AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Love Horoscope: ಯಾವ ರಾಶಿಯವರಿಗೆ ಪ್ರೇಮಾಂಕುರವಾಗುತ್ತದೆ? ಜ್ಯೋತಿಷ್ಯ ಏನು ಹೇಳುತ್ತದೆ?

ಜ್ಯೋತಿಷ್ಯ ಶಾಸ್ತ್ರವು ಇಂತಹ ಕಾಲವನ್ನು ವ್ಯಕ್ತಿಯನ್ನು ಸೂಚಿಸುವ ಮಹಾವಿದ್ಯೆ. ಗ್ರಹಗಳ ಕಾರಣದಿಂದ ಋಣಾನುಬಂಧದ ವಿಚಾರವನ್ನು ಗಮನಿಸಿಲು ಸಾಧ್ಯ. ಕೆಲವು ಗ್ರಹಗಳ ಸಂಯೋಜನೆಯು ಕೆಲವರಿಗೆ ಕೆಲವು ಸಂದರ್ಭದಲ್ಲಿ ಘಟಿಸುತ್ತದೆ. ಅದಾದನಂತರ ಘಟಿಸಬೇಕು ಎನ್ನುವುದಿಲ್ಲ, ಘಟಿಸಿದರೂ ಘಟಿಸಬಹುದು. ಸದ್ಯ ಯಾವ ರಾಶಿಯವರಿಗೆ ಪ್ರೇಮವು ಉಂಟಾಗಬಹುದು ಮತ್ತು ಅದು ಫಲಿಸಬಹುದು ಎನ್ನುವುದನ್ನು ನೋಡೋಣ.

Love Horoscope: ಯಾವ ರಾಶಿಯವರಿಗೆ ಪ್ರೇಮಾಂಕುರವಾಗುತ್ತದೆ? ಜ್ಯೋತಿಷ್ಯ ಏನು ಹೇಳುತ್ತದೆ?
ಯಾವ ರಾಶಿಯವರಿಗೆ ಪ್ರೇಮಾಂಕುರ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Jul 19, 2024 | 7:37 PM

Share

ಪುರಾತನವಾದ ಮಾತು ಇದೆ ಋಣಾನುಬಂಧರೂಪೇಣ ಪಶು ಪತ್ನಿ ಸುತಾಲಯಃ ಎಂದು. ಪತ್ನಿ ಸಿಗಬೇಕಾದರೂ ಋಣವಿರಬೇಕು ಎನ್ನುವುದೂ ಈ ವಾಕ್ಯದ ಅರ್ಥ. ಯಾರಿಗೆ ಋಣವಿದೆ? ಯಾರಿಗೆ ಋಣವಿಲ್ಲ ಎಂದು ತಿಳಿದುಕೊಳ್ಳುವ ಬಗೆ ಹೇಗೆ? ಯಾರಿಗೆ ಯಾವ ಋಣ ಯಾವಾಗಾ ಲಭ್ಯವಾಗುತ್ತದೆ ಎನ್ನುವುದೂ ಮುಖ್ಯ. ಎಲ್ಲರಿಗೂ ಎಲ್ಲ ಋಣಗಳೂ ಎಲ್ಲ ಕಾಲದಲ್ಲಿಯೂ ಸಿಗದು.‌ ಅದಕ್ಕೂ ಸಮಯ, ಸಂದರ್ಭವು ಬರಬೇಕಾಗುತ್ತದೆ.

ಜ್ಯೋತಿಷ್ಯ ಶಾಸ್ತ್ರವು ಇಂತಹ ಕಾಲವನ್ನು ವ್ಯಕ್ತಿಯನ್ನು ಸೂಚಿಸುವ ಮಹಾವಿದ್ಯೆ. ಗ್ರಹಗಳ ಕಾರಣದಿಂದ ಋಣಾನುಬಂಧದ ವಿಚಾರವನ್ನು ಗಮನಿಸಿಲು ಸಾಧ್ಯ. ಕೆಲವು ಗ್ರಹಗಳ ಸಂಯೋಜನೆಯು ಕೆಲವರಿಗೆ ಕೆಲವು ಸಂದರ್ಭದಲ್ಲಿ ಘಟಿಸುತ್ತದೆ. ಅದಾದನಂತರ ಘಟಿಸಬೇಕು ಎನ್ನುವುದಿಲ್ಲ, ಘಟಿಸಿದರೂ ಘಟಿಸಬಹುದು. ಸದ್ಯ ಯಾವ ರಾಶಿಯವರಿಗೆ ಪ್ರೇಮವು ಉಂಟಾಗಬಹುದು ಮತ್ತು ಅದು ಫಲಿಸಬಹುದು ಎನ್ನುವುದನ್ನು ನೋಡಣ.

ವೃಷಭ ರಾಶಿ :ಪ್ರಸ್ತುತ ಗ್ರಹಗಳ ಚಲನೆಯನ್ನು ಆಧರಿಸಿ ಹೇಳುವುದಾದರೆ ಈ ರಾಶಿಯವರಿಗೆ ಪ್ರೇಮವು ಫಲಿಸುವುದು. ಕುಜನು ಶುಕ್ರನ ರಾಶಿಯಲ್ಲಿಯೂ ಗುರುವಿನ ಜೊತೆಗೂ ಇರುವುದರಿಂದ ಮನೆಯರ ಸಮಯದಲ್ಲಿ ಇವರ ಪ್ರೇಮವು ವಿವಾಹವಾಗಿಯೂ ಮುಂದುವರಿಯುವುದು.

ತುಲಾ ರಾಶಿ :ಈ ರಾಶಿಯವರು ಪ್ರೇಮದಲ್ಲಿ ಬೀಳುವರು. ಇವರಿಗೆ ಉದ್ಯೋಗದ ಸ್ಥಳದಲ್ಲಿ ಪ್ರೇಮವಾಗುವುದು. ಇವರು ಹಿರಿಯರ ಒಪ್ಪಿಗೆ ಪಡೆಯಲು ಸಮಯವನ್ನು ತೆಗೆದುಕೊಳ್ಳುವರು. ಆತುರ ಮಾಡಿಕೊಂಡರೆ ಮಧ್ಯದಲ್ಲಿ ನಿಂತುಹೋಗುವುದು.

ವೃಶ್ಚಿಕ ರಾಶಿ :ಈ ರಾಶಿಗೂ ಉತ್ತಮ ಕುಲದವರ ಜೊತೆ ಸ್ನೇಹವು ಆಗಿ, ಅನಂತರ ಪ್ರೇಮವಾಗಲಿದೆ. ರೂಪವುಳ್ಳ ಸಾತ್ವಿಕ ಸ್ವಭಾವದ ಸಂಗಾತಿಯು ಸಿಗುವರು.

ಈ ಮೂರು ರಾಶಿಯವರಿಗೆ ಸದ್ಯದ ಗ್ರಹಗತಿಗಳಿಂದ‌ ಪ್ರೇಮವು ಉಂಟಾಗುವ ಲಕ್ಷಣವಿದೆ.

ಯಾವುದನ್ನೂ ಆತುರದಿಂದ ನಡೆಸದೇ ಸಮಯ ಸಂದರ್ಭವನ್ನು ಅರಿತು ಸಮಾಧಾನ ಚಿತ್ತದಿಂದ ಮುಂದುರಿದರೆ ಎಲ್ಲವೂ ಸುಖಕರವಾಗಿ ನಡೆಯುವುದು. ಉದ್ವೇಗ, ಒತ್ತಡಗಳಿಗೆ ಸಿಕ್ಕಿ ಋಣವನ್ನು ಕಳೆದುಕೊಳ್ಳುವುದು ಅವರವರ ಕೈಯಲ್ಲಿರುವುದು.

ಲೋಹಿತ ಹೆಬ್ಬಾರ್ – 8762924271

Follow Us
Lohitha Hebbar
Lohitha Hebbar

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
ಮಕ್ಕಳನ್ನು ಮಲಗಿಸಿ 1.5 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕದ್ದ ಕೆಲಸದಾಕೆ
ಮಕ್ಕಳನ್ನು ಮಲಗಿಸಿ 1.5 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕದ್ದ ಕೆಲಸದಾಕೆ
ಡಿಕೆಶಿ​​ ಕೈ ಬಿಡದ ಆಂದ್ಲೆ ಶ್ರೀ ಜಗದೀಶ್ವರಿ: ಸತ್ಯವಾಯ್ತು ದೇವಿಯ ಶುಭಸೂಚನೆ
ಡಿಕೆಶಿ​​ ಕೈ ಬಿಡದ ಆಂದ್ಲೆ ಶ್ರೀ ಜಗದೀಶ್ವರಿ: ಸತ್ಯವಾಯ್ತು ದೇವಿಯ ಶುಭಸೂಚನೆ
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಮುಹೂರ್ತ ಫಿಕ್ಸ್
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಮುಹೂರ್ತ ಫಿಕ್ಸ್
ತುತ್ತ ತುದಿಯಲ್ಲಿ ನಿಂತೇ ಬಿಡ್ತು ರೋಲರ್ ಕೋಸ್ಟರ್
ತುತ್ತ ತುದಿಯಲ್ಲಿ ನಿಂತೇ ಬಿಡ್ತು ರೋಲರ್ ಕೋಸ್ಟರ್
ಸತೀಶ್ ಜಾರಕಿಹೊಳಿಗೆ ಕೊನೆಗೂ ಬಂತು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಫರ್!
ಸತೀಶ್ ಜಾರಕಿಹೊಳಿಗೆ ಕೊನೆಗೂ ಬಂತು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಫರ್!
ಕಳ್ಳ ಅನ್ಕೊಂಡ್ರಾ, ಮೆಡಿಕಲ್ ಶಾಪ್ ಕ್ಲೋಸ್ ಆಗುವ ವೇಳೆ ನುಗ್ಗಿದ ವ್ಯಕ್ತಿ
ಕಳ್ಳ ಅನ್ಕೊಂಡ್ರಾ, ಮೆಡಿಕಲ್ ಶಾಪ್ ಕ್ಲೋಸ್ ಆಗುವ ವೇಳೆ ನುಗ್ಗಿದ ವ್ಯಕ್ತಿ
ಸಾಯುತ್ತಿದ್ದ ಲೈನ್‌ಮನ್‌ಗೆ ಸಿಪಿಆರ್ ನೀಡಿ ಜೀವ ಉಳಿಸಿದ ಪೊಲೀಸ್​​ ಸಿಬ್ಬಂದಿ
ಸಾಯುತ್ತಿದ್ದ ಲೈನ್‌ಮನ್‌ಗೆ ಸಿಪಿಆರ್ ನೀಡಿ ಜೀವ ಉಳಿಸಿದ ಪೊಲೀಸ್​​ ಸಿಬ್ಬಂದಿ
ಮೆಟ್ರೋ ನಿಲ್ದಾಣದ ರಸ್ತೇಲಿ 3 ಅಡಿಯಷ್ಟು ನಿಂತ ಮಳೆ‌ನೀರು!
ಮೆಟ್ರೋ ನಿಲ್ದಾಣದ ರಸ್ತೇಲಿ 3 ಅಡಿಯಷ್ಟು ನಿಂತ ಮಳೆ‌ನೀರು!
ಗುರು ಸಂಚಾರ ಮೀನ ರಾಶಿಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ?
ಗುರು ಸಂಚಾರ ಮೀನ ರಾಶಿಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ?
Video: ಉತ್ತರ ಪ್ರದೇಶದಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿತ, ಐವರು ಸಾವು
Video: ಉತ್ತರ ಪ್ರದೇಶದಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿತ, ಐವರು ಸಾವು