AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾವಾಗಲೂ ಸಿಹಿ ತಿನ್ನಬೇಕು ಅನಿಸುತ್ತಿದೆಯೇ? ಬಾಯಿಗೆ ಇದನ್ನು ಹಾಕಿಕೊಂಡರೆ ಸಾಕು

Diabetes: ಸಿಹಿ ಪದಾರ್ಥ ತಿನ್ನುವುದನ್ನು ನಿಯಂತ್ರಣದಲ್ಲಿಡಲು ಕೆಲವು ನಿಯಮಗಳನ್ನು ಅನುಸರಿಸಬೇಕು. ನಿಮಗೆ ಸಿಹಿ ತಿನ್ನಬೇಕು ಅನಿಸಿದಾಗಲೆಲ್ಲಾ ನೀರು ಕುಡಿಯಿರಿ. ಒಂದು ಲೋಟ ನೀರು ಕುಡಿದರೆ ಬಾಯಾರಿಕೆ ನೀಗುತ್ತದೆ. ಸಿಹಿ ತಿನ್ನುವ ಆಸೆ ದೂರವಾಗುತ್ತದೆ.

ಯಾವಾಗಲೂ ಸಿಹಿ ತಿನ್ನಬೇಕು ಅನಿಸುತ್ತಿದೆಯೇ? ಬಾಯಿಗೆ ಇದನ್ನು ಹಾಕಿಕೊಂಡರೆ ಸಾಕು
ಯಾವಾಗಲೂ ಸಿಹಿ ತಿನ್ನಬೇಕು ಅನಿಸುತ್ತಿದೆಯೇ? ಬಾಯಿಗೆ ಇದನ್ನು ಹಾಕಿಕೊಂಡರೆ ಸಾಕು
ಸಾಧು ಶ್ರೀನಾಥ್​
|

Updated on: Jan 03, 2024 | 12:25 PM

Share

ಇಂದಿನ ಕಾಲದಲ್ಲಿ ಮಧುಮೇಹದ ಸಮಸ್ಯೆ ಪ್ರತಿ ಮನೆಯಲ್ಲೂ ಇದೆ. ಜಗತ್ತಿನಾದ್ಯಂತ ಮಧುಮೇಹದಿಂದ ಬಳಲುತ್ತಿರುವವರ ಸಂಖ್ಯೆ ದಿನೆದಿನೇ ಹೆಚ್ಚುತ್ತಿದೆ. ಒಮ್ಮೆ ಮಧುಮೇಹ ಬಂದರೆ ಅದನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ, ಆದರೆ ಅದನ್ನು ನಿಯಂತ್ರಿಸಬಹುದು. ಮೇದೋಜ್ಜೀರಕ ಗ್ರಂಥಿಯಿಂದ ಇನ್ಸುಲಿನ್ ಹಾರ್ಮೋನ್ ಸ್ರವಿಸುತ್ತದೆ. ಈ ಇನ್ಸುಲಿನ್ ಸ್ರವಿಸದಿದ್ದರೆ ಅಥವಾ ಅಗತ್ಯಕ್ಕಿಂತ ಕಡಿಮೆ ಇದ್ದರೆ, ಅನೇಕ ಸಮಸ್ಯೆಗಳು ಉದ್ಭವಿಸಬಹುದು. ಆಗ ರಕ್ತದಲ್ಲಿನ ಸಕ್ಕರೆ ಹೆಚ್ಚಾಗುತ್ತದೆ. ಅಧಿಕ ತೂಕ ಇರುವವರಿಗೂ ಈ ಮಧುಮೇಹ ಬರುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತದೆ.

ಅಂತಹವರು ಕಡಿಮೆ ಸಕ್ಕರೆಯನ್ನು ಸೇವಿಸಬೇಕು. ಅದನ್ನು ತಿನ್ನದಿರುವುದೇ ಉತ್ತಮ. ಒಂದು ದಿನದಲ್ಲಿ 25 ಗ್ರಾಂ ಸಕ್ಕರೆಗಿಂತ ಹೆಚ್ಚು ತಿನ್ನಬೇಡಿ. ಆದರೆ ಸಕ್ಕರೆ ತಿನ್ನುವ ಬಯಕೆಯನ್ನು ನಿಯಂತ್ರಿಸಲಾಗುವುದಿಲ್ಲ. ಅದಕ್ಕಾಗಿಯೇ ಸಿಹಿ ಪದಾರ್ಥ ತಿನ್ನುವುದನ್ನು ನಿಯಂತ್ರಣದಲ್ಲಿಡಲು ಕೆಲವು ನಿಯಮಗಳನ್ನು ಅನುಸರಿಸಬೇಕು. ನಿಮಗೆ ಸಿಹಿ ತಿನ್ನಬೇಕು ಅನಿಸಿದಾಗಲೆಲ್ಲಾ ನೀರು ಕುಡಿಯಿರಿ. ಒಂದು ಲೋಟ ನೀರು ಕುಡಿದರೆ ಬಾಯಾರಿಕೆ ನೀಗುತ್ತದೆ. ಸಿಹಿ ತಿನ್ನುವ ಆಸೆ ದೂರವಾಗುತ್ತದೆ.

ಸಮಯಕ್ಕೆ ಸರಿಯಾಗಿ ಊಟ ಮಾಡಿ. ಸಮತೋಲಿತ ಊಟವನ್ನು ತೆಗೆದುಕೊಳ್ಳಿ. ಆಹಾರದಲ್ಲಿ ಸಾಕಷ್ಟು ಪ್ರೋಟೀನ್ ಮತ್ತು ಫೈಬರ್ ಇರುವಂತೆ ನೋಡಿಕೊಳ್ಳಬೇಕು. ಕಾಳುಗಳು, ಧಾನ್ಯಗಳು, ತರಕಾರಿಗಳು ಮತ್ತು ಹಣ್ಣುಗಳನ್ನು ಸಾಕಷ್ಟು ಸೇವಿಸಿ. ಇದು ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿಸುವುದಿಲ್ಲ. ಅದಕ್ಕಾಗಿಯೇ ನೀವು ಸರಿಯಾದ ಸಮಯಕ್ಕೆ ತಿನ್ನಬೇಕು.

Also Read: ಕಾಲುಗಳು ಮತ್ತು ಕೈ ತೋಳುಗಳಲ್ಲಿ ಈ ಲಕ್ಷಣಗಳು ಇವೆಯೇ? ನಿಮಗೆ ರಕ್ತಹೀನತೆ ಇರಬಹುದು

ಊಟ ಮಾಡುವಾಗ ಸಂತೃಪ್ತಿಯಿಂದ ತಿನ್ನಿ. ಟಿವಿ, ಫೋನ್ ನೋಡುತ್ತಾ ಊಟ ಮಾಡಿದರೆ ಅತಿಯಾಗಿ ತಿನ್ನುವ ಸಾಧ್ಯತೆ ಇರುತ್ತದೆ. ಕಾರ್ಬೋಹೈಡ್ರೇಟ್ಗಳು ಮತ್ತು ಸಿಹಿತಿಂಡಿಗಳ ಹೆಚ್ಚು ಆಕರ್ಷಣೆಯಿಂಧ ಹೆಚ್ಚು ಹೆಚ್ಚು ಹೊಟ್ಟೆ ಸೇರುತ್ತದೆ. ಅದರ ಬದಲಾಗಿ, ನಿಧಾನವಾಗಿ ಶಾಂತರಾಗಿ ತಿನ್ನಿ.

ಸಾಕಷ್ಟು ನಿದ್ರೆ ಮಾಡಬೇಕು. ಒತ್ತಡವನ್ನು ಕಡಿಮೆ ಮಾಡಲು ಪ್ರಯತ್ನಿಸಿ. ಕೇಕ್, ಸಿಹಿತಿಂಡಿಗಳು ಮತ್ತು ಪೇಸ್ಟ್ರಿಗಳನ್ನು ಮನೆಗೆ ತೆಗೆದುಕೊಂಡು ಹೋಗಬೇಡಿ. ಕಡಿಮೆ ಮಾತ್ರ ತಿನ್ನಿ. ಕೃತಕ ಸಿಹಿಕಾರಕಗಳನ್ನು ತಪ್ಪಿಸಿ. ಕೋಕಾ ಕೋಲಾ, ಥಮ್ಸ್​ಅಪ್ ಮುಂತಾದ ತಂಪು ಪಾನೀಯಗಳನ್ನು ಕುಡಿಯಬೇಡಿ. ಹಣ್ಣಿನ ರಸ ಮತ್ತು ಕ್ಯಾನ್ ನೀರನ್ನು ಕುಡಿಯಿರಿ. ಪ್ರತಿದಿನ ವಾಕಿಂಗ್​ ಮಾಡಿ. ಹೀಗೆ ಮಾಡುವುದರಿಂದ ತಿನ್ನುವುದರಲ್ಲಿ ಹೆಚ್ಚು ಆಸಕ್ತಿ ಇರುವುದಿಲ್ಲ. ನೀವು ಬಾಯಿಯಲ್ಲಿ ಗಮ್ ಅನ್ನು ಜಗಿಯುತ್ತಿದರೆ ನಿಮಗೆ ಹೆಚ್ಚು ಸಿಹಿ ತಿನ್ನುವ ಬಯಕೆ ಆಗುವುದಿಲ್ಲ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಡ್ರ್ಯಾಗನ್ ಬೋಟಿಂಗ್​​: ಮೈಸೂರಿಗೆ ಬರುವವರು ಇದನ್ನು ಮಿಸ್ ಮಾಡ್ಬೇಡಿ
ಡ್ರ್ಯಾಗನ್ ಬೋಟಿಂಗ್​​: ಮೈಸೂರಿಗೆ ಬರುವವರು ಇದನ್ನು ಮಿಸ್ ಮಾಡ್ಬೇಡಿ
ಆಂಧ್ರದ ಶ್ರೀಕಾಕುಳಂನಲ್ಲಿ ರೈಲಿನ ಮೇಲೆ ಹತ್ತಿದ ಯುವಕನ ಹುಚ್ಚಾಟ
ಆಂಧ್ರದ ಶ್ರೀಕಾಕುಳಂನಲ್ಲಿ ರೈಲಿನ ಮೇಲೆ ಹತ್ತಿದ ಯುವಕನ ಹುಚ್ಚಾಟ
ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ವಿಡಿಯೋ ನೋಡಿ
ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ವಿಡಿಯೋ ನೋಡಿ
ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಛಿದ್ರವಾದ ಕುಟುಂಬ
ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಛಿದ್ರವಾದ ಕುಟುಂಬ
ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ
ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ
ಬಿಗ್ ಬಾಸ್ ಫಿನಾಲೆಗೆ ಗಿಲ್ಲಿ, ಧನುಷ್: ಭವಿಷ್ಯ ನುಡಿದ ಸ್ಪಂದನಾ ಸೋಮಣ್ಣ
ಬಿಗ್ ಬಾಸ್ ಫಿನಾಲೆಗೆ ಗಿಲ್ಲಿ, ಧನುಷ್: ಭವಿಷ್ಯ ನುಡಿದ ಸ್ಪಂದನಾ ಸೋಮಣ್ಣ
ಸಿದ್ದರಾಮಯ್ಯ ಹೊಸ ದಾಖಲೆ: ಬೆಂಬಲಿಗರಿಂದ ನಾಟಿ ಕೋಳಿ ಔತಣ
ಸಿದ್ದರಾಮಯ್ಯ ಹೊಸ ದಾಖಲೆ: ಬೆಂಬಲಿಗರಿಂದ ನಾಟಿ ಕೋಳಿ ಔತಣ
ಆಂಧ್ರದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ದುರಂತ; ಸ್ಥಳೀಯರ ಸ್ಥಳಾಂತರ
ಆಂಧ್ರದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ದುರಂತ; ಸ್ಥಳೀಯರ ಸ್ಥಳಾಂತರ
ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ
ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ
ಮೂಳೆ ಬಿದ್ದು ಹೋಗೋಕಿಂತ ಮೊದಲು ಮದುವೆ ಆಗು: ಗಿಲ್ಲಿ ಮೇಲೆ ಅಶ್ವಿನಿ ಆಕ್ರೋಶ
ಮೂಳೆ ಬಿದ್ದು ಹೋಗೋಕಿಂತ ಮೊದಲು ಮದುವೆ ಆಗು: ಗಿಲ್ಲಿ ಮೇಲೆ ಅಶ್ವಿನಿ ಆಕ್ರೋಶ