುರ್ವೇದದ ಪ್ರಕಾರ, ಪಿಸ್ತಾಗಳು ವಾತ-ಶಮಕ, ಗುರು ಮತ್ತು ಉಷ್ಣಗಳಾಗಿವೆ, ಇದು ಆತಂಕ, ನಿದ್ರಾಹೀನತೆ, ಬುದ್ದಿಹೀನ ಆಹಾರದ ಕಡುಬಯಕೆಗಳು ಮತ್ತು ಸ್ಥೂಲಕಾಯತೆ ಹೊಂದಿರುವ ಜನರಿಗೆ ಇವು ಅತ್ಯತ್ತಮ ಆಹಾರ. ಪಿಸ್ತಾ ಹಸಿವು, ಲೈಂಗಿಕ ಶಕ್ತಿ, ಮನಸ್ಥಿತಿ ಮತ್ತು ನಿದ್ರೆಯನ್ನು ಸುಧಾರಿಸುತ್ತದೆ. ಹೃದಯಕ್ಕೂ ಉತ್ತಮವಾಗಿದೆ ” ಎಂದು ಡಾ. ಭಾವಸರ್ ಹೇಳುತ್ತಾರೆ.

ಉತ್ತಮ ನಿದ್ರೆಗಾಗಿ ಪಿಸ್ತಾವನ್ನು ಸೇವಿಸಲು ಸೂಕ್ತ ಸಮಯ

“ಆದ್ದರಿಂದ ನೀವು ಉತ್ತಮ ನಿದ್ರೆ ಪಡೆಯಲು ಹೆಣಗಾಡುತ್ತಿದ್ದಾರೆ ಮೆಗ್ನೀಸಿಯಮ್ ಮತ್ತು ಮೆಲಟೋನಿನ್ ಮಾತ್ರೆಗಳನ್ನು ಸೇವಿಸುವುದಕ್ಕಿಂತ ಮಲಗುವ ಸಮಯಕ್ಕೆ 1 ಗಂಟೆ ಮೊದಲು ಪಿಸ್ತಾಗಳನ್ನು ಸೇವಿಸಲು ನಾನು ಸಲಹೆ ನೀಡುತ್ತೇನೆ” ಎಂದು ತಜ್ಞರು ಹೇಳುತ್ತಾರೆ.

ಉತ್ತಮ ಗುಣಮಟ್ಟದ ನಿದ್ರೆಗಾಗಿ ಇತರ ಪರಿಹಾರಗಳನ್ನು ಸೂಚಿಸುತ್ತಾ, ಡಾ. ಭಾವಸರ್ ಅವರು ನಿದ್ರಾಹೀನತೆ (ನಿದ್ರೆಯ ನಷ್ಟ), ತೊಂದರೆಗೆ ಆಯುರ್ವೇದ ಗಿಡಮೂಲಿಕೆಗಳಾದ ಬ್ರಾಹ್ಮಿ, ಅಶ್ವಗಂಧ, ಜಟಮಾನ್ಸಿ, ಟಗರ್, ಶಾಖಪುಷ್ಪಿ ಮತ್ತು ಇತರ ಒತ್ತಡ ನಿವಾರಣೆ ಮತ್ತು ನಿದ್ರೆಯನ್ನು ಸುಧಾರಿಸುವ ಗಿಡಮೂಲಿಕೆಗಳನ್ನು ನಿದ್ರೆ ಮಾಡುವ ಮೊದಲು ಸೇವಿಸಬಹುದು. ಹಾಲು ಅಥವಾ ನೀರಿನೊಂದಿಗೆ ಮಲಗುವ ಸಮಯದಲ್ಲಿ ಗಿಡಮೂಲಿಕೆಗಳು ಪ್ರಯೋಜನಕಾರಿಯಾಗುತ್ತದೆ ಎಂದು ಹೇಳಿದರು.

Published On - 1:41 pm, Thu, 23 March 23

ಸೀಟ್​​ ಸಿಗದಿದ್ದಕ್ಕೆ ಬಸ್​ ಮುಂದೆ ಮಲಗಿದ ವೃದ್ಧ: ಮುಂದೇನಾಯ್ತು?
ಸೀಟ್​​ ಸಿಗದಿದ್ದಕ್ಕೆ ಬಸ್​ ಮುಂದೆ ಮಲಗಿದ ವೃದ್ಧ: ಮುಂದೇನಾಯ್ತು?
ತಮ್ಮ ಬೀಗ ಬೈರತಿ ಸುರೇಶ್​ಗೂ ಖಡ್ಗ ನೀಡಿ ಗೌರವಿಸಿದ ವಿಶ್ವನಾಥ್
ತಮ್ಮ ಬೀಗ ಬೈರತಿ ಸುರೇಶ್​ಗೂ ಖಡ್ಗ ನೀಡಿ ಗೌರವಿಸಿದ ವಿಶ್ವನಾಥ್
ಅಶ್ರಫ್ ಕೊಲೆ ಪ್ರಕರಣಕ್ಕೆ ನ್ಯಾಯ ಕೇಳಿದ ಮುಸ್ಲಿಂ ಮುಖಂಡರು
ಅಶ್ರಫ್ ಕೊಲೆ ಪ್ರಕರಣಕ್ಕೆ ನ್ಯಾಯ ಕೇಳಿದ ಮುಸ್ಲಿಂ ಮುಖಂಡರು
ಕನ್ನಡ ಚಿತ್ರರಂಗದಿಂದ ಸೋನು ನಿಗಂಗೆ ನಿಷೇಧ: ಉಮೇಶ್ ಬಣಕಾರ್ ಹೇಳಿದ್ದೇನು?
ಕನ್ನಡ ಚಿತ್ರರಂಗದಿಂದ ಸೋನು ನಿಗಂಗೆ ನಿಷೇಧ: ಉಮೇಶ್ ಬಣಕಾರ್ ಹೇಳಿದ್ದೇನು?
ಪ್ರವಾದಿ ಮೊಹಮ್ಮದ್ ವಿಷಯದಲ್ಲಿ ಯತ್ನಾಳ್ ಮಾತಾಡಿದ್ದು ತಪ್ಪು: ಎಂಬಿ ಪಾಟೀಲ್
ಪ್ರವಾದಿ ಮೊಹಮ್ಮದ್ ವಿಷಯದಲ್ಲಿ ಯತ್ನಾಳ್ ಮಾತಾಡಿದ್ದು ತಪ್ಪು: ಎಂಬಿ ಪಾಟೀಲ್
ಐಪಿಎಲ್ ಧಡೂತಿ ಲೀಗ್​ ಆಗಿ ಬದಲಾದ್ರೆ ಹೇಗಿರುತ್ತೆ? ಇಲ್ಲಿದೆ ವಿಡಿಯೋ
ಐಪಿಎಲ್ ಧಡೂತಿ ಲೀಗ್​ ಆಗಿ ಬದಲಾದ್ರೆ ಹೇಗಿರುತ್ತೆ? ಇಲ್ಲಿದೆ ವಿಡಿಯೋ
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಚಿಕ್ಕಮಗಳೂರಿನಲ್ಲಿ ಬಿಗಿ ಬಂದೋಬಸ್ತ್
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಚಿಕ್ಕಮಗಳೂರಿನಲ್ಲಿ ಬಿಗಿ ಬಂದೋಬಸ್ತ್
ಬನಸಗೌಡ ಯತ್ನಾಳ್ ಮಾಧ್ಯಮದವರ ಕೈಗೆ ಸಿಗುತ್ತಿಲ್ಲವಂತಲ್ಲ? ಜಮೀರ್ ಅಹ್ಮದ್
ಬನಸಗೌಡ ಯತ್ನಾಳ್ ಮಾಧ್ಯಮದವರ ಕೈಗೆ ಸಿಗುತ್ತಿಲ್ಲವಂತಲ್ಲ? ಜಮೀರ್ ಅಹ್ಮದ್
ಮೇ 6ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿಟ್ಟಿರುವ ದಕ್ಷಿಣ ಕನ್ನಡ ಜಿಲ್ಲಾಡಳಿತ
ಮೇ 6ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿಟ್ಟಿರುವ ದಕ್ಷಿಣ ಕನ್ನಡ ಜಿಲ್ಲಾಡಳಿತ
ಪಾಕಿಸ್ತಾನ ವಿರುದ್ಧ ಬಾಂಬ್ ಕಟ್ಕೊಂಡು ಯುದ್ಧಕ್ಕೆ ಹೋಗ್ತೀನಿ: ಸಚಿವ ಜಮೀರ್
ಪಾಕಿಸ್ತಾನ ವಿರುದ್ಧ ಬಾಂಬ್ ಕಟ್ಕೊಂಡು ಯುದ್ಧಕ್ಕೆ ಹೋಗ್ತೀನಿ: ಸಚಿವ ಜಮೀರ್