AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಧ್ಯಯನದ ಪ್ರಕಾರ ವಿರಾಮವಿಲ್ಲದೇ ದೀರ್ಘಕಾಲದವರೆಗೆ ಕೆಲಸ ಮಾಡುವುದು ಮೆದುಳಿನ ಒತ್ತಡಕ್ಕೆ ಕಾರಣ

ವಿರಾಮವಿಲ್ಲದೇ ದೀರ್ಘಕಾಲದವರೆಗೆ ಕೆಲಸ ಮಾಡುವುದು ಮೆದುಳಿನ ಒತ್ತಡಕ್ಕೆ ಕಾರಣವಾಗುತ್ತದೆ ಎಂಬುದನ್ನು ಮೈಕ್ರೋಸಾಫ್ಟ್​ ಹ್ಯೂಮನ್​ ಫ್ಯಾಕ್ಟರ್ಸ್​ಲ್ಯಾಬ್ ಸಂಶೋಧನೆಯ ಮೂಲಕ ತಿಳಿಸಿದೆ. ಈ ಕುರಿತಾದ ನಕ್ಷೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಅಧ್ಯಯನದ ಪ್ರಕಾರ ವಿರಾಮವಿಲ್ಲದೇ ದೀರ್ಘಕಾಲದವರೆಗೆ ಕೆಲಸ ಮಾಡುವುದು ಮೆದುಳಿನ ಒತ್ತಡಕ್ಕೆ ಕಾರಣ
ಪ್ರಾತಿನಿಧಿಕ ಚಿತ್ರ
Follow us
shruti hegde
| Updated By: ಆಯೇಷಾ ಬಾನು

Updated on: Apr 26, 2021 | 6:49 AM

ಕಚೇರಿ ಬಿಟ್ಟು ದೂರದಲ್ಲಿ ಕೆಲಸ ಮಾಡುವುದರಿಂದ ಕಚೇರಿ ಮತ್ತು ಮನೆಗೆ ಓಡಾಡುವ ಸಮಯವನ್ನು ಸಾಕಷ್ಟು ಉಳಿಸಬಹುದು. ಆದರೆ ಈ ಹೊಸ ಯೋಚನೆಯ ಒಂದು ದೊಡ್ಡ ನ್ಯೂನ್ಯತೆ ಎಂದರೆ ಜನರು ವಿರಾಮವಿಲ್ಲವೇ ಅದೆಷ್ಟೋ ಕಚೇರಿಗೆ ಸಂಬಂಧಿಸಿದ ಮೀಟಿಂಗ್​ಗಳನ್ನು ಸಹಿಸಿಕೊಳ್ಳುವುದು. ಈ ಕುರಿತಂತೆ ಹೊಸ ಅಧ್ಯಯನವೊಂದು ನಡೆದಿದ್ದು, ಹಗಲಿನಲ್ಲಿ ಬೇಕಾದ ವಿರಾಮದ ಮಹತ್ವವನ್ನು ತಿಳಿಸಿದೆ. ಮೈಕ್ರೋಸಾಫ್ಟ್​ ಹ್ಯೂಮನ್​ ಫ್ಯಾಕ್ಟರ್ಸ್​ಲ್ಯಾಬ್​ ನಡೆಸಿದ ಸಂಶೋಧನೆಯನ್ನು ಪ್ರಮುಖ ವೃತ್ತಿಪರರು ಉಲ್ಲೇಖಿಸಿದ್ದಾರೆ. ಮತ್ತು ದೂರದಿಂದ ಕೆಲಸ ಮಾಡುವ ಜನರು ಮೆದುಳಿಗೆ ಒಡ್ಡುತ್ತಿರುವ ಒತ್ತಡವನ್ನು ಸುಧಾರಿಸಿಕೊಳ್ಳಲು ಕೆಲಸದ ಸಮಯದಲ್ಲಿ ಸಣ್ಣ ವಿರಾಮವನ್ನು ತೆಗೆದುಕೊಳ್ಳುವುದು ಕಡ್ಡಾಯ ಎಂದು ಪ್ರತಿಪಾದಿಸಿದ್ದಾರೆ.

ದಿ ಹಸ್ಟಲ್​ ನ್ಯೂಸ್​ ಔಟ್​ಲೆಟ್​ನಲ್ಲಿ ವಿಷಯ ವಿಶ್ಲೇಷಕರಾಗಿ ಕೆಲಸ ಮಾಡುತ್ತಿರುವ ಸ್ಟೈಫ್​ ಸ್ಮಿತ್​ ಹೇಳಿದಂತೆ, ಅವರು ದೂರದಿಂದಲೆ ಕೆಲಸ ಮಾಡುವುದನ್ನು ಪ್ರೀತಿಸುತ್ತಾರೆ. ಮತ್ತು ಅದರ ಕುರಿತಾಗಿ ತನ್ನ ಬ್ಲಾಗ್​ನಲ್ಲಿ ಬರೆದಿದ್ದಾರೆ. ಹಾಗೆಯೇ ಅವರು ಟ್ವೀಟ್​ ಮಾಡಿದ ಪೋಸ್ಟ್​ ಮೈಕ್ರೋಸಾಫ್ಟ್​ ಸಂಶೋಧನೆಯದ್ದಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪೋಸ್ಟ್​ ತಿಳಿಸುವಂತೆ ಕಚೇರಿಯ ಮೀಟಿಂಗ್​ನಲ್ಲಿ ಕಚೇರಿ ಸಿಬ್ಬಂದಿಯ ಮೆದುಳು ಯಾವ ರೀತಿ ಕೆಲಸ ನಿರ್ವಹಿಸುತ್ತದೆ ಎಂಬುದನ್ನು ತಿಳಿಸುತ್ತದೆ. ಮತ್ತು ಬ್ರೇಕ್​ ತೆಗೆದುಕೊಂಡಾಗ ಮೆದುಳಿನ ಕಾರ್ಯ ಹೇಗಿರುತ್ತದೆ ಎಂಬುದನ್ನು ನಕ್ಷೆಯ ಮೂಲಕ ತಿಳಿಸಲಾಗಿದೆ. ನೆಟ್ಟಿಗರು ಈ ವಿಷವನ್ನು ಒಪ್ಪಿದ್ದಾರೆ ಮತ್ತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ‘ಹೌದು. ದಯವಿಟ್ಟು ಬ್ಯಾಕ್​-ಟು-ಬ್ಯಾಕ್​ ಮೀಟಿಂಗ್​ಗಳನ್ನು ನಿಲ್ಲಿಸಿ ಎಂದು ನೆಟ್ಟಿಗರು ಸ್ಮಿತ್​ ಅವರ ಪೋಸ್ಟ್​ಗೆ ಕಮೆಂಟ್​ ಮಾಡಿದ್ದಾರೆ.

ಸಣ್ಣ ವಿರಾಮದ ಸಮಯದಲ್ಲಿ ಕಿಟಕಿಗಳನ್ನು ತೆರೆಯಬೇಕು. ತಮ್ಮ ಕೆಲಸಕ್ಕೆ ಅನುಗುಣವಾಗಿ ಸೂರ್ಯನ ಬೆಳಕನ್ನು ಸ್ಪರ್ಶಿಸಿ ಎಂದು ಇನ್ನೋರ್ವರು ಸೂಚನೆ ನೀಡಿದ್ದಾರೆ. ಯೋಜನೆಯನ್ನು ಮೇಲ್ವಿಚಾರಣೆ ಮಾಡಿದ ಮೈಕ್ರೊಸಾಫ್ಟ್​ ಹ್ಯೂಮನ್​ ಫ್ಯಾಕ್ಟರ್ಸ್​ ಎಂಜಿನಿಯರಿಂಗ್​ ಸಮೂಹದ ಹಿರಿಯ ನಿರ್ದೇಶಕ ಮೈಕಲ್​ ಬೋಹನ್​, ತಮ್ಮ ಸಂಶೋಧನೆಯು ಮೆದುಳಿಗೆ ವಿರಾಮ ನೀಡುವಲ್ಲಿ ಪ್ರಮುಖವಾಗಿದೆ. ಮೀಟಿಂಗ್​ನಲ್ಲಿ ಒಬ್ಬರು ಕಡಿಮೆ ದಣಿದಂತೆ ಅನಿಸಬಹುದು. ಆ ಸಮಯದಲ್ಲಿ ಅವರು ಸುಧಾರಿಸಿಕೊಳ್ಳುತ್ತಾರೆ. ಮತ್ತು ಮೀಟಿಂಗ್​ನಲ್ಲಿ ಹೆಚ್ಚು ತೊಡಗಿಕೊಳ್ಳುತ್ತಾರೆ. ಸಾಂಕ್ರಾಮಿಕ ರೋಗದಿಂದಾಗಿ ಬ್ಯಾಕ್​-ಟು-ಬ್ಯಾಕ್​ ಮೀಟಿಂಗ್​ಗಳು ಸುಲಭವಲ್ಲ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ಕೆಲವರಲ್ಲಿ ಮಾನಸಿಕ ಸಮಸ್ಯೆಗಳು

ದೆಹಲಿಯ ಅಕ್ಷರಧಾಮದಲ್ಲಿ ಮಾಕ್ ಡ್ರಿಲ್; ಮತ್ತೆ ಹೊತ್ತಿದ ದೀಪಗಳು
ದೆಹಲಿಯ ಅಕ್ಷರಧಾಮದಲ್ಲಿ ಮಾಕ್ ಡ್ರಿಲ್; ಮತ್ತೆ ಹೊತ್ತಿದ ದೀಪಗಳು
ನಗರದ ಹಲವಾರು ಏರಿಯಾಗಳ ನಿವಾಸಿಗಳಿಗೆ ಸೈರನ್ ಕೇಳಿಸಿಲ್ಲ
ನಗರದ ಹಲವಾರು ಏರಿಯಾಗಳ ನಿವಾಸಿಗಳಿಗೆ ಸೈರನ್ ಕೇಳಿಸಿಲ್ಲ
ಮಗಳ ಸಿನಿಮಾ ಪಯಣಕ್ಕೆ ದರ್ಶನ್, ಸುದೀಪ್ ಬೆಂಬಲ ನೆನೆದ ನಟ ಪ್ರೇಮ್
ಮಗಳ ಸಿನಿಮಾ ಪಯಣಕ್ಕೆ ದರ್ಶನ್, ಸುದೀಪ್ ಬೆಂಬಲ ನೆನೆದ ನಟ ಪ್ರೇಮ್
ಭಾರತದ ದಾಳಿಗೆ ಬಲಿಯಾದ ಉಗ್ರರಿಗೆ ಪಾಕಿಸ್ತಾನದ ಧ್ವಜ ಹೊದಿಸಿ ಅಂತ್ಯಕ್ರಿಯೆ
ಭಾರತದ ದಾಳಿಗೆ ಬಲಿಯಾದ ಉಗ್ರರಿಗೆ ಪಾಕಿಸ್ತಾನದ ಧ್ವಜ ಹೊದಿಸಿ ಅಂತ್ಯಕ್ರಿಯೆ
ರಾಜತಾಂತ್ರಿಕವಾಗಿಯೂ ಭಾರತ ಪಾಕಿಸ್ತಾನದ ವಿರುದ್ಧ ಗೆದ್ದಿದೆ: ಡಾ ಮಂಜುನಾಥ್
ರಾಜತಾಂತ್ರಿಕವಾಗಿಯೂ ಭಾರತ ಪಾಕಿಸ್ತಾನದ ವಿರುದ್ಧ ಗೆದ್ದಿದೆ: ಡಾ ಮಂಜುನಾಥ್
ಬೆಂಗಳೂರಿನಲ್ಲಿ ಬ್ಲ್ಯಾಕ್ ಔಟ್: ಕಗ್ಗತ್ತಲಾದ ರಾಜಧಾನಿ, ವಿಡಿಯೋ ನೋಡಿ
ಬೆಂಗಳೂರಿನಲ್ಲಿ ಬ್ಲ್ಯಾಕ್ ಔಟ್: ಕಗ್ಗತ್ತಲಾದ ರಾಜಧಾನಿ, ವಿಡಿಯೋ ನೋಡಿ
ಆಪರೇಷನ್​ ಸಿಂಧೂರ್: ಭಾರತ ವಿವೇಕಯುತದಿಂದ ಹೆಜ್ಜೆ ಇಟ್ಟಿದೆ, ​ಗುರೂಜಿ
ಆಪರೇಷನ್​ ಸಿಂಧೂರ್: ಭಾರತ ವಿವೇಕಯುತದಿಂದ ಹೆಜ್ಜೆ ಇಟ್ಟಿದೆ, ​ಗುರೂಜಿ
ಆಪರೇಷನ್ ಸಿಂಧೂರ್: ಮೋದಿಯ ನಾಯಕತ್ವವ ಕೊಂಡಾಡಿದ ತಾರಾ
ಆಪರೇಷನ್ ಸಿಂಧೂರ್: ಮೋದಿಯ ನಾಯಕತ್ವವ ಕೊಂಡಾಡಿದ ತಾರಾ
ಸರ್ಕಾರದ ನಿರ್ಧಾರ ಸರಿ ಇದೆ: ಆಪರೇಷನ್ ಸಿಂಧೂರ್ ಬಗ್ಗೆ ಶಿವಣ್ಣ ಪ್ರತಿಕ್ರಿಯೆ
ಸರ್ಕಾರದ ನಿರ್ಧಾರ ಸರಿ ಇದೆ: ಆಪರೇಷನ್ ಸಿಂಧೂರ್ ಬಗ್ಗೆ ಶಿವಣ್ಣ ಪ್ರತಿಕ್ರಿಯೆ
ಸೇನೆ ಮತ್ತು ಪ್ರಧಾನಿ ಮೋದಿಯವರಿಗೆ ಅಭಿನಂದನೆಗಳು: ಮುತಾಲಿಕ್
ಸೇನೆ ಮತ್ತು ಪ್ರಧಾನಿ ಮೋದಿಯವರಿಗೆ ಅಭಿನಂದನೆಗಳು: ಮುತಾಲಿಕ್