AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಧ್ಯಯನದ ಪ್ರಕಾರ ವಿರಾಮವಿಲ್ಲದೇ ದೀರ್ಘಕಾಲದವರೆಗೆ ಕೆಲಸ ಮಾಡುವುದು ಮೆದುಳಿನ ಒತ್ತಡಕ್ಕೆ ಕಾರಣ

ವಿರಾಮವಿಲ್ಲದೇ ದೀರ್ಘಕಾಲದವರೆಗೆ ಕೆಲಸ ಮಾಡುವುದು ಮೆದುಳಿನ ಒತ್ತಡಕ್ಕೆ ಕಾರಣವಾಗುತ್ತದೆ ಎಂಬುದನ್ನು ಮೈಕ್ರೋಸಾಫ್ಟ್​ ಹ್ಯೂಮನ್​ ಫ್ಯಾಕ್ಟರ್ಸ್​ಲ್ಯಾಬ್ ಸಂಶೋಧನೆಯ ಮೂಲಕ ತಿಳಿಸಿದೆ. ಈ ಕುರಿತಾದ ನಕ್ಷೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಅಧ್ಯಯನದ ಪ್ರಕಾರ ವಿರಾಮವಿಲ್ಲದೇ ದೀರ್ಘಕಾಲದವರೆಗೆ ಕೆಲಸ ಮಾಡುವುದು ಮೆದುಳಿನ ಒತ್ತಡಕ್ಕೆ ಕಾರಣ
ಪ್ರಾತಿನಿಧಿಕ ಚಿತ್ರ
shruti hegde
| Edited By: |

Updated on: Apr 26, 2021 | 6:49 AM

Share

ಕಚೇರಿ ಬಿಟ್ಟು ದೂರದಲ್ಲಿ ಕೆಲಸ ಮಾಡುವುದರಿಂದ ಕಚೇರಿ ಮತ್ತು ಮನೆಗೆ ಓಡಾಡುವ ಸಮಯವನ್ನು ಸಾಕಷ್ಟು ಉಳಿಸಬಹುದು. ಆದರೆ ಈ ಹೊಸ ಯೋಚನೆಯ ಒಂದು ದೊಡ್ಡ ನ್ಯೂನ್ಯತೆ ಎಂದರೆ ಜನರು ವಿರಾಮವಿಲ್ಲವೇ ಅದೆಷ್ಟೋ ಕಚೇರಿಗೆ ಸಂಬಂಧಿಸಿದ ಮೀಟಿಂಗ್​ಗಳನ್ನು ಸಹಿಸಿಕೊಳ್ಳುವುದು. ಈ ಕುರಿತಂತೆ ಹೊಸ ಅಧ್ಯಯನವೊಂದು ನಡೆದಿದ್ದು, ಹಗಲಿನಲ್ಲಿ ಬೇಕಾದ ವಿರಾಮದ ಮಹತ್ವವನ್ನು ತಿಳಿಸಿದೆ. ಮೈಕ್ರೋಸಾಫ್ಟ್​ ಹ್ಯೂಮನ್​ ಫ್ಯಾಕ್ಟರ್ಸ್​ಲ್ಯಾಬ್​ ನಡೆಸಿದ ಸಂಶೋಧನೆಯನ್ನು ಪ್ರಮುಖ ವೃತ್ತಿಪರರು ಉಲ್ಲೇಖಿಸಿದ್ದಾರೆ. ಮತ್ತು ದೂರದಿಂದ ಕೆಲಸ ಮಾಡುವ ಜನರು ಮೆದುಳಿಗೆ ಒಡ್ಡುತ್ತಿರುವ ಒತ್ತಡವನ್ನು ಸುಧಾರಿಸಿಕೊಳ್ಳಲು ಕೆಲಸದ ಸಮಯದಲ್ಲಿ ಸಣ್ಣ ವಿರಾಮವನ್ನು ತೆಗೆದುಕೊಳ್ಳುವುದು ಕಡ್ಡಾಯ ಎಂದು ಪ್ರತಿಪಾದಿಸಿದ್ದಾರೆ.

ದಿ ಹಸ್ಟಲ್​ ನ್ಯೂಸ್​ ಔಟ್​ಲೆಟ್​ನಲ್ಲಿ ವಿಷಯ ವಿಶ್ಲೇಷಕರಾಗಿ ಕೆಲಸ ಮಾಡುತ್ತಿರುವ ಸ್ಟೈಫ್​ ಸ್ಮಿತ್​ ಹೇಳಿದಂತೆ, ಅವರು ದೂರದಿಂದಲೆ ಕೆಲಸ ಮಾಡುವುದನ್ನು ಪ್ರೀತಿಸುತ್ತಾರೆ. ಮತ್ತು ಅದರ ಕುರಿತಾಗಿ ತನ್ನ ಬ್ಲಾಗ್​ನಲ್ಲಿ ಬರೆದಿದ್ದಾರೆ. ಹಾಗೆಯೇ ಅವರು ಟ್ವೀಟ್​ ಮಾಡಿದ ಪೋಸ್ಟ್​ ಮೈಕ್ರೋಸಾಫ್ಟ್​ ಸಂಶೋಧನೆಯದ್ದಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪೋಸ್ಟ್​ ತಿಳಿಸುವಂತೆ ಕಚೇರಿಯ ಮೀಟಿಂಗ್​ನಲ್ಲಿ ಕಚೇರಿ ಸಿಬ್ಬಂದಿಯ ಮೆದುಳು ಯಾವ ರೀತಿ ಕೆಲಸ ನಿರ್ವಹಿಸುತ್ತದೆ ಎಂಬುದನ್ನು ತಿಳಿಸುತ್ತದೆ. ಮತ್ತು ಬ್ರೇಕ್​ ತೆಗೆದುಕೊಂಡಾಗ ಮೆದುಳಿನ ಕಾರ್ಯ ಹೇಗಿರುತ್ತದೆ ಎಂಬುದನ್ನು ನಕ್ಷೆಯ ಮೂಲಕ ತಿಳಿಸಲಾಗಿದೆ. ನೆಟ್ಟಿಗರು ಈ ವಿಷವನ್ನು ಒಪ್ಪಿದ್ದಾರೆ ಮತ್ತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ‘ಹೌದು. ದಯವಿಟ್ಟು ಬ್ಯಾಕ್​-ಟು-ಬ್ಯಾಕ್​ ಮೀಟಿಂಗ್​ಗಳನ್ನು ನಿಲ್ಲಿಸಿ ಎಂದು ನೆಟ್ಟಿಗರು ಸ್ಮಿತ್​ ಅವರ ಪೋಸ್ಟ್​ಗೆ ಕಮೆಂಟ್​ ಮಾಡಿದ್ದಾರೆ.

ಸಣ್ಣ ವಿರಾಮದ ಸಮಯದಲ್ಲಿ ಕಿಟಕಿಗಳನ್ನು ತೆರೆಯಬೇಕು. ತಮ್ಮ ಕೆಲಸಕ್ಕೆ ಅನುಗುಣವಾಗಿ ಸೂರ್ಯನ ಬೆಳಕನ್ನು ಸ್ಪರ್ಶಿಸಿ ಎಂದು ಇನ್ನೋರ್ವರು ಸೂಚನೆ ನೀಡಿದ್ದಾರೆ. ಯೋಜನೆಯನ್ನು ಮೇಲ್ವಿಚಾರಣೆ ಮಾಡಿದ ಮೈಕ್ರೊಸಾಫ್ಟ್​ ಹ್ಯೂಮನ್​ ಫ್ಯಾಕ್ಟರ್ಸ್​ ಎಂಜಿನಿಯರಿಂಗ್​ ಸಮೂಹದ ಹಿರಿಯ ನಿರ್ದೇಶಕ ಮೈಕಲ್​ ಬೋಹನ್​, ತಮ್ಮ ಸಂಶೋಧನೆಯು ಮೆದುಳಿಗೆ ವಿರಾಮ ನೀಡುವಲ್ಲಿ ಪ್ರಮುಖವಾಗಿದೆ. ಮೀಟಿಂಗ್​ನಲ್ಲಿ ಒಬ್ಬರು ಕಡಿಮೆ ದಣಿದಂತೆ ಅನಿಸಬಹುದು. ಆ ಸಮಯದಲ್ಲಿ ಅವರು ಸುಧಾರಿಸಿಕೊಳ್ಳುತ್ತಾರೆ. ಮತ್ತು ಮೀಟಿಂಗ್​ನಲ್ಲಿ ಹೆಚ್ಚು ತೊಡಗಿಕೊಳ್ಳುತ್ತಾರೆ. ಸಾಂಕ್ರಾಮಿಕ ರೋಗದಿಂದಾಗಿ ಬ್ಯಾಕ್​-ಟು-ಬ್ಯಾಕ್​ ಮೀಟಿಂಗ್​ಗಳು ಸುಲಭವಲ್ಲ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ಕೆಲವರಲ್ಲಿ ಮಾನಸಿಕ ಸಮಸ್ಯೆಗಳು

Follow Us
ವೃದ್ಧನ ತಳ್ಳಿದ ಭದ್ರತಾ ಸಿಬ್ಬಂದಿ ಮೇಲೆ ಸಿಟ್ಟಾದ ದಳಪತಿ ವಿಜಯ್: ವಿಡಿಯೋ
ವೃದ್ಧನ ತಳ್ಳಿದ ಭದ್ರತಾ ಸಿಬ್ಬಂದಿ ಮೇಲೆ ಸಿಟ್ಟಾದ ದಳಪತಿ ವಿಜಯ್: ವಿಡಿಯೋ
ಲವ್ ಜಿಹಾದ್ ಕೇಸ್​: 50ಕ್ಕೂ ಹೆಚ್ಚು ಜನರಿಂದ ಸಮೀರ್​ಗೆ ಮನಸೋ ಇಚ್ಛೆ ಥಳಿತ
ಲವ್ ಜಿಹಾದ್ ಕೇಸ್​: 50ಕ್ಕೂ ಹೆಚ್ಚು ಜನರಿಂದ ಸಮೀರ್​ಗೆ ಮನಸೋ ಇಚ್ಛೆ ಥಳಿತ
ಕೇರಳದಲ್ಲಿ ಪ್ರಧಾನಿ ಮೋದಿ ಮೆಗಾ ರೋಡ್ ಶೋ
ಕೇರಳದಲ್ಲಿ ಪ್ರಧಾನಿ ಮೋದಿ ಮೆಗಾ ರೋಡ್ ಶೋ
ಸಿಎಂ ಮಮತಾ ಬ್ಯಾನರ್ಜಿ ಅವರ ಹೆಲಿಕಾಪ್ಟರ್ ಬಳಿ ಅನುಮಾನಾಸ್ಪದ ಡ್ರೋನ್ ಹಾರಾಟ
ಸಿಎಂ ಮಮತಾ ಬ್ಯಾನರ್ಜಿ ಅವರ ಹೆಲಿಕಾಪ್ಟರ್ ಬಳಿ ಅನುಮಾನಾಸ್ಪದ ಡ್ರೋನ್ ಹಾರಾಟ
ಬಿಜೆಪಿಗರಿಗೆ ನಾನೇ ಟಾರ್ಗೆಟ್​​ ಎಂದ ಸಿಎಂ: ಕಾರಣವನ್ನೂ ಕೊಟ್ಟ ಸಿದ್ದರಾಮಯ್ಯ
ಬಿಜೆಪಿಗರಿಗೆ ನಾನೇ ಟಾರ್ಗೆಟ್​​ ಎಂದ ಸಿಎಂ: ಕಾರಣವನ್ನೂ ಕೊಟ್ಟ ಸಿದ್ದರಾಮಯ್ಯ
ಹಸಿವಿನಿಂದ ಊಟ ಕೇಳಿದ ಭಿಕ್ಷುಕನ ಮೇಲೆ ಬಿಸಿನೀರು ಎರಚಿದ ಹೋಟೆಲ್ ಸಿಬ್ಬಂದಿ!
ಹಸಿವಿನಿಂದ ಊಟ ಕೇಳಿದ ಭಿಕ್ಷುಕನ ಮೇಲೆ ಬಿಸಿನೀರು ಎರಚಿದ ಹೋಟೆಲ್ ಸಿಬ್ಬಂದಿ!
ಟಿಕೆಟ್ ಬುಕ್ಕಿಂಗ್ ನೆಪದಲ್ಲಿ ವಂಚನೆ: ಲಿಂಕ್​ ಕ್ಲಿಕ್​ ಮಾಡಿದ್ರೆ ಹಣ ಮಾಯ
ಟಿಕೆಟ್ ಬುಕ್ಕಿಂಗ್ ನೆಪದಲ್ಲಿ ವಂಚನೆ: ಲಿಂಕ್​ ಕ್ಲಿಕ್​ ಮಾಡಿದ್ರೆ ಹಣ ಮಾಯ
ಡೆಲ್ಲಿ ವಿರುದ್ಧ ವಿಶೇಷ ಮೈಲಿಗಲ್ಲು ದಾಟಿದ ರೋಹಿತ್ ಶರ್ಮಾ
ಡೆಲ್ಲಿ ವಿರುದ್ಧ ವಿಶೇಷ ಮೈಲಿಗಲ್ಲು ದಾಟಿದ ರೋಹಿತ್ ಶರ್ಮಾ
IPL ಟಿಕೆಟ್​​ ಪಡೆದ ಶಾಸಕರಿಗೆ ಮಾಜಿ ಸಿಎಂ ಸದಾನಂದಗೌಡ ಕ್ಲಾಸ್​​
IPL ಟಿಕೆಟ್​​ ಪಡೆದ ಶಾಸಕರಿಗೆ ಮಾಜಿ ಸಿಎಂ ಸದಾನಂದಗೌಡ ಕ್ಲಾಸ್​​
ಕಣ್ಣಿಗೆ ಕಂಡವರಿಗೆಲ್ಲಾ ಎಗರಿ.. ಎಗರಿ ಕಚ್ಚಿದ ನಾಯಿ
ಕಣ್ಣಿಗೆ ಕಂಡವರಿಗೆಲ್ಲಾ ಎಗರಿ.. ಎಗರಿ ಕಚ್ಚಿದ ನಾಯಿ