Horoscope Today 22 November: ಇಂದು ಈ ರಾಶಿಯವರಿಂದ ಏನನ್ನೂ ನಿರೀಕ್ಷಿಸಿ ಪ್ರಯೋಜನವಿಲ್ಲ

ದಿನ ಭವಿಷ್ಯ, 22, ನವೆಂಬರ್​ 2025: ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಹೇಮಂತ ಋತುವಿನ ಮಾರ್ಗಶೀರ್ಷ ಮಾಸ ಶುಕ್ಲ ಪಕ್ಷದ ದ್ವಿತೀಯಾ ತಿಥಿ ಶನಿವಾರ ಅಶ್ರದ್ಧೆ, ದೀರ್ಘಯೋಚನೆ, ನಾಯಕತ್ವ, ಭರವಸೆ, ಶೋಕ, ನೆರೆಹೊರೆಯರ ಕಲಹ, ದುಡುಕು ನಿರ್ಧಾರ ಇವೆಲ್ಲ ಇಂದಿನ ಭವಿಷ್ಯ. ಈ ದಿನ ನಿಮಗೆ ಶುಭವಾಗಲಿದೆಯೇ ಅಥವಾ ಸವಾಲುಗಳಿವೆಯೇ ಎಂದು ತಿಳಿದುಕೊಳ್ಳಿ.

Horoscope Today 22 November: ಇಂದು ಈ ರಾಶಿಯವರಿಂದ ಏನನ್ನೂ ನಿರೀಕ್ಷಿಸಿ ಪ್ರಯೋಜನವಿಲ್ಲ
ದಿನ ಭವಿಷ್ಯ
Updated By: ಅಕ್ಷತಾ ವರ್ಕಾಡಿ

Updated on: Nov 22, 2025 | 12:40 AM

ಮೇಷ ರಾಶಿ:

ಭಾವನೆ ಮತ್ತು ಬುದ್ಧಿವಾದ ಎರಡನ್ನೂ ಸಮವಾಗಿ ಬಳಸಿ ನಿರ್ಧಾರ ತೆಗೆದುಕೊಳ್ಳುವಿರಿ. ಸಂಪತ್ತು ಇದ್ದರೂ ಇಲ್ಲವೆಂದು ಕೊರಗುವಿರಿ. ನಿಮಗೆ ಅಂದಾಜು ಸಿಗದೇ ಇಂದಿನ ಹಣವು ಅಧಿಕವಾಗಿ ಖರ್ಚಾಗುವುದು. ಯಾವುದಾದರೂ ಒಪ್ಪಂದವನ್ನು ಮಾಡಿಕೊಳ್ಳುವಾಗ ಸ್ವಲ್ಪ ಚಿಂತನೆ ಮಾಡುವುದು ಅವಶ್ಯಕ. ವಾಹನದ ಉದ್ಯೋಗವನ್ನು ಮಾಡುತ್ತಿದ್ದರೆ ಲಾಭ ಗಳಿಸುವ ಸಾಧ್ಯತೆ ಇದೆ. ಇಂದು ನಿಮಗೆ ವೃತ್ತಿಯಲ್ಲಿ ಸಹಾಕಾರವು ಸಿಗದೇ ತೊಂದರೆಪಡುವಿರಿ. ನಿಮ್ಮ ಮನಸ್ಸು ಯಾವುದರಲ್ಲಿಯೂ ಸ್ಥಿರವಾಗಿ ಇರದೇ ಬಹಳ ಚಂಚಲವಾಗಿ ಇರುವುದು. ಪ್ರಯಾಣವನ್ನು ಮುಂದೂಡುವ ಸಾಧ್ಯತೆ ಇದೆ. ನಿಮ್ಮ ಆಲೋಚನೆಯನ್ನು ದೀರ್ಘವಾಗಿ ಹರಿದುಬಿಡುವಿರಿ. ಕೆಲಸದಲ್ಲಿ ಶಾಂತಿ. ಕುಟುಂಬದಲ್ಲಿ ಸಂತೃಪ್ತಿ. ಆಧ್ಯಾತ್ಮಿಕ ಮನೋಭಾವ ಹೆಚ್ಚಾಗುತ್ತದೆ. ಮನಸ್ಸು ಬಹಳ ದುರ್ಬಲಗೊಂಡು ನಕಾರಾತ್ಮಕ ಆಲೋಚನೆಯೇ ಹೆಚ್ಚು ಇರುವುದು. ನಿಮಗೆ ವಿರೋಧಿಗಳ ಭಯವು ಕಾಡುವುದು.‌ ಸಾಮಾಜಿಕ ಕೆಲಸದಲ್ಲಿ ಆಸಕ್ತಿಯು ಕಡಿಮೆ ಆಗುವುದು.

ವೃಷಭ ರಾಶಿ:

ಸೃಜನಶೀಲತೆ ಹೆಚ್ಚಾಗಿ ಹೊಸ ಯೋಜನೆಗಳು ಮನಸ್ಸಿಗೆ ಬರಬಹುದು. ನಿಮಗೆ ಆಗಬೇಕಾದ ಕಾರ್ಯವನ್ನು ಯಾರಿಂದಲೋ ಮಾಡಿಸುವಿರಿ. ಇಂದು ನೀವು ಏನನ್ನಾದರೂ ನಿರೀಕ್ಷಿಸಿ ಮಾಡಿದ ಕಾರ್ಯಕ್ಕೆ ಫಲ ಸಿಗದು. ದಿನದ ಆರಂಭದಲ್ಲಿ ಉತ್ಸಾಹವಿರದು. ನಮ್ಮ ಪ್ರಾಮಾಣಿಕತೆಗೆ ಉತ್ತಮ ಯಶಸ್ಸನ್ನು ಪಡೆಯುವಿರಿ. ಅಂದುಕೊಂಡ ಕಾರ್ಯಗಳು ಸುಗಮವಾಗಿ ಸಾಗಲಿದ್ದು ನೆಮ್ಮದಿಯು ಇರಲಿದೆ. ಸಿಟ್ಟಿನ ಮೇಲೆ ನಿಯಂತ್ರಣ ಬೇಕಾಗುವುದು. ನಿಮ್ಮ ಮೇಲೆ‌ ಜವಾಬ್ದಾರಿಗಳು ಅಧಿಕವಾಗಲಿವೆ. ನಿಮ್ಮ ಮೇಲಿಟ್ಟ ನಂಬಿಕೆಯನ್ನು ನೀವು ಹುಸಿಗೊಳಿಸುವವಿರಿ. ಉದ್ಯೋಗವು ಸಾಕೆನಿಸಿ, ನೀವು ಹೊಸ ಉದ್ಯಮವನ್ನು ಆರಂಭಿಸುವ ಯೋಚನೆ ಇರುವುದು. ಆಸ್ತಿ ಖರೀದಿಯನ್ನು ಮಾಡಲು ಅವಕಾಶವು ಸಿಗಬಹುದು. ಸ್ನೇಹಿತರೊಂದಿಗೆ ಸಮಯ ಕಳೆಯುವ ಅವಕಾಶ. ಆರೋಗ್ಯದಲ್ಲಿ ಸಣ್ಣ ತೊಂದರೆಯನ್ನು ನಿರ್ಲಕ್ಷಿಸಬೇಡಿ. ಅನಿರೀಕ್ಷಿತವಾಗಿ ಉಡುಗೊರೆಯನ್ನು ಆಪ್ತರಿಂದ ಪಡೆಯುವಿರಿ. ಇಷ್ಟಪಟ್ಟವರ ಭೇಟಿಯು ಮನಸ್ಸಿಗೆ ಹಿತವೆನಿಸುವುದು. ಮಕ್ಕಳ ವಿಚಾರದಲ್ಲಿ ಜವಾಬ್ದಾರಿಯು ಅಗತ್ಯವಾಗಿ ಬೇಕಾಗುವುದು.

ಮಿಥುನ ರಾಶಿ:

ಕಾರ್ಯಕ್ಷೇತ್ರದಲ್ಲಿ ಹೊಣೆಗಾರಿಕೆ ಹೆಚ್ಚಾಗುತ್ತದೆ. ಆದರೆ ಅದರಿಂದಲೇ ಗೌರವ ಕೂಡ ಸಿಗುತ್ತದೆ. ಇಂದು ಎಲ್ಲವನ್ನೂ ದೈವಲೀಲೆ ಎಂದು ಹೇಳುವುದಕ್ಕಿಂತ ಮನುಷ್ಯ ಪ್ರಯತ್ನವೂ ಸ್ವಲ್ಪ ಇರದು. ಸೌಂದರ್ಯಕ್ಕೆ ಹೆಚ್ಚು ಮನಸ್ಸು ಕೊಡುವಿರಿ. ವ್ಯಾಪಾರದಲ್ಲಿ ಸಾಧಾರಣ ಆದಾಯವು ಇದ್ದು ನಿಮಗೆ ಸಮಾಧಾನವಾಗುವುದು. ವಾಹನ ಖರೀದಿಯಲ್ಲಿ ಮೋಸವಾಗುವ ಸಂಭವವಿದೆ. ಮಕ್ಕಳ ಪ್ರಗತಿಯು ನಿಮಗೆ ಸಂತೋಷವನ್ನು ಕೊಡುವುದು. ಕಛೇರಿಯ ಕೆಲಸಗಳು ಒತ್ತಡದಿಂದ ಇರಲಿದೆ. ಸ್ವಂತ ಉದ್ಯಮದಲ್ಲಿ ನೀವು ನಷ್ಟವನ್ನು ಅನುಭವಿಸುವಿರಿ. ಉದ್ಯೋಗಕ್ಕೆ ಸಮಯವನ್ನು ಕೊಡಲಾಗದು. ಆರ್ಥಿಕ ನಿರ್ಧಾರಗಳನ್ನು ತಡಮಾಡುವುದು ಉತ್ತಮ. ಒತ್ತಡದಿಂದ ಕಿರಿಕಿರಿಯಾಗಲಿದೆ. ಹತ್ತಾರು ಜವಾಬ್ದಾರಿಗಳನ್ನು ವಹಿಸಿಕೊಳ್ಳುವಿರಿ‌. ಬೇರೆಯವರ ತಪ್ಪುಗಳನ್ನು ಹುಡುಕಿ ಹೇಳುವುದನ್ನು ಕಡಿಮೆ ಮಾಡಿ. ನಿಮ್ಮ ಅಹಂಕಾರವನ್ನು ಪ್ರದರ್ಶಿಸುವಿರಿ. ಮಿತ್ರರ ಸಹಯೋಗದಿಂದ ಭೂಮಿಯ ಖರೀದಿ ಆಗುವುದು.

ಕರ್ಕಾಟಕ ರಾಶಿ:

ಪ್ರಯಾಣ ಹಾಗೂ ಅಲ್ಲಿನ ಹೊಸ ಸಂಪರ್ಕಗಳು ನಿಮಗೆ ಪೂರಕ. ಕಲಿಕೆಯ ಆಸಕ್ತಿಯುಳ್ಳವರಿಗೆ ಉತ್ತಮ ದಿನ. ಸಹನೆಯಿಂದ ಕೆಲವರನ್ನು ಗೆಲ್ಲಲು ಸಾಧ್ಯ. ಇಂದು ಮಿತ್ರರು ಸಹಾಯವನ್ನು ಕೇಳುವ ಮೊದಲೇ ನೀವೇ ಸಹಾಯ ಮಾಡುವಿರಿ. ಹಿರಿಯರ ಆಶೀರ್ವಾದವನ್ನು ಪಡೆದು ಕಾರ್ಯದಲ್ಲಿ ಪ್ರವೃತ್ತರಾಗುವಿರಿ. ಜಾಣ್ಮೆಯ ವ್ಯವಹಾರದಿಂದ ನಿಮಗೆ ಲಾಭವಾಗುವುದು. ವಿರೋಧಿಗಳು ನಿಮ್ಮ ಹತ್ತಿರ ಬರಲು ಹೆದರುವರು. ಗೌರವ ಸಿಗುವಲ್ಲಿಗೆ ಮಾತ್ರ ನಿಮ್ಮ ಪ್ರಯಾಣ ಇರುವುದು. ನಿಮಗೆ ಅನೇಕ ಕಾರ್ಯಗಳು ಇರುವುದರಿಂದ ಸಮಯವನ್ನು ಹೊಂದಿಸಿಕೊಳ್ಳಲು ಅನಿವಾರ್ಯವಾಗುವುದು. ಮನೆಯಲ್ಲಿ ಹರ್ಷದ ಘಟನೆ. ಆದರೆ ಅಭಿಪ್ರಾಯ ಹಂಚುವಲ್ಲಿ ಜಾಗರೂಕತೆ ಇರಲಿ. ಬೆಳಗಿನ ವಾಯುವಿಹಾರದಿಂದ ಆರೋಗ್ಯವು ಕೆಡಬಹುದು. ರಾಜಕೀಯವಾಗಿ ಬೆಳೆಯಲು ಬಹಳ ಆಸಕ್ತಿಯನ್ನು ತೋರುವಿರಿ. ಕಛೇರಿಯಲ್ಲಿ ಸ್ತ್ರೀಯರ ಅಲ್ಪ ಸಹಕಾರವು ಸಿಗುವುದು. ಸಂಗಾತಿಯ ಅನೇಕ ವಿಚಾರಗಳು ನಿಮಗೆ ತಿಳಿಯದೇ ಇರುವುದು.

ಸಿಂಹ ರಾಶಿ:

ತಾಳ್ಮೆ ಪರೀಕ್ಷಿಸುವ ಸಂದರ್ಭ ಬರಬಹುದು. ಆದರೂ ನಿಮ್ಮ ಗಟ್ಟಿಯಾದ ಮನೋಬಲದಿಂದ ಕಾರ್ಯಗಳು ಮುನ್ನಡೆಯುತ್ತವೆ. ಆರ್ಥಿಕವಾಗಿ ಸಬಲರಾಗಲು ಗುರಿಯೂ ಹಾದಿಯೂ ಮುಖ್ಯ. ಕೆಲವನ್ನು ಪಡೆಯಲು ಕೆಲವನ್ನು ಬಿಡಬೇಕು. ಆದರೆ ನಿಮ್ಮ ವಿವೇಚನೆಯಿಂದ ಮುಖ್ಯಾಮುಖ್ಯಗಳನ್ನು ತಿಳಿದರೆ ನೆಮ್ಮದಿಯಿಂದ ಇರಬಹುದು. ಇಂದಿನ ನಿಮ್ಮ ಮಾತಿನಿಂದ ದ್ವೇಷವು ಬರಬಹುದು. ಬಹಳ ದಿನಗಳಿಂದ ಉಳಿದಿದ್ದ ಕಾರ್ಯವು ಪೂರ್ಣವಾಗಬಹುದು. ವಿದ್ಯಾದಾನವನ್ನು ಮಾಡಿದವರನ್ನು ಗೌರವಿಸುವಿರಿ. ಭೂಮಿಯ ವ್ಯವಹಾರದಲ್ಲಿ ಮಾತುಕತೆಗಳು ನಡೆಯಲಿದ್ದು ತೀರ್ಮಾನವಾಗದು. ಓಡಾಟದ ಸಮಯದಲ್ಲಿ ನಿಮ್ಮ‌ ವಸ್ತುವು ಕಾಣೆಯಾಗಿದ್ದು ನಿಮಗೆ ಗೊತ್ತಾಗದು. ಅಪರಿಚಿತರು ನಿಮ್ಮಿಂದ ಧನವನ್ನು ಪಡೆಯುವರು. ಮನೆಗೆ ಬಂದ ಅತಿಥಿಯನ್ನು ಸತ್ಕಾರಿಸುವಿರಿ. ಹಳೆಯ ಸ್ನೇಹಿತರು ಕಾರಣಾಂತರಗಳಿಂದ ಸಂಪರ್ಕಕ್ಕೆ ಬರುವರು. ವಾಹನದಿಂದ ಬಿದ್ದು ಗಾಯವನ್ನು ಮಾಡಿಕೊಳ್ಳುವ ಸಾಧ್ಯತೆ ಇದೆ. ಸಹೋದರಿಯ ವಿಚಾರದಲ್ಲಿ ನಿಮಗೆ ಅಸಮಾಧಾನವಾಗುವುದು.

ಕನ್ಯಾ ರಾಶಿ:

ಸಮತೋಲನದಿಂದ ನಡೆಯುವಿರಿ. ಹಣಕಾಸಿನಲ್ಲಿ ಸುಧಾರಣೆ. ನಿಮ್ಮ ಬಳಿಯೇ ಬೆಳಕಿದ್ದರೆ ಕತ್ತಲೆಯಾಗುವ ಭಯವೇ ಇರದು. ಇಂದು ಎಲ್ಲರಿಂದ ನೀವು ದೂರವಾಗುವ ಸ್ಥಿತಿ ಬರುವುದು. ಕೆಟ್ಟ ಆಲೋಚನೆಯಿಂದ ದೂರವಿರುವುದು ಸುಖ. ಹಿರಿಯರಿಗೆ ಬಾಯ್ತಪ್ಪಿ ಮಾತನಾಡಿ ಪಶ್ಚಾತ್ತಾಪಪಡುವಿರಿ. ತೀರ್ಥಯಾತ್ರೆಯ ಸಂದರ್ಭವು ಬರಬಹುದು. ಹಣಕಾಸಿನ ಕೊರತೆಯಿಂದ ಯಾವದೋ ಕಾರ್ಯವನ್ನು ಮಾಡುವಿರಿ. ಎಂದೋ ಮಾಡಿದ ಸಹಾಯವು ಇಂದು ಉಪಯೋಗಕ್ಕೆ ಬರುವುದು. ಎಲ್ಲರ ಜೊತೆ ಅತಿಯಾದ ಸಲುಗೆ ಬೇಡ. ಸಾಮಾಜಿಕ ತಾಣದಿಂದ ನಿಮಗೆ ಕೆಲವು ವ್ಯಕ್ತಿಗಳ ಪರಿಚಯವಾದೀತು. ಯಾವ ಯೋಜನೆಯನ್ನೇ ಆರಂಭಿಸಿದರೂ ಯೋಚನೆ ಸ್ಪಷ್ಟವಾಗಿರುತ್ತದೆ. ಸಂಬಂಧಗಳಲ್ಲಿ ಮೃದು ಸ್ವಭಾವ ಉತ್ತಮ. ಪರೋಕ್ಷವಾಗಿ ನಿಮ್ಮವರನ್ನು ದ್ವೇಷಿಸುವಿರಿ.‌ ಮಕ್ಕಳ‌ ಮೇಲೆ‌ ನಿಮ್ಮ ಮೋಹವು ಅತಿಯಾಗಿದ್ದು ಅದು ಬಂಧನವೂ ಆಗಬಹುದು. ಅಸಾಮಾನ್ಯ ಕಾರ್ಯವನ್ನು ಮಾಡಲು ಬಹಳ ಉತ್ಸಾಹವಿರುವುದು.

ತುಲಾ ರಾಶಿ:

ಕೆಲಸದ ವಿವರಗಳಲ್ಲಿ ತೀವ್ರ ಗಮನ ಅಗತ್ಯ. ಚಿಕ್ಕ ತಪ್ಪು ದೊಡ್ಡ ಪರಿಣಾಮ ತರಬಹುದು. ಕೃತಜ್ಞತೆಯಿಂದ ಉತ್ತಮ‌ ಸಂಬಂಧಗಳು ಏರ್ಪಡುವುದು. ನೀವು ಕಾರ್ಯದಲ್ಲಿ ಎಷ್ಟೇ ಪಳಗಿದರೂ ಎಚ್ಚರಿಕೆಯಿಂದ ಇರುವುದು ಮುಖ್ಯ. ಉತ್ತಮ‌ ದಿನದ ನಿರೀಕ್ಷೆಯಿಂದ ನಿಮಗೆ ಬೇಸರವಾಗಬಹುದು. ಇನ್ನೊಬ್ಬರ ಸಂಧಾನಕ್ಕೆ ಮಧ್ಯಸ್ತಿಕೆಯನ್ನು ವಹಿಸುವಿರಿ. ಕಛೇರಿಯ ವ್ಯವಹಾರವು ನಿಮಗೆ ಸರಿ ಕಾಣಿಸದು. ಹೇಳದೇ ಮೌನದಿಂದ ಇರುವಿರಿ. ಭಾವಾವೇಶಕ್ಕೆ ಸಿಲುಕಿ ನೆಮ್ಮದಿಗಾಗಿ ಚಡಪಡಿಸುವಿರಿ. ಒತ್ತಡವು ನಿಮಗೆ ಯಾವ ವ್ಯವಹಾರಕ್ಕೂ ಆಸಕ್ತಿ ಇರದಂತೆ ಮಾಡಿದೆ‌. ಆರ್ಥಿಕ ಉಳಿತಾಯಕ್ಕೆ ಹೆಚ್ಚಿನ ಗಮನ ನೀಡಿ. ಆತ್ಮೀಯರ ಜೊತೆಗಿನ ಮಾತುಕತೆ ಮನಶ್ಶಾಂತಿಯನ್ನು ಕೆಡಿಸುವ ಸಾಧ್ಯತೆ ಇದೆ. ಅವಕಾಶಗಳನ್ನು ಸರಿಯಾಗಿ ಬಳಕೆ ಮಾಡಿಕೊಳ್ಳುವಿರಿ. ಬಂಧುಗಳ ಮಾತಿನಿಂದ ಅಸಮಾಧನವು ಇರುವುದು. ಒಬ್ಬರೇ ಹೊರಗೆ ಸುತ್ತಾಟ ಮಾಡಿ ಮನಸ್ಸನ್ನು ಹಗುರ ಮಾಡಿಕೊಳ್ಳುವಿರಿ. ವಿವಾಹದ ವಿಚಾರದಲ್ಲಿ ಒಳ್ಳೆಯದಾಗುವುದು. ನಿಮ್ಮನ್ನು ಹೊಗಳಿ ಕೆಲಸ ಮಾಡಿಸಿಕೊಳ್ಳುವರು. ಕೆಟ್ಟ ಅಭ್ಯಾಸದತ್ತ ಮನಸ್ಸು ಹರಿಯುವುದು.

ವೃಶ್ಚಿಕ ರಾಶಿ:

ನಿಮ್ಮ ಮಾತಿಗೆ ಬೆಲೆ ಸಿಗುತ್ತದೆ ಎಂದು ಏನನ್ನಾದರೂ ಹೇಳಲಾಗದು. ಪ್ರಭಾವಿ ವ್ಯಕ್ತಿತ್ವ ಹೆಚ್ಚಾಗುತ್ತದೆ. ಸಣ್ಣ ಉದ್ಯೋಗದಲ್ಲಿ ನಿಮಗೆ ಆಸಕ್ತಿ ಕಡಿಮೆಯಾಗುವುದು. ಅಲ್ಪ ಶ್ರಮದಿಂದ ಗಳಿಸುವ ಮಾರ್ಗದ ಅನ್ವೇಷಣೆ ಆಗಲಿದೆ. ನಿಮ್ಮ ಅನುಕೂಲತೆಯನ್ನು ಗಮನಿಸಿಕೊಂಡು ಯಾವುದಾದರೂ ಕಾರ್ಯವನ್ನು ಒಪ್ಪಿಕೊಳ್ಳಿ. ಇಂದಿನ ಕೆಲಸದಲ್ಲಿ ಕೆಲವು ತೊಂದರೆಗಳು ಕಾಣಿಸಿಕೊಂಡರೂ ಅದನ್ನು ಲೆಕ್ಕಿಸದೇ ಮುಂದೆ ಸಾಗುವಿರಿ. ಅಧಿಕಾರಿಗಳಿಗೆ ಒಂದಿಲ್ಲೊಂದು ಒತ್ತಡವು ಬರಬಹುದು. ಗೆಳೆಯರ ಮಾತನ್ನು ಗೌರವಿಸಿದ್ದು ಅವರಿಗೆ ಸಂತೋಷವಾಗಲಿದೆ. ಬಂಧುಗಳು ನಿಮ್ಮ ಹತ್ತಿರ ಆರ್ಥಿಕ ಸಹಾಯವನ್ನು ಕೇಳಿಕೊಂಡು ಬರಬಹುದು. ಬೇಸರ ಮಾಡದೇ ಕಳುಹಿಸಿ ಕೊಡಿ. ಮನಸ್ಸಿನ ಕಿರಿಕಿರಿಯಿಂದ ಕೋಪವು ಬರಬಹುದು. ನಾಯಕತ್ವ ತೋರಲು ಅವಕಾಶ. ಆದರೆ ದೈಹಿಕ ಏರುಪೇರಿಗೆ ವಿಶ್ರಾಂತಿ ಅಗತ್ಯ. ಸರ್ಕಾರಿ ಕೆಲಸಕ್ಕಾಗಿ ಅರ್ಜಿಯನ್ನು ಹಾಕಿ ಕಾಯುತ್ತ ಕುಳಿತಿರುವಿರಿ. ಸಂಗಾತಿಯ ಕೋಪವನ್ನು ಶಾಂತ ಮಾಡುವಿರಿ. ಇನ್ನೊಬ್ಬರನ್ನು‌ ಅನುಕರಿಸಿ ಹಾಸ್ಯ ಮಾಡುವಿರಿ. ನಿಮಗೆ ಗೊತ್ತಿಲ್ಲದೇ ನಿಮ್ಮ ಬಗ್ಗೆ ಕೆಲವು ಮಾತುಗಳು ಆಪ್ತರು ಆಡಬಹುದು.

ಧನು ರಾಶಿ:

ಭಾವನಾತ್ಮಕವಾಗಿ ಸುಧಾರಣೆ ಕಾಣುವಿರಿ. ಮನೆಯವರ ಬೆಂಬಲ ಸಿಗುತ್ತದೆ. ಸಿಕ್ಕ ಸಂಪತ್ತಿಗೆ ಸರಿಯಾದ ನ್ಯಾಯ ಒದಗಿಸಿ. ನಿಮ್ಮ ಆತುರದಿಂದ ಕೆಲವನ್ನು ನಿರ್ವಹಿಸಲಾಗದು. ಸಾಲದಿಂದ ನಿಮ್ಮ ದೊಡ್ಡ ಆಲೋಚನೆಗಳು ಸಣ್ಣದಾಗುವುವು. ನಿಮ್ಮ ಭೀತಿಯನ್ನು ನೀವು ಹೊರಹಾಕದಿದ್ದರೂ ಅರಿವಿಗೆ ಬರುವುದು. ಬಂಧುಗಳ ಆರೋಗ್ಯದ ವಿಚಾರಣೆಗೆ ತಿರುಗಾಟ ಮಾಡಬೇಕಾಗುವುದು. ಮನೆಯಲ್ಲಿ ಧಾರ್ಮಿಕ ಕಾರ್ಯಗಳಿಂದ ಶಾಂತಿ ಲಭಿಸುವುದು. ಹಣವನ್ನು ನಿಮ್ಮಿಂದ ಕಿತ್ತುಕೊಳ್ಳಬಹುದು. ಮಕ್ಕಳ ಬಗ್ಗೆ ಅನವಶ್ಯಕ ಅನುಮಾನ ಇರುವುದು. ಕೆಲಸದಲ್ಲಿ ಒತ್ತಡ ಕಡಿಮೆಯಾಗುತ್ತದೆ. ಹಣದ ಹೂಡಿಕೆಯನ್ನು ಸುಧಾರಿಸಲು ಇದು ಒಳ್ಳೆಯ ದಿನ. ಓದುವ ಹವ್ಯಾಸವನ್ನು ಹೆಚ್ಚಿಸಿಕೊಳ್ಳುವಿರಿ. ಅಗತ್ಯದ ಖರ್ಚುಗಷ್ಟೇ ಪ್ರಾಧಾನ್ಯವಿರಲಿ. ಅನಿರೀಕ್ಷವಾಗಿ ಬರುವ ಕಾರ್ಯದ ಒತ್ತಡಕ್ಕೆ ಸಿಕ್ಕಿಕೊಳ್ಳುವಿರಿ. ಧ್ಯಾನದ ಅವಶ್ಯಕತೆ ಇದೆ ಎಂದು ಅನ್ನಿಸಬಹುದು. ಸಣ್ಣ ವಿಷಯವನ್ನು ದೊಡ್ಡ ಮಾಡಿಕೊಳ್ಳುವಿರಿ. ಕಛೇರಿಯಲ್ಲಿ ಸಹೋದ್ಯೋಗಿಗಳ ಸಹಾಯವು ಸಿಗುವುದು ಕಷ್ಟವಾದೀತು.

ಮಕರ ರಾಶಿ:

ಸಂಭಾಷಣಾ ಕೌಶಲ್ಯದಿಂದ ಕಾರ್ಯಗಳು ಸುಲಭವಾಗಿ ಪೂರ್ಣಗೊಳ್ಳುತ್ತವೆ. ಮಕ್ಕಳ ಬಗ್ಗೆ ಪಕ್ಷಪಾತ ಮಾಡುವುದು ಬೇಡ. ಇಂದು ಹೊಸ ದಾಂಪತ್ಯದಲ್ಲಿ ಸಂಭ್ರಮವಾಗಲಿದೆ. ನಿಮಗಾದ ಒಳ್ಳೆಯ ಅನುಭವವನ್ನು ಆಪ್ತರ ಜೊತೆ ಹಂಚಿಕೊಳ್ಳುವಿರಿ. ಇಷ್ಟವಾಗದವರು ನಿಮ್ಮೆದುರಿಗೆ ಬರುವಾಗ ಕಣ್ತಪ್ಪಿಸಿಕೊಳ್ಳುವಿರಿ. ದಂಡವನ್ನು ತುಂಬಬೇಕಾದ ಸ್ಥಿತಿಯು ಬರಬಹುದು. ಸ್ವಂತ ವಾಹನದಲ್ಲಿ ಒಂಟಿಯಾಗಿ ಓಡಾಡುವಾಗ ಎಚ್ಚರಿಕೆ ಇರಲಿ. ನಿಮ್ಮ ಆಸಕ್ತಿಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಅತ್ತ ಕಡೆ ಹೆಚ್ಚು ಪ್ರಯತ್ನಿಸಿ. ಹಿಂದೆ ಮಾಡಿದ ಕಾರ್ಯಕ್ಕಾಗಿ ಇಂದು ಒಳ್ಳೆಯ ಫಲವು ದೊರಕಿದ ಸಂತೋಷದಲ್ಲಿ ಇರುವಿರಿ. ಮನೆಯವರನ್ನು ಕರೆದುಕೊಂಡು ಪ್ರಯಾಣ ಮಾಡುವಿರಿ. ಆಸ್ತಿಯ ದಾಖಲೆಗಳನ್ನು ಅಧಿಕಾರಿಗಳು ವಿಚಾರಿಸಬಹುದು. ಹೊಸ ಅವಕಾಶಗಳು ಕಾಣಿಸಿಕೊಳ್ಳುವ ದಿನ. ಆದರೆ ಅವಸರದ ನಿರ್ಧಾರಗಳು ಬೇಡ. ಒತ್ತಡವನ್ನು ಹೇರಿ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಸಂಗಾತಿಯ ಆದಾಯವನ್ನು ಅನಿವಾರ್ಯವಾಗಿ ಬಳಸಿಕೊಳ್ಳಬೇಕಾಗುವುದು. ಸತ್ಯವನ್ನು ಮುಚ್ಚಿಟ್ಟಿದ್ದು ನಿಮ್ಮ ಮಾತಿನಲ್ಲಿ ಗೊತ್ತಾಗುವುದು.

ಇದನ್ನೂ ಓದಿ: ವಿಭೂತಿ ನಾಮಗಳ ಧಾರಣೆಯ ಅದ್ಯಾತ್ಮಿಕ ರಹಸ್ಯವೇನು ಗೊತ್ತಾ?

ಕುಂಭ ರಾಶಿ:

ಮನಸ್ಸು ಸ್ಥಿರವಾಗಿದ್ದು, ಕಾರ್ಯಗಳಲ್ಲಿ ಗಮನ ಹೆಚ್ಚುತ್ತದೆ. ಕೊಡುಕೊಳ್ಳುವ ವಿಚಾರದಲ್ಲಿ ಜಾಗರೂಕತೆ ಅಗತ್ಯ. ಭಯದಿಂದಲೇ ಎಷ್ಟೋ ವಿಚಾರವನ್ನು ಗೌಪ್ಯವಾಗಿ ಇಡುವಿರಿ. ನೀವು ಇತರರ ದುರ್ಬುದ್ಧಿಯನ್ನು ಅನುಸರಿಸದೇ ಸುಮ್ಮನಿರುವಿರಿ. ಇಂದು ವೃತ್ತಿಯಲ್ಲಿ ಬಂದ ಸಮಸ್ಯೆಯನ್ನು ತಾಳ್ಮೆಯಿಂದ ಗಮನಿಸಿಕೊಂಡು. ಗೆಳೆತನ ಸಾಕು ಎನಿಸಿ ಒಂಟಿಯಾಗಿ ಇರಬೇಕು ಎನಿಸುವುದು. ನಿಮ್ಮದಾದ ಸ್ವಂತಿಕೆಯನ್ನು ಉಳಿಸಿಕೊಳ್ಳಿ. ಮಕ್ಕಳ ವಿಚಾರಕ್ಕೆ ವಾದಗಳು ಆಡಬಹುದು. ನಿಮ್ಮ ವಿರುದ್ಧ ತಂತ್ರಗಳು ನಡೆಯಲಿದ್ದು ನಿಮಗೆ ಗೊತ್ತಾಗದು. ಅನಿರೀಕ್ಷಿತ ಘಟನೆಯು ನಿಮ್ಮನ್ನು ಬೆಚ್ಚಿಬೀಳಿಸುವುದು. ಸ್ನೇಹಿತರ ಸಲಹೆ ಉಪಯುಕ್ತ. ಆರೈಕೆಯಿಂದ ಸ್ವಲ್ಪ ಸುಸ್ತು ಕಾಣಬಹುದು. ವ್ಯಕ್ತಿಯ ಪರಿಚಯು ನಿಮ್ಮ ನಿಮ್ಮಲ್ಲಿ ಬೇಸರವನ್ನು ದೂರ ಮಾಡೀತು.‌ ಹಳೆಯ ಸಾಲಗಳಿಗೆ ನೀವೇ ಮುಕ್ತಿ ಕೊಡಿಸುವಿರಿ. ಉದ್ಯೋಗಿಗಳ ಆದಾಯದಲ್ಲಿ ಅಲ್ಪ ಏರಿಕೆ. ಪಾಲುದಾರಿಕೆಯಲ್ಲಿ ತಾಳ್ಮೆಯನ್ನು ಕಳೆದುಕೊಳ್ಳುವಿರಿ. ಅವಿವಾಹಿತರಿಗೆ ವಿವಾಹಯೋಗವು ಬರಬಹುದು.

ಮೀನ ರಾಶಿ:

ನಿಮ್ಮಲ್ಲಿ ವ್ಯಾವಹಾರಿಕ ಚುರುಕು ಮತ್ತು ಆತ್ಮವಿಶ್ವಾಸದ ವೃದ್ಧಿ. ಅಲ್ಪ ವಿಳಂಬವಾಗಿದ್ದ ಕೆಲಸಗಳು ಮುನ್ನಡೆಯ ತೋರ್ಪಡಿಸುತ್ತವೆ. ಪ್ರಾಮಾಣಿಕ ಪ್ರಯತ್ನದಿಂದಲೂ ಗೆಲುವಾಗದಿದ್ದರೆ ಬೇಸರ ಮಾಡಿಕೊಳ್ಳುವುದು ಬೇಡ. ಇಂದು ನಿಮ್ಮ ದೂರಾಲೋಚನೆಯು ಸರಿಯಾದ ಹಾದಿಯಲ್ಲಿ ಇದೆಯೇ ಎಂಬುದನ್ನು ತಿಳಿದುಕೊಳ್ಳಿ. ಆದಾಯದ ಮೂಲಗಳು ಸೊರಗಿಹೋದಂತೆ ಅನ್ನಿಸಬಹುದು. ಕೊಟ್ಟಿದ್ದನ್ನು ಮರಳಿ ಕೊಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. ಇನ್ನೊಬ್ಬರಿಗೆ ಆಕರ್ಷಿತರಾಗುವಿರಿ. ನಿಮ್ಮ ಶಾಂತ ಮನಸ್ಸಿನಿಂದ ಸಂಕಷ್ಟವನ್ನು ಎದುರಿಸುವಿರಿ. ಆಸ್ತಿ ಖರೀದಿ ವಿಚಾರದಲ್ಲಿ ಎಚ್ಚರಿಕೆ ಇರಲಿ. ಆತುರಾತುರವಾಗಿ ಏನನ್ನೂ ಮಾಡಲು ಹೋಗುವುದು ಬೇಡ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಅನುಮಾನ ಸಂದೇಹ ಬರಬಹುದು. ಕುಟುಂಬದಲ್ಲಿ ಸಂತೋಷದ ವಾತಾವರಣ. ಅನಗತ್ಯ ವಾಗ್ವಾದ ತಪ್ಪಿಸಿ. ಅಂದುಕೊಂಡಿದ್ದರ ಕಡೆಗೆ ಗಮನ ಹರಿಸಲು ಸಾಧ್ಯವಾಗದು. ನಿಮ್ಮ ಆಪ್ತರ ಜೊತೆ ಕೆಲವು ರಹಸ್ಯವನ್ನು ಹೇಳಿಕೊಳ್ಳುವಿರಿ. ಇಂದು ಮಾಡುವ ಕೆಲಸದಲ್ಲಿ ಶ್ರದ್ಧೆ ಅವಶ್ಯಕ ಬೇಕು.

22 ನವೆಂಬರ್​ 2025ರ ಶನಿವಾರದ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಮಾರ್ಗಶೀರ್ಷ, ಸೌರ ಮಾಸ : ವೃಶ್ಚಿಕ, ಮಹಾನಕ್ಷತ್ರ : ಅನೂರಾಧಾ, ವಾರ : ಶನಿ, ಪಕ್ಷ : ಶುಕ್ಲ, ತಿಥಿ : ದ್ವಿತೀಯಾ, ನಿತ್ಯನಕ್ಷತ್ರ : ಮೂಲಾ, ಯೋಗ : ಅತಿಗಂಡ, ಕರಣ : ಕೌಲವ, ಸೂರ್ಯೋದಯ – 06 – 22 am, ಸೂರ್ಯಾಸ್ತ – 05 – 48 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 09:14 – 10:40, ಗುಳಿಕ ಕಾಲ 06:23 – 07:48, ಯಮಗಂಡ ಕಾಲ 13:32 – 14:57

-ಲೋಹಿತ ಹೆಬ್ಬಾರ್-8762924271 (what’s app only)