Sign In

By signing in or creating an account, you agree with Associated Broadcasting Company's Terms & Conditions and Privacy Policy.

World Vegan Day 2022: ಸಸ್ಯಾಹಾರಿ ಆಹಾರದ ಕುರಿತ ತಜ್ಞರ ಮಾಹಿತಿ ಇಲ್ಲಿದೆ

ಬಾದಾಮಿಗಳನ್ನು ಒಳಗೊಂಡಿರುವ ತಿಂಡಿಗಳನ್ನು ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ತಿಂಡಿಗಳಿಗೆ ಹೋಲಿಸಿದರೆ ನಿಮ್ಮ ದೇಹದ ತೂಕವನ್ನು ಸಮಸ್ಥಿತಿಗೆ ತರಲು ಸಾಧ್ಯ.

World Vegan Day 2022: ಸಸ್ಯಾಹಾರಿ ಆಹಾರದ ಕುರಿತ ತಜ್ಞರ ಮಾಹಿತಿ ಇಲ್ಲಿದೆ
World Vegan Day
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on:Nov 01, 2022 | 6:14 PM

ಇಂದು ವಿಶ್ವ ಸಸ್ಯಾಹಾರಿ ದಿನದ ಸಂದರ್ಭದಲ್ಲಿ, ಮಾಂಸಹಾರಿ ಆಹಾರವನ್ನು ತ್ಯಜಿಸುವ ಮೂಲಕ ಗಮನಾರ್ಹ ಸಂಖ್ಯೆಯ ಜನರು ಸಸ್ಯಾಹಾರಿ ಆಹಾರವನ್ನು ಸ್ವೀಕರಿಸುತ್ತಿದ್ದಾರೆ. ಆದಾಗ್ಯೂ, ಸಸ್ಯಾಹಾರಿ ಮತ್ತು ಅದರ ಆರೋಗ್ಯ ಪ್ರಯೋಜನಗಳ ಬಗ್ಗೆ ಇನ್ನೂ ಸಾಕಷ್ಟು ಮಾಹಿತಿಯ ಕೊರತೆ ಇದೆ ಎಂದು ಪೌಷ್ಟಿಕತಜ್ಞರಾದ ನೇಹಾ ರಂಗ್ಲಾನಿ ಇಂಡಿಯನ್ ಎಕ್ಸ್ ಪ್ರೆಸ್ಸ್ ಗೆ ಮಾಹಿತಿ ನೀಡಿದರು.

ನಿಮ್ಮ ದೇಹದಲ್ಲಿ ಪೌಷ್ಟಿಕಾಂಶವನ್ನು ಹೆಚ್ಚಿಸಲು ಸಾಕಷ್ಟು ಆರೋಗ್ಯಕರ ಆಹಾರಗಳು ಮತ್ತು ಬಾದಾಮಿಯಂತಹ ಬೀಜಗಳನ್ನು ಪ್ರತಿ ದಿನ ತಿನ್ನುವುದು ಅವಶ್ಯಕ. ಬಾದಾಮಿಯು ವಿಟಮಿನ್ ಇ, ಮೆಗ್ನೀಸಿಯಮ್, ಪ್ರೊಟೀನ್, ರೈಬೋಫ್ಲಾವಿನ್, ಸತು, ಇತ್ಯಾದಿಗಳಂತಹ 15 ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ ಎಂದು ಹೇಳಿದರು.

ಬಾದಾಮಿಗಳನ್ನು ಒಳಗೊಂಡಿರುವ ತಿಂಡಿಗಳನ್ನು ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ತಿಂಡಿಗಳಿಗೆ ಹೋಲಿಸಿದರೆ ನಿಮ್ಮ ದೇಹದ ತೂಕವನ್ನು ಸಮಸ್ಥಿತಿಗೆ ತರಲು ಸಾಧ್ಯ. ಜೊತೆಗೆ ನಿಮ್ಮ ಆಹಾರಗಳಲ್ಲಿ ಬಾದಾಮಿಯನ್ನು ಪ್ರತಿ ದಿನ ಸೇರಿಸಿ ಎಂದು ಇವರು ಸಲಹೆ ನೀಡುತ್ತಾರೆ.

ವಿಟಮಿನ್ ಬಿ 12 ಮೂಲಗಳು ಸಸ್ಯಾಹಾರಿ ಮತ್ತು ಸಸ್ಯಾಹಾರಿ ಆಹಾರಗಳಲ್ಲಿ ಬಹಳ ವಿರಳವಾಗಿರುತ್ತವೆ. ಬಾದಾಮಿ ಹಾಲು ಅಥವಾ ಓಟ್ಸ್ ಹಾಲಿನೊಂದಿಗೆ ಬೆರೆಸಿದ ಧಾನ್ಯಗಳನ್ನು ತಿನ್ನುವುದು ಉತ್ತಮ, ಜೊತೆಗೆ ನಿಮ್ಮ ಬೆಳಗಿನ ಉಪಾಹಾರಕ್ಕೆ ಬಾದಾಮಿ ಚಿಪ್ಸ್ ಅನ್ನು ಕೂಡ ಸೇರಿಸಬಹುದು ಎಂದು ಇವರು ಹೇಳುತ್ತಾರೆ.

ಇದನ್ನು ಓದಿ: ನೀವು ಮಧುಮೇಹಿಗಳಾಗಿದ್ದು , ಚಾಕೊಲೇಟ್‌ಗಳನ್ನು ತಿನ್ನಲು ಇಷ್ಟಪಡುತ್ತೀರಾ? ಮನೆಯಲ್ಲೇ ಆರೋಗ್ಯಕರ ಚಾಕೋಲೇಟ್ ತಯಾರಿಸಿ

ಸಸ್ಯಾಹಾರಿಗಳು ಸಾಕಷ್ಟು ಪ್ರೋಟೀನ್ ಅಂಶವಿರುವ ಆಹಾರವನ್ನು ಸೇವಿಸುವುದು ಕಷ್ಟ ಎಂದು ಬಹಳಷ್ಟು ಜನರು ಭಾವಿಸುತ್ತಾರೆ, ಆದರೆ ಸೊಪ್ಪು ತರಕಾರಿಗಳಲ್ಲಿ ಸಾಕಷ್ಟು ಪ್ರಮಾಣದ ಪ್ರೋಟೀನ್‌ ಅಂಶವನ್ನು ಹೊಂದಿರುತ್ತದೆ ಎಂದು ರಂಗ್ಲಾನಿಯವರು ಹೇಳುತ್ತಾರೆ.

ಆರೋಗ್ಯಕ್ಕೆ ಸಂಬಂಧಿಸಿ ಸುದ್ಧಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 6:13 pm, Tue, 1 November 22

ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ
ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್
ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್