AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೆಪ್ಟೆಂಬರ್ 27ರಂದು ಹಗಲು ಇರುಳು ಸರಿಸಮ… ಶುಭಘಳಿಗೆಯ ಸಮಾಗಮ

ಕಾಲವೆಂದರೆ ಹಾಗೇ ಇಲ್ಲಿ ನೂರಾ ಅಚ್ಚರಿಗಳು‌ ಸಿಗುತ್ತಲೇ ಇರುತ್ತವೆ.‌ ಅದನ್ನು ಕಾಣುವ ಕಣ್ಣು ಬೇಕು. ಆ ಕಣ್ಣನ್ನು ಕೊಟ್ಟಿದ್ದು ಪ್ರಾಚೀನ ಮಹರ್ಷಿಗಳು.‌ ಜ್ಯೌತಿಷ ಎಂಬ ವಿದ್ಯೆಯನ್ನು ಕೊಟ್ಟು, ಅದರ ಮೂಲಕ ಕಾಲವನ್ನು ನೋಡಿ ಎಂದರು. ಇದರ ಮೂಲಕ‌ ಎಷ್ಟೋ ಲಕ್ಷ ಕಿಲೋಮೀಟರ್ ದೂರದಲ್ಲಿರುವ ಗ್ರಹಗಳ ಹಾಗೂ ನಕ್ಷತ್ರಗಳ ಗಣನೆಯನ್ನು ಕೂಡ ಮಾಡಬಹುದು. ಅಷ್ಟೇ ಅಲ್ಲ ಕಳೆದು ಹೋದ ಕಾಲವನ್ನೂ ಮುಂದೆ ಕಳೆಯಲಿರುವ ಕಾಲವನ್ನೂ ನೋಡಲು ಅನುಕೂಲವಾಗುವುದೇ ಈ ವಿದ್ಯೆಯಿಂದ.

ಸೆಪ್ಟೆಂಬರ್ 27ರಂದು ಹಗಲು ಇರುಳು ಸರಿಸಮ... ಶುಭಘಳಿಗೆಯ ಸಮಾಗಮ
ಹಗಲು ಇರುಳು
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ರಮೇಶ್ ಬಿ. ಜವಳಗೇರಾ|

Updated on: Sep 26, 2024 | 10:38 PM

Share

ಸೂರ್ಯನು ಗ್ರಹಗಳಿಗೆ ನಾಯಕ.‌ ಆತನನ್ನು ಜ್ಯೋತಿಷಾಂ ಪತಿಃ ಎಂದು ಕರೆದಿದ್ದಾರೆ.‌ ಎಲ್ಲ ಪ್ರಕಾಶಗಳಿಗೂ ಆತನೇ ಮೂಲ ಎಂದು. ಸಕಲವಸ್ತುಗಳಿಗೂ ಚೇತನವನ್ನು ಕೊಡುವವನೂ ಆತನೇ. ಸೃಷ್ಟಿಯ ಕೇಂದ್ರ ಅವನೇ. ಅವನಿಲ್ಲದೇ ಯಾವ ಜಗತ್ತೂ ಮುಂದುವರಿಯದು. ಹಗಲು ರಾತ್ರಿಗಳಾಗುವುದೂ ಅವನಿಂದಲೇ.

360 ಡಿಗ್ರಿಗಳ ಈ ಖಗೋಳದಲ್ಲಿ ಸೂರ್ಯನು ಒಮ್ಮೆ ಬೆಳಕು ಕೊಡುಬುದು ೧೮೦ ಡಿಗ್ರಿಗಳಿಗೆ ಮಾತ್ರ. ಇನ್ನು ಉಳಿದದ್ದು ಕತ್ತಲೆ. ಹಗಲು ಇರುಳುಗಳು ಯಾವಾಗಲೂ ಸರಿಯಾಗಿ ಇರದು.‌ ಕೆಲವು ಬಾರಿ ಹಗಲು ಹೆಚ್ಚು ರಾತ್ರಿ ಕಡಿಮೆ, ಕೆಲವು ಬಾರಿ ರಾತ್ರಿ ಹಗಲು ಕಡಿಮೆ‌ ಇರುತ್ತದೆ. ಇದು ಭಾರತದಿಂದ ಮಾತ್ರವಲ್ಲ ಎಲ್ಲ ಭೂಭಾಗ ಇದು ಇರುತ್ತದೆ. ವರ್ಷದಲ್ಲಿ ಎರಡು ಬಾರಿ ಈ ಘಟನೆ ಸಂಭವಿಸುತ್ತದೆ. ಒಂದು‌‌ ಮೀನದಿಂದ ಮೇಷಕ್ಕೆ ಸೂರ್ಯನು ಸಂಚಾರ ಮಾಡು ಸಂದರ್ಭ. ಅಂದರೆ ಸರಿ ಸುಮಾರು ಏಪ್ರಿಲ್ ತಿಂಗಳ ಸಮಯ.‌ ಇನ್ನೊಂದು ಈ ತಿಂಗಳಲ್ಲಿ.

ಮೇಷವು ರಾಶಿ ಚಕ್ರದ ಮೊದಲನೇ ರಾಶಿಯಾದರೆ ತುಲಾ ರಾಶಿಯು ಏಳನೇ ರಾಶಿಯಾಗಲಿದೆ. ಹನ್ನೆರಡು ರಾಶಿಗಳನ್ನು ಎರಡು ಭಾಗ ಮಾಡಿದರೆ ತುಲಾರಾಶಿಯು ಎರಡನೇ ಭಾಗದ ಮೊದಲ ರಾಶಿ. ಮೇಷವು ಮೊದಲೇ ಭಾಗದ ಒಂದನೇ ರಾಶಿ.‌ ಮೇಷರಾಶಿಗೆ ಹೋಗುವಾಗ ಸೂರ್ಯನು ಉತ್ತರ ಧ್ರುವದ ಕಡೆಗೆ ಹೆಚ್ಚು ಸಂಚಾರವಿದ್ದರೆ, ಈಗ ದಕ್ಷಿಣಧ್ರುವದ ಕಡೆ ಹೆಚ್ಚು ಸಂಚಾರ ಮಾಡುವನು. ಇವೆರಡೆರ ಮಧ್ಯದಲ್ಲಿ ಸೂರ್ಯನು ಬಂದಾಗ ಹಗಲು ಮತ್ತು ರಾತ್ರಿಗಳು ಸಮವಾಗಿರುತ್ತದೆ. ‌ಈ ಕಾಲವನ್ನು ವಿಷುವ’ಕಾಲ ಎನ್ನುತ್ತಾರೆ. ಆ ಕಾಲವು ದಿನಾಂಕ ೨೭ ಸಪ್ಟೆಂಬರ್ ನಲ್ಲಿ‌ನಡೆಯಲಿದೆ. ಸೂರ್ಯನು ಸರಿಯಾಗಿ ಭೂಮಧ್ಯರೇಖೆಯಲ್ಲಿ ಇರುವನು.

ಇಂತಹ‌ ಸ್ಥಿತಿಯು ಅನೇಕ ಸಂಶೋಧನೆಗೂ ಕಾರಣವಾಗುವ ಕಾಲ. ಏಕೆಂದರೆ ಬೇರೆ ಸಮಯದಲ್ಲಿ ಸೂರ್ಯನು ಹೇಗಿದ್ದಾನೆ, ಎಲ್ಲಿದ್ದಾನೆ ಎಂದು ತಿಳಿಯುವುದು ಕಷ್ಟ. ಆದರೆ ಭೂಮಿಯ ಮಧ್ಯಭಾಗಕ್ಕೆ ಬಂದಮೇಲೆ ಆತನ ಸಂಚಾರವನ್ನು ಸರಿಯಾಗಿ ಲೆಕ್ಕಿಸಬಹುದು ಎಂಬುದು ಜ್ಯೌತಿಷಜ್ಞರ ಮತ. ಹಾಗಾಗಿ ಇದನ್ನು ಅಪರೂಪದ ಕಾಲವಾಗಿಯೂ ನೋಡುತ್ತಾರೆ. ಈ ಸಮಯದಲ್ಲಿ ಶ್ರಾದ್ಧಾದಿ ಕರ್ಮಗಳನ್ನು ಮಾಡುವುದು ಉತ್ತಮ. ದಾನಗಳನ್ನು ಮಾಡಿದರೇ ಶುಭಫಲವು ಸಿಗುವುದು.

ವರ್ಷದಲ್ಲಿ ಸಿಗುವ ಇಂತಹ ಅಪರೂಪದ ವಿದ್ಯಮಾನಗಳನ್ನು, ಸೃಷ್ಟಿಯಲ್ಲಿ ಆಗುವ ಬದಲಾವಣೆಗಳನ್ನು ಗಮನಿಸುತ್ತ ದೇವರ ಸೃಷ್ಟಿಯನ್ನು ಆಸ್ವಾದಿಸಬೇಕು.

-ಲೋಹಿತ ಹೆಬ್ಬಾರ್ – 8762924271

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ