ಉದ್ಯೋಗ ಭವಿಷ್ಯ: ಜೂನ್ 14ರಿಂದ 20ರವರೆಗೆ ಈ ರಾಶಿಯವರಿಗೆ ಸಿಗಲಿದೆ ಪ್ರಮೋಷನ್; ನಿಮ್ಮ ರಾಶಿಯ ಉದ್ಯೋಗ ಯೋಗ ಹೇಗಿದೆ?

ಜೂನ್ 14ರಿಂದ 20ರವರೆಗೆ ಔದ್ಯೋಗಿಕ ಶ್ರಮಕ್ಕೆ ತಕ್ಕ ಲಾಭ ಮತ್ತು ಸ್ಥಾನಮಾನ ತರಲಿದೆ. ಕುಜ, ಬುಧ, ಗುರು ಮತ್ತು ರಾಹುವಿನ ಶುಭ ಸ್ಥಾನಗಳಿಂದ ಈ ವಾರ ವೃತ್ತಿ ಬದುಕಿನಲ್ಲಿ ಉತ್ಸಾಹ ಮತ್ತು ಪ್ರಗತಿ ನಿಶ್ಚಿತ. ಹೊಸ ಜವಾಬ್ದಾರಿಗಳು, ಆರ್ಥಿಕ ವೃದ್ಧಿ ಹಾಗೂ ಮನ್ನಣೆ ಪಡೆಯಲು ಇದು ಸೂಕ್ತ ಸಮಯ, ನಿಮ್ಮ ಕಠಿಣ ಪರಿಶ್ರಮಕ್ಕೆ ಯಶಸ್ಸು ಕಾದಿದೆ.

ಉದ್ಯೋಗ ಭವಿಷ್ಯ: ಜೂನ್ 14ರಿಂದ 20ರವರೆಗೆ ಈ ರಾಶಿಯವರಿಗೆ ಸಿಗಲಿದೆ ಪ್ರಮೋಷನ್; ನಿಮ್ಮ ರಾಶಿಯ ಉದ್ಯೋಗ ಯೋಗ ಹೇಗಿದೆ?
ಸಾಂದರ್ಭಿಕ ಚಿತ್ರ
Edited By:

Updated on: Jun 12, 2026 | 9:01 PM

ಜೂನ್ 14 ರಿಂದ 20 ರವರೆಗಿನ ಈ ವಾರವು ಪ್ರೇಮದಲ್ಲಿ ಅನೇಕ ಅಚ್ಚರಿಗಳನ್ನು ತರಲಿದೆ. ಶುಕ್ರನು ಚಂದ್ರನ ರಾಶಿಯಲ್ಲಿ ಸ್ಥಿತನಾಗಿರುವುದರಿಂದ, ಅನಿರೀಕ್ಷಿತ ರೋಮಾಂಚನದ ಕ್ಷಣಗಳು ನಿಮ್ಮದಾಗಲಿವೆ. ಪ್ರತಿಯೊಂದು ರಾಶಿಗೂ ಪ್ರೀತಿಯಲ್ಲಿ ಹೊಸ ತಿರುವುಗಳು, ಬಾಂಧವ್ಯ ಸುಧಾರಣೆ ಮತ್ತು ಸುವರ್ಣಾವಕಾಶಗಳು ಕಾದಿವೆ. ನಿಮ್ಮ ಪ್ರೇಮ ಜೀವನದಲ್ಲಿ ಹೊಸ ಲಯ, ಮಾತುಗಳ ಮಂತ್ರ, ಮತ್ತು ಆತ್ಮೀಯತೆಯ ದುಪ್ಪಟ್ಟು ಹೆಚ್ಚಳವನ್ನು ನಿರೀಕ್ಷಿಸಬಹುದು.

ವಾರದ ಪ್ರೇಮ ಭವಿಷ್ಯ: ಜೂನ್ 14ರಿಂದ 20ರವರೆಗೆ ಪ್ರೀತಿಯ ಲೋಕದಲ್ಲಿ ಅಚ್ಚರಿಯ ಚಮತ್ಕಾರ!; ಈ ರಾಶಿಯವರಿಗೆ ಸಿಗಲಿದೆ ಸಂಗಾತಿಯ ಗಿಫ್ಟ್

June 14-20 Weekly Love Horoscope: Zodiac Predictions and Romantic Surprises Await

Love Horoscope June 14-20: Romantic Forecast and Surprising Turns for All Zodiacs

June 14-20 love predictions, Zodiac love forecast, Romantic astrology, Relationship horoscope , Love forecast by zodiac, ಪ್ರೇಮ ಭವಿಷ್ಯ, ವಾರದ ರಾಶಿ ಭವಿಷ್ಯ

ಜೂನ್ 14ರಿಂದ ಜೂನ್ 20ರವರೆಗೆ ಪ್ರೇಮದಲ್ಲಿ ಅನೇಕ ಅಚ್ಚರಿಯ ಸಂಗತಿಗಳು ನಡೆಯಲಿವೆ. ಶುಕ್ರನು ಚಂದ್ರನ ರಾಶಿಯಲ್ಲಿ ಸ್ಥಿತನಾಗಿದ್ದಾನೆ. ಅನಿರೀಕ್ಷಿತವಾದ ರೋಮಾಂಚನದ ಕ್ಷಣಗಳು ನಿಮ್ಮದಾಗಲಿದೆ.

​ಮೇಷ ರಾಶಿ :

ಹೃದಯದ ಬಡಿತಕ್ಕೆ ಹೊಸ ಲಯ ಸಿಗಲಿದ್ದು, ಮಂಗಳನ ಪ್ರಭಾವದಿಂದ ಪ್ರೀತಿಯಲ್ಲಿ ರೋಮಾಂಚನ ಕಾದಿದೆ. ಕಣ್ಣಲ್ಲೇ ಸನ್ನೆ ಮಾಡಿ ಮನಸ್ಸು ಕದಿಯುವಿರಿ. ಸಂಗಾತಿಯೊಂದಿಗೆ ಸುಂದರ ಪಯಣಕ್ಕೆ ಸಕಾಲವಿದು.

​ವೃಷಭ ರಾಶಿ :

​ಮೌನ ಕರಗಿ, ಒಲವಿನ ಮಾತು ಚಿಗುರುವುದು. ನಿಮ್ಮ ಪ್ರೀತಿಯ ಆಳ ಸಂಗಾತಿಗೆ ಮನವರಿಕೆಯಾಗಲಿದೆ. ಮುನಿಸುಗಳೆಲ್ಲಾ ಮರೆಯಾಗಿ, ಒಲವಿನ ಹೂವು ಅರಳಲಿದೆ. ಕಂಕಣ ಭಾಗ್ಯಕ್ಕೆ ದಾರಿಯಾಗುವ ಮಧುರ ವಾರವಿದು.

​ಮಿಥುನ ರಾಶಿ :

​ಮಾತುಗಳೇ ಮಂತ್ರವಾಗಿ ಹೃದಯ ಗೆಲ್ಲುವ ಕ್ಷಣವಾಗಲಿದೆ. ನಿಮ್ಮ ಮಾತುಗಳಿಗೆ ಸಂಗಾತಿ ಫಿದಾ ಆಗಲಿದ್ದಾರೆ. ಪ್ರೇಮದ ಸುಳಿಯಲ್ಲಿ ಸಿಲುಕಿ ಹೊಸ ಲೋಕವನ್ನೇ ಸೃಷ್ಟಿಸುವಿರಿ. ಪ್ರೀತಿಯಲ್ಲಿ ನೆನಪಿನಲ್ಲಿ ಉಳಿಯುವಂತಹ ರೋಮಾಂಚನಕಾರಿ ತಿರುವು ಸಿಗಲಿದೆ.

​ಕರ್ಕಾಟಕ ರಾಶಿ :

ಈ ರಾಶಿಯಲ್ಲಿ ​ಶುಕ್ರನ ವಾಸ, ಒಲವಿನ ಸಾಮ್ರಾಜ್ಯದಲ್ಲಿ ಹೊಸ ಹರ್ಷ. ನಿಮ್ಮ ರಾಶಿಯ ಶುಕ್ರ ಪ್ರೇಮದ ಮಳೆ ಸುರಿಸಲಿದ್ದಾನೆ. ಸಂಗಾತಿಯ ತೋಳಿನಲ್ಲಿ ಸ್ವರ್ಗ ಸುಖ ಕಾಣುವಿರಿ, ಆತ್ಮೀಯತೆ ದುಪ್ಪಟ್ಟಾಗಲಿದೆ.

​ಸಿಂಹ ರಾಶಿ :

​ಚಂದಿರನ ಬೆಳಕಿನಲ್ಲಿ ಪ್ರೇಮದ ಕಾವ್ಯ ಮೂಡುವುದಿದೆ. ಭಾವನೆಗಳ ಅಲೆ ನಿಮ್ಮನ್ನು ಸಂಗಾತಿಯ ಹತ್ತಿರ ತರಲಿದೆ. ಪ್ರೀತಿಯಲ್ಲಿ ನಿಷ್ಠೆ ಹೆಚ್ಚಲಿದ್ದು, ವಿಶೇಷ ಉಡುಗೊರೆಯೊಂದಿಗೆ ಅವರ ಮನಸ್ಸನ್ನು ಸಂಪೂರ್ಣವಾಗಿ ಗೆಲ್ಲುವಿರಿ.

​ಕನ್ಯಾ ರಾಶಿ :

​ವಾದಗಳನ್ನು ಬದಿಗಿಟ್ಟು, ಪ್ರೀತಿಯ ಗೀತೆ ಹಾಡುವ ಸಮಯ. ಮನಸ್ಸಿನ ಗೊಂದಲಗಳು ದೂರವಾಗಿ ಸಂಗಾತಿಯ ಸನಿಹ ಸುಖ ನೀಡಲಿದೆ. ಪ್ರೇಮಕ್ಕೆ ಕುಟುಂಬದ ಹರಕೆ ಸಿಗುವ ಸುವರ್ಣ ಅವಕಾಶವಿದೆ. ಪ್ರೀತಿ ಮಾಗುವ ಸುಂದರ ದಿನಗಳಿವು.

​ತುಲಾ ರಾಶಿ :

​ಹೃದಯಗಳು ಒಂದಾಗಿ, ಪ್ರೇಮದ ಹೆಜ್ಜೆ ಇಡುವ ಕಾಲ. ಸಂಗಾತಿಯ ಕಣ್ಣಲ್ಲೇ ನಿಮ್ಮ ಜಗತ್ತನ್ನು ಕಾಣುವಿರಿ. ಪ್ರೀತಿಯ ಸಂಬಂಧ ಮುಂದಿನ ಹಂತಕ್ಕೆ ತಲುಪಲು ಈ ವಾರ ಹೆಜ್ಜೆಯಿಡಲಿದ್ದೀರಿ. ಬಾಂಧವ್ಯ ಮತ್ತಷ್ಟು ಗಟ್ಟಿಯಾಗಲಿದೆ.

​ವೃಶ್ಚಿಕ ರಾಶಿ :

​ಸಂಶಯದ ಮೋಡ ಸರಿದು, ಪ್ರೇಮದ ಸೂರ್ಯ ಮೂಡುವ ವಾರವಿದು. ನಿಮ್ಮ ನಿಗೂಢ ಪ್ರೀತಿ ಈಗ ಬಹಿರಂಗವಾಗುವ ಸಮಯ. ಸಂಗಾತಿಯ ನಂಬಿಕೆ ನಿಮ್ಮಲ್ಲಿ ಹೊಸ ಚೈತನ್ಯ ತುಂಬಲಿದೆ. ಪ್ರೇಮ ಸಾಮ್ರಾಜ್ಯದಲ್ಲಿ ನೀವೇ ರಾಜ ಮತ್ತು ರಾಣಿಯರು.

​ಧನು ರಾಶಿ :

​ಹೊಸ ಕನಸು, ಹೊಸ ಒಲವು ಮೂಡುವ ರಂಗಿನ ದಿನಗಳು ನಿಮಗೆ. ಒಂಟಿತನಕ್ಕೆ ಬ್ರೇಕ್ ಬೀಳಲಿದೆ. ಹೊಸಬರ ಪ್ರವೇಶದಿಂದ ಮನಸ್ಸು ತೇಲಲಿದೆ. ಹಳಬರ ಮುನಿಸು ಕರಗಿ, ಪ್ರೀತಿಯ ಸವಿ ಸಿಗುವ ಅದ್ಭುತ ವಾರವಿದು.

ಇದನ್ನೂ ಓದಿ: ಉದ್ಯೋಗ ಭವಿಷ್ಯ: ಜೂನ್ 14ರಿಂದ 20ರವರೆಗೆ ಈ ರಾಶಿಯವರಿಗೆ ಸಿಗಲಿದೆ ಪ್ರಮೋಷನ್; ನಿಮ್ಮ ರಾಶಿಯ ಉದ್ಯೋಗ ಯೋಗ ಹೇಗಿದೆ?

​ಮಕರ ರಾಶಿ :

​ನಂಬಿಕೆಯ ತಳಹದಿಯ ಮೇಲೆ ಪ್ರೇಮದ ಅರಮನೆ ನಿರ್ಮಾಣವಾಗಲಿ. ಮಾತಗಿಂತ ಕೃತಿಯಲ್ಲಿ ಪ್ರೀತಿ ತೋರಿಸುವಿರಿ. ಸಂಗಾತಿಯ ಜವಾಬ್ದಾರಿಯುತ ನಡವಳಿಕೆ ನಿಮ್ಮಲ್ಲಿ ನೆಮ್ಮದಿ ತರಲಿದೆ. ಪ್ರೇಮ ಜೀವನದಲ್ಲಿ ಸ್ಥಿರತೆ ಮತ್ತು ಗೌರವ ಹೆಚ್ಚಾಗಲಿದೆ.

​ಕುಂಭ ರಾಶಿ :

​ಹಠ ಬಿಟ್ಟು ಒಲವಿಗೆ ಶರಣಾಗುವ ಮಧುರ ಕ್ಷಣ ಬರಲಿದೆ. ಸಂಗಾತಿಯ ಸಣ್ಣ ಮುನಿಸನ್ನು ಪ್ರೀತಿಯಿಂದಲೇ ಗೆಲ್ಲುವಿರಿ. ವಾರಾಂತ್ಯದಲ್ಲಿ ದೂರವಿಹಾರ ನಿಮ್ಮ ಪ್ರೇಮದ ರಂಗನ್ನು ಮತ್ತಷ್ಟು ಹೆಚ್ಚಿಸಲಿದೆ.

​ಮೀನ ರಾಶಿ :

​ಶನಿಯ ಸ್ಥಿರತೆಯಲ್ಲಿ, ಅಮರ ಪ್ರೇಮದ ಪಿಸುಮಾತು ಬರಲಿದೆ. ಮೀನದ ಶನಿ ಪ್ರೀತಿಗೊಂದು ಜವಾಬ್ದಾರಿ ನೀಡಲಿದ್ದಾನೆ. ಸಂಗಾತಿಯ ಮೌನವನ್ನೂ ಅರ್ಥೈಸಿಕೊಂಡು, ಗಾಢವಾದ ಭಾವನಾತ್ಮಕ ಬಾಂಧವ್ಯವನ್ನು ಅನುಭವಿಸುವಿರಿ.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:43 pm, Fri, 12 June 26

ಲೋಹಿತ ಹೆಬ್ಬಾರ್​, ಇಡುವಾಣಿ

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
Follow Us