ಸೋಮವಾರ ಹೆಚ್ಚು ಹೃದಯಾಘಾತ ಆಗುತ್ತದೆ ಯಾಕೆ? ಇಲ್ಲಿದೆ ತಜ್ಞರ ಅಭಿಪ್ರಾಯ

ಸೋಮವಾರ ಸಾಮಾನ್ಯವಾಗಿ ಹೊಸ ಕೆಲಸ ಮತ್ತು ಮತ್ತೊಂದು ವಾರ ಪ್ರಾರಂಭವಾಗುವುದರಿಂದ ಅದರೊಂದಿಗೆ ಸಾಕಷ್ಟು ಒತ್ತಡ ಮತ್ತು ಆತಂಕವನ್ನು ತರುತ್ತದೆ, ವಿಶೇಷವಾಗಿ ವೃತ್ತಿಪರ ಜವಾಬ್ದಾರಿಗಳಿಗೆ ಸಂಬಂಧಿಸಿದವರಲ್ಲಿ ಹೆಚ್ಚಿದ ಒತ್ತಡದಿಂದಾಗಿ ಹೃದ್ರೋಗದ ಬೆಳವಣಿಗೆಗೆ ಕಾರಣವಾಗಬಹುದು ಮತ್ತು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ. ಆದ್ದರಿಂದ, ವಾರಾಂತ್ಯದ ನಂತರ ಕೆಲಸಕ್ಕೆ ಮರಳುವ ವ್ಯಕ್ತಿಗಳು ಅನುಭವಿಸುವ ಒತ್ತಡವು ಸೋಮವಾರದಂದು ಮಾರಣಾಂತಿಕ ಹೃದಯಾಘಾತಕ್ಕೆ ಕಾರಣವಾಗುತ್ತದೆ.

ಸೋಮವಾರ ಹೆಚ್ಚು ಹೃದಯಾಘಾತ ಆಗುತ್ತದೆ ಯಾಕೆ? ಇಲ್ಲಿದೆ ತಜ್ಞರ ಅಭಿಪ್ರಾಯ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 17, 2024 | 4:08 PM

ಇತ್ತೀಚಿನ ವರ್ಷಗಳಲ್ಲಿ ಹೃದಯಾಘಾತದ ಪ್ರಮಾಣ ವೇಗವಾಗಿ ಹೆಚ್ಚಾಗುತ್ತಿದೆ. ವಿಶೇಷವಾಗಿ 40 ವರ್ಷದೊಳಗಿನ ವಯಸ್ಕರು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಆದರೆ ಇದೊಂದು ವರದಿ ಹೇಳುವ ಪ್ರಕಾರ, ಈಗೀಗ ಹೃದಯಾಘಾತ ಸಾಮಾನ್ಯವಾಗಿದ್ದರೂ ಕೂಡ ಸೋಮವಾರದಂದು ಹೃದಯಾಘಾತ ಹೆಚ್ಚಾಗುತ್ತಿದೆ ಎಂದು ಹೇಳಿದೆ. ಬ್ರಿಟಿಷ್ ಹಾರ್ಟ್ ಫೌಂಡೇಶನ್ (ಬಿಎಚ್ಎಫ್) ನ ಇತ್ತೀಚಿನ ವರದಿಯು ಇತರ ಸಮಯಕ್ಕಿಂತ ಸೋಮವಾರ ಹೃದಯಾಘಾತದ ಸಾಧ್ಯತೆ ಹೆಚ್ಚು ಎಂದು ಹೇಳಿದೆ ಮತ್ತು ಇದನ್ನು ‘ಬ್ಲೂ ಸೋಮವಾರ’ (‘Blue Monday’ phenomenon) ವಿದ್ಯಮಾನ ಎಂದೂ ಕರೆಯಲಾಗುತ್ತಿದೆ, ವಾರದ ಇತರ ದಿನಗಳಿಗಿಂತ ಸೋಮವಾರ ಶೇಕಡಾ 13% ರಷ್ಟು ಹಾರ್ಟ್ ಅಟ್ಯಾಕ್ ಹೆಚ್ಚಾಗಿದೆ. ಇದಲ್ಲದೆ, ಹೃದಯರಕ್ತನಾಳದ ಸಮಸ್ಯೆಗಳು ಹೆಚ್ಚಾಗುವುದು ಕೂಡ ಬೆಳಿಗ್ಗೆ 6 ರಿಂದ 10 ರ ನಡುವೆ, ಮುಖ್ಯವಾಗಿ ವ್ಯಕ್ತಿಯು ಎಚ್ಚರವಾದಾಗ ರಕ್ತದಲ್ಲಿನ ಕಾರ್ಟಿಸೋಲ್ ಮತ್ತು ಇತರ ಹಾರ್ಮೋನುಗಳು ಹೆಚ್ಚಾಗುತ್ತವೆ ಎಂದು ತಜ್ಞರು ತಿಳಿಸಿದ್ದಾರೆ.

ಆರೋಗ್ಯ ತಜ್ಞರ ಪ್ರಕಾರ, ಒಬ್ಬ ವ್ಯಕ್ತಿಯು ಒತ್ತಡದಲ್ಲಿದ್ದಾಗ, ಈ ಹಾರ್ಮೋನ್ ಮಟ್ಟವು ಸಿರ್ಕಾಡಿಯನ್ ಲಯದ (ಮಾನವ ದೇಹದಲ್ಲಿ ಸಂಭವಿಸುವ ಲಯಬದ್ಧ ಬದಲಾವಣೆಯಾಗಿದೆ) ಮೇಲೆ ಪರಿಣಾಮ ಬೀರುತ್ತದೆ, ಇವೆಲ್ಲವೂ ಹೃದಯಾಘಾತ ಅಥವಾ ಹೃದಯರಕ್ತನಾಳದ ಸಮಸ್ಯೆಗಳಿಗೆ ಕಾರಣವಾಗಬಹುದು. ತಜ್ಞರ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಹೃದಯಾಘಾತವು ಲಕ್ಷಾಂತರ ಜನರ ಮೇಲೆ ಅದರಲ್ಲಿಯೂ ವಿಶೇಷವಾಗಿ ಯುವಕರ ಮೇಲೆ ಪರಿಣಾಮ ಬೀರುತ್ತಿದೆ. ಆದರೆ ಹೃದಯಾಘಾತದ ಕಾರಣಗಳು ಬಹುಮುಖವಾಗಿದ್ದರೂ, ಇತ್ತೀಚಿನ ಸಂಶೋಧನೆಯು ಒಂದು ಕುತೂಹಲಕಾರಿ ವಿಷಯವೊಂದನ್ನು ಹೊರಹಾಕಿದೆ. ಮಾರಣಾಂತಿಕ ಹೃದಯಾಘಾತವು ಸೋಮವಾರದಂದು ಹೆಚ್ಚಾಗಿ ಸಂಭವಿಸುತ್ತಿದೆ ಎಂದು ತಿಳಿದು ಬಂದಿದೆ.

ಈ ಸಂಶೋಧನೆಯ ಹಿಂದಿನ ಸಂಭಾವ್ಯ ಕಾರಣಗಳ ಬಗ್ಗೆ ಪ್ರಶ್ನೆಗಳು ಹುಟ್ಟುಕೊಂಡ ಪರಿಣಾಮ ಎಚ್ಟಿ ಲೈಫ್ ಸ್ಟೈಲ್ ನೀಡಿದ ಸಂದರ್ಶನದಲ್ಲಿ, ಮಾಹಿಮ್ನ ಎಸ್ಎಲ್ ರಹೇಜಾ ಆಸ್ಪತ್ರೆಯ ಕನ್ಸಲ್ಟೆಂಟ್ ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾ. ಹರೇಶ್ ಮೆಹ್ತಾ ಮತ್ತು ವಾಶಿಯಲ್ಲಿರುವ ಫೋರ್ಟಿಸ್ ಹಿರಾನಂದಾನಿ ಆಸ್ಪತ್ರೆಯ ಕನ್ಸಲ್ಟೆಂಟ್ ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾ. ಪ್ರಶಾಂತ್ ಪವಾರ್ ಅವರು ಒತ್ತಡ ಮತ್ತು ಸೋಮವಾರ ಹೇಗೆ ಸಂಬಂಧ ಹೊಂದಿವೆ ಎಂಬುದರ ಬಗ್ಗೆ ಮಾತನಾಡಿದ್ದು ಕೆಲವು ಅಂಶಗಳನ್ನು ಹಂಚಿಕೊಂಡಿದ್ದಾರೆ.

ಸೋಮವಾರ ಸಾಮಾನ್ಯವಾಗಿ ಹೊಸ ಕೆಲಸ ಮತ್ತು ಮತ್ತೊಂದು ವಾರ ಪ್ರಾರಂಭವಾಗುವುದರಿಂದ ಅದರೊಂದಿಗೆ ಸಾಕಷ್ಟು ಒತ್ತಡ ಮತ್ತು ಆತಂಕವನ್ನು ತರುತ್ತದೆ, ವಿಶೇಷವಾಗಿ ವೃತ್ತಿಪರ ಜವಾಬ್ದಾರಿಗಳಿಗೆ ಸಂಬಂಧಿಸಿದವರಲ್ಲಿ ಹೆಚ್ಚಿದ ಒತ್ತಡದಿಂದಾಗಿ ಹೃದ್ರೋಗದ ಬೆಳವಣಿಗೆಗೆ ಕಾರಣವಾಗಬಹುದು ಮತ್ತು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ. ಆದ್ದರಿಂದ, ವಾರಾಂತ್ಯದ ನಂತರ ಕೆಲಸಕ್ಕೆ ಮರಳುವ ವ್ಯಕ್ತಿಗಳು ಅನುಭವಿಸುವ ಒತ್ತಡವು ಸೋಮವಾರದಂದು ಮಾರಣಾಂತಿಕ ಹೃದಯಾಘಾತಕ್ಕೆ ಕಾರಣವಾಗುತ್ತದೆ.

ಇದನ್ನೂ ಓದಿ: ಹೃದಯಾಘಾತದ ಅಪಾಯವನ್ನು ಹೆಚ್ಚಿಸುವ ಆಹಾರಗಳಿವು

ಸೋಮವಾರ ಹೆಚ್ಚಾಗಿ ಹೃದಯಾಘಾತಕ್ಕೆ  ಕಾರಣ

ದಿನಚರಿಯ ಅಡ್ಡಿ: ವಾರಾಂತ್ಯ ಸಾಮಾನ್ಯವಾಗಿ ಆಹಾರ ಪದ್ಧತಿ, ನಿದ್ರೆ ಮಾದರಿಗಳು ಮತ್ತು ವ್ಯಾಯಾಮ ಸೇರಿದಂತೆ ತಮ್ಮ ನಿಯಮಿತ ದಿನಚರಿಗಳಿಂದ ವಿಮುಖರಾಗಲು ಬಯಸುತ್ತಾರೆ. ಅಂತಹ ವ್ಯತ್ಯಾಸಗಳು, ಅದರಲ್ಲಿಯೂ ಆರೋಗ್ಯ ನಿರ್ಲಕ್ಷ್ಯ ಮಾಡಿದಾಗ ಹೃದಯ ರಕ್ತನಾಳಗಳ ಆರೋಗ್ಯಕ್ಕೆ ಹಾನಿ ಮಾಡಬಹುದು. ಹಾಗಾಗಿ ಸೋಮವಾರ ತಮ್ಮ ದಿನಚರಿಯನ್ನು ಪುನರಾರಂಭಿಸಿದಾಗ, ಆಹಾರ ಪದ್ಧತಿ ಅಥವಾ ದೈಹಿಕ ಚಟುವಟಿಕೆಯ ಮಟ್ಟದಲ್ಲಿ ಹಠಾತ್ ಬದಲಾವಣೆಗಳು ಹೃದಯವನ್ನು ಒತ್ತಡಗೊಳಿಸಬಹುದು, ಇದು ಸಂಭಾವ್ಯ ವ್ಯಕ್ತಿಗಳಲ್ಲಿ ಹೃದಯಾಘಾತಕ್ಕೆ ಕಾರಣವಾಗಬಹುದು.

ವೈದ್ಯಕೀಯ ಚಿಕಿತ್ಸೆ ವಿಳಂಬವಾಗಿರುವುದು: ಸೋಮವಾರದಂದು ಹೃದಯಾಘಾತದ ಹೆಚ್ಚಳಕ್ಕೆ ಕಾರಣವಾಗಬಹುದಾದ ಮತ್ತೊಂದು ಅಂಶವೆಂದರೆ ವೈದ್ಯಕೀಯ ಗಮನವನ್ನು ನಿರ್ಲಕ್ಷ್ಯ ಮಾಡುವುದು. ವಾರಾಂತ್ಯದಲ್ಲಿ ಅನುಭವಿಸಿದ ರೋಗಲಕ್ಷಣಗಳ ಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಳ್ಳದಿರುವುದು ಆಯಾಸ ಅಥವಾ ಒತ್ತಡಕ್ಕೆ ಕಾರಣವಾಗಬಹುದು. ಪರಿಣಾಮವಾಗಿ, ಸೋಮವಾರ ಈ ರೋಗಲಕ್ಷಣಗಳು ಉಲ್ಬಣಗೊಳ್ಳಬಹುದು, ಇವೆಲ್ಲ ಅನಾರೋಗ್ಯಕ್ಕೆ ಕಾರಣವಾಗಬಹುದು. ಇದಲ್ಲದೆ, ವಾರಾಂತ್ಯದಲ್ಲಿ ವಿಳಂಬವಾದ ರೋಗನಿರ್ಣಯ, ಸರಿಯಾದ ಚಿಕಿತ್ಸೆ ತೆಗೆದುಕೊಳ್ಳದಿರುವುದು ಕೂಡ ಅಪಾಯವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಸಾಮಾಜಿಕ ವರ್ತನೆಯಲ್ಲಿ ಬದಲಾವಣೆ: “ಸಾಮಾಜಿಕ ಜೆಟ್ ಲ್ಯಾಗ್” ಪರಿಕಲ್ಪನೆಯು ಇತ್ತೀಚಿನ ವರ್ಷಗಳಲ್ಲಿ ಗಮನ ಸೆಳೆದಿದೆ. ಇದು ವ್ಯಕ್ತಿಯ ಜೈವಿಕ ಗಡಿಯಾರವಾಗಿದ್ದು ಅವರ ದೈನಂದಿನ ಅಥವಾ ಸಾಮಾಜಿಕ ವೇಳಾಪಟ್ಟಿಯ ನಡುವೇ ತಪ್ಪಾದ ಸಂಯೋಜನೆಯನ್ನು ನಿಮಗೆ ಸೂಚಿಸುತ್ತದೆ, ವಾರಾಂತ್ಯದಲ್ಲಿ ಜನರು ತಮ್ಮ ನಿದ್ರೆಯ ಮಾದರಿಗಳನ್ನು ಬದಲಾಯಿಸುತ್ತಾರೆ, ಇದರಿಂದ ಅನೇಕ ತೊಂದರೆಗಳನ್ನು ಎದುರಿಸುತ್ತಾರೆ. ನಿದ್ರೆ ಮತ್ತು ಎಚ್ಚರ ಈ ಎರಡು ಚಕ್ರದಲ್ಲಿನ ಅಡಚಣೆಯು ಹೃದಯರಕ್ತನಾಳದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಅನಿಯಮಿತ ನಿದ್ರೆ, ವಾರಾಂತ್ಯದಲ್ಲಿ ಆಲ್ಕೋಹಾಲ್ ಸೇವನೆ ಅಥವಾ ಆಹಾರ ಪದ್ಧತಿಯಲ್ಲಿನ ಬದಲಾವಣೆಗಳು ಸೋಮವಾರದಂದು ಹೃದಯಾಘಾತದ ಹೆಚ್ಚಿನ ಅಪಾಯಕ್ಕೆ ಕಾರಣವಾಗಬಹುದು.

ಸೋಮವಾರ ಬೆಳಗ್ಗಿನ ಜನದಟ್ಟಣೆ​: ಅನೇಕರಿಗೆ ಸೋಮವಾರ ಬೆಳಿಗ್ಗೆ ಜನದಟ್ಟಣೆ ದೊಡ್ಡ ತಲೆನೋವು. ದೊಡ್ಡ ದೊಡ್ಡ ನಗರಗಳಲ್ಲಿ ಗಂಟೆಗಟ್ಟಲೆ ಸಂಚಾರ, ದಟ್ಟಣೆ ಮತ್ತು ವಾಯುಮಾಲಿನ್ಯಕ್ಕೆ ಒಡ್ಡಿಕೊಳ್ಳುವುದು ಹೃದಯರಕ್ತನಾಳಕ್ಕೆ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ.

ಆರೋಗ್ಯ ತಜ್ಞರು, “ಸೋಮವಾರದಂದು ಹೃದಯಾಘಾತ ಸಂಭವಿಸುವುದರ ಹಿಂದಿನ ನಿಖರವಾದ ಕಾರಣಕ್ಕಾಗಿ ಹೆಚ್ಚಿನ ಸಂಶೋಧನೆಗಳು ನಡೆಯುತ್ತಿದ್ದಾರೆ, ಈಗಲೇ ಹಲವಾರು ಸಮರ್ಥ ಕಾರಣಗಳನ್ನು ನೀಡಿದೆ. ಇದರಿಂದ ಸಂಭಾವ್ಯ ಅಪಾಯದ ಅಂಶಗಳನ್ನು ಗುರುತಿಸಿ ತಮ್ಮ ಹೃದಯರಕ್ತನಾಳದ ಆರೋಗ್ಯಕ್ಕೆ ಆದ್ಯತೆ ನೀಡಲು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಲು ಇವು ಸಹಾಯ ಮಾಡುತ್ತದೆ. ಅಲ್ಲದೆ, ಉದ್ಯೋಗದಲ್ಲಿರುವವರು ವಾರದ ಆರಂಭದಲ್ಲಿ ಒತ್ತಡವನ್ನು ನಿವಾರಿಸಲು ಮತ್ತು ಆರೋಗ್ಯಕರ ಜೀವನಶೈಲಿ ಆಯ್ಕೆಗಳನ್ನು ಉತ್ತೇಜಿಸುವ ಕ್ರಮಗಳನ್ನು ಇನ್ನು ಮುಂದೆ ಪರಿಗಣಿಸಬೇಕು. ಯಾವುದನ್ನು ನಿರ್ಲಕ್ಷ ಮಾಡಬಾರದು ಎಂದು ತಜ್ಞರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ತಾಜಾ ಸುದ್ದಿ
Daily Devotional: ಸನಾತನ ಧರ್ಮದಲ್ಲಿ 108ರ ಮಹತ್ವ ತಿಳಿದುಕೊಳ್ಳಿ
Daily Devotional: ಸನಾತನ ಧರ್ಮದಲ್ಲಿ 108ರ ಮಹತ್ವ ತಿಳಿದುಕೊಳ್ಳಿ
Daily Horoscope: ವೈವಾಹಿಕ ಜೀವನವು ಸುಖಮಯವಾಗಿ ಸಾಗಲಿದೆ
Daily Horoscope: ವೈವಾಹಿಕ ಜೀವನವು ಸುಖಮಯವಾಗಿ ಸಾಗಲಿದೆ
‘ದರ್ಶನ್ ರಿಲೀಸ್​ ಆಗ್ತಾರಾ?’: ದೇವರಿಗೆ ಪ್ರಶ್ನೆ ಕೇಳಿ ಉತ್ತರ ಪಡೆದ ಪೂಜಾರಿ
‘ದರ್ಶನ್ ರಿಲೀಸ್​ ಆಗ್ತಾರಾ?’: ದೇವರಿಗೆ ಪ್ರಶ್ನೆ ಕೇಳಿ ಉತ್ತರ ಪಡೆದ ಪೂಜಾರಿ
ಭಾರೀ ಮಳೆಯಿಂದ ಟ್ರಾಫಿಕ್ ಮಧ್ಯೆ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ!
ಭಾರೀ ಮಳೆಯಿಂದ ಟ್ರಾಫಿಕ್ ಮಧ್ಯೆ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ!
ಅಪ್ಪ ಕೊಚ್ಚಿ ಹೋಗುವ ವಿಡಿಯೋ ಮಗಳ ಮೊಬೈಲ್​ನಲ್ಲಿ ಸೆರೆ
ಅಪ್ಪ ಕೊಚ್ಚಿ ಹೋಗುವ ವಿಡಿಯೋ ಮಗಳ ಮೊಬೈಲ್​ನಲ್ಲಿ ಸೆರೆ
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ