AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ನಕ್ಷತ್ರದಲ್ಲಿ ಮಕ್ಕಳಿಗೆ ಅನ್ನಪ್ರಾಶನ ಮಾಡಿಸಿದರೆ ಆ ಮಗುವಿಗೆ ಈ ಗುಣ ಬರುವುದು ಖಂಡಿತ

ಆಷಾಢ ಮಾಸ ಎಂಬ ಹೆಸರು ಬರಲು ಕಾರಣ ಈ ನಕ್ಷತ್ರವೂ ಹೌದು. ಎಲ್ಲ ಶುಭಕಾರ್ಯಗಳಿಗೂ ಈ ನಕ್ಷತ್ರದ ದಿನವನ್ನು ಬಳಸುತ್ತಾರೆ. ಅದರಲ್ಲಿಯೂ ಸಣ್ಣ ಮಕ್ಕಳ ಅನ್ನಪ್ರಾಶನ ಸಂಸ್ಕಾರಕ್ಕೆ ಉತ್ತಮವಾದ ನಕ್ಷತ್ರ. ಈ ನಕ್ಷತ್ರದಲ್ಲಿ ಅನ್ನಪ್ರಾಶನ ಅಂದರೆ ಮಗುವಿಗೆ ಮೊದಲ ಊಟದ ಪ್ರಾರಂಭ. ಅಂದು ತಿಂದರೆ, ತಿಂದ ಆಹಾರ ಸೌಮ್ಯಗುಣವನ್ನು ವರ್ಧಿಸುತ್ತದೆ. ಇಂತಹ ಅಪರೂಪದ ನಕ್ಷತ್ರ ಇದು. ಈ‌ ನಕ್ಷತ್ರದಲ್ಲಿ ಜನಿಸಿದವರು ಹೇಗೆ ಇರುತ್ತಾರೆ? ಅವರ ಸಂಪತ್ತು, ಗುಣ, ನಡತೆಗಳು ಹೇಗಿರಲಿವೆ ಇಲ್ಲಿದೆ ನೋಡಿ.

ಈ ನಕ್ಷತ್ರದಲ್ಲಿ ಮಕ್ಕಳಿಗೆ ಅನ್ನಪ್ರಾಶನ ಮಾಡಿಸಿದರೆ ಆ ಮಗುವಿಗೆ ಈ ಗುಣ ಬರುವುದು ಖಂಡಿತ
ಸಾಂದರ್ಭಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಅಕ್ಷಯ್​ ಪಲ್ಲಮಜಲು​​|

Updated on: Apr 14, 2025 | 9:23 AM

Share

ಬೇ ಬೋ ದ ಜಿ ಎಂಬ ನಾಮಾಕ್ಷರವನ್ನು ಉಳ್ಳ ನಕ್ಷತ್ರ ಉತ್ತರಾಷಾಢಾ (Uttara Ashada Nakshatra). ಇಪ್ಪತ್ತೊಂದನೇ ನಕ್ಷತ್ರ (Nakshatra). ಧನು ಹಾಗೂ ಮಕರ ರಾಶಿಗಳಲ್ಲಿ (Sagittarius and Capricorn) ಹಂಚಿಕೆಯಾಗಿರುವ ನಕ್ಷತ್ರವಿದು. ಇದರ ದೇವತೆ ವಿಶ್ವೇದೇವ. ಮನುಷ್ಯ ಗಣಕ್ಕೆ ಸೇರಿದ ನಕ್ಷತ್ರ ಇದಾಗಿದೆ. ಕಫ ಈ ರಾಶಿಯ ಪ್ರಕೃತಿ. ಆಕಾಶದಲ್ಲಿ ಮಂಚದ ಆಕಾರದಲ್ಲಿ ಎರಡು ನಕ್ಷತ್ರಗಳು ಕ್ರಾಂತಿವೃತ್ತದ ಸಮೀಪ ಗೋಚರಿಸಿದರೆ ಅದೇ ಉತ್ತರಾಷಾಢಾ ನಕ್ಷತ್ರ.‌ ಆಷಾಢ ಮಾಸ ಎಂಬ ಹೆಸರು ಬರಲು ಕಾರಣ ಈ ನಕ್ಷತ್ರವೂ ಹೌದು. ಎಲ್ಲ ಶುಭಕಾರ್ಯಗಳಿಗೂ ಈ ನಕ್ಷತ್ರದ ದಿನವನ್ನು ಬಳಸುತ್ತಾರೆ. ಅದರಲ್ಲಿಯೂ ಸಣ್ಣ ಮಕ್ಕಳ ಅನ್ನಪ್ರಾಶನ ಸಂಸ್ಕಾರಕ್ಕೆ ಉತ್ತಮವಾದ ನಕ್ಷತ್ರ. ಈ ನಕ್ಷತ್ರದಲ್ಲಿ ಅನ್ನಪ್ರಾಶನ ಅಂದರೆ ಮಗುವಿಗೆ ಮೊದಲ ಊಟದ ಪ್ರಾರಂಭ. ಅಂದು ತಿಂದರೆ, ತಿಂದ ಆಹಾರ ಸೌಮ್ಯಗುಣವನ್ನು ವರ್ಧಿಸುತ್ತದೆ. ಇಂತಹ ಅಪರೂಪದ ನಕ್ಷತ್ರ ಇದು.

ಈ‌ ನಕ್ಷತ್ರದಲ್ಲಿ ಜನಿಸಿದವರು ಹೇಗೆ ಇರುತ್ತಾರೆ? ಅವರ ಸಂಪತ್ತು, ಗುಣ, ನಡತೆಗಳು ಹೇಗಿರಲಿವೆ ಎನ್ನುವುದನ್ನು ನೋಡೋಣ.

  • ವಿನೀತ : ಇವರಿಗೆ ಜ್ಞಾನ ವೃದ್ಧರು ಹಾಗೂ ವಯೋವೃದ್ಧರನ್ನು ಕಂಡರೆ ಗೌರವ, ಪ್ರೀತಿ. ಅವರ ಸೇವೆಯನ್ನು ಮಾಡುವ ಆಸಕ್ತಿ ಇರಲಿದೆ. ಹಾಗೆಯೇ ತಗ್ಗಿ ಬಗ್ಗಿ ನಡೆಯುವ ಸ್ವಭಾವವಿರುವುದು.
  • ಬಹುಮಿತ್ರ :ಈ ನಕ್ಷತ್ರದವರಿಗೆ ಮಿತ್ರರು ಅಧಿಕ. ಒಳ್ಳೆಯ ಹಾಗು ಕೆಟ್ಟ ಮಿತ್ರರ ಸಹವಾಸವಾಗುವುದು.‌ ಹಣ ಧನಸಂಗ್ರಹಕ್ಕಿಂತ ಜನಸಂಗ್ರಹವೇ ಅಧಿಕ. ಆದರೆ ಸಂಗದಲ್ಲಿ ಎಚ್ಚರಿಕೆ ಬೇಕು.
  • ಕೃತಜ್ಞತೆ :ಮಾಡಿದ ಒಳ್ಳೆಯ ಕಾರ್ಯವನ್ನು ನೆನಪಿನಲ್ಲಿರುವುದೇ ಕೃತಜ್ಞತೆ. ಇವರು ಪ್ರತಿಯಾಗಿ ಉಪಕಾರಸ್ಮರಣೆಯಿಂದ ಸಹಾಯವನ್ನು ಮಾಡುವರು.
  • ಧಾರ್ಮಿಕತೆ : ದೇವರಿಗೆ ಸಂಬಂಧಿದ‌ ಪುಣ್ಯ ಕ್ಷೇತ್ರದ ದರ್ಶನ, ಪ್ರಯಾಣ ಇಷ್ಟವಾಗುವುದು. ಸ್ವತಃ ಧಾರ್ಮಿಕ ಆಚರಣೆಗಳನ್ನು ತಮಗೆ ತಿಳಿದ ರೀತಿಯಲ್ಲಿ ಮಾಡುವರು. ಸರಿಯಾದ ಮಾರ್ಗದರ್ಶನ ಪಡೆದು ಮಾಡಿದರೆ ಉತ್ತಮ.
  • ದೊಡ್ಡ ದೇಹ : ಇವರ ದೇಹವು ಮಾಂಸಖಂಡಗಳಿಂದ‌ ಮುಖ, ಕೈ, ಕಾಲುಗಳು ತುಂಬಿ ಸುಂದರವಾಗಿಯೂ ದೊಡ್ಡ ಆಕಾರದಲ್ಲಿಯೂ ಕಾಣಿಸುವುದು. ಗುರು ಅಥವಾ ಶನಿಯ ಆಧಿಪತ್ಯದಲ್ಲಿ ಬರುವ ಕಾರಣ ದೇಹವು ಬೃಹದಾಕಾರವಾಗಿ ಆಗುವುದು.
  • ದಯಾವಾನ್ : ಪರರ ವಿಚಾರದಲ್ಲಿ ಕರುಣೆ. ಕಷ್ಟ, ದುಃಖದಲ್ಲಿ ಇರುವವರಿಗೆ ಸ್ಪಂದಸಿವ ಮನೋಭಾವ ಬರುವುದು. ಪ್ರಾಣಿ, ಮನುಷ್ಯ, ಪಕ್ಷಿಗಳ ಮೇಲೆ‌ ದಯೆ ಮೂಡುವುದು.
  • ಕುಟುಂಬ ನಿರ್ವಹಣೆ : ಮನೆಯಲ್ಲಿ ಯಾರೇ ದೊಡ್ಡವರು ಚಿಕ್ಕವರಿದ್ದರೂ ಕುಟುಂಬ ಜವಾಬ್ದಾರಿ ಇವರ ಮೇಲೆ ಬೀಳುವುದು. ಜ್ಞಾನ, ಚುರುಕುತನ, ಕೌಶಲವು ಇವರಿಗೆ ಅನಾಯಾಸವಾಗಿ ಜವಾಬ್ದಾರಿ ಬರುವಂತೆ ಮಾಡುತ್ತದೆ.

– ಲೋಹಿತ ಹೆಬ್ಬಾರ್ – 8762924271

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜಪಾನ್​ನಲ್ಲಿ ಹೇಗಿವೆ ಬನ್ನೇರುಘಟ್ಟದ ಆನೆಗಳು: ಇಲ್ಲಿದೆ ವಿಡಿಯೋ
ಜಪಾನ್​ನಲ್ಲಿ ಹೇಗಿವೆ ಬನ್ನೇರುಘಟ್ಟದ ಆನೆಗಳು: ಇಲ್ಲಿದೆ ವಿಡಿಯೋ
‘ಒಡಲಾಳ’ ನಾಟಕ; 21ನೇ ವಯಸ್ಸಿಗೆ ಹಣ್ಣಣ್ಣು ಅಜ್ಜಿಯ ಪಾತ್ರ ಮಾಡಿದ್ದ ಉಮಾಶ್ರೀ
‘ಒಡಲಾಳ’ ನಾಟಕ; 21ನೇ ವಯಸ್ಸಿಗೆ ಹಣ್ಣಣ್ಣು ಅಜ್ಜಿಯ ಪಾತ್ರ ಮಾಡಿದ್ದ ಉಮಾಶ್ರೀ
ತುಂಗಭದ್ರಾ ಏತ ನೀರಾವರಿ ಕಾಮಗಾರಿ ಪೈಪ್ ಒಡೆದು ಆಕಾಶದೆತ್ತರ ಚಿಮ್ಮಿದ ನೀರು!
ತುಂಗಭದ್ರಾ ಏತ ನೀರಾವರಿ ಕಾಮಗಾರಿ ಪೈಪ್ ಒಡೆದು ಆಕಾಶದೆತ್ತರ ಚಿಮ್ಮಿದ ನೀರು!
ರಾಜಣ್ಣಗಿರುವ ಮಾಹಿತಿ ನಂಗಿರಲ್ಲ, ನಾನೊಬ್ಬ ಸಣ್ಣ ಕಾರ್ಯಕರ್ತ: ಸುರೇಶ್
ರಾಜಣ್ಣಗಿರುವ ಮಾಹಿತಿ ನಂಗಿರಲ್ಲ, ನಾನೊಬ್ಬ ಸಣ್ಣ ಕಾರ್ಯಕರ್ತ: ಸುರೇಶ್
37 ಎಸೆತಗಳಲ್ಲಿ ಶತಕ: ಟಿಮ್ ಡೇವಿಡ್ ಆರ್ಭಟದ ವಿಡಿಯೋ ಇಲ್ಲಿದೆ
37 ಎಸೆತಗಳಲ್ಲಿ ಶತಕ: ಟಿಮ್ ಡೇವಿಡ್ ಆರ್ಭಟದ ವಿಡಿಯೋ ಇಲ್ಲಿದೆ
ಶುಕ್ರವಾರ ರಾತ್ರಿ ಅಂಗಡಿ ಮುಚ್ಚುವ ವೇಳೆ ನುಗ್ಗಿದ ದರೋಡೆಕೋರರು
ಶುಕ್ರವಾರ ರಾತ್ರಿ ಅಂಗಡಿ ಮುಚ್ಚುವ ವೇಳೆ ನುಗ್ಗಿದ ದರೋಡೆಕೋರರು
ಧ್ಯಾನ ಮಾಡುವುದರಿಂದ ಮಾನಸಿಕ ಯಾತನೆ ಕಡಿಮೆಯಾಗುತ್ತದೆ: ಹಸೀನಾ
ಧ್ಯಾನ ಮಾಡುವುದರಿಂದ ಮಾನಸಿಕ ಯಾತನೆ ಕಡಿಮೆಯಾಗುತ್ತದೆ: ಹಸೀನಾ
‘ಡೆವಿಲ್’ ಸಿನಿಮಾ ಶೂಟ್​ ಮುಗಿಸಿ ಬೆಂಗಳೂರಿಗೆ ಮರಳಿದ ದರ್ಶನ್
‘ಡೆವಿಲ್’ ಸಿನಿಮಾ ಶೂಟ್​ ಮುಗಿಸಿ ಬೆಂಗಳೂರಿಗೆ ಮರಳಿದ ದರ್ಶನ್
VIDEO: ಟೀಮ್ ಇಂಡಿಯಾ ದೊಡ್ಡ ಎಡವಟ್ಟು: ಮೈದಾನದಲ್ಲೇ ಜಡೇಜಾ ಆಕ್ರೋಶ
VIDEO: ಟೀಮ್ ಇಂಡಿಯಾ ದೊಡ್ಡ ಎಡವಟ್ಟು: ಮೈದಾನದಲ್ಲೇ ಜಡೇಜಾ ಆಕ್ರೋಶ
ಶ್ರಾವಣ ಮಾಸದಂದು ಶನಿವಾರ ಆಚರಣೆಯ ಹಿಂದಿನ ಮಹತ್ವ ತಿಳಿಯಿರಿ
ಶ್ರಾವಣ ಮಾಸದಂದು ಶನಿವಾರ ಆಚರಣೆಯ ಹಿಂದಿನ ಮಹತ್ವ ತಿಳಿಯಿರಿ