AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇಸಿಗೆಯಲ್ಲಿ ಮಾವಿನ ಕಾಯಿ ಸೇವಿಸುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು

ಮಾವಿನ ಕಾಯಿ ಒಂದು ಬೇಸಿಗೆಯ ಹಣ್ಣಾಗಿದ್ದು, ಜನರು ಅದನ್ನು ಸೇವಿಸಲು ಇಷ್ಟಪಡುತ್ತಾರೆ. ತಾಪಮಾನವು ಹೆಚ್ಚಾದಾಗ ನೀವು ಈ ಹುಲಿ-ಸಿಹಿ ಮಾವಿನ ಕಾಯಿ ಸೇವಿಸುವುದರಿಂದ ನಿಮ್ಮ ಆರೋಗ್ಯಕ್ಕೆ ಸಿಗುವ ಉಪಯೋಗಗಳ ಬಗ್ಗೆ ತಿಳಿಯಿರಿ

ಬೇಸಿಗೆಯಲ್ಲಿ ಮಾವಿನ ಕಾಯಿ ಸೇವಿಸುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು
ಮಾವಿನ ಕಾಯಿ ಪ್ರಯೋಜನಗಳು
Follow us
ನಯನಾ ಎಸ್​ಪಿ
|

Updated on: Apr 30, 2023 | 11:38 AM

ಮಾವಿನ ಕಾಯಿ (Raw Mango) ಬೇಸಿಗೆಯ ಹಣ್ಣುಗಳಲ್ಲಿ ಒಂದಾಗಿದೆ, ಇದು ಬಹಳಷ್ಟು ಬಾಲ್ಯದ ನೆನಪುಗಳನ್ನು ತರುತ್ತದೆ. ಇದನ್ನು ಕೆಂಪು ಮೆಣಸಿನ ಪುಡಿ ಮತ್ತು ಉಪ್ಪಿನೊಂದಿಗೆ ತಿನ್ನುವುದು ಅಥವಾ ಉಪ್ಪಿನಕಾಯಿ ಮಾಡಲು ಬಳಸುವುದು, ಹೀಗೆ ಹಲವಾರು ರುಚಿಕರ ಅಡುಗೆಯನ್ನು ಮಾಡಲು ಬಳಸುತ್ತೇವೆ. ಮಾವಿನ ಕಾಯಿ ಜೀವಸತ್ವಗಳು, ಖನಿಜಗಳು (Nutrition) ಮತ್ತು ಉತ್ಕರ್ಷಣ ನಿರೋಧಕಗಳಿಂದ (antioxidants) ಕೂಡಿದ್ದು ಅದು ನಮ್ಮ ದೇಹವನ್ನು ಆರೋಗ್ಯಕರವಾಗಿರಲು ಸಹಾಯ ಮಾಡುತ್ತದೆ. ಈ ಬೇಸಿಗೆಯಲ್ಲಿ ನೀವು ಬಳಸಬಹುದಾದ ಮಿತವಾಗಿ ಮಾವಿನ ಕಾಯಿ ಸೇವಿಸಿ ಆರೋಗ್ಯ ಪ್ರಯೋಜನಗಳನ್ನು ಪಡೆಯಿರಿ

ಮಾವಿನ ಕಾಯಿಯಿಂದ ಆರೋಗ್ಯ ಪ್ರಯೋಜನಗಳು:

ಇದು ವಿಟಮಿನ್ ಎ, ಬಿ6, ಸಿ ಮತ್ತು ಕೆ ಯ ಉತ್ತಮ ಮೂಲವಾಗಿದೆ ಮತ್ತು ಪೊಟ್ಯಾಸಿಯಮ್‌ನಂತಹ ಖನಿಜಗಳಿಂದ ಕೂಡಿದೆ.

1. ಮಾವಿನ ಕಾಯಿ ದೇಹವನ್ನು ಹೈಡ್ರೇಟ್ ಮಾಡುತ್ತದೆ

ಮಾವಿನ ಕಾಯಿಯಲ್ಲಿ ಸೋಡಿಯಂ ಕ್ಲೋರೈಡ್, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಫಾಸ್ಫರಸ್, ವಿಟಮಿನ್ ಸಿ, ಕ್ಯಾಲ್ಸಿಯಂ ಮತ್ತು ಕಬ್ಬಿಣವು ಸಮೃದ್ಧವಾಗಿದೆ, ಇದು ಬೇಸಿಗೆಯಲ್ಲಿ ಅತಿಯಾದ ಬೆವರುವಿಕೆಯಿಂದ ಕಳೆದುಹೋಗುವ ಎಲೆಕ್ಟ್ರೋಲೈಟ್‌ಗಳನ್ನು ಪಡೆಯಲು ಸಹಾಯ ಮಾಡುತ್ತದೆ. ಇದು ತ್ವರಿತ ಶಕ್ತಿಯನ್ನು ನೀಡುತ್ತದೆ, ಆಯಾಸವನ್ನು ತಡೆಯುತ್ತದೆ.

2. ಮಾವಿನ ಕಾಯಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಮಾವಿನ ಕಾಯಿ ಸೇವಿಸುವುದರಿಂದ ದೈನಂದಿನ ವಿಟಮಿನ್ ಎ ಮತ್ತು ಸಿ ಪೂರೈಸಲು ಸಹಾಯ ಮಾಡುತ್ತದೆ. ಇದು ಬಿಳಿ ರಕ್ತ ಕಣಗಳ ಸಂಶ್ಲೇಷಣೆಗೆ ಮುಖ್ಯವಾಗಿದೆ, ಆದ್ದರಿಂದ ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ. ಇದು ವೈರಸ್ ಮತ್ತು ಬ್ಯಾಕ್ಟೀರಿಯಾದಿಂದ ಉಂಟಾಗುವ ಸಾಮಾನ್ಯ ಶೀತ ಸೋಂಕು ಮತ್ತು ಜ್ವರವನ್ನು ತಡೆಯುತ್ತದೆ.

3. ಮಾವಿನ ಕಾಯಿ ಮೂಳೆಯ ಆರೋಗ್ಯವನ್ನು ಸುಧಾರಿಸುತ್ತದೆ

ಇದು ಕಾಲಜನ್ ರಚನೆಗೆ ಸಹಾಯ ಮಾಡುವ ವಿಟಮಿನ್ ಸಿ ಯಿಂದ ತುಂಬಿರುವುದರಿಂದ, ಇದು ಸಂಯೋಜಕ ಅಂಗಾಂಶಗಳನ್ನು ನಿರ್ವಹಿಸುತ್ತದೆ. ನಿಮ್ಮ ಮೂಳೆಗಳನ್ನು ಬಲಪಡಿಸಲು ವಿಟಮಿನ್ ಕೆ ಸಹ ಮುಖ್ಯವಾಗಿದೆ.

4. ಮಾವಿನ ಕಾಯಿ ಮಲಬದ್ಧತೆಯನ್ನು ತಡೆಯುತ್ತದೆ

ಒಂದು ಮಧ್ಯಮ ಗಾತ್ರದ ಮಾವಿನ ಕಾಯಿ ಸುಮಾರು 2.64 ಗ್ರಾಂ ಫೈಬರ್ ಅನ್ನು ನೀಡುತ್ತದೆ, ಅದರಲ್ಲಿ ಕರಗುವ ಫೈಬರ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದು ಮಲದಲ್ಲಿ ಬೃಹತ್ ಪ್ರಮಾಣದಲ್ಲಿ ರೂಪುಗೊಳ್ಳುತ್ತದೆ ಮತ್ತು ಆದ್ದರಿಂದ, ಮಲಬದ್ಧತೆ ಮತ್ತು ಜೀರ್ಣಕಾರಿ ಸಮಸ್ಯೆಗಳನ್ನು ತಡೆಯುತ್ತದೆ.

5. ತೀವ್ರವಾದ ಶಾಖದಿಂದ ಕಾಪಾಡುತ್ತದೆ

ಒಂದು ಲೋಟ ಮಾವಿನ ಕಾಯಿ ರಸವು ವರ್ಕ್ ಔಟ್ ಮಾಡಿದ ನಂತರ ಉತ್ತಮ ರಿಫ್ರೆಶ್ ಮೆಂಟ್ ಡ್ರಿಂಕ್ ಆಗಿದೆ. ಇದು ಸುಡುವ ಶಾಖದ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ ಮತ್ತು ದೇಹದಲ್ಲಿನ ಸೋಡಿಯಂ ಮತ್ತು ಇತರ ಖನಿಜಗಳ ಅಸಮತೋಲನವನ್ನು ಸರಿಪಡಿಸುವ ಮೂಲಕ ನಿರ್ಜಲೀಕರಣವನ್ನು ತಡೆಯುತ್ತದೆ.

ಇದನ್ನೂ ಓದಿ: ಆಕ್ರೋಟ್​ ಮೆದುಳಿನ ಶಕ್ತಿಯನ್ನ ಹೆಚ್ಚಿಸುತ್ತದೆ; ಅವುಗಳನ್ನು ಹೇಗೆ ಸೇವಿಸಬೇಕು, ಇನ್ನಿತರ ಪ್ರಯೋಜನಗಳು ಇಲ್ಲಿವೆ

ಮಾವಿನ ಕಾಯಿಯನ್ನು ಅತಿಯಾಗಿ ಸೇವಿಸುವುದರಿಂದ ದೇಹಕ್ಕೆ ಅಡ್ಡಪರಿಣಾಮಗಳು ಇರುತ್ತದೆ. ಅತಿಯಾಗಿ ಮಾವಿನ ಕಾಯಿ ಸೇವಿಸುವುದರಿಂದ ಅತಿಸಾರ, ಅಜೀರ್ಣ ಮತ್ತು ಹೊಟ್ಟೆ ನೋವಿನಂತಹ ಗ್ಯಾಸ್ಟ್ರಿಕ್ ಸಮಸ್ಯೆಗಳು ಉಂಟಾಗಬಹುದು. ಕೆಲವು ಮಾವಿನ ಕಾಯಿಯನ್ನು ಸೇವಿಸಿದ ನಂತರ ಕೆಲವರು ಗಂಟಲು ನೋವು ಅಥವಾ ಅಲರ್ಜಿಯನ್ನು ಅನುಭವಿಸಬಹುದು

ಹಿಂದೂ ಕಾರ್ಯಕರ್ತ ಸುಹಾಸ್​ ಕೊಲೆ ಬಗ್ಗೆ ಎಡಿಜಿಪಿ ಹಿತೇಂದ್ರ ಮಹತ್ವದ ಹೇಳಿಕೆ
ಹಿಂದೂ ಕಾರ್ಯಕರ್ತ ಸುಹಾಸ್​ ಕೊಲೆ ಬಗ್ಗೆ ಎಡಿಜಿಪಿ ಹಿತೇಂದ್ರ ಮಹತ್ವದ ಹೇಳಿಕೆ
60 ವರ್ಷದ ವ್ಯಕ್ತಿಯಿಂದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ
60 ವರ್ಷದ ವ್ಯಕ್ತಿಯಿಂದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ
ಇಂದಿನಿಂದ ಚಾರ್​ ಧಾಮ್ ಯಾತ್ರೆ ಆರಂಭ, ಬಾಗಿಲು ತೆರೆದ ಕೇದಾರನಾಥ ದೇವಾಲಯ
ಇಂದಿನಿಂದ ಚಾರ್​ ಧಾಮ್ ಯಾತ್ರೆ ಆರಂಭ, ಬಾಗಿಲು ತೆರೆದ ಕೇದಾರನಾಥ ದೇವಾಲಯ
Daily Devotional: ಅಂಗೈ ಬಣ್ಣ ಬೇರೆ ಬೇರೆಯಾಗಿದ್ದರೆ ಏನೇನು ಅರ್ಥ?
Daily Devotional: ಅಂಗೈ ಬಣ್ಣ ಬೇರೆ ಬೇರೆಯಾಗಿದ್ದರೆ ಏನೇನು ಅರ್ಥ?
Daily horoscope: ಈ ರಾಶಿಯವರಿಗೆ ಇಂದು ಸಂತೋಷದ ದಿನವಾಗಿರುತ್ತದೆ
Daily horoscope: ಈ ರಾಶಿಯವರಿಗೆ ಇಂದು ಸಂತೋಷದ ದಿನವಾಗಿರುತ್ತದೆ
ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಹತ್ಯೆ: ಸ್ಫೋಟಕ ಅಂಶ ಬಹಿರಂಗ
ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಹತ್ಯೆ: ಸ್ಫೋಟಕ ಅಂಶ ಬಹಿರಂಗ
ಬಜರಂಗದಳದ ಸುಹಾಸ್ ಶೆಟ್ಟಿ ಕೊಲೆ: ಹಂತಕರ ಸ್ಕೆಚ್​ ಬಿಚ್ಚಿಟ್ಟ ಕಮಿಷನರ್
ಬಜರಂಗದಳದ ಸುಹಾಸ್ ಶೆಟ್ಟಿ ಕೊಲೆ: ಹಂತಕರ ಸ್ಕೆಚ್​ ಬಿಚ್ಚಿಟ್ಟ ಕಮಿಷನರ್
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಮಂಗಳೂರಿನಲ್ಲಿ ಸೇಡಿಗೆ ಸೇಡು: ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ
ಮಂಗಳೂರಿನಲ್ಲಿ ಸೇಡಿಗೆ ಸೇಡು: ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ