AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂತ್ರನಾಳ ಸೋಂಕು, ರಕ್ತಹೀನತೆಗೆ ಆಯುರ್ವೇದ ಪರಿಹಾರ; ಪತಂಜಲಿ ಯುರಿನಿಲ್ ವಟಿ ಔಷಧ

Patanjali's ayurvedic solution for UTI and Anaemia: ನೀವು ಯುಟಿಐ ಅಥವಾ ಮೂತ್ರನಾಳ ಸೋಂಕಿನಿಂದ ಬಳಲುತ್ತಿದ್ದರೆ ಆಯುರ್ವೇದ ಪರಿಹಾರ ಲಭ್ಯ ಇದೆ. ಪತಂಜಲಿಯ ದಿವ್ಯ ಉರಿನಿಲ್ ವಟಿ ಈ ಸಮಸ್ಯೆ ನಿವಾರಣೆಗೆ ಪ್ರಯೋಜನಕಾರಿಯಾಗಬಹುದು. ಯುಟಿಐ ಮಾತ್ರವಲ್ಲದೆ, ರಕ್ತಹೀನತೆಯ ಸಮಸ್ಯೆಗೂ ಈ ಔಷಧ ಪರಿಣಾಮಕಾರಿಯಾಗಿದೆ.

ಮೂತ್ರನಾಳ ಸೋಂಕು, ರಕ್ತಹೀನತೆಗೆ ಆಯುರ್ವೇದ ಪರಿಹಾರ; ಪತಂಜಲಿ ಯುರಿನಿಲ್ ವಟಿ ಔಷಧ
ಪತಂಜಲಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 03, 2025 | 7:08 PM

Share

Patanjali Divya Urinil Vati usage and benefits: ಯುಟಿಐ (UTI- Urinary Tract Infection) ತುಂಬಾ ಸಾಮಾನ್ಯ ಹಾಗೂ ಬಹಳ ಗಂಭೀರವಾಗಿರುವ ಆರೋಗ್ಯ ಸಮಸ್ಯೆ. ಮೂತ್ರಕೋಶ ಮತ್ತು ಅದರ ನಾಳವು ಬ್ಯಾಕ್ಟೀರಿಯಾ ಸೋಂಕಿಗೆ ಒಳಗಾದಾಗ ಯುಟಿಐ ಸಂಭವಿಸುತ್ತದೆ. ಯುಟಿಐಗೆ ಕಾರಣ ಇ-ಕೋಲಿ ಬ್ಯಾಕ್ಟೀರಿಯಾ. ಅಸುರಕ್ಷಿತ ಲೈಂಗಿಕತೆ, ದೀರ್ಘಕಾಲದವರೆಗೆ ಮೂತ್ರವನ್ನು ಹಿಡಿದಿಟ್ಟುಕೊಳ್ಳುವುದು, ಸೋಂಕಿತ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಮಾಡುವುದು ಸೇರಿ ಇನ್ನೂ ಹಲವು ಕಾರಣಗಳಿಗೆ ಯುಟಿಐ ಹರಡಬಹುದು. ವೈದ್ಯರು ಈ ಸಮಸ್ಯೆಗೆ ಆ್ಯಂಟಿಬಯೋಟಿಕ್ಸ್ ನೀಡುತ್ತಾರೆ. ಆದರೆ, ಆಯುರ್ವೇದಲ್ಲಿ ಮೂತ್ರನಾಳ ಸೋಂಕಿಗೆ ಚಿಕಿತ್ಸೆ ಇದೆಯಾ?

ಈ ಯುಟಿಐ ಸಮಸ್ಯೆಗೆ ಪತಂಜಲಿ ತಮ್ಮ ಸಂಶೋಧನೆಯಿಂದ ಔಷಧವನ್ನು ತಯಾರಿಸಿರುವುದಾಗಿ ಹೇಳಿಕೊಂಡಿದೆ. ಇದು ಯುಟಿಐ ಮತ್ತು ರಕ್ತಹೀನತೆಯನ್ನು ನಿಯಂತ್ರಿಸಬಹುದು. ಈ ಔಷಧಿಗೆ ಪತಂಜಲಿ ದಿವ್ಯ ಉರಿನಿಲ್ ವಟಿ (Divya Urinil Vati) ಎಂದು ಹೆಸರಿಸಲಾಗಿದೆ. ದಿವ್ಯ ಉರಿನಿಲ್ ವಟಿ ಸುರಕ್ಷಿತ ಮತ್ತು ಹರ್ಬಲ್ ಆಯುರ್ವೇದ ಔಷಧವಾಗಿದೆ. ಇದು ಯುಟಿಐ ಮತ್ತು ರಕ್ತಹೀನತೆಯಂತಹ ಸಮಸ್ಯೆಗಳಲ್ಲಿ ವಿಶೇಷವಾಗಿ ಪ್ರಯೋಜನಕಾರಿ ಎಂದು ಪತಂಜಲಿ ಸಂಸ್ಥೆ ಹೇಳಿಕೊಳ್ಳುತ್ತದೆ. ಇದರ ಮುಖ್ಯ ಘಟಕಾಂಶವಾದ ಕರಮರ್ದ (ನೆಲ್ಲೀಕಾಯಿ) ನೈಸರ್ಗಿಕವಾಗಿ ದೇಹವು ಸೋಂಕಿನ ವಿರುದ್ಧ ಹೋರಾಡಲು ಮತ್ತು ರಕ್ತದ ಕೊರತೆಯನ್ನು ನೀಗಿಸಲು ಸಹಾಯ ಮಾಡುತ್ತದೆ. ಈ ಔಷಧಿಯನ್ನು ಸಂಪೂರ್ಣ ಗಿಡಮೂಲಿಕೆಗಳಿಂದ ಮಾಡಲಾಗಿದೆ. ಯಾವುದೇ ಪ್ರಮುಖ ಅಡ್ಡಪರಿಣಾಮಗಳು ವರದಿಯಾಗಿಲ್ಲ. ಆದರೂ ಕೂಡ ತಜ್ಞರ ಸಲಹೆ ಮೇರೆಗೆ ಮಾತ್ರವೇ ಇದನ್ನು ಸೇವಿಸುವುದು ಸರಿ.

ಯುಟಿಐ ತಪ್ಪಿಸಲು ಆಯುರ್ವೇದ ಚಿಕಿತ್ಸೆ

ಇಂದಿನ ಒತ್ತಡದ ಜೀವನ ಮತ್ತು ಕೆಟ್ಟ ಆಹಾರ ಪದ್ಧತಿಯಿಂದಾಗಿ, ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತವೆ. ಎರಡು ಪ್ರಮುಖ ಸಮಸ್ಯೆಗಳೆಂದರೆ ಮೂತ್ರದ ಸೋಂಕು (ಯುಟಿಐ) ಮತ್ತು ರಕ್ತಹೀನತೆ (Anaemia). ಈ ಎರಡೂ ಸಮಸ್ಯೆಗಳನ್ನು ನಿವಾರಿಸಲು ಆಯುರ್ವೇದದಲ್ಲಿ ಅನೇಕ ಔಷಧಿಗಳನ್ನು ಉಲ್ಲೇಖಿಸಲಾಗಿದೆ. ಅವುಗಳಲ್ಲಿ ಒಂದು ದಿವ್ಯ ಉರಿನಿಲ್ ವಟಿ. ಇದು ಗಿಡಮೂಲಿಕೆ ಔಷಧವಾಗಿದ್ದು, ಇದನ್ನು ಆಯುರ್ವೇದ ವಿಧಾನಗಳಿಂದ ತಯಾರಿಸಲಾಗುತ್ತದೆ ಮತ್ತು ಇದರ ಮುಖ್ಯ ಘಟಕಾಂಶವೆಂದರೆ ಕರಂದಾ (ನೆಲ್ಲಿ) ಸಾರ.

ಇದನ್ನೂ ಓದಿ: ಮೂತ್ರಪಿಂಡದಲ್ಲಿ ಕಲ್ಲು ಮತ್ತಿತರ ಸಮಸ್ಯೆಗಳಿಗೆ ಆಯುರ್ವೇದ ಪರಿಹಾರ; ಪತಂಜಲಿಯ ಅಶ್ಮರಿಹರ್ ಕ್ವಾತ್

ದಿವ್ಯ ಉರಿನಿಲ್ ವಟಿ ಔಷಧಿಯ ಅಂಶಗಳು

ನೆಲ್ಲಿಕಾಯಿಯಲ್ಲಿ ಆ್ಯಂಟಿ ಆಕ್ಸಿಡೆಂಟ್ಸ್, ಐರನ್ ಮತ್ತು ವಿಟಾಮಿನ್​ಗಳು (ಜೀವಸತ್ವ) ಸಮೃದ್ಧವಾಗಿವೆ. ಆಯುರ್ವೇದದಲ್ಲಿ, ಇದನ್ನು ರಕ್ತವರ್ಧಕ ಎಂದು ಪರಿಗಣಿಸಲಾಗುತ್ತದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ದಿವ್ಯ ಉರಿನಿಲ್ ವಟಿ ಮೂತ್ರಕೋಶದ ಸಮಸ್ಯೆಗಳು ಮತ್ತು ಸೋಂಕುಗಳನ್ನು ನಿವಾರಿಸಲು ಸಹ ಸಹಾಯ ಮಾಡುತ್ತದೆ.

ದಿವ್ಯ ಉರಿನಿಲ್ ವಟಿ ಯಾವ ರೋಗಗಳಿಗೆ ಪ್ರಯೋಜನಕಾರಿ?

ಯುಟಿಐ (ಮೂತ್ರನಾಳದ ಸೋಂಕು): ಪದೇ ಪದೇ ಮೂತ್ರ ವಿಸರ್ಜನೆ, ಬರ್ನಿಂಗ್ ಸೆನ್ಸ್ ಇವು ಯುಟಿಐನ ಸಾಮಾನ್ಯ ರೋಗಲಕ್ಷಣವಾಗಿವೆ. ಕರಮರ್ದ ಸಾರವು ಮೂತ್ರನಾಳವನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ ಮತ್ತು ಸೋಂಕನ್ನು ಉಂಟುಮಾಡುವ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ರಕ್ತಹೀನತೆ: ದೇಹದಲ್ಲಿ ರಕ್ತದ ಕೊರತೆ ಉಂಟಾದಾಗ ಅಥವಾ ಹಿಮೋಗ್ಲೋಬಿನ್ ಮಟ್ಟ ಕಡಿಮೆಯಾದಾಗ, ಆಯಾಸ, ದೌರ್ಬಲ್ಯ, ತಲೆತಿರುಗುವಿಕೆ ಮುಂತಾದ ಸಮಸ್ಯೆಗಳು ಉಂಟಾಗುತ್ತವೆ. ಕರಮರ್ದದಲ್ಲಿರುವ ಕಬ್ಬಿಣವು ರಕ್ತದ ಕೊರತೆಯನ್ನು ನೀಗಿಸಲು ಸಹಾಯ ಮಾಡುತ್ತದೆ. ಈ ಔಷಧಿ ದೇಹದಲ್ಲಿ ರಕ್ತದ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ದಿವ್ಯ ಉರಿನಿಲ್ ವಟಿ ತೆಗೆದುಕೊಳ್ಳುವುದು ಹೇಗೆ

ಡೋಸೇಜ್- ದಿನಕ್ಕೆ ಎರಡು ಬಾರಿ 1 ಅಥವಾ 2 ಕ್ಯಾಪ್ಸುಲ್‌ಗಳನ್ನು ಉಗುರು ಬೆಚ್ಚಗಿನ ನೀರಿನಿಂದ ತೆಗೆದುಕೊಳ್ಳಿ.

ಯಾವಾಗ ತೆಗೆದುಕೊಳ್ಳಬೇಕು- ಊಟಕ್ಕೆ ಮೊದಲು ಇದನ್ನು ಸೇವಿಸುವುದು ಹೆಚ್ಚು ಪರಿಣಾಮಕಾರಿ ಎಂದು ಪರಿಗಣಿಸಲಾಗುತ್ತದೆ.

ಎಚ್ಚರಿಕೆ- ಡೋಸೇಜ್ ಕೂಡ ವ್ಯಕ್ತಿಯ ಸ್ಥಿತಿ ಮತ್ತು ಸಮಸ್ಯೆಯ ತೀವ್ರತೆಯನ್ನು ಅವಲಂಬಿಸಿರುತ್ತದೆ. ಆದ್ದರಿಂದ ದೀರ್ಘಕಾಲದವರೆಗೆ ತೆಗೆದುಕೊಳ್ಳುವ ಮೊದಲು ಆಯುರ್ವೇದ ತಜ್ಞರನ್ನು ಸಂಪರ್ಕಿಸುವುದು ಉತ್ತಮ.

ಇದನ್ನೂ ಓದಿ: ಮಳೆಗಾಲದಲ್ಲಿ ರೋಗಬಾಧೆ ಅಧಿಕ; ಮನೆಮದ್ದು ಅತ್ಯುತ್ತಮ ಪರಿಹಾರ; ಇಲ್ಲಿದೆ ಬಾಬಾ ರಾಮದೇವ್ ಟಿಪ್ಸ್

ದಿವ್ಯ ಉರಿನಿಲ್ ವಟಿಯ ಪ್ರಯೋಜನಗಳು

  • ಮೂತ್ರಕೋಶ ಮತ್ತು ಮೂತ್ರನಾಳವನ್ನು ಆರೋಗ್ಯಕರವಾಗಿಡಲು ಸಹಾಯಕ
  • ಮರುಕಳಿಸುವ ಯುಟಿಐ ನಿಂದ ಪರಿಹಾರ
  • ದೇಹದಲ್ಲಿನ ರಕ್ತದ ಕೊರತೆಯನ್ನು ನಿವಾರಿಸಲು ಮತ್ತು ಹಿಮೋಗ್ಲೋಬಿನ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ
  • ಆಯಾಸ, ದೌರ್ಬಲ್ಯ ಮತ್ತು ತಲೆತಿರುಗುವಿಕೆ ಮುಂತಾದ ಸಮಸ್ಯೆಗಳಿಂದ ಪರಿಹಾರ
  • ನೈಸರ್ಗಿಕ ಮತ್ತು ಗಿಡಮೂಲಿಕೆಯಾಗಿರುವುದರಿಂದ, ಇದರ ಅಡ್ಡಪರಿಣಾಮಗಳು ತೀರಾ ಕಡಿಮೆ

ಮುನ್ನಚ್ಚರಿಕೆಗಳು

ಗರ್ಭಿಣಿಯರು ಮತ್ತು ಹಾಲುಣಿಸುವ ಮಹಿಳೆಯರು ವೈದ್ಯರ ಸಲಹೆಯ ಮೇರೆಗೆ ಮಾತ್ರ ಇದನ್ನು ತೆಗೆದುಕೊಳ್ಳಬೇಕು. ಬೇರೆ ಯಾವುದೇ ಗಂಭೀರ ಕಾಯಿಲೆಗೆ ಔಷಧಿ ತೆಗೆದುಕೊಳ್ಳುತ್ತಿರುವವರು ಇದನ್ನು ತೆಗೆದುಕೊಳ್ಳುವ ಮೊದಲು ತಜ್ಞರನ್ನು ಸಂಪರ್ಕಿಸಬೇಕು. ಮಕ್ಕಳಿಗೆ ನೀಡುವ ಮೊದಲು ಆಯುರ್ವೇದ ವೈದ್ಯರ ಸಲಹೆ ಕೇಳಿ.

ಇನ್ನಷ್ಟು ಆರೋಗ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ