AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅತಿಯಾಗಿ ಓಡುವುದು ದೇಹಕ್ಕೆ ಒಳ್ಳೆಯದೇ? ಈ ಆರೋಗ್ಯ ವಿಷಯಗಳನ್ನು ತಿಳಿದುಕೊಳ್ಳಿ

ದೈಹಿಕ ಚಟುವಟಿಕೆಯಿಂದ ಹಸಿವು ಹೆಚ್ಚಾಗುವುದು ಸಹಜ, ಆದರೆ ಅತಿಯಾದ ಓಟವು ಹಸಿವನ್ನು ಕಳೆದುಕೊಳ್ಳಬಹುದು. ವಾಸ್ತವವಾಗಿ, ಓಟದಿಂದ ಉಂಟಾಗುವ ಆಯಾಸವು ಇದಕ್ಕೆ ಕಾರಣವಾಗಿದೆ. ಫಿಟ್ ಆಗಿರಲು ಓಡುವುದು ತಪ್ಪಲ್ಲ. ಆದರೆ ಹೆಚ್ಚು ಓಡಿದರೆ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಪರಿಣಾಮವಾಗಿ ದಿನವಿಡೀ ಕಿರಿಕಿರಿ ಮತ್ತು ಆಲಸ್ಯದ ಭಾವನೆ ಇರುತ್ತದೆ.

ಅತಿಯಾಗಿ ಓಡುವುದು ದೇಹಕ್ಕೆ ಒಳ್ಳೆಯದೇ? ಈ ಆರೋಗ್ಯ  ವಿಷಯಗಳನ್ನು ತಿಳಿದುಕೊಳ್ಳಿ
ಅತಿಯಾಗಿ ಓಡುವುದು ಆರೋಗ್ಯಕ್ಕೆ ಒಳ್ಳೆಯದೇ?
ಸಾಧು ಶ್ರೀನಾಥ್​
|

Updated on: Sep 26, 2023 | 3:09 PM

Share

Running Side Effects: ಯಾವುದೇ ಖರ್ಚು ವೆಚ್ಚವಿಲ್ಲದೆ ಫಿಟ್ನೆಸ್ ದಕ್ಕಿಸಿಕೊಳ್ಳಲು ರನ್ನಿಂಗ್ ಅತ್ಯುತ್ತಮ ಆಯ್ಕೆಯಾಗಿದೆ. ನಿಯಮಿತ ಓಟವು ಆರೋಗ್ಯದ ಜೊತೆಗೆ ಫಿಟ್‌ನೆಸ್‌ಗೂ ಒಳ್ಳೆಯದು. ಆದರೆ ಮಿತಿಯಲ್ಲಿ ಓಡುವಾಗ ಮಾತ್ರ. ಅತಿಯಾದ ಓಟವು ಸರಿಪಡಿಸಲಾಗದ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಫಿಟ್ನೆಸ್ ತಜ್ಞರು ಹೇಳುತ್ತಾರೆ. ಹಾಗಾದರೆ ಅದರ ಸಮಸ್ಯೆಗಳೇನು? ತಿಳಿದುಕೊಳ್ಳೋಣ..

ಅತಿ ಓಟದ ಅಡ್ಡ ಪರಿಣಾಮಗಳು: ಓಡುವುದು ಆರೋಗ್ಯಕ್ಕೆ ಒಳ್ಳೆಯದು. ವಿಶೇಷವಾಗಿ ಯುವಕರು ಮತ್ತು ಉದ್ಯೋಗಿಗಳಿಗೆ ರನ್ನಿಂಗ್​ ಮಾಡುವುದು ಅತ್ಯಗತ್ಯ. ಓಟವು ಫಿಟ್ನೆಸ್ ಮಾತ್ರವಲ್ಲದೆ ಹೃದಯಾಘಾತ, ಮಧುಮೇಹ ಮತ್ತು ಬೊಜ್ಜು ಮುಂತಾದ ಅನೇಕ ಸಮಸ್ಯೆಗಳನ್ನು ತಡೆಯುತ್ತದೆ. ಆದರೆ ಹೆಚ್ಚು ಓಡುವುದು ಒಳ್ಳೆಯದಲ್ಲ.

ಸ್ನಾಯು ನೋವು: ಅತಿಯಾದ ಓಟವು ಸ್ನಾಯು ಸೆಳೆತಕ್ಕೆ ಕಾರಣವಾಗುತ್ತದೆ. ಇದು ಕಾಲಿನ ಸ್ನಾಯುಗಳಲ್ಲಿ ನೋವಿಗೆ ಕಾರಣವಾಗುತ್ತದೆ. ಈ ನೋವನ್ನು ಲೆಕ್ಕಿಸದೆ ಓಡಿದರೆ ಕುಳಿತುಕೊಳ್ಳುವುದಕ್ಕೂ, ನಿಲ್ಲುವುದಕ್ಕೂ ಕೂಡ ಸಮಸ್ಯೆಯಾಗುತ್ತದೆ.

ಹಸಿವು ಕಡಿಮೆಯಾಗುವುದು: ದೈಹಿಕ ಚಟುವಟಿಕೆಯಿಂದ ಹಸಿವು ಹೆಚ್ಚಾಗುವುದು ಸಹಜ, ಆದರೆ ಅತಿಯಾದ ಓಟವು ಹಸಿವನ್ನು ಕಳೆದುಕೊಳ್ಳಬಹುದು. ವಾಸ್ತವವಾಗಿ, ಓಟದಿಂದ ಉಂಟಾಗುವ ಆಯಾಸವು ಇದಕ್ಕೆ ಕಾರಣವಾಗಿದೆ.

Also Read: ಸರ್ಜರಿಗಾಗಿ ಬರೊಬ್ಬರಿ 3 ಕಿ.ಮೀ ಓಡಿದ ವೈದ್ಯ; ವೈರಲ್ ಆಯ್ತು ಡಾ ಗೋವಿಂದ್ ನಂದಕುಮಾರ್ ಓಟ 

ಹತಾಶೆ: ಫಿಟ್ ಆಗಿರಲು ಓಡುವುದು ತಪ್ಪಲ್ಲ. ಆದರೆ ಹೆಚ್ಚು ಓಡಿದರೆ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಪರಿಣಾಮವಾಗಿ ದಿನವಿಡೀ ಕಿರಿಕಿರಿ ಮತ್ತು ಆಲಸ್ಯದ ಭಾವನೆ ಇರುತ್ತದೆ.

ನಿದ್ರಾಹೀನತೆ: ದೇಹವು ದಣಿದಿದ್ದರೆ, ರಾತ್ರಿಯಲ್ಲಿ ನಿಮಗೆ ಉತ್ತಮ ನಿದ್ರೆ ಬರುತ್ತದೆ. ಆದರೆ ಅತಿಯಾಗಿ ಓಡುವುದರಿಂದ ದೇಹ ಹೆಚ್ಚು ಸುಸ್ತಾಗುತ್ತದೆ. ಪರಿಣಾಮವಾಗಿ ನೋವು ಮತ್ತು ಕಿರಿಕಿರಿಯು ರಾತ್ರಿಯಲ್ಲಿ ನಿದ್ರಾಹೀನತೆಯನ್ನು ಉಂಟುಮಾಡುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

ಮುಸ್ಲಿಂರನ್ನ ಓಲೈಸಿಕೊಳ್ಳಲು ಜಮೀರ್ ಬಳ್ಳಾರಿ ಉಸ್ತುವಾರಿ ಸಚಿವ: ಶ್ರೀರಾಮುಲು
ಮುಸ್ಲಿಂರನ್ನ ಓಲೈಸಿಕೊಳ್ಳಲು ಜಮೀರ್ ಬಳ್ಳಾರಿ ಉಸ್ತುವಾರಿ ಸಚಿವ: ಶ್ರೀರಾಮುಲು
2800 ನಾಯಿಗಳನ್ನ ವಿಷ ಹಾಕಿ ಸಾಯಿಸಿದ್ದೆ: ಉದಾಹರಣೆ ಕೊಟ್ಟ ಭೋಜೇಗೌಡ
2800 ನಾಯಿಗಳನ್ನ ವಿಷ ಹಾಕಿ ಸಾಯಿಸಿದ್ದೆ: ಉದಾಹರಣೆ ಕೊಟ್ಟ ಭೋಜೇಗೌಡ
ವ್ಯಸನಿಯ ಹುಚ್ಚಾಟದ ಬಗ್ಗೆ ದೂರು ಸಲ್ಲಿಸಿದರೂ ಶಿವಮೊಗ್ಗ ಪೊಲೀಸರು ನಿಷ್ಕ್ರಿಯ
ವ್ಯಸನಿಯ ಹುಚ್ಚಾಟದ ಬಗ್ಗೆ ದೂರು ಸಲ್ಲಿಸಿದರೂ ಶಿವಮೊಗ್ಗ ಪೊಲೀಸರು ನಿಷ್ಕ್ರಿಯ
ಎಸ್​ಐಟಿ ರಚನೆಯಾಗರುವುದರಿಂದ ಸತ್ಯ ಹೇಳಲು ಭಯವಿಲ್ಲ: ಸಾಕ್ಷಿದಾರ
ಎಸ್​ಐಟಿ ರಚನೆಯಾಗರುವುದರಿಂದ ಸತ್ಯ ಹೇಳಲು ಭಯವಿಲ್ಲ: ಸಾಕ್ಷಿದಾರ
ಕಾಂಗ್ರೆಸ್ ಸರ್ಕಾರ ಬಾಲ್ಯವಿವಾಹಗಳ ಮೇಲೆ ಕಡಿವಾಣ ಹಾಕುತ್ತಿದೆ: ಹೆಬ್ಬಾಳ್ಕರ್
ಕಾಂಗ್ರೆಸ್ ಸರ್ಕಾರ ಬಾಲ್ಯವಿವಾಹಗಳ ಮೇಲೆ ಕಡಿವಾಣ ಹಾಕುತ್ತಿದೆ: ಹೆಬ್ಬಾಳ್ಕರ್
ಬೀದಿ ನಾಯಿ ಕಾಟದ ಬಗ್ಗೆ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ
ಬೀದಿ ನಾಯಿ ಕಾಟದ ಬಗ್ಗೆ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ
ಎಸ್ಐಟಿ ಆದಷ್ಟು ಬೇಗ ತನಿಖೆಯನ್ನು ಪೂರ್ತಿಗೊಳಿಸಬೇಕು: ವಿಜಯೇಂದ್ರ
ಎಸ್ಐಟಿ ಆದಷ್ಟು ಬೇಗ ತನಿಖೆಯನ್ನು ಪೂರ್ತಿಗೊಳಿಸಬೇಕು: ವಿಜಯೇಂದ್ರ
ಮುಂದಿನ ಭಾನುವಾರ ಧರ್ಮಸ್ಥಳಕ್ಕೆ ಬಿಜೆಪಿ ತಂಡ: ವಿಜಯೇಂದ್ರ ಹೇಳಿದ್ದೇನು ನೋಡಿ
ಮುಂದಿನ ಭಾನುವಾರ ಧರ್ಮಸ್ಥಳಕ್ಕೆ ಬಿಜೆಪಿ ತಂಡ: ವಿಜಯೇಂದ್ರ ಹೇಳಿದ್ದೇನು ನೋಡಿ
ವಾಲ್ಮೀಕಿ ಸಮುದಾಯದವರಿಂದ ತುಮಕೂರುನಲ್ಲಿ ಇಂದು ಬೃಹತ್ ರ‍್ಯಾಲಿ!
ವಾಲ್ಮೀಕಿ ಸಮುದಾಯದವರಿಂದ ತುಮಕೂರುನಲ್ಲಿ ಇಂದು ಬೃಹತ್ ರ‍್ಯಾಲಿ!
ಬೀದಿ ನಾಯಿಗಳಿಂದ ಮಕ್ಕಳನ್ನು ಕಾಪಾಡಿದ ಜರ್ಮನ್ ಶೆಫರ್ಡ್​
ಬೀದಿ ನಾಯಿಗಳಿಂದ ಮಕ್ಕಳನ್ನು ಕಾಪಾಡಿದ ಜರ್ಮನ್ ಶೆಫರ್ಡ್​