Astrology: ಈ ರಾಶಿಯವರು ಅಧಿಕ ಖರ್ಚು ಮಾಡುವ ಅನಿವಾರ್ಯತೆ ಬರಬಹುದು

| Updated By: ಗಂಗಾಧರ​ ಬ. ಸಾಬೋಜಿ

Updated on: Oct 01, 2024 | 12:12 AM

ರಾಶಿ ಭವಿಷ್ಯ ಮಂಗಳವಾರ(ಅಕ್ಟೋಬರ್: 01): ಸಾಲವನ್ನು ಮಾಡಿ ವಾಹನವನ್ನು ಖರೀದಿಸುವಿರಿ. ಅಂದುಕೊಂಡಿದ್ದು ಯಾರದೋ ಮೂಲಕ ಆಗುತ್ತದೆ ಎಂದು ಖುಷಿಪಡಿ. ಹಿರಿಯರ ಮಾತಿಗೆ ಎದುರಾಡುವುದು ಸರಿಯಾಗದು. ಸಕಾರಾತ್ಮಕ ಆಲೋಚನೆಯನ್ನು ಬೆಳೆಸಿಕೊಳ್ಳಿ‌. ಹಾಗಾದರೆ ಅಕ್ಟೋಬರ್: 01ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Astrology: ಈ ರಾಶಿಯವರು ಅಧಿಕ ಖರ್ಚು ಮಾಡುವ ಅನಿವಾರ್ಯತೆ ಬರಬಹುದು
ಈ ರಾಶಿಯವರು ಅಧಿಕ ಖರ್ಚು ಮಾಡುವ ಅನಿವಾರ್ಯತೆ ಬರಬಹುದು
Follow us on

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ಉತ್ತರಾಫಲ್ಗುಣೀ, ಯೋಗ: ಶುಕ್ಲ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 23 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 20 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:21 ರಿಂದ ಸಂಜೆ 04:51, ಯಮಘಂಡ ಕಾಲ ಬೆಳಿಗ್ಗೆ 09:23ರಿಂದ 10:52ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:22 ರಿಂದ 01:52 ರವರೆಗೆ.

ಧನು ರಾಶಿ: ಇಂದು ನಿಮ್ಮ ಕಾರ್ಯದಲ್ಲಿ ಅಪಯಶಸ್ಸು ಬಾರದಂತೆ ಕ್ರಮವನ್ನು ತೆಗೆದುಕೊಳ್ಳಿ. ಇಂದು ಯಂತ್ರೋಪಕರಣಗಳನ್ನು ಉಪಯೋಗಿಸುವಾಗ ಜಾಗರೂಕರಾಗಿರಬೇಕು. ಒಂದೇ ತರದ ಜೀವನವು ನಿಮಗೆ ಬೇಸರವನ್ನು ತಂದೀತು. ಏನನ್ನಾದರೂ ಹೊಸತನ್ನು ಮಾಡಲು ಬಯಸುವಿರಿ. ಅಧಿಕ ಖರ್ಚು ಮಾಡುವ ಅನಿವಾರ್ಯತೆ ಬರಬಹುದು. ಸಹೋದ್ಯೋಗಿಗಳಿಂದ ಕಿರಿಯಾಗಲಿದೆ. ನಿಮ್ಮ ಕಾರ್ಯಗಳನ್ನು ವೇಗವಾಗಿ ಮುಗಿಸಿಕೊಂಡು ನಿಶ್ಚಿಂತೆಯಿಂದ ಇರುವಿರಿ. ಸಾಲವನ್ನು ಮಾಡಿ ವಾಹನವನ್ನು ಖರೀದಿಸುವಿರಿ. ಅಂದುಕೊಂಡಿದ್ದು ಯಾರದೋ ಮೂಲಕ ಆಗುತ್ತದೆ ಎಂದು ಖುಷಿಪಡಿ. ಹಿರಿಯರ ಮಾತಿಗೆ ಎದುರಾಡುವುದು ಸರಿಯಾಗದು. ಸಕಾರಾತ್ಮಕ ಆಲೋಚನೆಯನ್ನು ಬೆಳೆಸಿಕೊಳ್ಳಿ‌. ನೌಕರರ ಪ್ರಾಮಾಣಿಕತೆಗೆ ಬೆಲೆ ಸಿಗುವುದು. ಸ್ನೇಹಿತರಿಂದ ನಿಮ್ಮ ವ್ಯಕ್ತಿತ್ವಕ್ಕೆ ಧಕ್ಕೆಯಾಗಬಹುದು. ಸಂಗಾತಿಯ ಬಗ್ಗೆ ಅನುಕಂಪ ಬರಬಹುದು. ಆಧಿಕ ಖರ್ಚನ್ನು ಮಾಡಿಕೊಳ್ಳುವುದು ಬೇಡ.

ಮಕರ ರಾಶಿ: ನೀವು ಆದಾಯಕ್ಕೆ ಸರಿಯಾಗಿ ಅಥವಾ ಅದಕ್ಕಿಂತ ಕಡಿಮೆ ಖರ್ಚನ್ನು ಮಾತ್ರ ಯೋಜಿಸಿ. ಇಂದು ಅದೃಷ್ಟವನ್ನು ನಿಮ್ಮದಾಗಿಸಿಕೊಳ್ಳು ಪ್ರಯತ್ನಗಳು ಸಫಲವಾಗಲಿದೆ. ಪ್ರೇಮಪ್ರಕರಣವು ದುಃಖಾಂತವಾಗಲಿದೆ. ಸಂಗಾತಿಗಳು ದೂರಾಗಬಹುದು. ನಿಮ್ಮ ಖಾತೆಯಲ್ಲಿ ಹಣವು ಕಡಿಮೆ ಆಗಿ ಆತಂಕ ಸೃಷ್ಟಿಯಾಗಬಹುದು. ಸಹೋದ್ಯೋಗದಲ್ಲಿ ವೈರತ್ವ ಹುಟ್ಟಿಕೊಳ್ಳಬಹುದು. ನಿಮ್ಮ ವಸ್ತುವನ್ನು ಕಳೆದುಕೊಂಡು ಯಾರದೋ‌ ಮೇಲೆ ಅನುಮಾನ‌ಪಡಲಿದ್ದೀರಿ. ಸಮಾಜಿಕ ಗೌರವವನ್ನು ನೀವು ತಿರಸ್ಕರಿಸುವಿರಿ. ಸ್ತ್ರೀಯರ ಮೇಲೆ ನಿಮಗೆ ದಯೆಯು ಉಂಟಾಗಬಹುದು. ಸಹೋದರನಿಗೆ ಧನದ ಸಹಾಯವನ್ನು ಮಾಡುವಿರಿ. ನಿಮ್ಮ ದೂರು ತರ್ಕಬದ್ಧವೂ ನ್ಯಾಯಬದ್ಧವೂ ಆಗಿರಲಿ. ಅನಿರೀಕ್ಷಿತವಾಗಿ ಬರವ ಕೆಲವು ಸುದ್ದಿಗಳು ನಿಮಗೆ ದುಃಖವನ್ನು ಕೊಡಬಹುದು. ನೂತನ ವಾಹನವನ್ನು ಖರೀದಿಸಲು ಹುಮ್ಮಿಸ್ಸಿನಿಂದ ಇರುವಿರಿ. ಉದ್ಯೋಗದಲ್ಲಿ ನಿಮ್ಮ ನಡೆಯು ಸರಿಯಾಗಿರಲಿ.

ಕುಂಭ ರಾಶಿ; ಸಾಲದ ಮರುಪಾವತಿಯಾದರೂ ಮತ್ತೆ ಸಾಲದ ಭಯವು ಕಾಡುವುದು. ಬಹಳ ದಿನಗಳಿಂದ ಮರೆತುಹೋದ ಸ್ನೇಹಿತರನ್ನು ಅನಿರೀಕ್ಷೀತ ಭೇಟಿಯಾಗುವಿರಿ. ಪೂರ್ವಪುಣ್ಯವು‌ ನಿಮ್ಮನ್ನು ಕಾಪಾಡುವುದು. ನಿಮ್ಮನ್ನು ಹಾಸ್ಯ ಮಾಡಬಹುದು. ಯಾರೋ ಆಡಿದ ಮಾತಿನಿಂದ ನಿಮಗೆ ಬೇಸರವಾಗಬಹುದು. ಒಂದಿಲ್ಲೊಂದು ನೆನಪಗಳನ್ನು ಹೇಳಿ ಉದ್ಯೋಗಕ್ಕೆ ವಿರಾಮವನ್ನು ಹಾಕುವಿರಿ. ನಿಮ್ಮ ಬಗ್ಗೆ ಒಳ್ಳೆಯ ಮಾತುಗಳನ್ನು ಕೇಳುವಿರಿ. ಮಹಿಳೆಯರು ತಮ್ಮ ಉದ್ಯಮವನ್ನು ಬಹಳ ನಾಜೂಕಿನಿಂದ ಮಾಡುವರು. ಅಸಾಧ್ಯವನ್ನು ನೀವು ಸಾಧಿಸಲು ಅಧಿಕಶ್ರಮವನ್ನು ಹಾಕುವಿರಿ. ಉಪಾಕರದ ಸ್ಮರಣೀಯನ್ನು ಇಟ್ಟಕೊಂಡು ಮುಂದುವರಿಯಿರಿ. ಸಿಟ್ಟು ಮಾಡುವ ಸಂದರ್ಭದಲ್ಲಿ ಸಿಟ್ಟ ನಿಮ್ಮ ಹಿಡಿತದಲ್ಲಿ ಇರಲಿ. ಸುತ್ತಾಡುವ ಮನಸ್ಸಾದೀತು. ಮೇಲಧಿಕಾರಿಗಳ ಪ್ರಶ್ನೆಗೆ ಉತ್ತರಿಸಬೇಕು. ಏಕಾಂತವನ್ನು ನೀವು ಇಷ್ಟಪಡಲಾರಿರಿ. ನಿಮ್ಮ ಸೌಲಭ್ಯಗಳನ್ನು ಹೆಚ್ಚು ಮಾಡಿಕೊಳ್ಳುವಿರಿ. ನಿಮ್ಮ ಸುಳ್ಳನ್ನು ಯಾರಾದರೂ ನಂಬಬಹುದು. ಆಕಸ್ಮಿಕ ಧನಲಾಭದಿಂದ ಸಂತಸವು ಇರಲಿದೆ.

ಮೀನ ರಾಶಿ: ಇಂದು ಅನಗತ್ಯವಾಗಿ ಯಾರದೋ ವಿವಾದದಲ್ಲಿ ಸಿಕ್ಕಿಕೊಳ್ಳುವಿರಿ. ಆದಾಯಕ್ಕೆ ಇರುವ ಸುಲಭ ಮಾರ್ಗವನ್ನು ಅನ್ವೇಷಣೆ ಮಾಡುವಿರಿ. ಬಹಳಷ್ಟು ಮಾಡಬೇಕಾದ ಕೆಲಸಗಳಿದ್ದರೂ ಎಲ್ಲವನ್ನೂ ಬಿಟ್ಟು ಆರಾಮಾಗಿ ಇರುವಿರಿ. ನಿಮ್ಮದಾದ ನಿಯಮಗಳನ್ನು ನೀವು ಬದಲಿಸಿಕೊಳ್ಳಲಾರಿರಿ. ಕಳೆದ ಸಮಯವನ್ನು ನೀವು ಮೆಲುಕು ಹಾಕುಕೊಂಡು ಸಂತೋಷೊಡುವಿರಿ. ನೀವು ತೆಗೆದುಕೊಳ್ಳುವ ನಿರ್ಧಾರವು ವಿಳಂಬವಾದರೂ ಸ್ಪಷ್ಟವಾಗಿ ಇರಲಿದೆ. ಬೇಕಾದಷ್ಟನ್ನೇ ಮಾತನಾಡಿ. ಮನಸ್ಸಿನಲ್ಲಿ ಆತಂಕವು ಹೆಚ್ಚಿರಲಿದೆ. ಸಂಪತ್ತಿನ ಬಗ್ಗೆ ತಾತ್ಸಾರಭಾವವು ಬರಬಹುದು. ಆದಾಯದಲ್ಲಿ ಅತಿಯಾದ ನಿರೀಕ್ಷೆಯನ್ನು ಬಿಡುವುದು ಉತ್ತಮ. ಬರುವಷ್ಟನ್ನು ಸರಿಯಾಗಿ ಬಳಸಿಕೊಳ್ಳಿ.‌ ಇಂದು ನೀವು ಮಾಡುವ ಲೆಕ್ಕಾಚಾರದಿಂದ ಕಳೆದುಕೊಂಡಿದ್ದು ಎಷ್ಟು ಎಂಬ ಮಾಹಿತಿ ಸಿಗಲಿದೆ. ಅನಿರೀಕ್ಷಿತ ಲಾಭವಾಗಲಿದೆ. ಸಂತಾನ ಸುದ್ದಿಯು ನಿಮಗೆ ಖುಷಿ ಕೊಟ್ಟೀತು. ಇಂದು ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಮನೆಯ ಹೊರಗೆ ಇಂದು ಹೆಚ್ಚು ಸುತ್ತಾಡುವಿರಿ. ಆಯಾಸವು ಅಧಿಕವಾಗುವುದು. ಸಂತೋಷ ಇರುತ್ತದೆ. ಭೂಮಿ ಮತ್ತು ವಸತಿಗೆ ಸಮಸ್ಯೆಯಾಗಬಹುದು.