
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಸಂಚಾರ, ಯುತಿ ಹಾಗೂ ದೃಷ್ಟಿಯಿಂದ ಕೆಲವು ಮಹಾ ಯೋಗಗಳು ನಿರ್ಮಾಣವಾಗುತ್ತವೆ. ಅಂತಹ ಒಂದು ಅಪರೂಪದ ಮತ್ತು ಅತ್ಯಂತ ಶುಭಕರ ಯೋಗವೇ ಗುರು ಪುಷ್ಯ ಮಹಾಯೋಗ. 2026 ರಲ್ಲಿ ಈ ಗುರು ಪುಷ್ಯ ಯೋಗವು 61 ದಿನಗಳ ಕಾಲ ಇರಲಿದ್ದು, ಇದು ಪ್ರಮುಖ ಜ್ಯೋತಿಷ್ಯ ಘಟನೆಯಾಗಿದೆ. ಜೂನ್ 18 ರಂದು ಗುರುವಾರ ರಾತ್ರಿ 9:32 ಕ್ಕೆ ಆರಂಭವಾಗಿ, ಆಗಸ್ಟ್ 19 ರ ಬುಧವಾರ ಬೆಳಗಿನ ಜಾವ 3:37 ರವರೆಗೆ ಗುರುವು ಪುಷ್ಯ ನಕ್ಷತ್ರದಲ್ಲಿ ಸಂಚರಿಸಲಿದೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ.
ಗುರುವು ಧರ್ಮ ಕಾರಕನಾಗಿರುತ್ತಾನೆ, ಪುಷ್ಯ ನಕ್ಷತ್ರಾಧಿಪತಿ ಶನಿ ಭಗವಾನನು ಕರ್ಮ ಕಾರಕನಾಗಿರುತ್ತಾನೆ. ಧರ್ಮ ಕಾರಕ ಮತ್ತು ಕರ್ಮ ಕಾರಕರು ಒಟ್ಟಾಗಿ ಸಂಚರಿಸುವುದು ನ್ಯಾಯ ಮತ್ತು ಅದೃಷ್ಟದ ದೇವತೆಗಳ ಸಂಯೋಗಕ್ಕೆ ಸಮ. ಈ ಯೋಗದ ಪ್ರಭಾವದಿಂದ ಪ್ರಕೃತಿ, ಪಂಚಭೂತಗಳು, ಮನುಷ್ಯರು, ದ್ವಾದಶ ರಾಶಿಗಳು ಮತ್ತು ಪ್ರಾಣಿಗಳಲ್ಲಿಯೂ ಶುಭ ಫಲಗಳು ಗೋಚರಿಸುತ್ತವೆ. ವಿವಾಹ, ಗೃಹಪ್ರವೇಶ, ಹೊಸ ಉದ್ಯಮ ಆರಂಭ ಮತ್ತು ಇತರೆ ಎಲ್ಲಾ ಶುಭ ಕಾರ್ಯಗಳಿಗೆ ಈ 61 ದಿನಗಳ ಅವಧಿ ಅತ್ಯಂತ ಪ್ರಶಸ್ತವಾಗಿದೆ. ಇದು ವಿದ್ಯಾರ್ಥಿಗಳು, ಗುರುಗಳು, ಶಿಕ್ಷಕರು, ಮಠಾಧೀಶರು, ಪುರೋಹಿತರು ಹಾಗೂ ಧರ್ಮ ಕಾರ್ಯಗಳಲ್ಲಿ ತೊಡಗಿರುವವರಿಗೆ ಪರ್ವಕಾಲವಾಗಿದೆ.
ಈ ರಾಶಿಯವರಿಗೆ ಹತ್ತನೇ ಮನೆಯಲ್ಲಿ ಗುರು ಪುಷ್ಯ ಯೋಗ ಸಂಚಾರ ನಡೆಯುವುದರಿಂದ ಅತೀವ ಶುಭ ಫಲಗಳು ಸಿಗುತ್ತವೆ. ಜವಾಬ್ದಾರಿಗಳು ಹೆಚ್ಚಾಗುತ್ತವೆ, ಉದ್ಯೋಗದಲ್ಲಿ ಪ್ರಗತಿ, ಬಡ್ತಿ, ವ್ಯಾಪಾರದಲ್ಲಿ ಲಾಭ ನಿರೀಕ್ಷಿಸಬಹುದು. ಶನಿವಾರದಂದು ಶನಿ ಭಗವಾನರ ದರ್ಶನ ಮಾಡುವುದರಿಂದ ಮತ್ತಷ್ಟು ಶುಭವಾಗುತ್ತದೆ.
ಒಂಬತ್ತನೇ ಮನೆಯಾದ ಭಾಗ್ಯ ಸ್ಥಾನದಲ್ಲಿ ಈ ಯೋಗ ಸಂಭವಿಸುವುದರಿಂದ ಆಕಸ್ಮಿಕ ಧನಲಾಭ, ಅದೃಷ್ಟ, ಕಾನೂನು ವಿಚಾರಗಳಲ್ಲಿ ಜಯ, ಮನೆ-ಆಸ್ತಿ ಖರೀದಿ ಯೋಗ, ಶುಭ ಕಾರ್ಯಗಳ ಯೋಗವಿರುತ್ತದೆ. ಧರ್ಮ ಕಾರ್ಯಗಳು ನೆರವೇರುತ್ತವೆ. ಗುರುವಾರ ಗುರುಗಳನ್ನು ದರ್ಶನ ಮಾಡಿ ಅನ್ನದಾನ ಮಾಡುವುದು ಉತ್ತಮ.
ಅಷ್ಟಮ ಸ್ಥಾನದಲ್ಲಿ ಈ ಯೋಗವು ಧನು ರಾಶಿಯವರಿಗೆ ಬಹಳಷ್ಟು ಸಕಾರಾತ್ಮಕ ಬದಲಾವಣೆಗಳನ್ನು ತರುತ್ತದೆ. ಮನಸ್ಸಿನ ಭಾವನೆಗಳು ಸುಧಾರಿಸುತ್ತವೆ, ಕೆಲಸ ಕಾರ್ಯಗಳಲ್ಲಿ ಪ್ರಗತಿ, ಸ್ಥಿರ ಆಸ್ತಿಗಳ ಸಂಪಾದನೆ, ಅಪವಾದಗಳಿಂದ ಮುಕ್ತಿ ಸಿಗುತ್ತದೆ. ಶನಿವಾರ ಎಳ್ಳೆಣ್ಣೆಯನ್ನು ಶನಿ ದೇವರಿಗೆ ಅರ್ಪಿಸುವುದು ಉತ್ತಮ.
ಸಪ್ತಮ ಸ್ಥಾನದಲ್ಲಿ ಈ ಯೋಗವು ಪಾಲುದಾರಿಕೆಯಲ್ಲಿ ಶುಭ, ವಿವಾಹ ವಿಷಯಗಳಲ್ಲಿ ಪ್ರಗತಿ, ವೃತ್ತಿಯಲ್ಲಿ ಬದಲಾವಣೆ, ಕೋರ್ಟ್ ಕೇಸ್ ವಿಚಾರಗಳಲ್ಲಿ ಶುಭ ಮತ್ತು ಕೆಲವರಿಗೆ ಸ್ಥಾನ ಪಲ್ಲಟವನ್ನು ತರುತ್ತದೆ. ಗುರುವಾರ ಗುರುಗಳಿಗೆ ವಸ್ತ್ರದಾನ ಮಾಡುವುದು, ಅನ್ನದಾನ ಮಾಡುವುದು ಶುಭ.
ಷಷ್ಠ ಸ್ಥಾನದಲ್ಲಿ ಗುರು ಪುಷ್ಯ ಯೋಗ ಸಂಭವಿಸುವುದರಿಂದ ಆರೋಗ್ಯ ಸುಧಾರಿಸುತ್ತದೆ, ಸಾಲ ತೀರಿಸುವ ಯೋಗ, ಲೋನ್ ಮಂಜೂರಾತಿ, ಕೆಲಸ ಕಾರ್ಯಗಳಲ್ಲಿ ಶುಭ, ವಿದೇಶ ಪ್ರಯಾಣ, ಮಕ್ಕಳೊಂದಿಗೆ ಉತ್ತಮ ಬಾಂಧವ್ಯ ಬೆಳೆಯುತ್ತದೆ. ಶಿಸ್ತು ಕಾಪಾಡಿಕೊಳ್ಳುವುದು ಮುಖ್ಯ.
ಇದನ್ನೂ ಓದಿ: ಫ್ಯಾಶನ್ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!
ಪಂಚಮ ಸ್ಥಾನದಲ್ಲಿ ಈ ಯೋಗವು ಶಿಕ್ಷಣ ಕ್ಷೇತ್ರದಲ್ಲಿ ರಾರಾಜಿಸಲು, ಮಕ್ಕಳಿಂದ ಶುಭ, ರೈತರು ಮತ್ತು ವ್ಯಾಪಾರಸ್ಥರಿಗೆ ಲಾಭ, ಅಪವಾದಗಳಿಂದ ಮುಕ್ತಿ, ಶುಭ ಕಾರ್ಯಗಳಲ್ಲಿ ಭಾಗವಹಿಸುವಿಕೆ, ಮನೆ ಅಥವಾ ಸೈಟ್ ಖರೀದಿ ಯೋಗವನ್ನು ನೀಡುತ್ತದೆ. ಶತ್ರುಗಳು ಮಿತ್ರರಾಗುವ ಸಾಧ್ಯತೆಯಿದೆ.
ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ ಮತ್ತು ಕನ್ಯಾ ರಾಶಿಗಳಿಗೆ ಈ ಯೋಗವು ನೇರವಾಗಿ ಮಹಾ ಶುಭ ಫಲಗಳನ್ನು ನೀಡದಿದ್ದರೂ, ಧರ್ಮ ಮಾರ್ಗದಲ್ಲಿ, ಶಿಸ್ತಿನಿಂದ ನಡೆದುಕೊಂಡರೆ ಅವರಿಗೂ ಅದೃಷ್ಟ ಮತ್ತು ಶುಭ ಫಲಗಳು ಪ್ರಾಪ್ತಿಯಾಗುತ್ತವೆ. ಎಲ್ಲಾ ಜ್ಯೋತಿಷ್ಯ ಫಲಿತಾಂಶಗಳು ನಂಬಿಕೆ ಮತ್ತು ಶಾಸ್ತ್ರ ಆಧಾರಿತವಾಗಿವೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ