AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Biriyani Day 2024: ಭಟ್ಕಳ ಬಿರಿಯಾನಿ ರುಚಿ ಜೊತೆ ಆರೋಗ್ಯವನ್ನು ಹೆಚ್ಚಿಸುತ್ತೆ, ಅದು ಹೇಗೆ ?

Bhatkali Biryani Recipe: ವಿವಿಧ ರೀತಿಯ ಬಿರಿಯಾನಿಗಳ ನಡುವೆ ಭಟ್ಕಳಿ ಅಥವಾ ಭಟ್ಕಳ ಬಿರಿಯಾನಿ ಕರ್ನಾಟಕದಲ್ಲಿ ತುಂಬಾ ಪ್ರಸಿದ್ಧವಾಗಿದೆ. ಇದು ಕರಾವಳಿ ಕರ್ನಾಟಕದ ಭಟ್ಕಳ ಪಟ್ಟಣದಲ್ಲಿ ಹೆಚ್ಚಾಗಿ ಕಂಡುಬರುವ ನವಾಯತ್ ಮುಸ್ಲಿಂ ಸಮುದಾಯದಿಂದ ಹುಟ್ಟಿಕೊಂಡಿತ್ತು. ಇತರ ಬಿರಿಯಾನಿಗಳಿಗೆ ಹೋಲಿಸಿದರೆ ಇದು ವಿಭಿನ್ನ ರುಚಿ ಮತ್ತು ಪರಿಮಳವನ್ನು ಹೊಂದಿರುತ್ತದೆ. ಜೊತೆಗೆ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡುವುದು ಇದರ ವಿಶೇಷತೆಯಾಗಿದೆ. ಹಾಗಾಗಿಯೇ ಇದು ಕರ್ನಾಟಕ ಮಾತ್ರವಲ್ಲ ಹೊರ ರಾಜ್ಯಗಳಲ್ಲಿಯೂ ಮನೆಮಾತಾಗಿದೆ. ಇದನ್ನು ಹೇಗೆ ಮಾಡುವುದು? ಆರೋಗ್ಯ ಪ್ರಯೋಜನಗಳೇನು? ತಿಳಿದುಕೊಳ್ಳಿ.

World Biriyani Day 2024: ಭಟ್ಕಳ ಬಿರಿಯಾನಿ ರುಚಿ ಜೊತೆ ಆರೋಗ್ಯವನ್ನು ಹೆಚ್ಚಿಸುತ್ತೆ, ಅದು ಹೇಗೆ ?
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Jul 03, 2024 | 10:57 AM

Share

ಕರ್ನಾಟಕದಲ್ಲಿ ವೆಜ್​ ಬಿರಿಯಾನಿಗಿಂತ ನಾನ್​ವೆಜ್​ ಬಿರಿಯಾನಿ ಹೆಚ್ಚು ಪ್ರಸಿದ್ದ. ಸಾಮಾನ್ಯವಾಗಿ ಎಲ್ಲಾ ಕಡೆಗಳಲ್ಲಿಯೂ ಸಿಗುವ ಖಾದ್ಯಗಳಲ್ಲಿ ಬಿರಿಯಾನಿಯೂ ಒಂದು. ವಿವಿಧ ರೀತಿಯ ಬಿರಿಯಾನಿಗಳ ನಡುವೆ ಭಟ್ಕಳಿ ಅಥವಾ ಭಟ್ಕಳ ಬಿರಿಯಾನಿ ಕರ್ನಾಟಕದಲ್ಲಿ ತುಂಬಾ ಪ್ರಸಿದ್ಧವಾಗಿದೆ. ಇದು ಕರಾವಳಿ ಕರ್ನಾಟಕದ ಭಟ್ಕಳ ಪಟ್ಟಣದಲ್ಲಿ ಹೆಚ್ಚಾಗಿ ಕಂಡುಬರುವ ನವಾಯತ್ ಮುಸ್ಲಿಂ ಸಮುದಾಯದಿಂದ ಹುಟ್ಟಿಕೊಂಡಿತ್ತು. ಇತರ ಬಿರಿಯಾನಿಗಳಿಗೆ ಹೋಲಿಸಿದರೆ ಇದು ವಿಭಿನ್ನ ರುಚಿ ಮತ್ತು ಪರಿಮಳವನ್ನು ಹೊಂದಿರುತ್ತದೆ. ಜೊತೆಗೆ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡುವುದು ಇದರ ವಿಶೇಷತೆಯಾಗಿದೆ. ಹಾಗಾಗಿಯೇ ಇದು ಕರ್ನಾಟಕ ಮಾತ್ರವಲ್ಲ ಹೊರ ರಾಜ್ಯಗಳಲ್ಲಿಯೂ ಮನೆಮಾತಾಗಿದೆ.

ಭಟ್ಕಳ ಬಿರಿಯಾನಿಯನ್ನು ಪರಿಮಳಯುಕ್ತ ಬಾಸ್ಮತಿ ಅಕ್ಕಿ, ಮಾಂಸ (ಸಾಮಾನ್ಯವಾಗಿ ಚಿಕನ್ ಅಥವಾ ಮಟನ್) ಮತ್ತು ಮಸಾಲೆಗಳ ಮಿಶ್ರಣದಿಂದ ತಯಾರಿಸಲಾಗುತ್ತದೆ. ಇದರ ವಿಶೇಷತೆ ಏನೆಂದರೆ ಇದರಲ್ಲಿ ತೆಂಗಿನಕಾಯಿ, ಗಸಗಸೆ ಬೀಜಗಳು ಮತ್ತು ಇತರ ಮಸಾಲೆಗಳಿಂದ ತಯಾರಿಸಿದ ವಿಶೇಷ ಮಸಾಲಾ ಪೇಸ್ಟ್ ಅನ್ನು ಬಳಸಲಾಗುತ್ತದೆ. ಹಾಗಾಗಿಯೇ ಈ ಬಿರಿಯಾನಿ ಅದರ ರುಚಿಗೆ ಹೆಸರುವಾಸಿಯಾಗಿದೆ.

ಭಟ್ಕಳಿ ಅಥವಾ ಭಟ್ಕಳ ಬಿರಿಯಾನಿ ಮಾಡಲು ಬೇಕಾಗುವ ಪದಾರ್ಥಗಳು (ಇದರ ಆಧಾರದ ಮೇಲೆ 6 ಜನಕ್ಕೆ ಬಡಿಸಬಹುದು.)

500 ಗ್ರಾಂ ಮಾಂಸ

1 ಕಪ್ ಮೊಸರು

2 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್

2 ಈರುಳ್ಳಿ, ತೆಳುವಾಗಿ ಕತ್ತರಿಸಿಟ್ಟುಕೊಳ್ಳಿ

2 ಕಪ್ ನೆನೆಸಿದ ಬಾಸ್ಮತಿ ಅಕ್ಕಿ

4 ಕಪ್ ನೀರು

ರುಚಿಗೆ ತಕ್ಕಷ್ಟು ಉಪ್ಪು

ಮಸಾಲಾ ಪೇಸ್ಟ್

1/2 ಕಪ್ ತುರಿದ ತೆಂಗಿನಕಾಯಿ

2 ಚಮಚ ಗಸಗಸೆ ಬೀಜ

1 ಟೇಬಲ್ ಚಮಚ ಕೊತ್ತಂಬರಿ ಬೀಜ

1 ಟೀ ಸ್ಪೂನ್ ಜೀರಿಗೆ

1 ಟೀ ಸ್ಪೂನ್ ಸೋಂಪು

4 ಲವಂಗ

2 ಏಲಕ್ಕಿ

1 ಇಂಚು ದಾಲ್ಚಿನ್ನಿ

1 ಟೀ ಸ್ಪೂನ್ ಅರಿಶಿನ ಪುಡಿ

1 ಟೀ ಸ್ಪೂನ್ ಕಾರದ ಪುಡಿ

1/2 ಟೀ ಚಮಚ ಗರಂ ಮಸಾಲಾ

ಅಗತ್ಯಕ್ಕೆ ತಕ್ಕಂತೆ ಅಡುಗೆಗೆ ಎಣ್ಣೆ

ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಅಲಂಕರಿಸಲು ಹುರಿದ ಈರುಳ್ಳಿ, ಪುದೀನಾ ಎಲೆ ಮತ್ತು ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ:

ಹಂತ 1- ಮೊಸರು, ಶುಂಠಿ -ಬೆಳ್ಳುಳ್ಳಿ ಪೇಸ್ಟ್ ಮತ್ತು ಮಸಾಲೆಗಳೊಂದಿಗೆ ಮಾಂಸವನ್ನು ಮ್ಯಾರಿನೇಟ್ ಮಾಡಿಕೊಳ್ಳಿ.

ಹಂತ 2- ಒಂದು ದೊಡ್ಡ ಮಡಿಕೆ ಅಥವಾ ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ ಈರುಳ್ಳಿ ಚಿನ್ನದ ಕಂದು ಬಣ್ಣ ಬರುವವರೆಗೆ ಚೆನ್ನಾಗಿ ಹುರಿಯಿರಿ.

ಹಂತ 3 -ಬಳಿಕ ಇದಕ್ಕೆ ಮ್ಯಾರಿನೇಟ್ ಮಾಡಿದ ಮಾಂಸವನ್ನು ಸೇರಿಸಿ, ಮೃದುವಾಗುವವರೆಗೆ ಬೇಯಿಸಿ.

ಹಂತ 4- ಇನ್ನೊಂದು ಪ್ರತ್ಯೇಕ ಬಾಣಲೆಯಲ್ಲಿ, ಮಸಾಲೆಗಳನ್ನು ಹುರಿದು ತೆಂಗಿನಕಾಯಿ ಮತ್ತು ಗಸಗಸೆ ಬೀಜಗಳೊಂದಿಗೆ ರುಬ್ಬಿ ಮಸಾಲಾ ಪೇಸ್ಟ್ ತಯಾರಿಸಿ.

ಹಂತ 5- ಈ ಮಸಾಲಾ ಪೇಸ್ಟ್ ಅನ್ನು ಕೂಡ ಸೇರಿಸಿ ಕೆಲವು ನಿಮಿಷಗಳ ಕಾಲ ಬೇಯಿಸಿ.

ಹಂತ 6- ನೆನೆಸಿದ ಅಕ್ಕಿ, ನೀರು ಮತ್ತು ಉಪ್ಪನ್ನು ಮಸಾಲಾ ಪೇಸ್ಟ್ ಗೆ ಸೇರಿಸಿ, ಉದುರಾಗುವವರೆಗೆ ಬೇಯಿಸಿಕೊಳ್ಳಿ.

ಹಂತ 7-ಹುರಿದ ಈರುಳ್ಳಿ, ಪುದೀನಾ ಎಲೆಗಳು ಮತ್ತು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.

ಹಂತ 8-ಸಲಾಡ್ ನೊಂದಿಗೆ ಬಿಸಿಯಾಗಿ ಬಡಿಸಿ.

ಇದನ್ನೂ ಓದಿ: ಇದು ಬೆಂಗಳೂರಿನಲ್ಲಿ ಅತ್ಯಂತ ಬೇಡಿಕೆ ಇರುವ ಮಟನ್ ದಮ್ ಬಿರಿಯಾನಿ, ಮನೆಯಲ್ಲಿ ಮಾಡುವುದು ಸುಲಭ

ಸಲಹೆಗಳು:

ರುಚಿ ಹೆಚ್ಚಾಗಲು ಮಸಾಲೆಗಳೊಂದಿಗೆ ಮಾಂಸವನ್ನು ಕನಿಷ್ಠ 2 ಗಂಟೆಗಳ ಕಾಲ ಮ್ಯಾರಿನೇಟ್ ಮಾಡಿ.

ಅಡುಗೆ ಮಾಡುವ ಮೊದಲು ಅಕ್ಕಿಯನ್ನು 30 ನಿಮಿಷಗಳ ಕಾಲ ನೆನೆಸಿಡಿ.

ಬಿರಿಯಾನಿ ಕೆಳಭಾಗಕ್ಕೆ ಅಂಟಿಕೊಳ್ಳದಂತೆ ತಡೆಯಲು ಭಾರವಾದ ತಳವಿರುವ ಮಡಕೆಯನ್ನು ಬಳಸಿ.

ಆರೋಗ್ಯ ಪ್ರಯೋಜನಗಳೇನು?

ಈ ಬಿರಿಯಾನಿ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳಿವೆ. ಇದರಲ್ಲಿ ಗಸಗಸೆ ಬೀಜಗಳನ್ನು ಬಳಸಲಾಗುತ್ತದೆ ಇದು ಜೀರ್ಣಕ್ರಿಯೆಯನ್ನು ಉತ್ತೇಜಿಸುವುದಲ್ಲದೆ ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ಒಳ್ಳೆಯದು. ಅದಲ್ಲದೆ ತಲೆನೋವು, ಕೆಮ್ಮು ಹಾಗೂ ಆಸ್ತಮಾವನ್ನು ಗುಣಪಡಿಸುವುದು ಸೇರಿದಂತೆ ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆ. ಬಿರಿಯಾನಿ ತಿನ್ನುವುದರಿಂದ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್‌ಗಳು ಸಿಗುತ್ತವೆ. ಜೊತೆಗೆ ಇದರಲ್ಲಿ ಬಳಸುವ ವಿವಿಧ ಮಸಾಲೆಗಳು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Preethi Bhat Gunavante
Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪೊಲೀಸರು
ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪೊಲೀಸರು
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ