Pregnancy Kit: ಪ್ರೆಗ್ನೆನ್ಸಿ ಕಿಟ್ ಬಳಸುವುದು ಹೇಗೆ? ಹಂತಗಳನ್ನು ತಿಳಿಯಿರಿ

ಗರ್ಭಾವಸ್ಥೆ ಎಂಬುದು ಪ್ರತಿಯೊಂದು ಹೆಣ್ಣೂ ಸಂಭ್ರಮಿಸುವಂತಹ ಸಂದರ್ಭ. ಸ್ತ್ರೀರೋಗತಜ್ಞರು ಅಥವಾ ರಕ್ತಪರೀಕ್ಷೆಯ ಆಧಾರದ ಮೇಲೆ ಗರ್ಭಧಾರಣೆಯನ್ನು ಖಚಿತಪಡಿಸಿಕೊಳ್ಳುವ ದಿನಗಳು ಕಳೆದುಹೋಗಿವೆ.

Pregnancy Kit: ಪ್ರೆಗ್ನೆನ್ಸಿ ಕಿಟ್ ಬಳಸುವುದು ಹೇಗೆ? ಹಂತಗಳನ್ನು ತಿಳಿಯಿರಿ
Pregnancy Kit
Follow us
| Updated By: ನಯನಾ ರಾಜೀವ್

Updated on: Jul 11, 2022 | 7:07 PM

ಗರ್ಭಾವಸ್ಥೆ ಎಂಬುದು ಪ್ರತಿಯೊಂದು ಹೆಣ್ಣೂ ಸಂಭ್ರಮಿಸುವಂತಹ ಸಂದರ್ಭ. ಸ್ತ್ರೀರೋಗತಜ್ಞರು ಅಥವಾ ರಕ್ತಪರೀಕ್ಷೆಯ ಆಧಾರದ ಮೇಲೆ ಗರ್ಭಧಾರಣೆಯನ್ನು ಖಚಿತಪಡಿಸಿಕೊಳ್ಳುವ ದಿನಗಳು ಕಳೆದುಹೋಗಿವೆ. ಈಗ ಮನೆಯಲ್ಲೇ ಕುಳಿತು ನೀವು ಗರ್ಭಿಣಿಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಬಹುದಾಗಿದೆ. ಸರಳ ಕಿಟ್‌ಗಳ ಸಹಾಯದಿಂದ, ಮನೆಯಲ್ಲಿ ಪರಿಶೀಲಿಸುವುದು ಸುಲಭವಾಗಿದೆ ಮತ್ತು ಸರಳ ವಿಧಾನಕ್ಕೆ ವೈದ್ಯಕೀಯ ನೆರವು ಅಗತ್ಯವಿರುವುದಿಲ್ಲ.

ಪ್ರಿಸ್ಕ್ರಿಪ್ಷನ್ ಅಗತ್ಯವಿಲ್ಲದೇ ಯಾವುದೇ ಔಷಧಾಲಯದಲ್ಲಿ ಗರ್ಭಧಾರಣೆಯ ಪರೀಕ್ಷಾ ಕಿಟ್ ಅನ್ನು ಪಡೆಯಬಹುದು.

ಗರ್ಭಧಾರಣೆಯ ಪರೀಕ್ಷಾ ಕಿಟ್ ಹೇಗೆ ಕೆಲಸ ಮಾಡುತ್ತದೆ? ಗರ್ಭಧಾರಣೆಯ ಪರೀಕ್ಷಾ ಕಿಟ್ ಮೂತ್ರದಲ್ಲಿ ಹ್ಯೂಮನ್ ಕೋರಿಯಾನಿಕ್ ಗೊನಡೋಟ್ರೋಪಿನ್ (hCG) ಪ್ರಮಾಣವನ್ನು ಪರಿಶೀಲಿಸುತ್ತದೆ. ಮನೆಯಲ್ಲಿಯೇ ಇರುವ ಕಿಟ್‌ಗಳು, ಲ್ಯಾಬ್ ಕಿಟ್‌ಗಳಿಗಿಂತ ಭಿನ್ನವಾಗಿ, ಫಲಿತಾಂಶಗಳು ಧನಾತ್ಮಕ ಅಥವಾ ಋಣಾತ್ಮಕವಾಗಿದೆಯೇ ಎಂಬುದನ್ನು ತೋರಿಸಲು ಮೂತ್ರದಲ್ಲಿನ ಹಾರ್ಮೋನ್ ಮಟ್ಟವನ್ನು ಮೌಲ್ಯಮಾಪನ ಮಾಡುತ್ತದೆ.

ದೇಹದಲ್ಲಿ hCG ಮಟ್ಟವನ್ನು ರಕ್ತ ಮತ್ತು ಮೂತ್ರದಲ್ಲಿ ಕಂಡುಹಿಡಿಯಲಾಗುತ್ತದೆ. ದೇಹದಲ್ಲಿ ಈ ಹಾರ್ಮೋನ್ ಮಟ್ಟವನ್ನು ಹೆಚ್ಚಿಸಲು ಸಮಯ ತೆಗೆದುಕೊಳ್ಳುತ್ತದೆ.

ಪರೀಕ್ಷಾ ಕಿಟ್​ನಿಂದ ಫಲಿತಾಂಶ ತಿಳಿಯುವುದು ಹೇಗೆ? ಮೂತ್ರದ ಕೆಲವು ಹನಿಗಳನ್ನು ತೆಗೆದುಕೊಂಡು ನಂತರ ಅವುಗಳನ್ನು ಪರೀಕ್ಷೆಯ ಕಿಟ್​ನ ಆರಂಭದಲ್ಲಿರುವ ದೊಡ್ಡ ರಂಧ್ರದಲ್ಲಿ ಹಾಕಬೇಕು. ಗೋಚರಿಸುವ ಗುಲಾಬಿ ರೇಖೆಗಳ ಸಂಖ್ಯೆ ಮತ್ತು ಪ್ರಕಾರವನ್ನು ಆಧರಿಸಿ, ಪರೀಕ್ಷೆಯು ಧನಾತ್ಮಕ, ಋಣಾತ್ಮಕ ಅಥವಾ ಅಮಾನ್ಯವೇ ಎಂಬುದನ್ನು ಪರೀಕ್ಷಿಸಬಹುದು.

1 ಗುಲಾಬಿ ಸಾಲು – ಋಣಾತ್ಮಕ 2 ಗುಲಾಬಿ ರೇಖೆಗಳು – ಧನಾತ್ಮಕ ಯಾವುದೇ ಗುಲಾಬಿ ಗೆರೆಗಳಿಲ್ಲ – ಕಿಟ್ ಸರಿಯಾಗಿಲ್ಲವೆಂದು ಅರ್ಥ. ಗರ್ಭಧಾರಣೆಯ ಪರೀಕ್ಷಾ ಕಿಟ್‌ನಿಂದ ನಿಖರವಾದ ಫಲಿತಾಂಶಗಳನ್ನು ಖಚಿತಪಡಿಸಿಕೊಳ್ಳಲು ಸಲಹೆಗಳು -ಬೆಳಗ್ಗೆ ಮೊದಲು ವಿಸರ್ಜಿಸುವ ಮೂತ್ರವನ್ನು ತೆಗೆದುಕೊಳ್ಳಬೇಕು -ಪರೀಕ್ಷಾ ಕಿಟ್​ ಅನ್ನು ಕಿಟಕಿಗಳಿಂದ ದೂರವಿಡಬೇಕು -ಮೂತ್ರವನ್ನು ಶುಷ್ಕ ಮತ್ತು ಸ್ವಚ್ಛವಾದ ಪಾತ್ರೆಯಲ್ಲಿ ಇರಿಸಿ -ಬಳಿಕ ಪರೀಕ್ಷಾ ಕಿಟ್​ಗೆ ಹಾಕಿ ಪರೀಕ್ಷೆ ಮಾಡಬೇಕು

ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು