AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೀಲು ನೋವಿನಿಂದ ಬಳಲುತ್ತಿದ್ದೀರಾ.. ಪಾರಿಜಾತ ಎಲೆಗಳಿಂದ ಪರಿಹಾರ ಪಡೆಯಿರಿ! ಅದು ಹೇಗೆ?

Parijata Leaves Benefits: ಪಾರಿಜಾತ ಮರವನ್ನು ದೈವಿಕ ವೃಕ್ಷವೆಂದು ಪರಿಗಣಿಸಲಾಗಿದೆ. ನೆಲದ ಮೇಲೆ ಉದುರಿದ ಹೂವುಗಳು ಪೂಜೆಗೆ ಒಳ್ಳೆಯದಲ್ಲ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಆದರೆ ಪಾರಿಜಾತ ಮರದಿಂದ ಬೀಳುವ ಹೂವುಗಳು ಮಾತ್ರ ಕೆಳಗೆ ಬಿದ್ದರೂ ಪೂಜೆಗೆ ಬಳಸಬಹುದು. ಇದರ ಹಿಂದೆ ಐತಿಹ್ಯವೂ ಇದೆ. ಅದನ್ನು ಬದಿಗಿಟ್ಟು ನೊಡುವುದಾರೆ... ಕೀಲು ನೋವನ್ನು ಕಡಿಮೆ ಮಾಡಲು ಪಾರಿಜಾತ ಎಲೆಗಳು ತುಂಬಾ ಉಪಯುಕ್ತ.

ಕೀಲು ನೋವಿನಿಂದ ಬಳಲುತ್ತಿದ್ದೀರಾ.. ಪಾರಿಜಾತ ಎಲೆಗಳಿಂದ ಪರಿಹಾರ ಪಡೆಯಿರಿ! ಅದು ಹೇಗೆ?
ಕೀಲು ನೋವಿನಿಂದ ಬಳಲುತ್ತಿದ್ದೀರಾ.. ಪಾರಿಜಾತ ಎಲೆಗಳಿಂದ ಪರಿಹಾರ ಪಡೆಯಿರಿ
ಸಾಧು ಶ್ರೀನಾಥ್​
|

Updated on: Aug 10, 2023 | 6:06 AM

Share

ಸ್ವಲ್ಪ ದೂರ ನಡೆದ ನಂತರ ನಿಮ್ಮ ಮೊಣಕಾಲುಗಳಲ್ಲಿ ನೋವು ಬರುತ್ತಿದೆಯೇ? ಆದರೆ ಇದು ಸಂಧಿವಾತದ ಸಮಸ್ಯೆಯಾಗಿರಬಹುದು. ಗಂಭೀರವಾಗುವ ಮುನ್ನ ಮುನ್ನೆಚ್ಚರಿಕೆ ವಹಿಸುವುದು ಉತ್ತಮ. ಒಮ್ಮೆ ಸಂಧಿವಾತ (joint pain) ಶುರುವಾದರೆ.. ಬರುತ್ತಲೇ ಇರುತ್ತದೆ. ಅದನ್ನು ತಪ್ಪಿಸುವುದು ಬಹಳ ಮುಖ್ಯ. ಸಂಧಿವಾತಕ್ಕೂ ವಯಸ್ಸಿಗೂ ಸಂಬಂಧವಿಲ್ಲ. ಈಗ ಹದಿಹರೆಯದವರೂ ಕಳಪೆ ಆಹಾರದಿಂದ ಸಂಧಿವಾತಕ್ಕೆ ಒಳಗಾಗುತ್ತಾರೆ. ಅದರಲ್ಲಿ ನಾನಾ ವಿಧಗಳಿದ್ದರೂ, ಗುಣಲಕ್ಷಣಗಳು ಒಂದೇ ಆಗಿರುತ್ತವೆ. ಸಂಧಿವಾತ, ಮೂಳೆ ನೋವು, ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಾಗದಿರುವುದು, ನಡೆಯಲು ಸಾಧ್ಯವಾಗದಿರುವುದು, ಕೆಲವರಿಗಂತೂ ನಡೆಯುವುದೇ ನರಕ. ಸಂಧಿವಾತ ಸಮಸ್ಯೆ ಇರುವವರು ನಮ್ಮ ಮನೆಯಲ್ಲಿ ಪಾರಿಜಾತ ಎಲೆಗಳಿಂದ ( parijatha leaves) ಅತ್ಯುತ್ತಮ ಚಿಕಿತ್ಸೆ ಪಡೆಯಬಹುದು. ಹೇಗೆ ಎಂದು ತಿಳಿದುಕೊಳ್ಳೋಣ.. (Health)

ಪಾರಿಜಾತ ಮರವನ್ನು ದೈವಿಕ ವೃಕ್ಷವೆಂದು ಪರಿಗಣಿಸಲಾಗಿದೆ. ನೆಲದ ಮೇಲೆ ಉದುರಿದ ಹೂವುಗಳು ಪೂಜೆಗೆ ಒಳ್ಳೆಯದಲ್ಲ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಆದರೆ ಪಾರಿಜಾತ ಮರದಿಂದ ಬೀಳುವ ಹೂವುಗಳು ಮಾತ್ರ ಕೆಳಗೆ ಬಿದ್ದರೂ ಪೂಜೆಗೆ ಬಳಸಬಹುದು. ಇದರ ಹಿಂದೆ ಐತಿಹ್ಯವೂ ಇದೆ. ಅದನ್ನು ಬದಿಗಿಟ್ಟು ನೊಡುವುದಾರೆ… ಕೀಲು ನೋವನ್ನು ಕಡಿಮೆ ಮಾಡಲು ಪಾರಿಜಾತ ಎಲೆಗಳು ತುಂಬಾ ಉಪಯುಕ್ತ.

* 6-7 ಪಾರಿಜಾತ ಎಲೆಗಳನ್ನು ತೆಗೆದುಕೊಳ್ಳಿ.. ಅವುಗಳನ್ನು ಸ್ವಚ್ಛವಾಗಿ ತೊಳೆದು ಮೃದುವಾದ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ಒಂದು ಲೋಟ ನೀರಿನಲ್ಲಿ ಬೆರೆಸಿ, ಒಂದು ಪಾತ್ರೆಯಲ್ಲಿ ಸುರಿಯಿರಿ. ಅದು ಅರ್ಧ ಗ್ಲಾಸ್ ಆಗುವವರೆಗೂ ಚೆನ್ನಾಗಿ ಕುದಿಸಿ. ಇದರ ಪರಿಣಾಮದಿಂದ ಬಂದ ದ್ರಾವಣವನ್ನು ರಾತ್ರಿಯಿಡೀ ಇಡಬೇಕು ಮತ್ತು ಮರುದಿನ ಬೆಳಿಗ್ಗೆ ಎದ್ದ ತಕ್ಷಣ ಬೇಗನೆ ಕುಡಿಯಬೇಕು. ಒಂದು ತಿಂಗಳು ಹೀಗೆ ಮಾಡಿದರೆ ಕೀಲು ನೋವು ಕಡಿಮೆಯಾಗುತ್ತದೆ. ಪಾರಿಜಾತ ಎಲೆಗಳಲ್ಲಿರುವ ಅಂಟು ಕಷಾಯದ ಮೂಲಕ ದೇಹಕ್ಕೆ ಹೋಗುತ್ತದೆ ಮತ್ತು ಮೊಣಕಾಲಿನ ಸವೆತ ಕೀಲುಗಳ ಮೇಲೆ ಕೆಲಸ ಮಾಡುತ್ತದೆ. ಇದು ಕೀಲು ನೋವಿನಿಂದ ಸ್ವಲ್ಪ ಪರಿಹಾರವನ್ನು ನೀಡುತ್ತದೆ.

ಇದನ್ನೂ ಓದಿ: ಎಳ್ಳು ಸೇವನೆ ಎಂಬ ಮನೆಮದ್ದು: ಪ್ರತಿದಿನ ಒಂದು ಚಮಚ ಎಳ್ಳು ಸೇವಿಸಿದರೆ ನಿಮ್ಮ ಆರೋಗ್ಯ ಹೀಗೆ ಕಾಪಾಡಿಕೊಳ್ಳಬಹುದು

* ಹಾಗೆಯೇ ತೆಂಗಿನೆಣ್ಣೆಯಲ್ಲಿ 5-6 ಹನಿ ಪಾರಿಜಾತ ಎಣ್ಣೆಯನ್ನು ಸೇರಿಸಿ.. ಕೀಲು ನೋವು ಇರುವಲ್ಲಿ ಸ್ವಲ್ಪ ಹೊತ್ತು ಮಸಾಜ್ ಮಾಡಿ ಹೀಗೆ ಕೆಲವು ದಿನ ಮಾಡಿದರೆ ನೋವು ಕಡಿಮೆಯಾಗುತ್ತದೆ.

ಹೆಚ್ಚಿನ ಆರೋಗ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಚಂದನ್ ಹತ್ಯೆ: ಮೊಬೈಲ್‌ನಲ್ಲಿ ಮಗನ ಅಂತಿಮ ದರ್ಶನ ನೋಡಿ ಕಣ್ಣೀರಿಟ್ಟ ತಂದೆ
ಚಂದನ್ ಹತ್ಯೆ: ಮೊಬೈಲ್‌ನಲ್ಲಿ ಮಗನ ಅಂತಿಮ ದರ್ಶನ ನೋಡಿ ಕಣ್ಣೀರಿಟ್ಟ ತಂದೆ
ಪಿಡಬ್ಲ್ಯೂಡಿ ಮುಖ್ಯ ಇಂಜಿನಿಯರ್​​ಗೆ ಶಾಕ್​​ ಕೊಟ್ಟ ಲೋಕಾಯುಕ್ತ
ಪಿಡಬ್ಲ್ಯೂಡಿ ಮುಖ್ಯ ಇಂಜಿನಿಯರ್​​ಗೆ ಶಾಕ್​​ ಕೊಟ್ಟ ಲೋಕಾಯುಕ್ತ
RCB ಅಭಿಮಾನಿಗಳಿಗೆ ಸರ್ಕಾರದಿಂದ ಇಂದೇ ಸಿಗುತ್ತಾ ಸಿಹಿ ಸುದ್ದಿ?
RCB ಅಭಿಮಾನಿಗಳಿಗೆ ಸರ್ಕಾರದಿಂದ ಇಂದೇ ಸಿಗುತ್ತಾ ಸಿಹಿ ಸುದ್ದಿ?
ರಸ್ತೆ ಮಧ್ಯೆ ಕೆಟ್ಟು ನಿಂತ ಕೆಎಸ್‌ಆರ್‌ಟಿಸಿ ಬಸ್
ರಸ್ತೆ ಮಧ್ಯೆ ಕೆಟ್ಟು ನಿಂತ ಕೆಎಸ್‌ಆರ್‌ಟಿಸಿ ಬಸ್