AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Women Health: ಮನಸ್ಸು ನಮ್ಮನ್ನಾಡಿಸುವಂತೆ ಆಗಬಾರದು! ಯುವತಿಯರ ಮಾನಸಿಕ ಆರೋಗ್ಯಕ್ಕೆ ತಜ್ಞರ ಸಲಹೆ

ಈಗಿನ ಯುವತಿಯರು ಮನಸ್ಸಿನ ಹಿಡಿತವಿಲ್ಲದೇ ಚೂರು ನೋವಾದರೂ ಆತ್ಮಹತ್ಯೆಗೆ ಮುಂದಾಗುತ್ತಿದ್ದಾರೆ. ಜೀವನವನ್ನು ಹೇಗೆ ನಿಭಾಯಿಸಬೇಕು ಎಂಬ ಶಕ್ತಿ ಅವರಿಗಿಲ್ಲ. ಸವಾಲುಗಳನ್ನು ಎದುರಿಸಲು ಹಿಂದೇಟು ಹಾಕುತ್ತಿದ್ದಾರೆ. ಇದಕ್ಕೆಲ್ಲಾ ಕಾರಣ ಮಾನಸಿಕ ಸ್ಥಿತಿ ಮತ್ತು ಮನಸ್ಸಿನ ನಿಯಂತ್ರಣದ ಕೊರತೆ ಎಂದು ತಜ್ಙರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

Women Health: ಮನಸ್ಸು ನಮ್ಮನ್ನಾಡಿಸುವಂತೆ ಆಗಬಾರದು! ಯುವತಿಯರ ಮಾನಸಿಕ ಆರೋಗ್ಯಕ್ಕೆ ತಜ್ಞರ ಸಲಹೆ
ಸಾಂದರ್ಭಿಕ ಚಿತ್ರ
shruti hegde
| Edited By: |

Updated on: Jul 07, 2021 | 8:31 PM

Share

ಆರೋಗ್ಯವೇ ಭಾಗ್ಯ ಎಂಬ ಮಾತಿದೆ. ಪ್ರತಿಯೊಬ್ಬರೂ ಕೂಡಾ ತಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಿದರೆ ಮಾತ್ರ ತಮ್ಮ ಯಶಸ್ಸಿನತ್ತ ಗಮನ ಹರಿಸಲು ಸಾಧ್ಯ. ದಿನಕಳೆಯುತ್ತಿದ್ದಂತೆಯೇ ಜನರ ಜೀವನ ಶೈಲಿ ಕೂಡಾ ಬದಲಾಗುತ್ತಿದೆ. ಹಾಗಿರುವಾಗ ಮಾನವರು ಬದಲಾಗುತ್ತಿರುವ ಜೀವನ ಶೈಲಿಯಲ್ಲಿ ತಮ್ಮ ಮಾನಸಿಕ ಸ್ಥಿತಿಯನ್ನು ಹೊಂದಿಸಿಕೊಳ್ಳುವುದು ಮುಖ್ಯ. ಅದರಲ್ಲಿಯೂ ಮಹಿಳೆಯರು ಅಥವಾ ಯುವತಿಯರು ಮುಖ್ಯವಾಗಿ ಈ ಕುರಿತು ಯೋಚಿಸಲೇ ಬೇಕು. ಮನಸ್ಸಿನ ನಿಯಂತ್ರಣ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ. ನಾವು ಹೇಳಿದಂತೆ ಮನಸ್ಸು ಕೇಳುವಂತೆ ಇರಬೇಕು ಹೊರತಾಗಿ ಮನಸ್ಸು ನಮ್ಮನ್ನಾಡಿಸುವಂತೆ ಆಗಬಾರದು ಎಂದು ನ್ಯೂಟ್ರೀಷಿಯನಿಸ್ಟ್​​ ತಜ್ಞರಾದ ವೀಣಾ ಭಟ್​ ಟಿವಿ9 ಡಿಜಿಟಲ್ ಜತೆ ಮಾತು ಪ್ರಾರಂಭಿಸಿದರು. 

ಈಗಿನ ಯುವತಿಯರು ಹೆಚ್ಚಾಗಿ ಮಾನಸಿಕ ತೊಂದರೆಯ ಕಾರಣದಿಂದ ನಮ್ಮಲ್ಲಿ ಬರುತ್ತಾರೆ. ಮನಸ್ಸಿನ ನಿಯಂತ್ರಣ ಹೇಗೆ ಸಾಧ್ಯ? ಎಂದು ಪ್ರಶ್ನೆ ಮಾಡುತ್ತಾರೆ. ಈ ಎಲ್ಲಾ ಸಮಸ್ಯೆಗೆ ಪರಿಹಾರ ವ್ಯಾಯಾಮ ಮತ್ತು ಏಕಾಗ್ರತೆ. ಹೀಗಿರುವಾಗಲೂ ಸಹ ಏಕಾಗ್ರತೆಯಿಂದ ಇರಲೇ ಸಾಧ್ಯವಾಗುತ್ತಿಲ್ಲ.. ಎಂದೂ ಕೆಲವರ ಚಿಂತೆ! ಭಯ ಪಡಬೇಕಾದದ್ದಿಲ್ಲ.. ಚಿಂತಿಸಬೇಕಾದದ್ದೂ ಇಲ್ಲ, ನೀವು ಧ್ಯಾನಕ್ಕೆ ಕುಳಿತಾಗ ನಿಮ್ಮ ಉಸಿರಾಟ ಪ್ರಕ್ರಿಯೆಯನ್ನೇ ಗಮನಿಸಿ, ಉಸಿರಾಟದ ಹಾದಿ ಹೇಗಿದೆ ಎಂಬುದು ನಿಮ್ಮ ಗಮನದಲ್ಲಿರಲಿ, ದೇಹದ  ಎಲ್ಲಾ ಅಂಗಗಳನ್ನು ಸಡಿಲವಾಗಿ ಬಿಡಿ, ಜತೆಗೆ ಉಸಿರಾಟ ಪ್ರಕ್ರಿಯನ್ನು ಆನಂದಿಸಿ. ಆಗಲೇ ನಿಮ್ಮ ಮನಸ್ಸು  ಏಕಾಗ್ರತೆ ಹೊಂದುವುದು ಎಂದು ಸಲಹೆ ನೀಡಿದ್ದಾರೆ.

ಮಾನಸಿಕ ಸ್ಥಿತಿ ಪ್ರತಿಯೊಬ್ಬ ಹೆಣ್ಣು ಮಗಳು ತನ್ನ ಬಗ್ಗೆ ತಾನು ಅರಿಯಬೇಕು. ಅವಳ ಅಂತರಾತ್ಮ ಶುದ್ಧವಾಗಿರಬೇಕು. ಪ್ರತಿ ಹೆಜ್ಜೆ ಇಡುವಾಗಲೂ ಯೋಚಿಸಬೇಕು. ಆದರೆ ಈಗಿ ಯುವತಿಯರು ತಂತ್ರಜ್ಞಾನಕ್ಕೆ ಅತಿರೇಕವಾಗಿ ಹೊಂದಿಕೊಂಡಿದ್ದಾರೆ. ಮೊಬೈಲ್​ ಅತಿಯಾದ​ ಬಳಕೆಯಿಂದ ತಮಗೆಲ್ಲಾ ತಿಳಿದಿದೆ ಎಂಬ ಭಾವನೆ. ಪ್ರತಿಯೊಂದಕ್ಕೂ ಸಿಟ್ಟು, ಸಿಡುಕು. ತಾಳ್ಮೆಯ ಕೊರತೆಯಿಂದ  ಯೋಚಿಸುವ ಶಕ್ತಿಯನ್ನೇ ಕಳೆದುಕೊಳ್ಳುತ್ತಿದ್ದಾರೆ.

ಆಧ್ಯಾತ್ಮಿಕ ನೆಲೆ ಆಧ್ಯಾತ್ಮಿಕ ನೆಲೆ ಅಂದರೆ ಯಾವುದೇ ಭಾಷೆ, ಜನಾಂಗ, ಧರ್ಮಕ್ಕೆ ಸಂಬಂಧಿಸಿದ್ದು ಅಂಥಲ್ಲ! ಪ್ರತಿಯೊಬ್ಬ ಹೆಣ್ಣುಮಗಳಿಗೆ ತಾನು ಹುಟ್ಟಿದ ಮನೆ, ಪರಂಪರೆ ಮತ್ತು ನಡೆದು ಬಂದ ಹಾದಿಯ ಕುರಿತಾದ ತಿಳುವಳಿಕೆ ಬೇಕು. ಅಜ್ಜ-ಮುತ್ತಜ್ಜರ ಕಾಲದಿಂದ ಹಿಡಿದು ಅಪ್ಪ-ಅಮ್ಮನ ಪೀಳಿಗೆಯವರೆಗೆ ನಮ್ಮ ಕುಟುಂಬ ಹೇಗೆ ನಡೆದು ಬಂದಿದೆ ಎಂಬ ಜ್ಞಾನವನ್ನು ಹೊಂದಿರಲೇ ಬೇಕು. ಆಗ ಮಾತ್ರ ಅವರಲ್ಲಿ ತಿಳಿವಳಿಕೆ ಎಂಬ ಶಕ್ತಿ ಮನೆಮಾಡುತ್ತದೆ. ಹಾಗಿದ್ದಾಗ ಆಕೆ ಸಮಸ್ಯೆಯ ಕುರಿತಾಗಿ ಯೋಚಿಸುತ್ತಾಳೆ. ಇದು ಅವಳ ಮಾನಸಿಕ ಸ್ಥಿತಿಯನ್ನು ಸುಧಾರಿಸುತ್ತದೆ. ಪ್ರತಿ ಹೆಜ್ಜೆ ಇಡುವಾಗಲೂ ಒಮ್ಮೆ ಯೋಚಿಸುವ ಪರಿಕಲ್ಪನೆ ಅವರಲ್ಲಿ ಮೂಡುತ್ತದೆ. ಈ ಕುರಿತಂತೆ ಪೋಷಕರೂ ಸಹ ಗಮನವಹಿಸಬೇಕಾಗಿದೆ ಎಂದು ತಜ್ಞರು ಹೇಳುತ್ತಾರೆ.

ಪೋಷಕರಿಗಾಗಿ ಕಿವಿಮಾತು ಪೋಷಕರು ಅರಿಯಬೇಕಾದ ಒಂದು ಮುಖ್ಯ ವಿಷಯ ಎಂದರೆ ಚಿಕ್ಕ ವಯಸ್ಸಿನಲ್ಲಿದ್ದಾಗಲೇ ಮಕ್ಕಳಿಗೆ ತಮ್ಮ ಪರಂಪರೆಯ ಬಗ್ಗೆ ತಿಳಿ ಹೇಳುವುದು. ಕಷ್ಟದ ಅರಿವು ಮೂಡಿಸುವುದು. ಜತೆಗೆ ಬದುಕು ಮತ್ತು ಜೀವನದ ಮೌಲ್ಯಗಳ ಬಗೆಯ ಜ್ಞಾನವನ್ನು ತುಂಬುವುದು. ಇದು ಸಣ್ಣ ವಯಸ್ಸಿನಿಂದಲೇ ಮಾನಸಿಕ ಸ್ಥಿತಿಯ ನಿಯಂತ್ರಣದ ಜತೆ ಸ್ಥಿರವಾದ ಯೋಚನೆಗೆ ದಾರಿ ಮಾಡಿಕೊಡುತ್ತವೆ.

ಈಗಿನ ಯುವತಿಯರು ಮನಸ್ಸಿನ ಹಿಡಿತವಿಲ್ಲದೇ ಚೂರು ನೋವಾದರೂ ಆತ್ಮಹತ್ಯೆಗೆ ಮುಂದಾಗುತ್ತಿದ್ದಾರೆ. ಜೀವನವನ್ನು ಹೇಗೆ ನಿಭಾಯಿಸಬೇಕು ಎಂಬ ಶಕ್ತಿ ಅವರಿಗಿಲ್ಲ. ಸವಾಲುಗಳನ್ನು ಎದುರಿಸಲು ಹಿಂದೇಟು ಹಾಕುತ್ತಿದ್ದಾರೆ. ಇದಕ್ಕೆಲ್ಲಾ ಕಾರಣ ಮಾನಸಿಕ ಸ್ಥಿತಿ ಮತ್ತು ಮನಸ್ಸಿನ ನಿಯಂತ್ರಣದ ಕೊರತೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

Health Tips: ಗರ್ಭಿಣಿಯರಿಗೆ ಮತ್ತು ಹಾಲುಣಿಸುವ ತಾಯಂದಿರಿಗಾಗಿ ಒಂದಿಷ್ಟು ಸಲಹೆಗಳು

Women Health: ‘ಬದುಕಲು ಕಲಿಯಿರಿ’- 25 ವರ್ಷದೊಳಗಿನ ಯುವತಿಯರ ಮಾನಸಿಕ ಸ್ಥಿತಿ ಮತ್ತು ಸಮಸ್ಯೆಯ ಬಗ್ಗೆ ತಜ್ಞರ ಮಾತು

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ