AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡಕ ಧರಿಸುವ ಆತಂಕ ಬಿಡಿ; ಕಣ್ಣಿನ ಆರೋಗ್ಯಕ್ಕಾಗಿ ಈ 5 ಥೇರಪಿಗಳ ಮೊರೆ ಹೋಗಿ

ಜೀವನಶೈಲಿಯಲ್ಲಿನ ಬದಲಾವಣೆ, ಕೆಲಸದ ಒತ್ತಡ, ಆಹಾರ ಪದ್ಧತಿ, ಮಕ್ಕಳಿಂದ ಹಿಡಿದು ಹಿರಿಯರ ವರೆಗೆ ಎಲ್ಲರೂ ಪವರ್ ಕನ್ನಡಕವನ್ನು ಧರಿಸುವಂತೆ ಮಾಡಿದೆ. ದೃಷ್ಟಿ ಹೆಚ್ಚಿಸಲು ಯಾವುದೇ ವಿಶೇಷ ಔಷಧಿ ಇಲ್ಲ. ಆದರೆ ಈ ಕೆಲವು ಥೆರಪಿಗಳು ಕನ್ನಡಕದ ದಾಸರಾಗುವುದನ್ನು ತಪ್ಪಿಸಲು ಸಹಾಯ ಮಾಡುತ್ತದೆ.

ಕನ್ನಡಕ ಧರಿಸುವ ಆತಂಕ ಬಿಡಿ; ಕಣ್ಣಿನ ಆರೋಗ್ಯಕ್ಕಾಗಿ ಈ 5 ಥೇರಪಿಗಳ ಮೊರೆ ಹೋಗಿ
ಸಂಗ್ರಹ ಚಿತ್ರ
TV9 Web
| Updated By: preethi shettigar|

Updated on: Nov 24, 2021 | 8:12 AM

Share

ಇಂದಿನ ಕಾಲದಲ್ಲಿ ಯುವಕರಿಂದ ಹಿಡಿದು ಮಕ್ಕಳವರೆಗೆ ಪವರ್ ಹೊಂದಿರುವ ಕನ್ನಡಕ ಧರಿಸುವುದನ್ನು ನಾವು ನೋಡುತ್ತೇವೆ. ಹಿಂದಿನ ಕಾಲದಲ್ಲಿ ವಯಸ್ಸಾದ ನಂತರ ದೃಷ್ಟಿ ಕಡಿಮೆಯಾಗುತ್ತದೆ ಎಂಬ ಕಾರಣಕ್ಕೆ ಕನ್ನಡಕದ ಮೊರೆ ಹೋಗುತ್ತಿದ್ದರು. ಆದರೆ ಇಂದಿನ ಪರಿಸ್ಥಿತಿಯೇ ಬೇರೆ. ಜೀವನಶೈಲಿಯಲ್ಲಿನ ಬದಲಾವಣೆ, ಕೆಲಸದ ಒತ್ತಡ, ಆಹಾರ ಪದ್ಧತಿ, ಮಕ್ಕಳಿಂದ ಹಿಡಿದು ಹಿರಿಯರ ವರೆಗೆ ಎಲ್ಲರೂ ಪವರ್ ಕನ್ನಡಕವನ್ನು(Power glass) ಧರಿಸುವಂತೆ ಮಾಡಿದೆ. ದೃಷ್ಟಿ ಹೆಚ್ಚಿಸಲು ಯಾವುದೇ ವಿಶೇಷ ಔಷಧಿ ಇಲ್ಲ. ಆದರೆ ಈ ಕೆಲವು ಥೆರಪಿಗಳು (Therapy) ಕನ್ನಡಕದ ದಾಸರಾಗುವುದನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಹಾಗಿದ್ದರೆ ಯಾವ ಚಿಕಿತ್ಸೆಯು ನಿಮ್ಮನ್ನು ಕನ್ನಡಕದಿಂದ ದೂರವಾಗಿಸುತ್ತದೆ ಎಂಬ ಬಗ್ಗೆ ಈ ವರದಿ ನಿಮಗೆ ತಿಳಿಸುತ್ತದೆ.

ಕನ್ನಡಕ ಧರಿಸುವುದರಿಂದ ತಪ್ಪಿಸಲು ಈ 5 ಥೆರಪಿ ಅಭ್ಯಾಸ ಮಾಡಿಕೊಳ್ಳಿ ನೇತ್ರಧಾರ ಥೆರಪಿ (Netradhara Therapy) ನೇತ್ರಧಾರ ಥೆರಪಿಯು ಕಣ್ಣಿನ ಸಮಸ್ಯೆಯಿಂದ ದೂರ ಮಾಡಲು ಪ್ರಯೋಜನಕಾರಿಯಾಗಿದೆ. ಈ ಥೆರಪಿಯನ್ನು ನಿರ್ವಹಿಸಲು, ಮೂಗಿನ ಮೇಲೆ ನಿರಂತರವಾಗಿ 5 ರಿಂದ 6 ಇಂಚು ಎತ್ತರದಲ್ಲಿ 2 ರಿಂದ 3 ನಿಮಿಷಗಳ ಕಾಲ ನಿಮ್ಮ ಕಣ್ಣುಗಳಿಗೆ ಎಣ್ಣೆಯನ್ನು ಹಾಕಿ. ಇದು ನಿಮ್ಮ ಕಣ್ಣಿನ್ನು ಸ್ವಚ್ಛಗೊಳಿಸುತ್ತದೆ. ನಿರ್ವಿಶೀಕರಣ ಮಟ್ಟಕ್ಕೆ ಸಹ ಇದು ಕೆಲಸ ಮಾಡುತ್ತದೆ.

ಅಂಜನಾ ಥೆರಪಿ (Anjana Therapy)  ಅಂಜನಾ ಥೆರಪಿಯು ದೃಷ್ಟಿಯನ್ನು ಸುಧಾರಿಸುತ್ತದೆ. ಈ ಚಿಕಿತ್ಸೆಯಲ್ಲಿ ಬಳಸಲಾಗುವ ಔಷಧಿಗಳನ್ನು ಖನಿಜ, ಲೋಹ ಮತ್ತು ಗಿಡಮೂಲಿಕೆಗಳ ಮಿಶ್ರಣದಿಂದ ತಯಾರಿಸಲಾಗುತ್ತದೆ. ಈ ಎಲ್ಲಾ ವಸ್ತುಗಳನ್ನು ಮಿಶ್ರಣ ಮಾಡಿ ಪೇಸ್ಟ್ ಅನ್ನು ತಯಾರಿಸಿ. ನಂತರ ಅದನ್ನು ನಿಮ್ಮ ಕಣ್ಣುಗಳಿಗೆ ಅನ್ವಯಿಸಲಾಗುತ್ತದೆ. ಇದು ಕಣ್ಣಿಗೆ ಕನ್ನಡಕ ಧರಿಸುವುದರಿಂದ ನಿಮ್ಮನ್ನು ಕಾಪಾಡುತ್ತದೆ.

ಅಶ್ಯೋತನ ಥೆರಪಿ (Aschyotana Therapy) ಆರೋಗ್ಯಕರ ಆಹಾರ ಮತ್ತು ವ್ಯಾಯಾಮ ಮಾಡಿದ ನಂತರವೂ ಕನ್ನಡಕ ಧರಿಸುವ ಸಂದರ್ಭ ಎದುರಾದರೆ ಅಶ್ಯೋತನ ಥೆರಪಿ ಮಾಡಿಸಿ. ಅಶ್ಯೋತನ ಥೆರಪಿಯು ತುಂಬಾ ಉಪಯುಕ್ತವಾಗಿರುತ್ತದೆ. ಈ ಚಿಕಿತ್ಸೆಯಲ್ಲಿ, ಗಿಡಮೂಲಿಕೆಗಳಿಂದ ದ್ರವ ಔಷಧವನ್ನು ತಯಾರಿಸಲಾಗುತ್ತದೆ. ಇದರಲ್ಲಿ 8-10 ಹನಿಗಳನ್ನು ಮೂಗಿನ ಕ್ಯಾಂಥಸ್​ನಲ್ಲಿ ತೊಟ್ಟಿಕ್ಕುವಂತೆ ಮಾಡಲಾಗುತ್ತದೆ. ಇದು ನಿಮ್ಮ ಕಣ್ಣುಗಳ ಜೀವಕೋಶಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ.

ತರ್ಪಣ ಥೆರಪಿ (Tharpana Therapy) ತರ್ಪಣ ಚಿಕಿತ್ಸೆಯು ದೃಷ್ಟಿಯನ್ನು ಹೆಚ್ಚಿಸುವುದಲ್ಲದೆ ಕಣ್ಣುಗಳನ್ನು ತಂಪಾಗಿಸುತ್ತದೆ. ಈ ಚಿಕಿತ್ಸೆಯಲ್ಲಿ, ಹಿಟ್ಟಿನ ರೂಪದಲ್ಲಿ ತಯಾರಿಸಿ, ಅದನ್ನು ಕಣ್ಣುಗಳ ಹಚ್ಚಲಾಗುತ್ತದೆ. ಇದರ ನಂತರ, ಗಿಡಮೂಲಿಕೆಗಳಿಂದ ತಯಾರಿಸಿದ ಔಷಧವನ್ನು ಒಳಗೆ ಹಾಕಲಾಗುತ್ತದೆ ಮತ್ತು ಸ್ವಲ್ಪ ಸಮಯದವರೆಗೆ ಬಿಡಲಾಗುತ್ತದೆ. ಇದು ಕಣ್ಣುಗಳ ಜೀವಕೋಶಗಳಿಗೆ ಪೋಷಣೆಯನ್ನು ಒದಗಿಸುತ್ತದೆ. ಕಣ್ಣಿನ ದೃಷ್ಟಿ ಶಕ್ತಿ ಹೆಚ್ಚಿಸಲು ಇದು ಉಪಯುಕ್ತವಾಗಿದೆ.

ಶಿರೋಧರ ಥೆರಪಿ (Shirodhara Therapy) ಈ ಚಿಕಿತ್ಸೆಯು ಅನೇಕ ವಿಷಯಗಳಿಗೆ ಪ್ರಯೋಜನಕಾರಿಯಾಗಿದೆ. ಈ ಥೆರಪಿಯಲ್ಲಿ ರೋಗಿಯನ್ನು ಮೇಜಿನ ಮೇಲೆ ಮಲಗಿಸಿ, ನಂತರ ಸುಮಾರು 45 ನಿಮಿಷಗಳ ಕಾಲ  ಹಣೆಯ ಮೇಲೆ ಔಷಧೀಯ ಎಣ್ಣೆಯನ್ನು ಸುರಿಯಲಾಗುತ್ತದೆ. ಇದು ಕಣ್ಣಿನ ಆರೈಕೆ ಜತೆಗೆ ದೇಹಕ್ಕೂ ಆರಾಮದಾಯಕವಾಗಿರುತ್ತದೆ.

ಇದನ್ನೂ ಓದಿ: Dark eye circles: ಕಣ್ಣಿನ ಸುತ್ತ ಡಾರ್ಕ್ ಸರ್ಕಲ್​ನಿಂದ ವಯಸ್ಕರಂತೆ ಕಾಣುತ್ತಿದ್ದೀರಾ? ತಜ್ಞರ ಸಲಹೆಗಳೇನು ತಿಳಿಯಿರಿ

Eye Health: ನಿಮ್ಮ ದೃಷ್ಟಿ ಕ್ಷೀಣಿಸುತ್ತಿದೆಯೇ? ಕಣ್ಣುಗಳ ಆರೋಗ್ಯ ಸುರಕ್ಷತೆಗೆ ಇಲ್ಲಿವೆ ಸಲಹೆಗಳು

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!