AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ನಕ್ಷತ್ರದಲ್ಲಿ ಮಕ್ಕಳಿಗೆ ಅನ್ನಪ್ರಾಶನ ಮಾಡಿಸಿದರೆ ಆ ಮಗುವಿಗೆ ಈ ಗುಣ ಬರುವುದು ಖಂಡಿತ

ಆಷಾಢ ಮಾಸ ಎಂಬ ಹೆಸರು ಬರಲು ಕಾರಣ ಈ ನಕ್ಷತ್ರವೂ ಹೌದು. ಎಲ್ಲ ಶುಭಕಾರ್ಯಗಳಿಗೂ ಈ ನಕ್ಷತ್ರದ ದಿನವನ್ನು ಬಳಸುತ್ತಾರೆ. ಅದರಲ್ಲಿಯೂ ಸಣ್ಣ ಮಕ್ಕಳ ಅನ್ನಪ್ರಾಶನ ಸಂಸ್ಕಾರಕ್ಕೆ ಉತ್ತಮವಾದ ನಕ್ಷತ್ರ. ಈ ನಕ್ಷತ್ರದಲ್ಲಿ ಅನ್ನಪ್ರಾಶನ ಅಂದರೆ ಮಗುವಿಗೆ ಮೊದಲ ಊಟದ ಪ್ರಾರಂಭ. ಅಂದು ತಿಂದರೆ, ತಿಂದ ಆಹಾರ ಸೌಮ್ಯಗುಣವನ್ನು ವರ್ಧಿಸುತ್ತದೆ. ಇಂತಹ ಅಪರೂಪದ ನಕ್ಷತ್ರ ಇದು. ಈ‌ ನಕ್ಷತ್ರದಲ್ಲಿ ಜನಿಸಿದವರು ಹೇಗೆ ಇರುತ್ತಾರೆ? ಅವರ ಸಂಪತ್ತು, ಗುಣ, ನಡತೆಗಳು ಹೇಗಿರಲಿವೆ ಇಲ್ಲಿದೆ ನೋಡಿ.

ಈ ನಕ್ಷತ್ರದಲ್ಲಿ ಮಕ್ಕಳಿಗೆ ಅನ್ನಪ್ರಾಶನ ಮಾಡಿಸಿದರೆ ಆ ಮಗುವಿಗೆ ಈ ಗುಣ ಬರುವುದು ಖಂಡಿತ
ಸಾಂದರ್ಭಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Apr 14, 2025 | 9:23 AM

Share

ಬೇ ಬೋ ದ ಜಿ ಎಂಬ ನಾಮಾಕ್ಷರವನ್ನು ಉಳ್ಳ ನಕ್ಷತ್ರ ಉತ್ತರಾಷಾಢಾ (Uttara Ashada Nakshatra). ಇಪ್ಪತ್ತೊಂದನೇ ನಕ್ಷತ್ರ (Nakshatra). ಧನು ಹಾಗೂ ಮಕರ ರಾಶಿಗಳಲ್ಲಿ (Sagittarius and Capricorn) ಹಂಚಿಕೆಯಾಗಿರುವ ನಕ್ಷತ್ರವಿದು. ಇದರ ದೇವತೆ ವಿಶ್ವೇದೇವ. ಮನುಷ್ಯ ಗಣಕ್ಕೆ ಸೇರಿದ ನಕ್ಷತ್ರ ಇದಾಗಿದೆ. ಕಫ ಈ ರಾಶಿಯ ಪ್ರಕೃತಿ. ಆಕಾಶದಲ್ಲಿ ಮಂಚದ ಆಕಾರದಲ್ಲಿ ಎರಡು ನಕ್ಷತ್ರಗಳು ಕ್ರಾಂತಿವೃತ್ತದ ಸಮೀಪ ಗೋಚರಿಸಿದರೆ ಅದೇ ಉತ್ತರಾಷಾಢಾ ನಕ್ಷತ್ರ.‌ ಆಷಾಢ ಮಾಸ ಎಂಬ ಹೆಸರು ಬರಲು ಕಾರಣ ಈ ನಕ್ಷತ್ರವೂ ಹೌದು. ಎಲ್ಲ ಶುಭಕಾರ್ಯಗಳಿಗೂ ಈ ನಕ್ಷತ್ರದ ದಿನವನ್ನು ಬಳಸುತ್ತಾರೆ. ಅದರಲ್ಲಿಯೂ ಸಣ್ಣ ಮಕ್ಕಳ ಅನ್ನಪ್ರಾಶನ ಸಂಸ್ಕಾರಕ್ಕೆ ಉತ್ತಮವಾದ ನಕ್ಷತ್ರ. ಈ ನಕ್ಷತ್ರದಲ್ಲಿ ಅನ್ನಪ್ರಾಶನ ಅಂದರೆ ಮಗುವಿಗೆ ಮೊದಲ ಊಟದ ಪ್ರಾರಂಭ. ಅಂದು ತಿಂದರೆ, ತಿಂದ ಆಹಾರ ಸೌಮ್ಯಗುಣವನ್ನು ವರ್ಧಿಸುತ್ತದೆ. ಇಂತಹ ಅಪರೂಪದ ನಕ್ಷತ್ರ ಇದು.

ಈ‌ ನಕ್ಷತ್ರದಲ್ಲಿ ಜನಿಸಿದವರು ಹೇಗೆ ಇರುತ್ತಾರೆ? ಅವರ ಸಂಪತ್ತು, ಗುಣ, ನಡತೆಗಳು ಹೇಗಿರಲಿವೆ ಎನ್ನುವುದನ್ನು ನೋಡೋಣ.

  • ವಿನೀತ : ಇವರಿಗೆ ಜ್ಞಾನ ವೃದ್ಧರು ಹಾಗೂ ವಯೋವೃದ್ಧರನ್ನು ಕಂಡರೆ ಗೌರವ, ಪ್ರೀತಿ. ಅವರ ಸೇವೆಯನ್ನು ಮಾಡುವ ಆಸಕ್ತಿ ಇರಲಿದೆ. ಹಾಗೆಯೇ ತಗ್ಗಿ ಬಗ್ಗಿ ನಡೆಯುವ ಸ್ವಭಾವವಿರುವುದು.
  • ಬಹುಮಿತ್ರ :ಈ ನಕ್ಷತ್ರದವರಿಗೆ ಮಿತ್ರರು ಅಧಿಕ. ಒಳ್ಳೆಯ ಹಾಗು ಕೆಟ್ಟ ಮಿತ್ರರ ಸಹವಾಸವಾಗುವುದು.‌ ಹಣ ಧನಸಂಗ್ರಹಕ್ಕಿಂತ ಜನಸಂಗ್ರಹವೇ ಅಧಿಕ. ಆದರೆ ಸಂಗದಲ್ಲಿ ಎಚ್ಚರಿಕೆ ಬೇಕು.
  • ಕೃತಜ್ಞತೆ :ಮಾಡಿದ ಒಳ್ಳೆಯ ಕಾರ್ಯವನ್ನು ನೆನಪಿನಲ್ಲಿರುವುದೇ ಕೃತಜ್ಞತೆ. ಇವರು ಪ್ರತಿಯಾಗಿ ಉಪಕಾರಸ್ಮರಣೆಯಿಂದ ಸಹಾಯವನ್ನು ಮಾಡುವರು.
  • ಧಾರ್ಮಿಕತೆ : ದೇವರಿಗೆ ಸಂಬಂಧಿದ‌ ಪುಣ್ಯ ಕ್ಷೇತ್ರದ ದರ್ಶನ, ಪ್ರಯಾಣ ಇಷ್ಟವಾಗುವುದು. ಸ್ವತಃ ಧಾರ್ಮಿಕ ಆಚರಣೆಗಳನ್ನು ತಮಗೆ ತಿಳಿದ ರೀತಿಯಲ್ಲಿ ಮಾಡುವರು. ಸರಿಯಾದ ಮಾರ್ಗದರ್ಶನ ಪಡೆದು ಮಾಡಿದರೆ ಉತ್ತಮ.
  • ದೊಡ್ಡ ದೇಹ : ಇವರ ದೇಹವು ಮಾಂಸಖಂಡಗಳಿಂದ‌ ಮುಖ, ಕೈ, ಕಾಲುಗಳು ತುಂಬಿ ಸುಂದರವಾಗಿಯೂ ದೊಡ್ಡ ಆಕಾರದಲ್ಲಿಯೂ ಕಾಣಿಸುವುದು. ಗುರು ಅಥವಾ ಶನಿಯ ಆಧಿಪತ್ಯದಲ್ಲಿ ಬರುವ ಕಾರಣ ದೇಹವು ಬೃಹದಾಕಾರವಾಗಿ ಆಗುವುದು.
  • ದಯಾವಾನ್ : ಪರರ ವಿಚಾರದಲ್ಲಿ ಕರುಣೆ. ಕಷ್ಟ, ದುಃಖದಲ್ಲಿ ಇರುವವರಿಗೆ ಸ್ಪಂದಸಿವ ಮನೋಭಾವ ಬರುವುದು. ಪ್ರಾಣಿ, ಮನುಷ್ಯ, ಪಕ್ಷಿಗಳ ಮೇಲೆ‌ ದಯೆ ಮೂಡುವುದು.
  • ಕುಟುಂಬ ನಿರ್ವಹಣೆ : ಮನೆಯಲ್ಲಿ ಯಾರೇ ದೊಡ್ಡವರು ಚಿಕ್ಕವರಿದ್ದರೂ ಕುಟುಂಬ ಜವಾಬ್ದಾರಿ ಇವರ ಮೇಲೆ ಬೀಳುವುದು. ಜ್ಞಾನ, ಚುರುಕುತನ, ಕೌಶಲವು ಇವರಿಗೆ ಅನಾಯಾಸವಾಗಿ ಜವಾಬ್ದಾರಿ ಬರುವಂತೆ ಮಾಡುತ್ತದೆ.

– ಲೋಹಿತ ಹೆಬ್ಬಾರ್ – 8762924271

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಎಣ್ಣೆ ನಶೆಯಲ್ಲಿ ನಾಯಿ ಜೊತೆ ಯುವಕನ ಡ್ಯಾನ್ಸ್​​: ವಿಡಿಯೋ ವೈರಲ್​
ಎಣ್ಣೆ ನಶೆಯಲ್ಲಿ ನಾಯಿ ಜೊತೆ ಯುವಕನ ಡ್ಯಾನ್ಸ್​​: ವಿಡಿಯೋ ವೈರಲ್​
‘ನಗ್ತಾ ಇರಿ, ಖುಷಿಯಾಗಿರಿ’; ಮಾತಿನ ಮೂಲಕ ವಿಶ್ ಮಾಡಿದ ಸುದೀಪ್
‘ನಗ್ತಾ ಇರಿ, ಖುಷಿಯಾಗಿರಿ’; ಮಾತಿನ ಮೂಲಕ ವಿಶ್ ಮಾಡಿದ ಸುದೀಪ್
ನಮಗೊಂದು ಟ್ವೀಟ್ ಮಾಡಿಕೊಡಿ: ಕೇರಳ ಸಿಎಂಗೆ ದುಂಬಾಲು ಬಿದ್ದ ಬಿಜೆಪಿ!
ನಮಗೊಂದು ಟ್ವೀಟ್ ಮಾಡಿಕೊಡಿ: ಕೇರಳ ಸಿಎಂಗೆ ದುಂಬಾಲು ಬಿದ್ದ ಬಿಜೆಪಿ!
ಹೊಸ ವರ್ಷಾಚರಣೆ ವೇಳೆ ಸ್ವಿಟ್ಜರ್​ಲ್ಯಾಂಡ್​ನ ಬಾರ್‌ನಲ್ಲಿ ಬಾಂಬ್ ಸ್ಫೋಟ
ಹೊಸ ವರ್ಷಾಚರಣೆ ವೇಳೆ ಸ್ವಿಟ್ಜರ್​ಲ್ಯಾಂಡ್​ನ ಬಾರ್‌ನಲ್ಲಿ ಬಾಂಬ್ ಸ್ಫೋಟ
ಹೊಸ ವರ್ಷದ ದಿನ ನಮ್ಮ ಮೆಟ್ರೋಗೆ ಬಂಪರ್​ ಆದಾಯ: ಕಲೆಕ್ಷನ್​ ಎಷ್ಟು?
ಹೊಸ ವರ್ಷದ ದಿನ ನಮ್ಮ ಮೆಟ್ರೋಗೆ ಬಂಪರ್​ ಆದಾಯ: ಕಲೆಕ್ಷನ್​ ಎಷ್ಟು?
ಪರೋಕ್ಷವಾಗಿ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಡಾ. ಜಿ. ಪರಮೇಶ್ವರ್
ಪರೋಕ್ಷವಾಗಿ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಡಾ. ಜಿ. ಪರಮೇಶ್ವರ್
ಹೂ, ಎಲೆಗಳ ಸಿಂಗಾರ; ವಿಶೇಷ ಅಲಂಕಾರದಲ್ಲಿ ಕಂಗೊಳಿಸಿದ ನಾಡ ದೇವತೆ
ಹೂ, ಎಲೆಗಳ ಸಿಂಗಾರ; ವಿಶೇಷ ಅಲಂಕಾರದಲ್ಲಿ ಕಂಗೊಳಿಸಿದ ನಾಡ ದೇವತೆ
ಮಂತ್ರಾಲಯದಲ್ಲಿ ಹೊಸ ವರ್ಷದ ಸಂಭ್ರಮ: ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತರು
ಮಂತ್ರಾಲಯದಲ್ಲಿ ಹೊಸ ವರ್ಷದ ಸಂಭ್ರಮ: ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತರು
ಪಕ್ಕದಮನೆಯವರ ಬಗ್ಗೆ ಮಾತನಾಡಲ್ಲ; ವಿಜಯಲಕ್ಷ್ಮೀ ಬಗ್ಗೆ ಸುದೀಪ್ ಮಾತು
ಪಕ್ಕದಮನೆಯವರ ಬಗ್ಗೆ ಮಾತನಾಡಲ್ಲ; ವಿಜಯಲಕ್ಷ್ಮೀ ಬಗ್ಗೆ ಸುದೀಪ್ ಮಾತು
ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಭಕ್ತರ ದಂಡು
ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಭಕ್ತರ ದಂಡು