AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೊರಕೆ ಹೊಡೆಯುವುದು ಕೂಡ ಒಂದು ರೋಗ; ಇದರಿಂದಾಗುವ ತೊಂದರೆಗಳೇನು?

2,000 ವಯಸ್ಕರ ಮೇಲೆ ನಡೆಸಿದ ಹೊಸ ಅಧ್ಯಯನವು ತಮ್ಮ ಬಾಯಿಯ ಮೂಲಕ ಉಸಿರಾಡುವ ಜನರು ಮೂಗಿನ ದಟ್ಟಣೆಯನ್ನು ಅನುಭವಿಸುವ ಸಾಧ್ಯತೆ ಬೇರೆಯವರಿಗಿಂತಲೂ 2 ಪಟ್ಟು ಹೆಚ್ಚು ಎಂದು ಕಂಡುಹಿಡಿದಿದೆ. ಹಾಗಾದರೆ, ಬಾಯಿಯ ಮೂಲಕ ಉಸಿರಾಡುವುದರಿಂದ ಆರೋಗ್ಯದ ಮೇಲಾಗುವ ಪರಿಣಾಮಗಳೇನು?

ಗೊರಕೆ ಹೊಡೆಯುವುದು ಕೂಡ ಒಂದು ರೋಗ; ಇದರಿಂದಾಗುವ ತೊಂದರೆಗಳೇನು?
ಸುಷ್ಮಾ ಚಕ್ರೆ
|

Updated on: Jan 18, 2024 | 6:25 PM

Share

ನೀವು ರಾತ್ರಿ ಗೊರಕೆ ಹೊಡೆಯುತ್ತಾ ಮಲಗುತ್ತೀರಾ? ಮೂಗಿನ ಬದಲು ಬಾಯಿಯಲ್ಲಿ ಉಸಿರಾಡುತ್ತೀರಾ? ಅದರಿಂದ ಆರೋಗ್ಯಕ್ಕೆ ತೊಂದರೆಗಳು ಉಂಟಾಗಬಹುದು. ಈ ಬಗ್ಗೆ 2,000 ವಯಸ್ಕರ ಮೇಲೆ ನಡೆಸಿದ ಹೊಸ ಅಧ್ಯಯನವು ತಮ್ಮ ಬಾಯಿಯ ಮೂಲಕ ಉಸಿರಾಡುವ ಜನರು ಮೂಗಿನ ದಟ್ಟಣೆಯನ್ನು ಅನುಭವಿಸುವ ಸಾಧ್ಯತೆ ಬೇರೆಯವರಿಗಿಂತಲೂ 2 ಪಟ್ಟು ಹೆಚ್ಚು ಎಂದು ಕಂಡುಹಿಡಿದಿದೆ. ಇದು ಹಲವಾರು ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ.

ಶೇ.13ರಷ್ಟು ಜನರು ಸಾಮಾನ್ಯವಾಗಿ ತಮ್ಮ ಬಾಯಿಯ ಮೂಲಕ ಉಸಿರಾಡುತ್ತಾರೆ. ಆದರೆ, ಮಲಗುವಾಗ ಶೇ. 18ರಷ್ಟು ಜನರು ಬಾಯಿಯ ಮೂಲಕ ಉಸಿರಾಡುತ್ತಾರೆ ಎಂದು ಅಧ್ಯಯನವು ಕಂಡುಹಿಡಿದಿದೆ. ಹೀಗೆ ರಾತ್ರಿ ಗೊರಕೆ ಹೊಡೆಯುವವರ ಪೈಕಿ ಮೂವರಲ್ಲಿ ಒಬ್ಬರು (31%) ಸಾಮಾನ್ಯವಾಗಿ ಮೂಗಿನ ದಟ್ಟಣೆಯನ್ನು ಅನುಭವಿಸುತ್ತಾರೆ ಎಂದು ಪತ್ತೆಹಚ್ಚಲಾಗಿದೆ.

ಇದನ್ನೂ ಓದಿ: ಬಿಸಿ ಹಾಲು ಕುಡಿದರೆ ನಿಜಕ್ಕೂ ಚೆನ್ನಾಗಿ ನಿದ್ರೆ ಬರುತ್ತಾ?

ಮತ್ತೊಂದೆಡೆ, ತಮ್ಮ ಮೂಗಿನ ಮೂಲಕ ಉಸಿರಾಡುವ ಜನರು ಮೂಗಿನ ದಟ್ಟಣೆಯ ಅರ್ಧಕ್ಕಿಂತ ಕಡಿಮೆ ಪ್ರಮಾಣವನ್ನು ಅನುಭವಿಸುತ್ತಾರೆ. ಮೂಗಿನ ದಟ್ಟಣೆಯನ್ನು ಅನುಭವಿಸುತ್ತಿರುವವರಲ್ಲಿ ಶೇ. 38ರಷ್ಟು ಜನರು ಸರಿಯಾಗಿ ನಿದ್ರೆ ಮಾಡುವುದಿಲ್ಲ.

ಈ ರೀತಿ ಮೂಗಿನ ಬದಲು ಬಾಯಿಯಲ್ಲಿ ಉಸಿರಾಡುವ ಮೂವರಲ್ಲಿ ಒಬ್ಬರು ಮೂಗು ಸೋರುವಿಕೆಯ ಸಮಸ್ಯೆಯನ್ನು ಹೊಂದಿದ್ದಾರೆ. ಶೇ. 31ರಷ್ಟು ಜನರು ಸೈನಸ್ ಒತ್ತಡ ಮತ್ತು ನೋವಿನಿಂದ ಬಳಲುತ್ತಿದ್ದಾರೆ. ಶೇ. 31ರಷ್ಟು ಜನರು ಉಸಿರಾಟದ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಬಾಯಿಯ ಉಸಿರಾಟವು ದೇಹಕ್ಕೆ ಕಡಿಮೆ ಆಮ್ಲಜನಕವನ್ನು ತಲುಪಿಸಲು ಕಾರಣವಾಗಬಹುದು. ಇದರಿಂದ ನಿದ್ರೆಯಲ್ಲಿ ತೊಂದರೆ, ಹಗಲಿನ ವೇಳೆ ಹೆಚ್ಚಿನ ಆಯಾಸ ಉಂಟಾಗಬಹುದು. ಇದು ಬಾಯಿ ಒಣಗಲು ಕಾರಣವಾಗುತ್ತದೆ. ಇದರಿಂದ ಹಲ್ಲು ಕೊಳೆತ ಮತ್ತು ವಸಡಿನ ಕಾಯಿಲೆಯ ಅಪಾಯ ಹೆಚ್ಚುತ್ತದೆ.

ಇದನ್ನೂ ಓದಿ: ಹಲ್ಲುಗಳನ್ನು ಹೊಳೆಯುವಂತೆ ಮಾಡಲು ಮನೆಯಲ್ಲೇ ಇದೆ 8 ಸುಲಭ ಮಾರ್ಗ

ಬಾಯಿಯ ಉಸಿರಾಟ ಮತ್ತು ಮೂಗಿನ ದಟ್ಟಣೆಯನ್ನು ಕಡಿಮೆ ಮಾಡಲು ಸಲೈನ್ ಸ್ಪ್ರೇ ಅಥವಾ ಮೂಗಿನ ಡಿಕೊಂಜೆಸ್ಟೆಂಟ್ ಅನ್ನು ಬಳಸಿ. ಮಲಗುವಾಗ ನಿಮ್ಮ ತಲೆಯನ್ನು ಎತ್ತರದಲ್ಲಿಡಿ. ಅಂದರೆ, 2 ದಿಂಬುಗಳನ್ನು ಇಟ್ಟುಕೊಂಡು ಮಲಗಿ. ನಿಮಗೆ ಅಲರ್ಜಿ ಆಗುವ ವಸ್ತುಗಳಿಂದ ದೂರವಿರಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ