AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tongue Color: ಆಸ್ಪತ್ರೆಗೆ ಹೋದಾಗ ವೈದ್ಯರು ಮೊದಲು ನಾಲಿಗೆ ನೋಡುವುದೇಕೆ ಗೊತ್ತಾ?

ಅನಾರೋಗ್ಯ ಎಂದು ಆಸ್ಪತ್ರೆಗೆ ಹೋದಾಗ ವೈದ್ಯರು ಮೊದಲು ನೋಡುವುದು ನಮ್ಮ ನಾಲಿಗೆಯನ್ನು. ನಿಮಗೆ ಗೊತ್ತಾ? ವೈದ್ಯರು ನಾಲಿಗೆ ನೋಡಲು ಕಾರಣವೇನು? ಸಾಮಾನ್ಯವಾಗಿ ನಾಲಿಗೆಯ ಬಣ್ಣವು ನೀವು ಆರೋಗ್ಯವಾಗಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ಹೇಳುತ್ತದೆ. ಜೊತೆಗೆ ನಾಲಿಗೆಯ ಬಣ್ಣವು ನಿಮ್ಮ ದೇಹದಲ್ಲಿನ ವಿವಿಧ ರೋಗಗಳನ್ನು ಸೂಚಿಸುತ್ತದೆ. ಹಾಗಾದರೆ ಆರೋಗ್ಯವಂತರ ನಾಲಿಗೆ ಹೇಗಿರುತ್ತದೆ? ಯಾವ ಬಣ್ಣ ಯಾವ ರೋಗಗಳನ್ನು ಸೂಚಿಸುತ್ತವೆ ಎಂಬುದರ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

Tongue Color: ಆಸ್ಪತ್ರೆಗೆ ಹೋದಾಗ ವೈದ್ಯರು ಮೊದಲು ನಾಲಿಗೆ ನೋಡುವುದೇಕೆ ಗೊತ್ತಾ?
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Sep 18, 2024 | 6:01 PM

Share

ನಾವು ಅನಾರೋಗ್ಯ ಎಂದು ಆಸ್ಪತ್ರೆಗೆ ಹೋದಾಗ ವೈದ್ಯರು ಮೊದಲು ನೋಡುವುದು ನಮ್ಮ ನಾಲಿಗೆಯನ್ನು. ನಿಮಗೆ ಗೊತ್ತಾ? ವೈದ್ಯರು ನಾಲಿಗೆ ನೋಡಲು ಕಾರಣವೇನು? ಸಾಮಾನ್ಯವಾಗಿ ನಾಲಿಗೆಯ ಬಣ್ಣವು ನೀವು ಆರೋಗ್ಯವಾಗಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ಹೇಳುತ್ತದೆ. ಜೊತೆಗೆ ನಾಲಿಗೆಯ ಬಣ್ಣವು ನಿಮ್ಮ ದೇಹದಲ್ಲಿನ ವಿವಿಧ ರೋಗಗಳನ್ನು ಸೂಚಿಸುತ್ತದೆ. ಹಾಗಾದರೆ ಆರೋಗ್ಯವಂತರ ನಾಲಿಗೆ ಹೇಗಿರುತ್ತದೆ? ಯಾವ ಬಣ್ಣ ಯಾವ ರೋಗಗಳನ್ನು ಸೂಚಿಸುತ್ತವೆ ಎಂಬುದರ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

ಬಿಳಿ ನಾಲಿಗೆ: ನಿಮ್ಮ ನಾಲಿಗೆಯ ಮೇಲೆ ಬಿಳಿ ಕಲೆಗಳು ಯೀಸ್ಟ್ ಸೋಂಕಿನ ಸಂಕೇತವಾಗಿದೆ. ಈ ಬಿಳಿ ಕಲೆಗಳು ಹೆಚ್ಚಾಗಿ ಮಕ್ಕಳು ಅಥವಾ ವಯಸ್ಸಾದವರಲ್ಲಿ ಕಾಣಿಸಿಕೊಳ್ಳುತ್ತವೆ. ಜೊತೆಗೆ ಈ ಬಿಳಿ ನಾಲಿಗೆ ನಿರ್ಜಲೀಕರಣದ ಸಮಸ್ಯೆಯನ್ನು ಕೂಡ ಸೂಚಿಸುತ್ತದೆ. ಲ್ಯುಕೋಪ್ಲಾಕಿಯಾದಲ್ಲಿಯೂ ನಾಲಿಗೆ ಬಿಳಿಯಾಗಿ ಕಾಣುತ್ತದೆ.

ಕಪ್ಪು ನಾಲಿಗೆ: ನಿಮ್ಮ ನಾಲಿಗೆ ಕಪ್ಪು ಬಣ್ಣದಲ್ಲಿದ್ದರೆ, ಅದು ಗಂಟಲು ಸೋಂಕು ಅಥವಾ ಬ್ಯಾಕ್ಟೀರಿಯಾದ ಸಂಕೇತವಾಗಿದೆ. ಔಷಧಿಗಳನ್ನು ಹೆಚ್ಚಾಗಿ ಬಳಸುವವರಲ್ಲಿಯೂ ನಾಲಿಗೆ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಅಂತೆಯೇ, ಕೆಲವು ಮಧುಮೇಹಿಗಳಿಗೂ, ಕ್ಯಾನ್ಸರ್ ರೋಗಿಗಳಲ್ಲಿಯೂ ಸಹ ನಾಲಿಗೆ ಕಪ್ಪಾಗುತ್ತದೆ. ಹೊಟ್ಟೆ ಹುಣ್ಣಿನಿಂದ ಬಳಲುತ್ತಿರುವ ಜನರಲ್ಲಿ ನಾಲಿಗೆಯ ಬಣ್ಣ ಬದಲಾಗುತ್ತದೆ. ಆದ್ದರಿಂದ ಅಂತಹ ರೋಗಲಕ್ಷಣಗಳು ಕಾಣಿಸಿಕೊಂಡರೆ, ಮೊದಲು ವೈದ್ಯರನ್ನು ಸಂಪರ್ಕಿಸಲು ಮರೆಯಬೇಡಿ.

ಹಳದಿ ನಾಲಿಗೆ: ನಿಮ್ಮ ನಾಲಿಗೆ ಹಳದಿಯಾಗಿದ್ದರೆ ಅದು ಕಾಮಾಲೆಯ ಲಕ್ಷಣವಾಗಿದೆ. ಆದರೆ ಇದು ಕೇವಲ ಆರಂಭಿಕ ಚಿಹ್ನೆ ಮಾತ್ರ. ನಾಲಿಗೆಯ ಬಣ್ಣ ಬದಲಾದರೆ, ನೀವು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

ಕಂದು ಅಥವಾ ನೀಲಿ: ನಿಮ್ಮ ನಾಲಿಗೆ ಕಂದು ಅಥವಾ ನೀಲಿ ಬಣ್ಣಕ್ಕೆ ತಿರುಗಿದರೆ ಅದು ಅಪಾಯಕಾರಿ. ಕಂದು ನಾಲಿಗೆ ಹೃದಯದ ಸಮಸ್ಯೆಗಳ ಸಂಕೇತವಾಗಿದೆ. ಹೃದಯವು ರಕ್ತವನ್ನು ಸರಿಯಾಗಿ ಪಂಪ್ ಮಾಡಲು ಸಾಧ್ಯವಾಗದಿದ್ದಾಗ ಅಥವಾ ರಕ್ತದಲ್ಲಿ ಆಮ್ಲಜನಕವಿಲ್ಲದಿದ್ದಾಗ ನಾಲಿಗೆಯ ಮೇಲೆ ಕಂದು ಲೇಪನ ಉಂಟಾಗುತ್ತದೆ.

ತಿಳಿ ಗುಲಾಬಿ: ನಾಲಿಗೆಯು ಸಂಪೂರ್ಣವಾಗಿ ಮಸುಕಾದ ಅಥವಾ ತಿಳಿ ಗುಲಾಬಿ ಬಣ್ಣದಲ್ಲಿದ್ದರೆ, ಅದು ದೇಹದಲ್ಲಿ ರಕ್ತದ ಕೊರತೆಯನ್ನು ಸೂಚಿಸುತ್ತದೆ. ರಕ್ತಹೀನತೆ ಮತ್ತು ವಿಟಮಿನ್ ಬಿ -12 ಕೊರತೆಯೂ ಇದಕ್ಕೆ ಕಾರಣವಾಗಬಹುದು. ಈ ಸಂದರ್ಭದಲ್ಲಿ, ನೀವು ತಕ್ಷಣ ವೈದ್ಯರನ್ನು ಸಂಪರ್ಕಿಸಿ ಇದಕ್ಕೆ ಸರಿಯಾದ ಔಷಧಗಳನ್ನು ತೆಗೆದುಕೊಳ್ಳಬೇಕು.

ಇದನ್ನೂ ಓದಿ: ಮಧುಮೇಹದ ಅಪಾಯವನ್ನು ಹೆಚ್ಚಿಸುವ ಈ ಆಹಾರಗಳನ್ನು ಸೇವನೆ ಮಾಡಬೇಡಿ

ಆರೋಗ್ಯವಂತ ವ್ಯಕ್ತಿಗಳ ನಾಲಿಗೆಯ ಬಣ್ಣ ಹೇಗಿರಬೇಕು?

ಆರೋಗ್ಯ ತಜ್ಞರ ಪ್ರಕಾರ, ಕಲೆಗಳಿಲ್ಲದ ನಾಲಿಗೆಯನ್ನು ಹೊಂದಿರುವವರು ಆರೋಗ್ಯವಾಗಿರುತ್ತಾರೆ ಜೊತೆಗೆ ನಾಲಿಗೆ ಗಾಢವಾದ ಗುಲಾಬಿ ಬಣ್ಣದಲ್ಲಿದ್ದರೆ ಅದು ಆರೋಗ್ಯವಂತರ ನಾಲಿಗೆಯಾಗಿರುತ್ತದೆ. ಆದರೆ ನಾಲಿಗೆಯ ಮೇಲೆ ತೇವಾಂಶದ ಕೊರತೆಯೂ ರೋಗದ ಸಂಕೇತವಾಗಿದೆ ಎಂಬುದನ್ನು ಮರೆಯಬೇಡಿ. ಅಂದರೆ ಗಾಢವಾದ ಗುಲಾಬಿ ಬಣ್ಣ ಇದ್ದು ತೇವಾಂಶದ ಕೊರತೆ ಇದ್ದರೆ ನೀವು ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Preethi Bhat Gunavante
Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಹೇಗೆ?
ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಹೇಗೆ?
ಡಿಸಿಎಂಗಳ ಆಯ್ಕೆಯೇ ಈಗ ಕಾಂಗ್ರೆಸ್​​ ಹೈಕಮಾಂಡ್​​ಗೆ ದೊಡ್ಡ ಸವಾಲು!
ಡಿಸಿಎಂಗಳ ಆಯ್ಕೆಯೇ ಈಗ ಕಾಂಗ್ರೆಸ್​​ ಹೈಕಮಾಂಡ್​​ಗೆ ದೊಡ್ಡ ಸವಾಲು!