ದಿನಭವಿಷ್ಯ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 27ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
- ಜನ್ಮಸಂಖ್ಯೆ 1: ಮನೆಯಲ್ಲಿ ಮದುವೆ ಪ್ರಸ್ತಾವ ಬರಬಹುದು. ಸಂಬಂಧದಲ್ಲಿಯೇ ಸೂಕ್ತ ವಧು/ವರ ದೊರೆಯುವ ಸಾಧ್ಯತೆಗಳಿವೆ, ಮನರಂಜನೆಗಾಗಿ ಹೆಚ್ಚಿನ ಖರ್ಚು ಮಾಡಲಿದ್ದೀರಿ. ವಾಹನ- ಮನೆ ಖರೀದಿ ಮಾಡುವ ಬಗ್ಗೆ ಆಲೋಚನೆ ಮಾಡಲಿದ್ದೀರಿ, ಔತಣಕೂಟಗಳಿಗೆ ಆಹ್ವಾನ ಬರಲಿದೆ. ಸ್ವಂತ ಮನೆ ಇದ್ದಲ್ಲಿ ದುರಸ್ತಿಗೆ ಯೋಜನೆ ರೂಪಿಸುತ್ತೀರಿ.
- ಜನ್ಮಸಂಖ್ಯೆ 2: ಇನ್ನೊಬ್ಬರಿಗೆ ಯಾವುದಾದರೂ ಕೆಲಸ ಮಾಡಿಕೊಡುವುದಾಗಿ ಮಾತು ನೀಡುವ ಮುನ್ನ ನಿಮ್ಮ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಿ. ಭಾವನಾತ್ಮಕವಾಗಿ ಆಲೋಚಿಸುವುದಕ್ಕಿಂತ ವಾಸ್ತವ ನೆಲೆಗಟ್ಟಿನಲ್ಲಿ ಆಲೋಚನೆ ಮಾಡಿ, ಮುಂದಕ್ಕೆ ಹೆಜ್ಜೆಗಳನ್ನು ಇಡಿ. ಊಟ- ತಿಂಡಿ ವಿಚಾರದಲ್ಲಿ ಎಚ್ಚರಿಕೆ ಅಗತ್ಯ.
- ಜನ್ಮಸಂಖ್ಯೆ 3: ಬೇರೆ ಯಾರೋ ನಿಮಗೆ ಸಹಾಯ ಮಾಡುತ್ತಾರೆ ಎಂಬ ಅತಿಯಾದ ನಿರೀಕ್ಷೆ ಬೇಡ, ನಿಮ್ಮ ಶ್ರಮ ನಿಮಗೆ, ಅಷ್ಟೇ. ಈ ಹಿಂದಿನ ಕಹಿ ಘಟನೆಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ದ್ವೇಷ ಸಾಧನೆ ಮಾಡದಿರಿ. ಜ್ವರ, ನೆಗಡಿ, ಕಫದಂಥ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಅಗತ್ಯ ಕಂಡುಬಂದಲ್ಲಿ ಕಡ್ಡಾಯವಾಗಿ ವೈದ್ಯರನ್ನು ಭೇಟಿಯಾಗಿ.
- ಜನ್ಮಸಂಖ್ಯೆ 4: ಬೇರೆಯವರ ವೈಯಕ್ತಿಕ ವಿಚಾರಗಳಿಗೆ ತಲೆ ಹಾಕಬೇಡಿ. ಮೌನವಾಗಿದ್ದಷ್ಟೂ ನೆಮ್ಮದಿಯಾಗಿರುತ್ತೀರಿ. ನಿಮ್ಮ ಸಾಮರ್ಥ್ಯವನ್ನು ಮೂದಲಿಸಿ, ಸಿಟ್ಟಿಗೆಬ್ಬಿಸುವ ಪ್ರಯತ್ನಗಳನ್ನು ಶತ್ರುಗಳು ಮಾಡುತ್ತಾರೆ, ಆದ್ದರಿಂದ ತಾಳ್ಮೆಯಿಂದ ಇರುವುದು ಬಹಳ ಮುಖ್ಯವಾಗುತ್ತದೆ. ಗಣಪತಿ ಆರಾಧನೆ ಮಾಡಿ.
- ಜನ್ಮಸಂಖ್ಯೆ 5: ನಿಮಗೆ ಬರಬೇಕಾದ ಹಣಕ್ಕೆ ಈಗ ಪ್ರಯತ್ನಿಸಿದಲ್ಲಿ ವಾಪಸ್ ಬರಲಿದೆ. ಆದರೆ ಬಲವಾದ ಪ್ರಯತ್ನವನ್ನು ಹಾಕಬೇಕು. ಹೂಡಿಕೆಯನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು ಎಂದು ಆಲೋಚಿಸುತ್ತಿದ್ದಲ್ಲಿ ಅನುಭವಿಗಳು, ತಜ್ಞರ ಜತೆಗೆ ಚರ್ಚಿಸಿ ಮುಂದಿನ ಹೆಜ್ಜೆಗಳನ್ನು ಇಡಿ. ಇತರರಿಗೆ ಆರ್ಥಿಕ ನೆರವು ನೀಡಲಿದ್ದೀರಿ.
- ಜನ್ಮಸಂಖ್ಯೆ 6: ಮಕ್ಕಳ ಶಿಕ್ಷಣ, ಆರೋಗ್ಯಕ್ಕೆ ಹಣ ಉಳಿತಾಯ ಮಾಡಲು ಸಂಗಾತಿ ಜತೆ ಚರ್ಚೆ ನಡೆಸಲಿದ್ದೀರಿ. ಈ ಹಿಂದಿನ ಅನಾರೋಗ್ಯ ಸಮಸ್ಯೆಗಳು ಚಿಂತೆಗೆ ಗುರಿ ಮಾಡುತ್ತವೆ. ಮನೆಯಲ್ಲಿ ಇರುವ ಅಮೂಲ್ಯ ವಸ್ತುಗಳು, ಅಗತ್ಯ ದಾಖಲೆ- ಪತ್ರಗಳ ಬಗ್ಗೆ ನಿಗಾ ಇರಲಿ. ಗುಟ್ಟಿನ ವಿಚಾರವನ್ನು ಅಪರಿಚಿತರ ಜತೆ ಹಂಚಿಕೊಳ್ಳಬೇಡಿ.
- ಜನ್ಮಸಂಖ್ಯೆ 7: ಅತಿಯಾದ ಸುಖ ಬಯಸುವ ಮನಸ್ಸನ್ನು ಹತೋಟಿಯಲ್ಲಿ ಇಡಬೇಕಾದದ್ದು ನಿಮ್ಮ ಜವಾಬ್ದಾರಿ. ಇಲ್ಲದಿದ್ದಲ್ಲಿ ಸ್ಥೂಲಕಾಯದಂಥ ಸಮಸ್ಯೆ ಎದುರಾಗಬಹುದು. ಆ ಮೂಲಕ ಸ್ಥೂಲಕಾಯಕ್ಕೆ ತಳುಕು ಹಾಕಿಕೊಂಡಂಥ ಇತರ ಅನಾರೋಗ್ಯ ಸಮಸ್ಯೆಗಳು ಕಾಡಬಹುದು. ಮದ್ಯಪಾನದ ಅಭ್ಯಾಸ ಇರುವವರು ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳಿ.
- ಜನ್ಮಸಂಖ್ಯೆ 8: ನೀವು ಹಾಕಿಕೊಂಡಂಥ ಯೋಜನೆಗಳಿಗೆ ಹಣಕಾಸು ಹೊಂದಿಸಲು ದಾರಿ ಗೋಚರ ಆಗುತ್ತದೆ. ಉದ್ಯೋಗ ಬದಲಾಯಿಸಲು ಪ್ರಯತ್ನಿಸುತ್ತಿರುವವರಿಗೆ ಸೂಕ್ತ ವ್ಯಕ್ತಿ, ಸಂಸ್ಥೆಯ ಪರಿಚಯ ಸಿಗಬಹುದು. ನಿಮ್ಮಲ್ಲಿ ಹೊಸ ಆತ್ಮವಿಶ್ವಾಸ ಮೂಡುವ ಸಮಯ ಇದು. ಒತ್ತಡಗಳನ್ನು ಮೀರುತ್ತೀರಿ.
- ಜನ್ಮಸಂಖ್ಯೆ 9: ಎಲ್ಲದರ ಮೇಲೆ ಅಂಧ ನಂಬಿಕೆ, ವಿಶ್ವಾಸ ಇಡುವುದು ಸರಿಯಲ್ಲ. ಯಾವುದೇ ವ್ಯಕ್ತಿಗೂ ಮಿತಿಗಳಿರುತ್ತವೆ. ಅದನ್ನು ಅರಿತು ನೀವು ಅವರ ಮೇಲೆ ವಿಶ್ವಾಸ ಇಡಬೇಕೋ ಬೇಡವೋ ನಿರ್ಧರಿಸಿ. ಸ್ತ್ರೀಯರ ವಿಚಾರದಲ್ಲಿ ಎಚ್ಚರಿಕೆಯ ಮಾತುಗಳನ್ನಾಡಿ. ನಾಲಗೆ ಹರಿಬಿಟ್ಟರೆ ಅವಮಾನದ ಪಾಲಾಗುತ್ತೀರಿ.
ಲೇಖನ- ಎನ್.ಕೆ.ಸ್ವಾತಿ