AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ನಕ್ಷತ್ರದಲ್ಲಿ ಮಕ್ಕಳಿಗೆ ಅನ್ನಪ್ರಾಶನ ಮಾಡಿಸಿದರೆ ಆ ಮಗುವಿಗೆ ಈ ಗುಣ ಬರುವುದು ಖಂಡಿತ

ಆಷಾಢ ಮಾಸ ಎಂಬ ಹೆಸರು ಬರಲು ಕಾರಣ ಈ ನಕ್ಷತ್ರವೂ ಹೌದು. ಎಲ್ಲ ಶುಭಕಾರ್ಯಗಳಿಗೂ ಈ ನಕ್ಷತ್ರದ ದಿನವನ್ನು ಬಳಸುತ್ತಾರೆ. ಅದರಲ್ಲಿಯೂ ಸಣ್ಣ ಮಕ್ಕಳ ಅನ್ನಪ್ರಾಶನ ಸಂಸ್ಕಾರಕ್ಕೆ ಉತ್ತಮವಾದ ನಕ್ಷತ್ರ. ಈ ನಕ್ಷತ್ರದಲ್ಲಿ ಅನ್ನಪ್ರಾಶನ ಅಂದರೆ ಮಗುವಿಗೆ ಮೊದಲ ಊಟದ ಪ್ರಾರಂಭ. ಅಂದು ತಿಂದರೆ, ತಿಂದ ಆಹಾರ ಸೌಮ್ಯಗುಣವನ್ನು ವರ್ಧಿಸುತ್ತದೆ. ಇಂತಹ ಅಪರೂಪದ ನಕ್ಷತ್ರ ಇದು. ಈ‌ ನಕ್ಷತ್ರದಲ್ಲಿ ಜನಿಸಿದವರು ಹೇಗೆ ಇರುತ್ತಾರೆ? ಅವರ ಸಂಪತ್ತು, ಗುಣ, ನಡತೆಗಳು ಹೇಗಿರಲಿವೆ ಇಲ್ಲಿದೆ ನೋಡಿ.

ಈ ನಕ್ಷತ್ರದಲ್ಲಿ ಮಕ್ಕಳಿಗೆ ಅನ್ನಪ್ರಾಶನ ಮಾಡಿಸಿದರೆ ಆ ಮಗುವಿಗೆ ಈ ಗುಣ ಬರುವುದು ಖಂಡಿತ
ಸಾಂದರ್ಭಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Apr 14, 2025 | 9:23 AM

Share

ಬೇ ಬೋ ದ ಜಿ ಎಂಬ ನಾಮಾಕ್ಷರವನ್ನು ಉಳ್ಳ ನಕ್ಷತ್ರ ಉತ್ತರಾಷಾಢಾ (Uttara Ashada Nakshatra). ಇಪ್ಪತ್ತೊಂದನೇ ನಕ್ಷತ್ರ (Nakshatra). ಧನು ಹಾಗೂ ಮಕರ ರಾಶಿಗಳಲ್ಲಿ (Sagittarius and Capricorn) ಹಂಚಿಕೆಯಾಗಿರುವ ನಕ್ಷತ್ರವಿದು. ಇದರ ದೇವತೆ ವಿಶ್ವೇದೇವ. ಮನುಷ್ಯ ಗಣಕ್ಕೆ ಸೇರಿದ ನಕ್ಷತ್ರ ಇದಾಗಿದೆ. ಕಫ ಈ ರಾಶಿಯ ಪ್ರಕೃತಿ. ಆಕಾಶದಲ್ಲಿ ಮಂಚದ ಆಕಾರದಲ್ಲಿ ಎರಡು ನಕ್ಷತ್ರಗಳು ಕ್ರಾಂತಿವೃತ್ತದ ಸಮೀಪ ಗೋಚರಿಸಿದರೆ ಅದೇ ಉತ್ತರಾಷಾಢಾ ನಕ್ಷತ್ರ.‌ ಆಷಾಢ ಮಾಸ ಎಂಬ ಹೆಸರು ಬರಲು ಕಾರಣ ಈ ನಕ್ಷತ್ರವೂ ಹೌದು. ಎಲ್ಲ ಶುಭಕಾರ್ಯಗಳಿಗೂ ಈ ನಕ್ಷತ್ರದ ದಿನವನ್ನು ಬಳಸುತ್ತಾರೆ. ಅದರಲ್ಲಿಯೂ ಸಣ್ಣ ಮಕ್ಕಳ ಅನ್ನಪ್ರಾಶನ ಸಂಸ್ಕಾರಕ್ಕೆ ಉತ್ತಮವಾದ ನಕ್ಷತ್ರ. ಈ ನಕ್ಷತ್ರದಲ್ಲಿ ಅನ್ನಪ್ರಾಶನ ಅಂದರೆ ಮಗುವಿಗೆ ಮೊದಲ ಊಟದ ಪ್ರಾರಂಭ. ಅಂದು ತಿಂದರೆ, ತಿಂದ ಆಹಾರ ಸೌಮ್ಯಗುಣವನ್ನು ವರ್ಧಿಸುತ್ತದೆ. ಇಂತಹ ಅಪರೂಪದ ನಕ್ಷತ್ರ ಇದು.

ಈ‌ ನಕ್ಷತ್ರದಲ್ಲಿ ಜನಿಸಿದವರು ಹೇಗೆ ಇರುತ್ತಾರೆ? ಅವರ ಸಂಪತ್ತು, ಗುಣ, ನಡತೆಗಳು ಹೇಗಿರಲಿವೆ ಎನ್ನುವುದನ್ನು ನೋಡೋಣ.

  • ವಿನೀತ : ಇವರಿಗೆ ಜ್ಞಾನ ವೃದ್ಧರು ಹಾಗೂ ವಯೋವೃದ್ಧರನ್ನು ಕಂಡರೆ ಗೌರವ, ಪ್ರೀತಿ. ಅವರ ಸೇವೆಯನ್ನು ಮಾಡುವ ಆಸಕ್ತಿ ಇರಲಿದೆ. ಹಾಗೆಯೇ ತಗ್ಗಿ ಬಗ್ಗಿ ನಡೆಯುವ ಸ್ವಭಾವವಿರುವುದು.
  • ಬಹುಮಿತ್ರ :ಈ ನಕ್ಷತ್ರದವರಿಗೆ ಮಿತ್ರರು ಅಧಿಕ. ಒಳ್ಳೆಯ ಹಾಗು ಕೆಟ್ಟ ಮಿತ್ರರ ಸಹವಾಸವಾಗುವುದು.‌ ಹಣ ಧನಸಂಗ್ರಹಕ್ಕಿಂತ ಜನಸಂಗ್ರಹವೇ ಅಧಿಕ. ಆದರೆ ಸಂಗದಲ್ಲಿ ಎಚ್ಚರಿಕೆ ಬೇಕು.
  • ಕೃತಜ್ಞತೆ :ಮಾಡಿದ ಒಳ್ಳೆಯ ಕಾರ್ಯವನ್ನು ನೆನಪಿನಲ್ಲಿರುವುದೇ ಕೃತಜ್ಞತೆ. ಇವರು ಪ್ರತಿಯಾಗಿ ಉಪಕಾರಸ್ಮರಣೆಯಿಂದ ಸಹಾಯವನ್ನು ಮಾಡುವರು.
  • ಧಾರ್ಮಿಕತೆ : ದೇವರಿಗೆ ಸಂಬಂಧಿದ‌ ಪುಣ್ಯ ಕ್ಷೇತ್ರದ ದರ್ಶನ, ಪ್ರಯಾಣ ಇಷ್ಟವಾಗುವುದು. ಸ್ವತಃ ಧಾರ್ಮಿಕ ಆಚರಣೆಗಳನ್ನು ತಮಗೆ ತಿಳಿದ ರೀತಿಯಲ್ಲಿ ಮಾಡುವರು. ಸರಿಯಾದ ಮಾರ್ಗದರ್ಶನ ಪಡೆದು ಮಾಡಿದರೆ ಉತ್ತಮ.
  • ದೊಡ್ಡ ದೇಹ : ಇವರ ದೇಹವು ಮಾಂಸಖಂಡಗಳಿಂದ‌ ಮುಖ, ಕೈ, ಕಾಲುಗಳು ತುಂಬಿ ಸುಂದರವಾಗಿಯೂ ದೊಡ್ಡ ಆಕಾರದಲ್ಲಿಯೂ ಕಾಣಿಸುವುದು. ಗುರು ಅಥವಾ ಶನಿಯ ಆಧಿಪತ್ಯದಲ್ಲಿ ಬರುವ ಕಾರಣ ದೇಹವು ಬೃಹದಾಕಾರವಾಗಿ ಆಗುವುದು.
  • ದಯಾವಾನ್ : ಪರರ ವಿಚಾರದಲ್ಲಿ ಕರುಣೆ. ಕಷ್ಟ, ದುಃಖದಲ್ಲಿ ಇರುವವರಿಗೆ ಸ್ಪಂದಸಿವ ಮನೋಭಾವ ಬರುವುದು. ಪ್ರಾಣಿ, ಮನುಷ್ಯ, ಪಕ್ಷಿಗಳ ಮೇಲೆ‌ ದಯೆ ಮೂಡುವುದು.
  • ಕುಟುಂಬ ನಿರ್ವಹಣೆ : ಮನೆಯಲ್ಲಿ ಯಾರೇ ದೊಡ್ಡವರು ಚಿಕ್ಕವರಿದ್ದರೂ ಕುಟುಂಬ ಜವಾಬ್ದಾರಿ ಇವರ ಮೇಲೆ ಬೀಳುವುದು. ಜ್ಞಾನ, ಚುರುಕುತನ, ಕೌಶಲವು ಇವರಿಗೆ ಅನಾಯಾಸವಾಗಿ ಜವಾಬ್ದಾರಿ ಬರುವಂತೆ ಮಾಡುತ್ತದೆ.

– ಲೋಹಿತ ಹೆಬ್ಬಾರ್ – 8762924271

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!
ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!
ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ
ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ