AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Numerology: 4, 13, 31ನೇ ತಾರೀಕಿನಂದು ಹುಟ್ಟಿದವರ ಸ್ವಭಾವ ಹೇಗಿರುತ್ತದೆ ಗೊತ್ತೆ? ಇಲ್ಲಿದೆ ಆಸಕ್ತಿಕರವಾದ ಮಾಹಿತಿ

ಯಾರು 4, 13 ಅಥವಾ 31ನೇ ತಾರೀಕಿನಂದು ಹುಟ್ಟಿರುತ್ತಾರೋ ಅಂಥವರ ಜನ್ಮಸಂಖ್ಯೆ 4 ಆಗುತ್ತದೆ. ಇವರು ರಾಹು ಗ್ರಹದ ಆಧಿಪತ್ಯಕ್ಕೆ ಒಳಪಟ್ಟಿರುತ್ತಾರೆ. ಅದರಿಂದಾಗಿ ಇವರ ಸ್ವಭಾವ ಹೇಗಿರುತ್ತದೆ ಎಂಬುದರ ವಿವರ ಇಲ್ಲಿದೆ.

Numerology: 4, 13, 31ನೇ ತಾರೀಕಿನಂದು ಹುಟ್ಟಿದವರ ಸ್ವಭಾವ ಹೇಗಿರುತ್ತದೆ ಗೊತ್ತೆ? ಇಲ್ಲಿದೆ ಆಸಕ್ತಿಕರವಾದ ಮಾಹಿತಿ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jun 27, 2021 | 6:51 AM

Share

ಯಾರು 4, 13 ಅಥವಾ 31ನೇ ತಾರೀಕಿನಂದು ಹುಟ್ಟಿರುತ್ತಾರೋ ಅವರ ಜನ್ಮ ಸಂಖ್ಯೆ 4 ಆಗುತ್ತದೆ. ಆ ಪೈಕಿ 4ನೇ ತಾರೀಕಿನಂದೇ ಹುಟ್ಟಿದವರ ಮೇಲೆ ರಾಹುವಿನ ಸಂಪೂರ್ಣ ಪ್ರಭಾವ ಇರುತ್ತದೆ. ಇನ್ನು 13 ಹಾಗೂ 31ನೇ ತಾರೀಕಿನಂದು ಯಾರು ಹುಟ್ಟಿರುತ್ತಾರೋ ಅವರ ಮೇಲೆ ರವಿ, ಗುರು ಹಾಗೂ ರಾಹು ಹೀಗೆ ಮೂರರ ಪ್ರಭಾವವೂ ಇರುತ್ತದೆ. ಈ ದಿನಾಂಕಗಳಂದು ಹುಟ್ಟಿದವರ ಜತೆಗಿನ ಒಡನಾಟ, ಮಾತುಕತೆ, ಸ್ನೇಹ ಯಾವುದೂ ಸಲೀಸಲ್ಲ. ಏಕೆಂದರೆ, ತಮ್ಮದೇ ಲೋಕದಲ್ಲಿ ಇವರು ಬಲು ಗಟ್ಟಿಗರು, ಸ್ಥಿರವಾಗಿರುತ್ತಾರೆ ಮತ್ತು ಆತ್ಮವಿಶ್ವಾಸ ಇರುತ್ತದೆ. ಬದಲಾವಣೆಗೆ ಒಗ್ಗಿಕೊಳ್ಳುವುದು ಬಹಳ ಕಷ್ಟದ ಕೆಲಸ ಇವರಿಗೆ. ಆ ಕಾರಣಕ್ಕೆ ಏನು ಇಷ್ಟೆಲ್ಲ ನಿಧಾನ ಅನ್ನಿಸಿಕೊಳ್ಳುತ್ತಾರೆ. ಈ ನಿಧಾನದ ಸ್ವಭಾವದ ಕಾರಣಕ್ಕೆ ಹಲವು ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ. ಯಾವುದರ ಬಗ್ಗೆಯಾದರೂ ಆಲೋಚನೆ ಮಾಡುವುದಕ್ಕೆ ಅಂತಲೇ ಬಹಳ ಸಮಯವನ್ನು ಕಳೆಯುತ್ತಾರೆ. ಏನಾದರೂ ಹೊಸದನ್ನು ಆರಂಭಿಸುವುದರಲ್ಲಿ ಹಾಗೂ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರಲ್ಲಿ ಇರುವ ತಲ್ಲೀನತೆ ಮಾತ್ರ ಎಂಥವರೂ ತಲೆ ತೂಗುವಂಥದ್ದಾಗಿರುತ್ತದೆ.

ಅದೆಂಥ ಅದ್ಭುತವಾದದ್ದೇ ಎದುರಿಗಿದ್ದರೂ ಪೂರ್ಣ ತೃಪ್ತಿ ಅನ್ನೋದು ಇವರ ಪಾಲಿಗೆ ಇರಲ್ಲ. ಯಾವಾಗಲೂ ಇಂಪ್ರೂವೈಸೇಷನ್​ಗೆ ಎದುರು ನೋಡುತ್ತಲೇ ಇರುತ್ತಾರೆ. ಅದು ಮುಗಿಯುವುದೇ ಇಲ್ಲ. ಈ ಕಾರಣಕ್ಕೆ ಇವರಲ್ಲೊಂದು ಹತಾಶೆ ಸದಾ ಎದ್ದು ಕಾಣುತ್ತದೆ. ಕೆಲಸ ಅಂತ ಬಂದರೆ ವಿಪರೀತ ಗಂಭೀರವಾಗುತ್ತಾರೆ. ವಿಶ್ರಾಂತಿ ಸಮಯ ಅಂತಲೇ ಸಿಗುವುದಿಲ್ಲ. ಕೆಲಸ ಮಾಡದಿರುವ ಅಥವಾ ಬಿಡುವಾದ ಸಮಯ ಎಂಬುದನ್ನು ಊಹಿಸಿಕೊಳ್ಳುವುದು ಸಹ ಈ 4ರ ಸಂಖ್ಯೆಯವರಿಗೆ ಕಷ್ಟ. ಕರುಣೆ ಅನ್ನೋದು ಕಮ್ಮಿ, ಕೆಲವು ಬಾರಿ ಕಂಜ್ಯೂಸ್ ಥರ ಅನಿಸಿಕೊಳ್ಳುತ್ತಾರೆ ಮತ್ತು ಕ್ರೂರಿಗಳಂತೆ ಕಾಣುತ್ತಾರೆ. ಇವರಿಗೆ ತಮಗೆ ನಿಜವಾಗಲೂ ಬೇಕಾದದ್ದು ಏನು ಎಂಬುದರ ಬಗ್ಗೆ ಸ್ಪಷ್ಟ ಚಿತ್ರಣ ಇರುವುದಿಲ್ಲ ಅನ್ನೋದು ಕೂಡ ಸಮಸ್ಯೆ. ತಾವು ಅಂದುಕೊಂಡಿದ್ದು ಆಗಿಬಿಟ್ಟರೆ ಸಾಕು, ಅದರಿಂದ ಲಾಭವಾಯಿತೋ ನಷ್ಟವಾಯಿತೋ ನೋಡುವುದಕ್ಕೆ ಹೋಗಲ್ಲ.

ಜೀವನದಲ್ಲಿ ಮೇಲೇರುವುದಕ್ಕೆ ಬಹಳ ಶ್ರಮವನ್ನು ಹಾಕುತ್ತಾರೆ. ಆದರೂ ತಮ್ಮ ಯಶಸ್ಸಿನ ಬಗ್ಗೆ ಪೂರ್ಣ ತೃಪ್ತಿ ಸಿಗಲ್ಲ. ಇವರಿಗೆ ಅಭದ್ರತಾ ಭಾವ ಹೆಚ್ಚು ಕಾಡುತ್ತದೆ. ಪ್ರಣಯದ ಸಂಗತಿಗಳು ಅಷ್ಟೇನೂ ಆಕರ್ಷಿಸುವುದಿಲ್ಲ. ಪ್ರೀತಿ- ಸಂಬಂಧಗಳನ್ನು ಸರಿಯಾಗಿ ನಿಭಾಯಿಸುವುದಕ್ಕೆ ಹೆಣಗಾಡುತ್ತಾರೆ. ತಮ್ಮ ಭಾವನೆಗಳನ್ನು ಹಂಚಿಕೊಳ್ಳುವುದಕ್ಕೆ ಹಾಗೂ ಮುಕ್ತವಾಗಿ ಮಾತನಾಡುವುದಕ್ಕೆ ತುಂಬ ಸಮಯ ತೆಗೆದುಕೊಳ್ಳುತ್ತಾರೆ. ಆದರೆ ಒಂದು ಸಲ ಪ್ರೀತಿಯಲ್ಲಿ ಬಿದ್ದರೆ ಅದರ ಆಳದಲ್ಲಿ ಇಳಿಯುತ್ತಾರೆ ಮತ್ತು ನಿಷ್ಠರಾಗಿರುತ್ತಾರೆ. ತುಂಬ ಉತ್ಕಟವಾದ ಪ್ರೀತಿ, ಪ್ರಣಯದ ಕ್ಷಣಗಳು, ಶೃಂಗಾರ ಇಂಥವೆಲ್ಲ ಇವರಿಂದ ನಿರೀಕ್ಷಿಸುವುದು ಕಷ್ಟ. ನಿಷ್ಠೆಯಿಂದ ಪ್ರೀತಿಸುತ್ತಾರೆ. ತುಂಬ ಚೆನ್ನಾಗಿ ನೋಡಿಕೊಳ್ಳುತ್ತಾರೆ.

ಇದನ್ನೂ ಓದಿ: Numerology: ಯಾವುದೇ ತಿಂಗಳಿನ 9, 18 ಹಾಗೂ 27ನೇ ತಾರೀಕಿನಂದು ಹುಟ್ಟಿದವರ ಸ್ವಭಾವ ಹೇಗಿರುತ್ತದೆ?

(People who born on 4th, 13th and 31st their nature and characteristics explained according to numerology)

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?