
ಸ್ವಯಂವರ ಪಾರ್ವತಿ ಮಂತ್ರದ ಶ್ರವಣ, ಪಠಣವನ್ನು ಮಾಡಿ. ಯಾರು ಮದುವೆಗಾಗಿ ಪ್ರಯತ್ನ ಮಾಡುತ್ತಿದ್ದೀರಿ ಅಥವಾ ದಂಪತಿ ಮಧ್ಯೆ ವಿರಸ ಇದೆ ಅಂಥವರಿಗೆ ಸಮಸ್ಯೆಯಿಂದ ಹೊರಬರುವ ಮಾರ್ಗೋಪಾಯ ಗೋಚರಿಸುತ್ತದೆ.
ನಿಮ್ಮಿಂದ ಹಲವರಿಗೆ ಈ ದಿನ ಅನುಕೂಲ- ಸಹಾಯ ಒದಗಿಬರಲಿದೆ. ಉದ್ಯೋಗಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ವ್ಯಕ್ತಿಯೊಬ್ಬರ ಬಳಿ ಶಿಫಾರಸು ಮಾಡಿದರೆ ತನಗೆ ಕೆಲಸ ಸಿಗುವ ಸಾಧ್ಯತೆ ಹೆಚ್ಚಿದೆ ಎಂದು ನಿಮ್ಮನ್ನು ಹುಡುಕಿಕೊಂಡು ಬಂದು ಸಹಾಯ ಕೇಳಬಹುದು. ಅಥವಾ ಇದೊಂದು ವಿಚಾರವನ್ನು ಹೇಳಬೇಡಿ ಎಂದು ಮನವಿ ಮಾಡುವ ಸಾಧ್ಯತೆ ಕೂಡ ಇದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಬರುವಂಥ ಜಾಹೀರಾತು ನೋಡಿ, ಯಾವುದೇ ವಸ್ತುವನ್ನು ಖರೀದಿ ಮಾಡಬೇಡಿ. ಏಕೆಂದರೆ ಆ ನಂತರ ಪರಿತಪಿಸುವಂತೆ ಆಗುತ್ತದೆ. ಇನ್ನು ನವ ವಿವಾಹಿತರಿದ್ದಲ್ಲಿ ಹಣಕಾಸು ವಿಷಯಗಳಲ್ಲಿ ಪಾರದರ್ಶಕವಾಗಿ ಇರುವುದು ಬಹಳ ಉತ್ತಮ ಹಾಗೂ ಕ್ಷೇಮ. ತಾತ್ಕಾಲಿಕವಾಗಿ ಅಂದುಕೊಂಡಿದ್ದ ಜವಾಬ್ದಾರಿಯೊಂದು ಕಾಯಂ ಆಗಿ ನಿಮ್ಮ ಮೇಲೇ ಬರುವ ಎಲ್ಲ ಅವಕಾಶಗಳು ಇವೆ.
ನಿಮ್ಮ ಸಮಯ, ಶ್ರಮ, ಹಣ, ಪ್ರಯತ್ನ ಹೀಗೆ ಮುಖ್ಯವಾದದ್ದನ್ನು ತಮ್ಮ ಅನುಕೂಲಕ್ಕಾಗಿ ಇತರರು ಬಳಸಿಕೊಳ್ಳುತ್ತಿದ್ದಾರೆ ಎಂದು ಪ್ರಬಲವಾಗಿ ನಿಮಗೆ ಅನಿಸುವುದಕ್ಕೆ ಶುರುವಾಗಲಿದೆ. ನಿಮ್ಮಲ್ಲಿ ಯಾರು ಟ್ಯೂಷನ್ ಹೇಳಿಕೊಡುವುದರ ಮೂಲಕ ಆದಾಯವನ್ನು ಗಳಿಸುತ್ತಿದ್ದೀರೋ ಅಂಥವರಿಗೆ ಕೆಲವು ಸಮಯ ಪಾಠ ಮಾಡುವುದು ಅಸಾಧ್ಯ ಎಂಬ ಸನ್ನಿವೇಶ ನಿರ್ಮಾಣ ಆಗಲಿದೆ.
ಲೇಖನ- ಸ್ವಾತಿ ಎನ್.ಕೆ.